ಶಿಕ್ಷಣವೇ ಶಕ್ತಿ
Friday, 12 February 2021
💮 ಕನ್ನಡ ವ್ಯಾಕರಣ💮
ನಾನು ಹುಟ್ಟಿದ್ದು 01 ಏಪ್ರಿಲ್ 1990. ನಮ್ಮೂರು ಗುಣದಾಳ ತಾಲೂಕು ಬಬಲೇಶ್ವರ ಮತ್ತು ವಿಜಯಪುರ ಜಿಲ್ಲೆಗೆ ಸೇರಿದ ಒಂದು ಹಳ್ಳಿ. ಪಂಚನದಿಗಳಲ್ಲೊಂದಾದ ಕೃಷ್ಣಾ ನದಿಯ 3 ಕಿಮೀ ದೂರದಲ್ಲಿದೆ. ಬಯಲು ಸೀಮೆ ಹಾಗೂ ಬಿಸಿಲು ನಾಡಾದ ಗುಮ್ಮಟ ನಗರಿ ನನ್ನದು. ಬಡತನದಲ್ಲಿದ್ದರು ಪ್ರೀತಿಯ ಸಿರಿತನದಿಂದ ನನ್ನನ್ನು ಸಾಕಿ ತಿದ್ದಿ ಬೆಳೆಸಿದವರು ನನ್ನ ಕುಟುಂಬದವರು. ನನ್ನ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಗುಣದಾಳದಲ್ಲಿನ ಸರ್ಕಾರಿ ಶಾಲೆ ಮತ್ತು, ಪ್ರೌಢಶಾಲೆ ಅನುದಾನಿತ ಶಾಲೆಯಲ್ಲಿ, ಪದವಿಪೂರ್ವ ಶಿಕ್ಷಣ ,Degree, B.ಎಡ್ ವಿಜಯಪುರದಲ್ಲಿ, ಮುಗಿಸಿದೆ. 2014-15ರ ವರೆಗೆ ಒಂದು ವರ್ಷ ಜ್ಞಾನೋದಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ ಮುಂದೆ ಶ್ರೀ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2015-2022ರ ವರೆಗೆ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ 2022ರ ಮಧ್ಯ ವಿದ್ಯಾಸ್ಫೂರ್ತಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಸೇರಿ ಅಲ್ಲಿ ಪ್ರೌಢ ವಿಭಾಗದಲ್ಲಿ ಇಂಗ್ಲಿಷ್ ಭಾಷಾ ವಿಷಯ ಶಿಕ್ಷಕರಾಗಿ 2024 ಮೆ ವರೆಗೆ ಸೇವೆ ಸಲ್ಲಿಸಿ. 2024 ರಿಂದ ಪ್ರಸ್ತುತ (1 ರಿಂದ 8ನೆಯ ತರಗತಿಯ - ಜ್ಞಾನ ಗಂಗೋತ್ರಿ ಪೂರ್ವ ಪ್ರಾಥಾಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.ಧನ್ಯವಾದಗಳು
ಜಗತ್ತಿನ ಹಾಗೂ ಭಾರತದ ಪ್ರಥಮ ಪಿತಾಮಹರು
☀ಜಗತ್ತಿನ ಹಾಗೂ ಭಾರತದ ಪ್ರಥಮ ಪಿತಾಮಹರು :
★ ಸಾಮಾನ್ಯ ಅಧ್ಯಯನ
(General Studies)
★ ಸಾಮಾನ್ಯ ಜ್ಞಾನ
(General Knowledge)
■. ಭಾರತ ಇತಿಹಾಸದ ಪಿತಾಮಹ :••┈┈┈┈┈┈•• ಕಲ್ಹಣ.
■. ಭಾರತದ ಸಮಾಜಶಾಸ್ತ್ರದ ಪಿತಾಮಹ :••┈┈┈┈┈┈•• ಎಮ್,ಎನ್,ಶ್ರೀನಿವಾಸ.
■. ಭಾರತದ ಪುನರುಜ್ಜೀವನದ ಪಿತಾಮಹ :••┈┈┈┈┈┈•• ರಾಜಾರಾಮ ಮೋಹನ್ ರಾಯ್.
■. ಭಾರತದ ಹಸಿರುಕ್ರಾಂತಿಯ ಪಿತಾಮಹ:••┈┈┈┈┈┈•• M.S.ಸ್ವಾಮಿನಾಥನ್.
■. ಭಾರತದ ಯೋಜನೆಗಳ ಪಿತಾಮಹ :••┈┈┈┈┈┈•• ಸರ್.ಎಂ.ವಿಶ್ವೇಶ್ವರಯ್ಯ.
■. ಕರ್ನಾಟಕದ ಸುಗಮ ಸಂಗೀತದ ಪಿತಾಮಹ :••┈┈┈┈┈┈•• ಸಂತ ಶಿಶುನಾಳ ಶರೀಫ್.
■. ಕರ್ನಾಟಕದ ಶಾಸನಗಳ ಪಿತಾಮಹ :••┈┈┈┈┈┈•• ಬಿ.ಎಲ್.ರೈಸ್.
■. ಪುನರುಜ್ಜೀವನದ ಪಿತಾಮಹ :••┈┈┈┈┈┈•• ಪೆಟ್ಟ್ರಾರ್ಕ್.
■. ಭೂಗೋಳ ಶಾಸ್ತ್ರದಪಿತಾಮಹ :••┈┈┈┈┈┈•• ಎರಟೋಸನೀಸ್.
■. ಪ್ರತಿಸುಧಾರಣೆಯ ಪಿತಾಮಹ :••┈┈┈┈┈┈••ಇಗ್ನೇಷಿಯಸ್ ಲಯೋಲ.
■. ಮತಸುಧಾರಣೆಯ ಪಿತಾಮಹ :••┈┈┈┈┈┈•• ಮಾರ್ಟಿನ್ ಲೂಥರ್.
■. ಭಾರತದ ಚಲನಚಿತ್ರದ ಪಿತಾಮಹ:••┈┈┈┈┈┈•• ದಾದಾಸಾಹೇಬ್ ಫಾಲ್ಕೆ.
■. ವಿಜ್ಞಾನದ ಪಿತಾಮಹ :••┈┈┈┈┈┈•• ರೋಜರ್ ಬೇಕನ್.
■. ವಿಕಾಸವಾದದ ಪಿತಾಮಹ ••┈┈┈┈┈┈•• ಚಾರ್ಲ್ಸ್ ಡಾರ್ವಿನ್.
■. ಅಣುವಂಶಿಯವಾದ ಪಿತಾಮಹ ••┈┈┈┈┈┈•• ಗ್ರೇಗರ ಮೆಂಡಲ್.
■. ಚಲನಶಾಸ್ರದ ಪಿತಾಮಹ ••┈┈┈┈┈┈•• ನ್ಯೂಟನ್.
■. ಪರಮಾಣು ಸಿದ್ಧಾಂತದ ಪಿತಾಮಹ ••┈┈┈┈┈┈•• ಜಾನ್ ಡಾಲ್ಟನ್
■. ಸೌರ ಕೇಂದ್ರ ಸಿದ್ಧಾಂತದ ಪಿತಾಮಹ ••┈┈┈┈┈┈•• ಕೋಪರ್ ನಿಕಸ್
■. ಗ್ರಹಗಳ ಚಲನೆ ನಿಯಮದ ಪಿತಾಮಹ ••┈┈┈┈┈┈•• ಜೋಹಾನ್ಸ್ ಕೆಪ್ಲರ್
■. ಆಯಾನಿಕರಣ ಸಿದ್ಧಾಂತದ ಪಿತಾಮಹ ••┈┈┈┈┈┈•• ಹೀನಿಯಸ್
■. ಆವರ್ತಕೋಷ್ಟಕದ ಜನಕ ••┈┈┈┈┈┈•• ಡಿಮಿಟ್ರಿ ಮೆಂಡಲಿವ್
■. ಸಾಪೇಕ್ಷವಾದದ ಪಿತಾಮಹ ••┈┈┈┈┈┈•• ಐನ್ಸ್ಟಿನ್
■. ಜೀವಶಾಸ್ತ್ರದ ಪಿತಾಮಹ ••┈┈┈┈┈┈•• ಅರಿಸ್ಟಾಟಲ್
■. ವೈದ್ಯಕೀಯ ಶಾಸ್ತ್ರದ ಪಿತಾಮಹ ••┈┈┈┈┈┈•• ಹಿಪ್ಪೋಕ್ರೆಟಸ್
■. ಅಂಗರಚನಾಶಾಸ್ರದ ಪಿತಾಮಹ ••┈┈┈┈┈┈•• ಚರಕ
■. ಪ್ಲಾಸ್ಟಿಕ್ ಸರ್ಜರಿಯ ಪಿತಾಮಹ ••┈┈┈┈┈┈•• ಸುಶ್ರುತ
■. ಯೋಗಶಾಸ್ತ್ರದ ಪಿತಾಮಹ ••┈┈┈┈┈┈•• ಪತಂಜಲಿ
ನಾನು ಹುಟ್ಟಿದ್ದು 01 ಏಪ್ರಿಲ್ 1990. ನಮ್ಮೂರು ಗುಣದಾಳ ತಾಲೂಕು ಬಬಲೇಶ್ವರ ಮತ್ತು ವಿಜಯಪುರ ಜಿಲ್ಲೆಗೆ ಸೇರಿದ ಒಂದು ಹಳ್ಳಿ. ಪಂಚನದಿಗಳಲ್ಲೊಂದಾದ ಕೃಷ್ಣಾ ನದಿಯ 3 ಕಿಮೀ ದೂರದಲ್ಲಿದೆ. ಬಯಲು ಸೀಮೆ ಹಾಗೂ ಬಿಸಿಲು ನಾಡಾದ ಗುಮ್ಮಟ ನಗರಿ ನನ್ನದು. ಬಡತನದಲ್ಲಿದ್ದರು ಪ್ರೀತಿಯ ಸಿರಿತನದಿಂದ ನನ್ನನ್ನು ಸಾಕಿ ತಿದ್ದಿ ಬೆಳೆಸಿದವರು ನನ್ನ ಕುಟುಂಬದವರು. ನನ್ನ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಗುಣದಾಳದಲ್ಲಿನ ಸರ್ಕಾರಿ ಶಾಲೆ ಮತ್ತು, ಪ್ರೌಢಶಾಲೆ ಅನುದಾನಿತ ಶಾಲೆಯಲ್ಲಿ, ಪದವಿಪೂರ್ವ ಶಿಕ್ಷಣ ,Degree, B.ಎಡ್ ವಿಜಯಪುರದಲ್ಲಿ, ಮುಗಿಸಿದೆ. 2014-15ರ ವರೆಗೆ ಒಂದು ವರ್ಷ ಜ್ಞಾನೋದಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ ಮುಂದೆ ಶ್ರೀ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2015-2022ರ ವರೆಗೆ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ 2022ರ ಮಧ್ಯ ವಿದ್ಯಾಸ್ಫೂರ್ತಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಸೇರಿ ಅಲ್ಲಿ ಪ್ರೌಢ ವಿಭಾಗದಲ್ಲಿ ಇಂಗ್ಲಿಷ್ ಭಾಷಾ ವಿಷಯ ಶಿಕ್ಷಕರಾಗಿ 2024 ಮೆ ವರೆಗೆ ಸೇವೆ ಸಲ್ಲಿಸಿ. 2024 ರಿಂದ ಪ್ರಸ್ತುತ (1 ರಿಂದ 8ನೆಯ ತರಗತಿಯ - ಜ್ಞಾನ ಗಂಗೋತ್ರಿ ಪೂರ್ವ ಪ್ರಾಥಾಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.ಧನ್ಯವಾದಗಳು
ಹೃದಯ ❤️
# ಮನುಷ್ಯನ ಹೃದಯವು ಶಂಖಾಕೃತಿಯ ಒಂದು ಸ್ನಾಯಿಕ ಅಂಗವಾಗಿದೆ. ಇದು ಮುಷ್ಠಿಯ ಗಾತ್ರವಿರುತ್ತದೆ.
# ಎದೆಗೂಡಿನಲ್ಲಿ ಎರಡು ಶ್ವಾಸಕೋಶಗಳ ನಡುವೆ ಕಂಡುಬಂದು ಸ್ವಲ್ಪ ಎಡಭಾಗಕ್ಕೆ ಓರೆಯಲ್ಲಿದೆ.
# ಹೃದಯವು ’ಹೃದಯಾವರಣ’ (Pericardium) ಎಂಬ ಇಪ್ಪದರ ಪೊರೆಯಿಂದ ಆವರಿಸಲ್ಪಟ್ಟಿದೆ.
# ಈ ಪದರಗಳ ನಡುವೆ ಇರುವ ’ಪೆರಿಕಾರ್ಡಿಯಲ್ ದ್ರವ’ ಹೃದಯವನ್ನು ಯಾಂತ್ರಿಕ ಆಘಾತ ಮತ್ತು ಘರ್ಷಣೆಗಳಿಂದ ರಕ್ಷಿಸುತ್ತದೆ.
# ಹೃದಯದಲ್ಲಿ ನಾಲ್ಕು ಕೋಣೆಗಳಿವೆ. ಮಾನವನ ಹೃದಯದ ಮೇಲಿರುವ ಎರಡು ಕೋಣೆಗಳನ್ನು ’ಹೃತ್ಕರ್ಣ’ (Auricles) ಗಳೆಂದು ಕರೆಯುತ್ತಾರೆ.
# ಕೆಳಗಿನ ಎರಡು ಕೋಣೆಗಳನ್ನು ’ಹೃತ್ಕುಕ್ಷಿ’ (Ventricles) ಗಳೆಂದು ಕರೆಯುತ್ತಾರೆ.
# ಹೃದಯದ ಎಡ ಮತ್ತು ಬಲ ಭಾಗಗಳ ನಡುವೆ ಒಂದು ಸ್ನಾಯಿಕ ಪೊರೆ (Septum) ಇದೆ.
# ಬಲ ಹೃತ್ಕರ್ಣ ಮತ್ತು ಬಲ ಹೃತ್ಕುಕ್ಷಿಯ ನಡುವೆ ’ತ್ರಿದಳ ಕವಾಟ’ವಿದೆ.
# ಎಡ ಹೃತ್ಕರ್ಣ ಮತ್ತು ಎಡ ಹೃತ್ಕುಕ್ಷಿಯ ನಡುವೆ ’ದ್ವಿದಳ ಕವಾಟ’ವಿದೆ.
# ಈ ಕವಾಟವು ರಕ್ತವು ಹೃತ್ಕುಕ್ಷಿಗಳಿಂದ ಹೃತ್ಕರ್ಣಗಳಿಗೆ ಹರಿಯುವುದನ್ನು ತಡೆಯುತ್ತದೆ.
# ದೇಹದ ಎಲ್ಲಾ ಭಾಗಗಳಿಂದ ಆಮ್ಲಜನಕ ಸಹಿತ ರಕ್ತವನ್ನು ತರುವ ’ಊರ್ಧ್ವ’ ಮತ್ತು ’ಅಧೋ ಅಭಿಧಮನಿಗಳು’ ಹೃದಯದ ಬಲ ಹೃತ್ಕರ್ಣಕ್ಕೆ ತೆರೆಯುತ್ತವೆ.
# ಶ್ವಾಸಕೋಶಗಳಿಂದ ಆಕ್ಸಿಜನ್ ಸಹಿತ ರಕ್ತವನ್ನು ತರುವ ಎರಡು ’ಪುಪ್ಪುಸಕ ಅಭಿಧಮನಿಗಳು’ ಎರಡು ಹೃತ್ಕರ್ಣಕ್ಕೆ ತೆರೆಯುತ್ತವೆ.
# ಶ್ವಾಸಕೋಶಗಳಿಗೆ ಆಕ್ಸಿಜನ್ ರಕ್ತ ರಹಿತ ರಕ್ತವನ್ನು ಒಯ್ಯುವ ಪುಪ್ಪುಸಕ ಅಭಿಧಮನಿ ಬಲಹೃತ್ಕುಕ್ಷಿಯಿಂದ ಹೊರಡುತ್ತದೆ.
# ದೇಹದ ಎಲ್ಲಾ ಭಾಗಗಳಿಗೂ ಆಕ್ಸಿಜನ ಸಹಿತ ರಕ್ತವನ್ನು ಒಯ್ಯುವ ’ಮಹಾ ಅಪಧಮನಿ’ ಎಡ ಹೃತ್ಕುಕ್ಷಿಯಿಂದ ಹೊರಡುತ್ತದೆ.
# ಮಹಾ ಅಪಧಮನಿಯಿಂದ ಹೊರಡುವ ’ಕರೋನರಿ ಅಪಧಮನಿ’ಯ ಬಲ ಮತ್ತು ಎಡ ಕವಲುಗಳು ಆಕ್ಸಿಜನ್ ಸಹಿತ ರಕ್ತವನ್ನು ಹೃದಯದ ಸ್ನಾಯುಗಳಿಗೆ ಒದಗಿಸುತ್ತವೆ.
# ’ಕರೋನರಿ ಸೈನಸ್’ ಎಂಬ ಅಭಿಧಮನಿ ಆಕ್ಸಿಜನ್ ರಹಿತ ರಕ್ತವನ್ನು ಬಲ ಹೃತ್ಕರ್ಣಕ್ಕೆ ಒಯ್ಯುತ್ತದೆ.
# ಹೃದಯದ ಸ್ನಾಯುಗಳ ಸಂಕೊಚನ ಕ್ರಿಯೆಗೆ ’ಸಿಸ್ಟೋಲ್’ ಎಂದು ಕರೆಯುತ್ತಾರೆ.
# ಹೃದಯದ ಸ್ನಾಯುಗಳ ವಿಕಸನ ಕ್ರಿಯೆಗೆ ’ಡಯಾಸ್ಟೋಲ್’ ಎಂದು ಕರೆಯುತ್ತಾರೆ.
# ಒಂದು ಸಿಸ್ಟೋಲ್ ಮತ್ತು ಒಂದು ಡಯಾಸ್ಟೋಲ್ ಸೇರಿ ಒಂದು ’ಹೃದಯದ ಬಡಿತ’ವಾಗುತ್ತದೆ.
# ಹೃದಯದ ಬಡಿತವನ್ನು ಸ್ಟೆತೋಸ್ಕೋಪ್’ ಎಂಬ ಉಪಕರಣದಿಂದ ಅಳೆಯುತ್ತಾರೆ.
# ಆರೋಗ್ಯವಂತನಾದ ಮನುಷ್ಯನಲ್ಲಿ ಒಂದು ನಿಮಿಷಕ್ಕೆ 72 ಸಲ ಹೃದಯ ಬಡಿಯುತ್ತದೆ.
# ಎಡ ಹೃತ್ಕುಕ್ಷಿ ಸಂಕುಚಿಸಿದಾಗ ರಕ್ತವು ಮಹಾ ಅಪಧಮನಿಗೆ ಒತ್ತಿ ತಳ್ಳಲ್ಪಡುತ್ತದೆ. ಇದು ಮಹಾ ಅಪಧಮನಿ ಮತ್ತು ಅದರ ಕವಲುಗಳಾದ ಅಪಧಮನಿಗಳ ಗೋಡೆಗಳ ಮೇಲೆ ಒತ್ತಡವನ್ನು ಏರ್ಪಡಿಸುತ್ತದೆ. ಇದನ್ನು ’ರಕ್ತದ ಒತ್ತಡ’ ಎನ್ನುವರು.
# ರಕ್ತದ ಒತ್ತಡವನ್ನು ಅಳೆಯುವ ಉಪಕರಣವನ್ನು ’ಸ್ಪಿಗ್ಮೋ ಮೊನೋಮೀಟರ್’ ಎಂದು ಕರೆಯುತ್ತಾರೆ.
# ಆರೋಗ್ಯವಂತನಾದ ವಯಸ್ಕ ವ್ಯಕ್ತಿಯಲ್ಲಿ ಸಾಮಾನ್ಯವಾಗಿ ರಕ್ತದ ಒತ್ತಡವನ್ನು 120/80 ಮಿ.ಮಿ.ಹೆಚ್.ಜಿ. ಎಂದು ಗುರುತಿಸುತ್ತಾರೆ.
# 1819 ರಲ್ಲಿ ಫ್ರಾನ್ಸ್ ದೇಶದ ರೇನೆ ಲೆನಿಕ್ ಎಂಬ ವಿಜ್ಞಾನಿಯು ’ಸ್ಟೆತೋಸ್ಕೋಪ್’ನ್ನು ಕಂಡುಹಿಡಿದನು.
# ಎಡ ಹೃತ್ಕುಕ್ಷಿಯು ಸಂಕುಚಿಸಿದಾಗ ರಕ್ತವು ಮಹಾ ಅಪಧಮನಿ ನಂತರ ಅದರ ಕವಲುಗಳಲ್ಲಿ ನುಗ್ಗುತ್ತದೆ. ಹೀಗೆ ನುಗ್ಗಿದಾಗ ಸ್ಥಿತಿಸ್ಥಾಪಕ ಶಕ್ಯಿಯುಳ್ಳ ಅಪಧಮನಿಯ ಗೋಡೆ ರಕ್ತ ಮುಂದಕ್ಕೆ ಹರಿಯುವಾಗ ಕುಗ್ಗುತ್ತದೆ. ಇದರಿಂದ ಅಪಧಮನಿಯ ಗೋಡೆಯಲ್ಲಿ ಅಲೆಯಂತಹ ಚಲನೆ ಏರ್ಪಡುತ್ತದೆ. ಇದನ್ನೇ ನಾವು ’ನಾಡಿ ಮೀಡಿತ’ (ಪಲ್ಸ್) ಎಂದು ಕರೆಯುವುದು. ಹೃದಯದ ಮಿಡಿತದಷ್ಟೇ ನಾಡಿ ಬಡಿತವಿರುತ್ತದೆ.
〰️〰️〰️〰️〰️〰️〰️〰️〰️〰️〰️〰️〰️〰️〰️
Questions :
1.)
ಹೃದಯದ ಬಡಿತವನ್ನು ಕಂಡು ಹಿಡಿಯುವ ಸಾಧನ ಯಾವುದು?
A). ಅಮ್ಮೀಟರ್
B). ಸ್ಟೆತೆಸ್ಕೋಪ್
C). ಬಯೋಸ್ಕೋಪ್
D). ಹಾರ್ಟ್ ಮೀಟರ್
Correct Ans: (B)
Description:
ಸ್ಟೆತೆಸ್ಕೋಪ್
ಹೃದಯದ ಬಡಿತವನ್ನು ಕಂಡು ಹಿಡಿಯುಲು ಬಳಸುವ ಸಾಧನ ಸ್ಟೆತೆಸ್ಕೋಪ್. 1819ನೇ ಇಸವಿಯಲ್ಲಿ ಫಾನ್ಸ್ ದೇಶದ ವಿಜ್ಞಾನಿ 'ರೇನೆ ಲೆನೆಕ್' ಎಂಬುವವನು ಸ್ಟೆತೆಸ್ಕೋಪ್ ಸಾಧನವನ್ನು ಕಂಡು ಹಿಡಿದನು.
2.)
ಹೃದಯವನ್ನು ಆವರಿಸಿರುವ ಇಪ್ಪರದ ಪೊರೆ ಯಾವುದು?
A). ಪೆರಿಕಾರ್ಡಿಯಂ
B). ಮಹಾ ಅಪಧಮನಿ
C). ಹೃತ್ಕರ್ಣ
D). ಸ್ಥಾಯಿಕ ಪೊರೆ
Correct Ans: (A)
Description:
ಪೆರಿಕಾರ್ಡಿಯಂ
ಹೃದಯವು ’ಹೃದಯಾವರಣ’(Pericardium) ಎಂಬ ಇಪ್ಪದರ ಪೊರೆಯಿಂದ ಆವರಿಸಲ್ಪಟ್ಟಿದೆ. ಈ ಪದರಗಳ ನಡುವೆ ಇರುವ ’ಪೆರಿಕಾರ್ಡಿಯಲ್ ದ್ರವ’ ಹೃದಯವನ್ನು ಯಾಂತ್ರಿಕ ಆಘಾತ ಮತ್ತು ಘರ್ಷಣೆಗಳಿಂದ ರಕ್ಷಿಸುತ್ತದೆ.
3.)
ಅಪಧಮನಿಗಳು ಮತ್ತು ಅಭಿಧಮನಿಗಳನ್ನು ಸೇರಿಸುವ ಸೂಕ್ಮ ರಕ್ತನಾಳ ಯಾವುದು?
A). ಡಯಾಸ್ಟೋಲ್
B). ಫೈಭ್ರಿನೋಜನ್
C). ಲೋಮನಾಳಗಳು
D). ಅಂಗಾಮನಾಳಗಳು
Correct Ans: (C)
Description:
ಲೋಮನಾಳಗಳು
ಅಪಧಮನಿಗಳು ಮತ್ತು ಅಭಿಧಮನಿಗಳನ್ನು ಸೇರಿಸುವ ಸೂಕ್ಮ ರಕ್ತನಾಳ ಲೋಮನಾಳ. ರಕ್ತವು ಮಹಾ ಅಪಧಮನಿಯ ಕವಲುಗಳ ಮೂಲಕ ಅಂಗಾಂಶದಲ್ಲಿ ಹರಡಿರುವ ಲೋಮನಾಳಗಳ ಬಲೆಯ ಮೂಲಕ ಅಭಿಧಮನಿಮನಿಗಳಿಗೆ ಸಾಗಿ ನಂತರ ಹೃತ್ಕರ್ಣಗಳನ್ನು ಸೇರುತ್ತವೆ.
4.)
ದೇಹದ ಎಲ್ಲಾ ಭಾಗಗಳಿಂದ ರಕ್ತವನ್ನು ಹೃದಯಕ್ಕೆ ತರುವ ರಕ್ತನಾಳ ಯಾವುದು?
A). ಲೋಮನಾಳಗಳು
B). ಅಪಧಮನಿ
C). ಅಭಿಧಮನಿ
D). ಮೇಲಿನ ಯಾವುದು ಅಲ್ಲ
Correct Ans: (C)
Description:
ಅಭಿಧಮನಿ
ದೇಹದ ಎಲ್ಲಾ ಭಾಗಗಳಿಂದ ರಕ್ತವನ್ನು ಹೃದಯಕ್ಕೆ ತರುವ ರಕ್ತನಾಳ ಅಭಿಧಮನಿ. ದೇಹದ ಎಲ್ಲಾ ಭಾಗಗಳಿಂದ ಆಮ್ಲಜನಕ ಸಹಿತ ರಕ್ತವನ್ನು ತರುವ ’ಊರ್ಧ್ವ’ ಮತ್ತು ’ಅಧೋ ಅಭಿಧಮನಿಗಳು’ ಹೃದಯದ ಬಲ ಹೃತ್ಕರ್ಣಕ್ಕೆ ತೆರೆಯುತ್ತವೆ. ಶ್ವಾಸಕೋಶಗಳಿಂದ ಆಕ್ಸಿಜನ್ ಸಹಿತ ರಕ್ತವನ್ನು ತರುವ ಎರಡು ’ಪುಪ್ಪುಸಕ ಅಭಿಧಮನಿಗಳು’ ಎರಡು ಹೃತ್ಕರ್ಣಕ್ಕೆ ತೆರೆಯುತ್ತವೆ.
5.)
ಹೃದಯದಿಂದ ಎಲ್ಲಾ ಭಾಗಗಳಿಗೂ ರಕ್ತವನ್ನು ತೆಗೆದುಕೊಂಡು ಹೋಗುವ ರಕ್ತನಾಳ ಯಾವುದು?
A). ನಿಫ್ರಾನ್
B). ಅಭಿಧಮನಿ
C). ನಾಡಿ
D). ಅಪಧಮನಿ
Correct Ans: (D)
Description
:
ಅಪಧಮನಿ
ಹೃದಯದಿಂದ ಎಲ್ಲಾ ಭಾಗಗಳಿಗೂ ರಕ್ತವನ್ನು ತೆಗೆದುಕೊಂಡು ಹೋಗುವ ರಕ್ತನಾಳ ಅಪಧಮನಿ. ದೇಹದ ಎಲ್ಲಾ ಭಾಗಗಳಿಗೂ ಆಕ್ಸಿಜನ ಸಹಿತ ರಕ್ತವನ್ನು ಒಯ್ಯುವ ’ಮಹಾ ಅಪಧಮನಿ’ ಎಡ ಹೃತ್ಕುಕ್ಷಿಯಿಂದ ಹೊರಡುತ್ತದೆ. ಮಹಾ ಅಪಧಮನಿಯಿಂದ ಹೊರಡುವ ’ಕರೋನರಿ ಅಪಧಮನಿ’ಯ ಬಲ ಮತ್ತು ಎಡ ಕವಲುಗಳು ಆಕ್ಸಿಜನ್ ಸಹಿತ ರಕ್ತವನ್ನು ಹೃದಯದ ಸ್ನಾಯುಗಳಿಗೆ ಒದಗಿಸುತ್ತವೆ.
6.)
ಮಾನವನ ಹೃದಯದಲ್ಲಿ ಎಷ್ಟು ಕೋಣೆಗಳಿವೆ?
A). ನಾಲ್ಕು
B). ಮೂರು
C). ಎರಡು
D). ಒಂದು
Correct Ans: (A)
Description:
ನಾಲ್ಕು
ಮಾನವನ ಹೃದಯದಲ್ಲಿ ನಾಲ್ಕು ಕೋಣೆಗಳಿವೆ. ಮಾನವನ ಹೃದಯದ ಮೇಲಿರುವ ಎರಡು ಕೋಣೆಗಳನ್ನು ’ಹೃತ್ಕರ್ಣ’ (Auricles) ಗಳೆಂದು ಕರೆಯುತ್ತಾರೆ. ಮತ್ತು ಕೆಳಗಿನ ಎರಡು ಕೋಣೆಗಳನ್ನು ’ಹೃತ್ಕುಕ್ಷಿ’(Ventricles)ಗಳೆಂದು ಕರೆಯುತ್ತಾರೆ.
7.)
ಬಲ ಹೃತ್ಕರ್ಣ ಮತ್ತು ಬಲ ಹೃತ್ಕುಕ್ಷಿಗಳ ನಡುವೆ ಇರುವ ಕವಾಟ ಯಾವುದು?
A). ಏಕದಳ ಕವಾಟ
B). ದ್ವಿದಳ ಕವಾಟ
C). ತ್ರಿದಳ ಕವಾಟ
D). ಮೇಲಿನ ಯಾವುದು ಅಲ್ಲ
Correct Ans: (C)
Description:
ತ್ರಿದಳ ಕವಾಟ
ಬಲ ಹೃತ್ಕರ್ಣ ಮತ್ತು ಬಲ ಹೃತ್ಕುಕ್ಷಿಯ ನಡುವೆ ’ತ್ರಿದಳ ಕವಾಟ’ವಿದೆ. ಎಡ ಹೃತ್ಕರ್ಣ ಮತ್ತು ಎಡ ಹೃತ್ಕುಕ್ಷಿಯ ನಡುವೆ ’ದ್ವಿದಳ ಕವಾಟ’ವಿದೆ. ಈ ಕವಾಟಗಳು ರಕ್ತವು ಹೃತ್ಕುಕ್ಷಿಗಳಿಂದ ಹೃತ್ಕರ್ಣಗಳಿಗೆ ಹರಿಯುವುದನ್ನು ತಡೆಯುತ್ತದೆ.
8.)
ದೊಡ್ಡದಾದ ಅಭಿಧಮನಿ ಯಾವುದು?
A). ಊರ್ಧ್ವ ಅಭಿಧಮನಿ
B). ಅಧೋ ಅಭಿಧಮನಿ
C). ಪುಪ್ಪುಸಕ ಅಭಿಧಮನಿ
D). ಮೇಲಿನ ಯಾವುದು ಅಲ್ಲ
Correct Ans: (B)
Description:
ಅಧೋ ಅಭಿಧಮನಿ
ದೊಡ್ಡದಾದ ಅಭಿಧಮನಿಯ ಹೆಸರು 'ಅಧೋ ಅಭಿಧಮನಿ'. ದೊಡ್ಡದಾದ ಅಪಧಮನಿಯ ಹೆಸರು ಮಹಾ ಅಪಧಮನಿ.
9.)
ಹೃದಯದ ಕೋಣೆಗಳ ಸಂಕೋಚನಾ ಕ್ರಿಯೆಗೆ ಏನೆಂದು ಕರೆಯುತ್ತಾರೆ?
A). ಸಿಸ್ಟೋಲ್
B). ಡಯಾಸ್ಟೋಲ್
C). ಕಾರ್ಡಿಯಾಕ್ ಔಟ್ಪುಟ್
D). ಮೇಲಿನ ಎಲ್ಲವು ತಪ್ಪು
Correct Ans: (A)
Description:
ಸಿಸ್ಟೋಲ್
ಹೃದಯದ ಕೋಣೆಗಳ ಸಂಕೋಚನಾ ಕ್ರಿಯೆಗೆ ಸಿಸ್ಟೋಲ್ ಕರೆಯುತ್ತಾರೆ. ಹೃದಯದ ಕೋಣೆಗಳ ವಿಕಸನ ಕ್ರಿಯೆಗೆ ’ಡಯಾಸ್ಟೋಲ್’ ಎಂದು ಕರೆಯುತ್ತಾರೆ. ಒಂದು ಸಿಸ್ಟೋಲ್ ಮತ್ತು ಒಂದು ಡಯಾಸ್ಟೋಲ್ ಸೇರಿ ಒಂದು ’ಹೃದಯದ ಬಡಿತ’ ವಾಗುತ್ತದೆ.
10.)
ಹೃದಯಕ್ಕೂ ಶ್ವಾಸಕೋಶಗಳಿಗೂ ನಡುವಿನ ರಕ್ತ ಪರಿಚಲನೆಯನ್ನು ಏನೆಂದು ಕರೆಯುವರು?
A). ಪುಪ್ಪಸಕ ಪರಿಚಲನೆ
B). ದೈಹಿಕ ಪರಿಚಲನೆ
C). ಇಮ್ಮಡಿ ಪರಿಚಲನೆ
D). ಮೇಲಿನ ಎಲ್ಲವೂ ತಪ್ಪು
Correct Ans: (A)
Description:
ಪುಪ್ಪಸಕ ಪರಿಚಲನೆ
ಹೃದಯಕ್ಕೂ ಶ್ವಾಸಕೋಶಗಳಿಗೂ ನಡುವಿನ ರಕ್ತಪರಿಚಲನೆಯ ಪಥವನ್ನು 'ಪುಪ್ಪಸಕ ಪರಿಚಲನೆ'ಎನ್ನುವರು. ಆಮ್ಮಜನಕ ರಹಿತ ರಕ್ತವು ಹೃತ್ಕುಕ್ಷಿಯಿಂದ ಪುಪ್ಪಸಕ ಅಭಿಧಮನಿ ಹಾಗೂ ಅದರ ಶಾಖೆಗಳ ಮೂಲಕ ಶ್ವಾಸಕೋಶಗಳಲ್ಲಿರುವ ಲೋಮನಾಳಗಳ ಬಲೆಯಲ್ಲಿ ಹರಿಯುತ್ತದೆ. ವಿಸರಣದಿಂದ ವಾಯುಕೋಶಗಳಲ್ಲಿರುವ ಆಕ್ಸಿಜನ್ ಪಡೆದು ಕಾರ್ಬನ್ ಡೈ ಆಕ್ಸೈಡನ್ನು ವಾಯುಕೋಶಗಳಿಗೆ ಬಿಡುಗಡೆ ಮಾಡಿ ಅಕ್ಸಿಜನ್ ಸಹಿತ ರಕ್ತವಾಗಿ ಪುಪ್ಪಸಕ ಅಭಿಧಮನಿಗಳ ಮೂಲಕ ಎಡ ಹೃತ್ಕರ್ಣಕ್ಕೆ ಹಿಂದಿರುಗುತ್ತದೆ.
11.)
ಅಪಧಮನಿಗಳ ಗೋಡೆಗಳಲ್ಲಿ ರಕ್ತದ ಚಲನೆಯಿಂದ ಉಂಟಾಗುವ ಅಲೆಯಂತಹ ಚಲನೆಯನ್ನು _______ ಎನ್ನುವರು.
A). ಡಯಾಸ್ಟೂರ್
B). ಸಿಸ್ಟೋರ್
C). ನಾಡಿ ಮಿಡಿತ
D). ರಕ್ತದ ಒತ್ತಡ
Correct Ans: (C)
Description:
ನಾಡಿ ಮಿಡಿತ
ಎಡ ಹೃತ್ಕುಕ್ಷಿಯು ಸಂಕುಚಿಸಿದಾಗ ರಕ್ತವು ಮಹಾ ಅಪಧಮನಿ ನಂತರ ಅದರ ಕವಲುಗಳಲ್ಲಿ ನುಗ್ಗುತ್ತದೆ. ಹೀಗೆ ನುಗ್ಗಿದಾಗ ಸ್ಥಿತಿಸ್ಥಾಪಕ ಶಕ್ಯಿಯುಳ್ಳ ಅಪಧಮನಿಯ ಗೋಡೆ ರಕ್ತ ಮುಂದಕ್ಕೆ ಹರಿಯುವಾಗ ಕುಗ್ಗುತ್ತದೆ. ಇದರಿಂದ ಅಪಧಮನಿಯ ಗೋಡೆಯಲ್ಲಿ ಅಲೆಯಂತಹ ಚಲನೆ ಏರ್ಪಡುತ್ತದೆ. ಇದನ್ನೇ ನಾವು ’ನಾಡಿ ಮಿಡಿತ’ (ಪಲ್ಸ್) ಎಂದು ಕರೆಯುವುದು. ಹೃದಯದ ಮಿಡಿತದಷ್ಟೇ ನಾಡಿಬಡಿತವಿರುತ್ತದೆ.
12.)
ಒಬ್ಬ ಆರೋಗ್ಯವಂತ ವ್ಯಕ್ತಿಯ ಹೃದಯ ಒಂದು ನಿಮಿಷಕ್ಕೆ ಎಷ್ಟು ಬಾರಿ ಬಡಿದುಕೊಳ್ಳುತ್ತದೆ?
A). 80 ಬಾರಿ
B). 72 ಬಾರಿ
C). 90 ಬಾರಿ
D). 102 ಬಾರಿ
Correct Ans: (B)
Description:
72 ಬಾರಿ
ಒಬ್ಬ ಆರೋಗ್ಯವಂತ ಮನುಷ್ಯನ ಹೃದಯ ಬಡಿತ ನಿಮಿಷಕ್ಕೆ 72ಬಾರಿ ಬಡಿದುಕೊಳ್ಳುತ್ತದೆ. ಹೃದಯ ಬಡಿತವನ್ನು ಅಳೆಯಲು ;ಸ್ಟೆತೆಸ್ಕೋಪ್' ಎಂಬ ಉಪಕರಣವನ್ನು ಬಳಸುತ್ತಾರೆ.
13.)
ಹೃದಯ ಸ್ನಾಯುಗಳಿಗೆ ಆಮ್ಲಜನಕ ಸಹಿತ ರಕ್ತವನ್ನು ಸರಬರಾಜು ಮಾಡುವ ಅಪಧಮನಿ ಯಾವುದು?
A). ಊರ್ಧ್ವ ಅಪಧಮನಿ
B). ರೀನಲ್ ಅಪಧಮನಿ
C). ಕರೋನರಿ ಅಪಧಮನಿ
D). ಮೇಲಿನ ಎಲ್ಲವೂ ತಪ್ಪು
Correct Ans: (C)
Description:
ಕರೋನರಿ ಅಪಧಮನಿ
ಹೃದಯ ಸ್ನಾಯುಗಳಿಗೆ ಆಮ್ಲಜನಕ ಸಹಿತ ರಕ್ತವನ್ನು ಸರಬರಾಜು ಮಾಡುವ ಅಪಧಮನಿ ಕರೋನರಿ ಅಪಧಮನಿ. ಮಹಾ ಅಪಧಮನಿಯಿಂದ ಹೊರಡುವ ’ಕರೋನರಿ ಅಪಧಮನಿ’ಯ ಬಲ ಮತ್ತು ಎಡ ಕವಲುಗಳು ಆಕ್ಸಿಜನ್ ಸಹಿತ ರಕ್ತವನ್ನು ಹೃದಯದ ಸ್ನಾಯುಗಳಿಗೆ ಒದಗಿಸುತ್ತವೆ.
14.)
ಆಮ್ಲಜನಕ ರಹಿತ ರಕ್ತವನ್ನು ಬಲಹೃತ್ಕರ್ಣಕ್ಕೆ ಒಯ್ಯುವ ರಕ್ತನಾಳ ಯಾವುದು?
A). ರಿನಲ್ ಕಾಪ್ಸೂಲ್
B). ಕರೋನರಿ ಸೈನಸ್
C). ರೀನಲ್ ಪ್ಯಾಪಿಲ್ಲಾ
D). ಕರೋನರಿ ಪ್ರಾಪಿಲ್ಸ್
Correct Ans: (B)
Description:
ಕರೋನರಿ ಸೈನಸ್
’ಕರೋನರಿ ಸೈನಸ್’ ಎಂಬ ಅಭಿಧಮನಿ ಆಕ್ಸಿಜನ್ ರಹಿತ ರಕ್ತವನ್ನು ಬಲ ಹೃತ್ಕರ್ಣಕ್ಕೆ ಒಯ್ಯುತ್ತದೆ. ಶ್ವಾಸಕೋಶಗಳಿಂದ ಆಮ್ಲಜನಕ ಸಹಿತ ರಕ್ತವನ್ನು ಹೃದಯದ ಎಡ ಹೃತ್ಕರ್ಣಕ್ಕೆ ತರುವ ಅಭಿಧಮನಿ ಪುಪ್ಪುಸಕ ಆಭಿಧಮನಿ.
15.)
ರಕ್ತವನ್ನು ಹೊರಕ್ಕೆ ಪಂಪು ಮಾಡುವ ಹೃದಯದ ಕೋಣೆ ಯಾವುದು?
A). ಹೃತ್ಕುರ್ಷಿ
B). ಹೃತ್ಕರ್ಣ
C). ಎ ಮತ್ತು ಬಿ
D). ಮೇಲಿನ ಎಲ್ಲವೂ ತಪ್ಪು
Correct Ans: (A)
Description:
ಹೃತ್ಕುರ್ಷಿ
ರಕ್ತವನ್ನು ಹೊರಕ್ಕೆ ಪಂಪು ಮಾಡುವ ಹೃದಯದ ಕೋಣೆ ಹೃತ್ಕುರ್ಷಿ. ರಕ್ತವನ್ನು ಒಳಗೆ ತೆಗೆದುಕೊಳ್ಳುವ ಹೃದಯದ ಕೋಣೆ ಹೃತ್ಕರ್ಣ.
16.)
ಮೂತ್ರ ಪಿಂಡಗಳಿಂದ ರಕ್ತವನ್ನು ಹೃದಯಕ್ಕೆ ತೆಗೆದುಕೊಂಡು ಹೋಗುವ ರಕ್ತನಾಳ ಯಾವುದು?
A). ಕರೋನರಿ ಅಪಧಮನಿ
B). ಕರೋನರಿ ಅಭಿಧಮನಿ
C). ರೀನಲ್ ಅಪಧಮನಿ
D).
ರೀನಲ್ ಅಭಿಧಮನಿ
Correct Ans: (D)
Description:
ರೀನಲ್ ಅಭಿಧಮನಿ
ಮೂತ್ರ ಪಿಂಡಗಳಿಂದ ರಕ್ತವನ್ನು ಹೃದಯಕ್ಕೆ ತೆಗೆದುಕೊಂಡು ಹೋಗುವ ರಕ್ತನಾಳ ರೀನಲ್ ಅಭಿಧಮನಿ. ಮೂತ್ರ ಪಿಂಡಗಳಿಗೆ ಹೃದಯದಿಂದ ರಕ್ತವನ್ನು ಸರಬರಾಜು ಮಾಡುವ ರಕ್ತನಾಳ ರೀನಲ್ ಅಪಧಮನಿ.
17.)
ಒಂದು ಹೃದಯ ಬಡಿತಕ್ಕೆ ಒಂದು ಹೃತ್ಕುಕ್ಷಿಯಿಂದ ಹೊರಬರುವ ರಕ್ತದ ಪ್ರಮಾಣವನ್ನು ಏನೆಂದು ಕರೆಯುತ್ತಾರೆ?
A). ಸೀನೋ ಅಟ್ರಿಯಲ್
B). ಸಿಸ್ಟಾಲ್ ವ್ಯಾಲೂಂ
C). ಸ್ಟ್ರೋಕ್ವ್ಯಾಲೂಂ
D). ಕಾರ್ಡಿಯಕ್ ಔಟ್ಪುಟ್
Correct Ans: (C)
Description:
ಸ್ಟ್ರೋಕ್ವ್ಯಾಲೂಂ
ಒಂದು ಹೃದಯ ಬಡಿತಕ್ಕೆ ಒಂದು ಹೃತ್ಕುಕ್ಷಿಯಿಂದ ಹೊರಬರುವ ರಕ್ತದ ಪ್ರಮಾಣವನ್ನು ಸ್ಟ್ರೋಕ್ವ್ಯಾಲೂಂ ಎಂದು ಕರೆಯುತ್ತಾರೆ. ಒಂದು ಹೃದಯ ಬಡಿತಕ್ಕೆ ಒಂದು ಹೃತ್ಕುಕ್ಷಿಯಿಂದ ಹೊರಬರುವ ರಕ್ತದ ಪ್ರಮಾಣ 70 ಮೀ.ಲಿ ಆಗಿರುತ್ತದೆ.
18.)
ತ್ರಿದಳ ಕವಾಟ ಮತ್ತು ದ್ವಿದಳ ಕವಾಟ ಮುಚ್ಚುವಾಗ ಬರುವ ಹೃದಯದ ಶಬ್ದ _____.
A). ಲಬ್ (Lubb)
B). ಡಬ್ (Dubb)
C). ಎಡರೂ ಒಂದೇ ಸಾರಿ ಬರುತ್ತದೆ
D). ಯಾವ ಶಬ್ದವು ಬರುವುದಿಲ್ಲ
Correct Ans: (A)
Description:
ಲಬ್ (Lubb)
ತ್ರಿದಳ ಕವಾಟ ಮತ್ತು ದ್ವಿದಳ ಕವಾಟ ಮುಚ್ಚುವಾಗ ಬರುವ ಹೃದಯದ ಶಬ್ದ ಲಬ್ (Lubb). ಅದೇ ರೀತಿ ಅರ್ಧ ಚಂದ್ರಾಕೃತಿಯ ಕವಾಟಗಳು ಮುಚ್ಚುವಾಗ ಬರುವ ಹೃದಯದ ಶಬ್ದವು ಡಬ್ (Dubb) ಎಂದು ಕೇಳಿಸುತ್ತದೆ.
19.)
ರಕ್ತವು ಅಪಧಮನಿಗಳ ಮೇಲೆ ಉಂಟುಮಾಡುವ ಒತ್ತಡ ಯಾವುದು?
A). ಜಲ ಒತ್ತಡ
B). ನಾಡಿ ಮಿಡಿತ
C). ರಕ್ತದ ಒತ್ತಡ
D). ವಾಯು ಒತ್ತಡ
Correct Ans: (C)
Description:
ರಕ್ತದ ಒತ್ತಡ
ಎಡ ಹೃತ್ಕುಕ್ಷಿ ಸಂಕುಚಿಸಿದಾಗ ರಕ್ತವು ಮಹಾ ಅಪಧಮನಿಗೆ ಒತ್ತಿ ತಳ್ಳಲ್ಪಡುತ್ತದೆ. ಇದು ಮಹಾ ಅಪಧಮನಿ ಮತ್ತು ಅದರ ಕವಲುಗಳಾದ ಅಪಧಮನಿಗಳ ಗೋಡೆಗಳ ಮೇಲೆ ಒತ್ತಡವನ್ನು ಏರ್ಪಡಿಸುತ್ತದೆ. ಇದನ್ನು’ರಕ್ತದ ಒತ್ತಡ’ ಎನ್ನುವರು.
20.)
ಆರೋಗ್ಯವಂತ ಮನುಷ್ಯನಲ್ಲಿರುವ ಸಾಮಾನ್ಯ ರಕ್ತದ ಒತ್ತಡ ಎಷ್ಟು?
A). 140/20 mm Hg
B). 120/80 mm Hg
C). 72/70 mm Hg
D). 220/80 mm Hg
Correct Ans: (B)
Description:
120/80 mm Hg
ಆರೋಗ್ಯವಂತ ಮನುಷ್ಯನಲ್ಲಿರುವ ಸಾಮಾನ್ಯ ರಕ್ತದ ಒತ್ತಡ 120/80 mm Hg ಇರುತ್ತದೆ. SP (ಸಿಸ್ಟಾಲಿಕ್ ಒತ್ತಡ) =120 mm Hg ಮತ್ತು DP (ಡಯಾಸ್ಟಾಲಿಕ್ ಒತ್ತಡ) = 80 mm Hg.
21.)
ರಕ್ತದ ಒತ್ತಡವನ್ನು ಅಳೆಯಲು ಬಳಸುವ ಸಾಧನ ಯಾವುದು?
A). ಸ್ಪಿಗ್ಮೋ ಮಾನೋ ಮೀಟರ್
B). ಅಮ್ಮೀಟರ್
C). ಗ್ಯಾಲೋನೋ ಮೀಟರ್
D). ಡೆಸಿಬಲ್ ಮೀಟರ್
Correct Ans: (A)
Description:
ಸ್ಪಿಗ್ಮೋ ಮಾನೋ ಮೀಟರ್
ರಕ್ತದ ಒತ್ತಡವನ್ನು ಅಳೆಯಲು ಬಳಸುವ ಸಾಧನ ಸಿಗ್ಮೋ ಮಾನೋ ಮೀಟರ್ . ಇದನ್ನು ಕಂಡು ಹಿಡಿದ ವಿಜ್ಞಾನಿ 'ರಿವ್ ರಾಕ್ಷೀ'. ಮೊಟ್ಟ ಮೊದಲ ಬಾರಿಗೆ ರಕ್ತದ ಒತ್ತಡವನ್ನು ಅಳೆದ ವಿಜ್ಞಾನಿ 'ಸ್ಟೀಫನ್ ಹಾರ್ಲ್ಸ್'.
22.)
ಕೆಳಗಿನವುಗಳಲ್ಲಿ ಯಾವುದು ಹೃದಯದ ಬಲ ಹೃತ್ಕರ್ಣದಲ್ಲಿ ವಿದ್ಯುತ್ ತರಂಗಗಳನ್ನು ಉತ್ಪತ್ತಿ ಮಾಡುತ್ತದೆ?
A). WAN
B). SEEP
C). PAN
D). SAN
Correct Ans: (D)
Description:
SAN
ಹೃದಯದ ಬಲ ಹೃತ್ಕರ್ಣದಲ್ಲಿರುವ SAN (ಸೀನೋ ಆಟ್ರಿಯಲ್ ನೋಡ್) ವಿದ್ಯುತ್ ತರಂಗಗಳನ್ನು ಉತ್ಪತ್ತಿ ಮಾಡುತ್ತದೆ. ಈ ತರಂಗಗಳು ಹೃದಯ ಬಡಿತಕ್ಕೆ ಕಾರಣವಾಗಿದೆ. SANನ್ನು Pace Maker ಎಂದು ಕರೆಯುತ್ತಾರೆ.
23.)ಹೃದಯಘಾತದ ಮತ್ತೊಂದು ಹೆಸರು ಏನು?
A). ಹಾರ್ಟ್ಡೆಡ್
B). ಹೃದಯಾಮರಣ
C). ಮಿಯೋಕಾರ್ಡಿಯಲ್ ಇನ್ಫಾರ್ಕಷನ್
D). ಹಾರ್ಟ್ಇನ್ ಡಿಸಿಸ್
Correct Ans: (C)
Description:
ಮಿಯೋಕಾರ್ಡಿಯಲ್ ಇನ್ಫಾರ್ಕಷನ್
ಹೃದಯಘಾತದ ಮತ್ತೊಂದು ಹೆಸರು ಮಿಯೋಕಾರ್ಡಿಯಲ್ ಇನ್ಫಾರ್ಕಷನ್ (Myocardial infarction). ಹೃದಯಘಾತಕ್ಕಿರುವ ಚಿಕಿತ್ಸೆಗಳು ಹೀಗಿವೆ 'ಆ್ಯಂಜಿಯೊಪ್ಲಾಸ್ಟಿ' ಮತ್ತು 'ಬೈಪಾಸ್ ಸರ್ಜರಿ'
24.)ECG ಯನ್ನು ಕಂಡು ಹಿಡಿದವರು ಯಾರು?
A). ಐಸ್ತೊವನಿ
B). ಸ್ಟೀಫನ್ ಹಾರ್ಲ್ಸ್
C). ರಿವ್ ರಾಕ್ಷೀ
D). ಅಲೆಕ್ಸಾಂಡರ್ ಫ್ಲೇಮಿಂಗ್
Correct Ans: (A)
Description:
ಐಸ್ತೊವನಿ
ECG (ಇಲೆಕ್ಟ್ರೊ ಕಾರ್ಡಿಯೋ ಗ್ರಾಫಿ) ಯನ್ನು ಕಂಡು ಹಿಡಿದವರು ಐಸ್ತೊವನಿ. SAN ದಿಂದ ಉತ್ಪತ್ತಿಯಾಗುವ ವಿದ್ಯುತ್ ತರಂಗಗಳನ್ನು ಸ್ವೀಕರಿಸಿ ಹೃದಯದ ಆರೋಗ್ಯವನ್ನು ತಿಳಿಸುವ ಉಪಕರಣ ECG (ಇಲೆಕ್ಟ್ರೊ ಕಾರ್ಡಿಯೋ ಗ್ರಾಫಿ).
25.)ದೇಹದ ಜೀವಕೋಶಗಳಿಗೆ ಆಮ್ಲಜನಕ ಸಹಿತ ರಕ್ತದ ಅಸಮರ್ಪಕ ಸಾಗಾಣಿಕೆಯಿಂದ ಹುಟ್ಟುವ ಮಗುವಿನ ನಾಲಿಗೆ, ಕಣ್ಣು ಯಾವ ಬಣ್ಣಕ್ಕೆ ತಿರುಗುತ್ತದೆ?
A). ಕೆಂಪು
B). ನೀಲಿ
C). ಹಸಿರು
D). ಹಳದಿ
Correct Ans: (B)
Description:
ನೀಲಿ
ದೇಹದ ಜೀವಕೋಶಗಳಿಗೆ ಆಮ್ಲಜನಕ ಸಹಿತ ರಕ್ತದ ಅಸಮರ್ಪಕವಾಗಿ ಸಾಗಾಣಿಕೆ ಆಗುವುದರಿಂದ ಹುಟ್ಟುವ ಮಗುವಿನ ತುಟಿ, ನಾಲಿಗೆ, ಕಣ್ಣು ಗುಡ್ಡೆಗಳು ನೀಲಿ ಬಣ್ಣಕ್ಕೆ ತಿರುಗುತ್ತದೆ. ಇಂತಹ ಮಗುವನ್ನು ಬ್ಲೂ ಬೇಬಿ (Blue Baby) ಅಥವಾ ನೀಲಿ ಮಗು ಎಂದು ಕರೆಯುತ್ತಾರೆ.
26.)ಕೆಳಗಿನವುಗಳಲ್ಲಿ ಹೃದಯಘಾತಕ್ಕೆ ಕಾರಣವಾದ ಅಂಶ ಯಾವುದು?
A). ರಕ್ತದಲ್ಲಿನ ಪ್ರೋಟೀನ್
B). ರಕ್ತದಲ್ಲಿ ಸಕ್ಕರೆ
C). ರಕ್ತದಲ್ಲಿನ ಯೂರಿಯಾ
D). ಕೊಲೆಸ್ಟ್ರಾಲ್
Correct Ans: (D)
Description:
ಕೊಲೆಸ್ಟ್ರಾಲ್
ರಕ್ತನಾಳದಲ್ಲಿ ಕೊಲೆಸ್ಟ್ರಾಲ್ ಸಂಗ್ರಹಗೊಳ್ಳುವುದರಿಂದ ರಕ್ತನಾಳಗಳು ಸ್ಥಿತಿಸ್ಥಾಪಕ ಗುಣಗಳನ್ನು ಕಳೆದುಕೊಳ್ಳುತ್ತವೆ. ಈ ಸ್ಥಿತಿಯನ್ನು 'ಅಥೆರೊಸ್ಕ್ಲಿರೊಸಿಸ್' ಎನ್ನುವರು. ಇದು ಹೃದಯಘಾತಕ್ಕೆ ಕಾರಣವಾಗುತ್ತದೆ.
__________________________________________
ಸಂಗ್ರಹ ✍️ T. A. ಚಂದ್ರಶೇಖರ
ನಾನು ಹುಟ್ಟಿದ್ದು 01 ಏಪ್ರಿಲ್ 1990. ನಮ್ಮೂರು ಗುಣದಾಳ ತಾಲೂಕು ಬಬಲೇಶ್ವರ ಮತ್ತು ವಿಜಯಪುರ ಜಿಲ್ಲೆಗೆ ಸೇರಿದ ಒಂದು ಹಳ್ಳಿ. ಪಂಚನದಿಗಳಲ್ಲೊಂದಾದ ಕೃಷ್ಣಾ ನದಿಯ 3 ಕಿಮೀ ದೂರದಲ್ಲಿದೆ. ಬಯಲು ಸೀಮೆ ಹಾಗೂ ಬಿಸಿಲು ನಾಡಾದ ಗುಮ್ಮಟ ನಗರಿ ನನ್ನದು. ಬಡತನದಲ್ಲಿದ್ದರು ಪ್ರೀತಿಯ ಸಿರಿತನದಿಂದ ನನ್ನನ್ನು ಸಾಕಿ ತಿದ್ದಿ ಬೆಳೆಸಿದವರು ನನ್ನ ಕುಟುಂಬದವರು. ನನ್ನ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಗುಣದಾಳದಲ್ಲಿನ ಸರ್ಕಾರಿ ಶಾಲೆ ಮತ್ತು, ಪ್ರೌಢಶಾಲೆ ಅನುದಾನಿತ ಶಾಲೆಯಲ್ಲಿ, ಪದವಿಪೂರ್ವ ಶಿಕ್ಷಣ ,Degree, B.ಎಡ್ ವಿಜಯಪುರದಲ್ಲಿ, ಮುಗಿಸಿದೆ. 2014-15ರ ವರೆಗೆ ಒಂದು ವರ್ಷ ಜ್ಞಾನೋದಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ ಮುಂದೆ ಶ್ರೀ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2015-2022ರ ವರೆಗೆ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ 2022ರ ಮಧ್ಯ ವಿದ್ಯಾಸ್ಫೂರ್ತಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಸೇರಿ ಅಲ್ಲಿ ಪ್ರೌಢ ವಿಭಾಗದಲ್ಲಿ ಇಂಗ್ಲಿಷ್ ಭಾಷಾ ವಿಷಯ ಶಿಕ್ಷಕರಾಗಿ 2024 ಮೆ ವರೆಗೆ ಸೇವೆ ಸಲ್ಲಿಸಿ. 2024 ರಿಂದ ಪ್ರಸ್ತುತ (1 ರಿಂದ 8ನೆಯ ತರಗತಿಯ - ಜ್ಞಾನ ಗಂಗೋತ್ರಿ ಪೂರ್ವ ಪ್ರಾಥಾಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.ಧನ್ಯವಾದಗಳು
Thursday, 11 February 2021
ಕನ್ನಡಕ್ಕೆ - ಕವಿಗಳು
ನಾನು ಹುಟ್ಟಿದ್ದು 01 ಏಪ್ರಿಲ್ 1990. ನಮ್ಮೂರು ಗುಣದಾಳ ತಾಲೂಕು ಬಬಲೇಶ್ವರ ಮತ್ತು ವಿಜಯಪುರ ಜಿಲ್ಲೆಗೆ ಸೇರಿದ ಒಂದು ಹಳ್ಳಿ. ಪಂಚನದಿಗಳಲ್ಲೊಂದಾದ ಕೃಷ್ಣಾ ನದಿಯ 3 ಕಿಮೀ ದೂರದಲ್ಲಿದೆ. ಬಯಲು ಸೀಮೆ ಹಾಗೂ ಬಿಸಿಲು ನಾಡಾದ ಗುಮ್ಮಟ ನಗರಿ ನನ್ನದು. ಬಡತನದಲ್ಲಿದ್ದರು ಪ್ರೀತಿಯ ಸಿರಿತನದಿಂದ ನನ್ನನ್ನು ಸಾಕಿ ತಿದ್ದಿ ಬೆಳೆಸಿದವರು ನನ್ನ ಕುಟುಂಬದವರು. ನನ್ನ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಗುಣದಾಳದಲ್ಲಿನ ಸರ್ಕಾರಿ ಶಾಲೆ ಮತ್ತು, ಪ್ರೌಢಶಾಲೆ ಅನುದಾನಿತ ಶಾಲೆಯಲ್ಲಿ, ಪದವಿಪೂರ್ವ ಶಿಕ್ಷಣ ,Degree, B.ಎಡ್ ವಿಜಯಪುರದಲ್ಲಿ, ಮುಗಿಸಿದೆ. 2014-15ರ ವರೆಗೆ ಒಂದು ವರ್ಷ ಜ್ಞಾನೋದಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ ಮುಂದೆ ಶ್ರೀ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2015-2022ರ ವರೆಗೆ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ 2022ರ ಮಧ್ಯ ವಿದ್ಯಾಸ್ಫೂರ್ತಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಸೇರಿ ಅಲ್ಲಿ ಪ್ರೌಢ ವಿಭಾಗದಲ್ಲಿ ಇಂಗ್ಲಿಷ್ ಭಾಷಾ ವಿಷಯ ಶಿಕ್ಷಕರಾಗಿ 2024 ಮೆ ವರೆಗೆ ಸೇವೆ ಸಲ್ಲಿಸಿ. 2024 ರಿಂದ ಪ್ರಸ್ತುತ (1 ರಿಂದ 8ನೆಯ ತರಗತಿಯ - ಜ್ಞಾನ ಗಂಗೋತ್ರಿ ಪೂರ್ವ ಪ್ರಾಥಾಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.ಧನ್ಯವಾದಗಳು
ನಮ್ಮ ದೇಶದ ಸಂಪೂರ್ಣ ಮಾಹಿತಿ
ದಕ್ಷಿಣ ಭಾರತದ ಪ್ರಮುಖ ನದಿಗಳು
ನರ್ಮದಾ
ತಪತಿ
ಸಾಬರಮತಿ
ಕಾಳಿ
ಮಹಾದಾಯಿ
ಲೂನಿ
ಶರಾವತಿ
ನೇತ್ರಾವತಿ
ವಿ.ಸೂಚನೆ:~*ಈ ಮೇಲಿನ ನದಿಗಳು ಪಶ್ಚಿಮಕ್ಕೆ ಹರೆದು ಅರಬ್ಬಿ ಸಮುದ್ರ ಸೇರುತ್ತವೆ*
ದಾಮೋದರ
ಮಹಾನದಿ
ಗೋದಾವರಿ
ಕೃಷ್ಣಾ
ಕಾವೇರಿ
*ಇವು ಪೂರ್ವಕ್ಕೆ ಹರೆದು ಬಂಗಾಳ ಕೊಲ್ಲಿ ಸೇರುತ್ತೇವೆ*
ಲುನಿ ನದಿಯ ಉಗಮಸ್ಥಾನ ;~ *ಅನಾಸಾಗರ*
ನರ್ಮದಾ ನದಿಯ ಉಗಮಸ್ಥಾನ :~ *ಅಮರಕಂಟಕ*
ಮಹಾದಾಯಿ ನದಿ ಗೋವಾದ ಜೀವನದಿ ಎನ್ನುವರು. *ಇದರ ಉಗಮಸ್ಥಾನ ಬೆಳಗಾವಿ ಜಿಲ್ಲೆ ಭೀಮಗಡ*
*ತಪತಿ ನದಿಯನ್ನು ಸೂರ್ಯನ ಮಗಳು ಎಂದು ಕರೆಯುತ್ತಾರೆ*,
ಶರಾವತಿ ನದಿಯ ಉಗಮಸ್ಥಾನ :~ ತೀರ್ಥಹಳ್ಲಿ ತಾಲ್ಲೂಕು *ಅಂಬುತಿರ್ಥ*
* ನೇತ್ರಾವತಿ ಉಗಮಸ್ಥಾನ :~ ಚಿಕ್ಕಮಗಳೂರು ಜಿಲ್ಲೆ ರಾಮನದುರ್ಗ*
*ಪೆರಿಯಾರ ನದಿಯನ್ನು ಕೇರಳದ ಜೀವನದಿ ಎನ್ನುವರು*
ದಾಮೋದರ ನದಿಯನ್ನು *"ಪಶ್ಚಿಮ ಬಂಗಾಳದ"* ಕಣ್ಣೀರು ನದಿ ಎಂದು ಕರೆಯುತ್ತಾರೆ.
*ಒಡಿಸ್ಸದ ಕಣ್ಣೀರು ನದಿ ಎಂದು ಮಹಾನದಿಯನ್ನು ಕರೆಯುತ್ತಾರೆ*
ಮಹಾನದಿ ಒಡಿಸ್ಸಾದ ಜೀವನದಿ ಎಂದು ಸಹ ಕರೆಯುತ್ತಾರೆ.
ದಕ್ಷಿಣ ಭಾರತದಲ್ಲಿ ಅತಿ ದೊಡ್ಡ ನದಿ- ಗೋದಾವರಿ.*
ಇದು ಮಹಾರಾಷ್ಟ್ರದ ನಾಸಿಕ ಜಿಲ್ಲೆಯಲ್ಲಿ ಉಗಮಿಸುತ್ತದೆ.
ಕೃಷ್ಣಾ ನದಿಯ ಉಗಮಸ್ಥಾನ :` *ಮಹಬಲೇಶ್ವರ*
ಕಾವೇರಿ ನದಿಯನ್ನು ದಕ್ಷಿಣದ ಗಂಗೆ ಎನ್ನುವರು.
ಭಾರತದ ವಿಶ್ವ ಪರಂಪರೆಯ ತಾಣಗಳು
ಭಾರತದಲ್ಲಿರುವ ವಿಶ್ವ ಪರಂಪರೆಯ ತಾಣಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ.
- ಬಿಹಾರದ ಮಹಾಬೋಧಿ ದೇವಾಲಯ ಸಂಕೀರ್ಣ
- ದೆಹಲಿಯ ಹುಮಾಯೂನನ ಸಮಾಧಿ
- ದೆಹಲಿಯ ಕೆಂಪು ಕೋಟೆ
- ದೆಹಲಿಯ ಕುತುಬ್ ಮಿನಾರ್ ಮತ್ತದರ ಸ್ಮಾರಕಗಳು
- ಕರ್ನಾಟಕದ ಹಂಪೆಯ ಸ್ಮಾರಕಗಳ ಸಮೂಹ
- ಕರ್ನಾಟಕದ ಪಟ್ಟದಕಲ್ಲಿನ ಸ್ಮಾರಕಗಳ ಸಮೂಹ
- ಕರ್ನಾಟಕ, ಮಹಾರಾಷ್ಟ್ರ,ಕೇರಳ ಗಳಲ್ಲಿ ಹರಡಿರುವ ಪಶ್ಚಿಮ ಘಟ್ಟ ಪರ್ವತಗಳು
- ಮಹಾರಾಷ್ಟ್ರದ ಎಲ್ಲೋರಾ ಗುಹೆಗಳು
- ಮಹಾರಾಷ್ಟ್ರದ ಅಜಂತಾ ಗುಹೆಗಳು
- ಮಹಾರಾಷ್ಟ್ರದ ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್
- ಮಹಾರಾಷ್ಟ್ರದ ಮುಂಬೈನ ಎಲಿಫೆಂಟಾ ಗುಹೆಗಳು
ಪಂಚ ವಾರ್ಷಿಕ ಯೋಜನೆಗಳು
ಭಾರತ ಸರ್ಕಾರ ಇಲ್ಲಿಯವರೆಗೆ 12 ಪಂಚ ವಾರ್ಷಿಕ ಯೋಜನೆಗಳನ್ನು ದೇಶಕ್ಕೆ ಅರ್ಪಿಸಿರುತ್ತದೆ.
🔸*"ಒಂದನೇ ಪಂಚ ವಾರ್ಷಿಕ ಯೋಜನೆ"*=1951-56)
🔺 ಕಾರ್ಯಗತ ಗೊಂಡ ಅವಧಿ= *1-4-1951 ರಿಂದ 31-3-1956*
🔹 ಅಧ್ಯಕ್ಷರು= *ಜವಾಹರಲಾಲ್ ನೆಹರು*
🔸 ಉಪಾಧ್ಯಕ್ಷರು= *ಗುಲ್ಜಾರಿಲಾಲ್ ನಂದಾ*
🔺ಒಟ್ಟು ಹೂಡಿಕೆ= *1,960 ಕೋಟಿ*
🔹 ಆದ್ಯತೆ= *ಕೃಷಿ ಮತ್ತು ನೀರಾವರಿ*
🔸 ಮಾದರಿ= *ಹ್ಯಾರಡ್ ಮತ್ತು ಡೊಮಾರ್*
🔸 ಈ ಯೋಜನೆಯಲ್ಲಿ ಸ್ಥಾಪನೆಯಾದ ಪ್ರಮುಖ ಸಂಸ್ಥೆಗಳು👇
1) ದೇಶದ ಮೊದಲ ಐಐಟಿ ಸ್ಥಾಪನೆ= *1951*( ಪಶ್ಚಿಮ ಬಂಗಾಳದ ಕನಕಪುರದಲ್ಲಿ. ಸ್ಥಾಪನೆ ಮಾಡಿದರು= *ಮೌಲಾನಾ ಅಬುಲ್ ಕಲಾಂ ಆಜಾದ್*
2) ಸಮುದಾಯ ಅಭಿವೃದ್ಧಿ ಕಾರ್ಯಕ್ರಮ= *1952*
3) ಕುಟುಂಬ ಯೋಜನೆ= *1952*( ಕುಟುಂಬ ಕಲ್ಯಾಣ ಯೋಜನೆ ಎಂದು ಮರುನಾಮಕರಣ=1977)
4) ರಾಷ್ಟ್ರೀಯ ವಿಸ್ತೀರ್ಣ ಸೇವೆ(NES)= *1953*
5) ಪ್ರಮುಖ ಕೈಗಾರಿಕೆಗಳು= *HMT, BEL.*
6) UGC ಸ್ಥಾಪನೆ= *1956*
=============================
🌸 *ಎರಡನೇ ಪಂಚವಾರ್ಷಿಕ ಯೋಜನೆ*=1956-61
🔸 ಕಾರ್ಯಗತ ಗೊಂಡ ಅವಧಿ= *1-4-1956* ರಿಂದ *31-3-1961* ರ ವರಗೆ
🔹ಒಟ್ಟು ಹೊಡಿಕೆ= *4,600 ಕೋಟಿ*
🔸 ಅಧ್ಯಕ್ಷರು= *ಜವಾಹರಲಾಲ್ ನೆಹರು*
🔸 ಉಪಾಧ್ಯಕ್ಷರು *ಟಿ ಟಿ ಕೃಷ್ಣಮಾಚಾರಿ*
🔹 ಆದ್ಯತೆ= *ಕೈಗಾರಿಕಾ ಅಭಿವೃದ್ಧಿ*
🔸 ಮಾದರಿ= *ಮಹಾನಲೋಬಿಸ್ ಮಾದರಿ*
🔹1956 ರಲ್ಲಿ *ಕೈಗಾರಿಕಾ ನೀತಿ ಘೋಷಣೆ*( ಇದನ್ನು ಭಾರತದ *ಆರ್ಥಿಕ ಸಂವಿಧಾನ* ಎಂದು ಕರೆಯುತ್ತಾರೆ,
==================================
🌹 *ಮೂರನೇ ಪಂಚವಾರ್ಷಿಕ ಯೋಜನೆ*=(1961-66)
🔸ಕಾರ್ಯಗತ ಗೊಂಡ ಅವಧಿ = *1-4-1961 ರಿಂದ 31-3-1966* ರ ವರಗೆ.
🔹 ಅಧ್ಯಕ್ಷರು= *ಜವಾಹರಲಾಲ್ * ನೆಹರು *ಮತ್ತು ಲಾಲ್ ಬೋದ್ ಶಾಸ್ತ್ರಿ*
🔸 ಉಪಾಧ್ಯಕ್ಷರು= *ಸಿ.ಎಂ ತ್ರಿವೇದಿ* ಮತ್ತು *ಅಶೋಕ್ ಮೆಹ್ತಾ*
🔹ಒಟ್ಟು ಹೊಡಿಕೆ= *8,600 ಕೋಟಿ*
🔸 ಆದ್ಯತೆ= *ಕೃಷಿ* "ಅಕ್ಕಿ"
🔹 ಯೋಜನೆಗೆ= *ಗಾಡ್ಗೀಳ್ ಮತ್ತು ದೂರದೃಷ್ಟಿ ಯೋಜನೆ* ಎನ್ನುವರು.
🔹1965 ರಲ್ಲಿ *ಭಾರತ ಆಹಾರ ನಿಗಮ ಸ್ಥಾಪನೆ*.
🔸1966 ರಲ್ಲಿ *ನೋಟು ಅಪಮೌಲ್ಯೀಕರಣ*
==================================
🌼 *ನಾಲ್ಕನೇ ಪಂಚವಾರ್ಷಿಕ ಯೋಜನೆ*(1969-74)
🔸ಕಾರ್ಯಗತ ಗೊಂಡ ಅವಧಿ= *1-4-1969 ರಿಂದ 31-3-1974* ರವರೆಗೆ.
🔹 ಅಧ್ಯಕ್ಷರು= *ಶ್ರೀಮತಿ ಇಂದಿರಾಗಾಂಧಿ*
🔸 ಉಪಾಧ್ಯಕ್ಷರು= *ಡಿ.ಆರ್ ಗಾಡ್ಗೀಳ್, ಸಿ ಸುಬ್ರಮಣ್ಯ, ದುರ್ಗಾ ಪ್ರಸಾದ್ ದಾರ*
🔹ಒಟ್ಟು ಹೊಡಿಕೆ= *15,902 ಕೋಟಿ*
🔸 ಆದ್ಯತೆ= *ಸ್ಥಿರತೆ ಯೊಂದಿಗೆ ಬೆಳವಣಿಗೆ, ಮತ್ತು ಸ್ವ ಪ್ರಗತಿಗೆ ಉತ್ತೇಜನ*
🔹 ಮಾದರಿ= *ಬಿ.ಆರ್ ಗಾಡ್ಗೀಳ್ *
🔸1969 ಜುಲೈ 19, *ಮೊದಲ ಹಂತದ ಬ್ಯಾಂಕುಗಳ ರಾಷ್ಟ್ರೀಕರಣ*
🔹 ಈ ಯೋಜನೆಯಲ್ಲಿ *ಪೋಕ್ರಾನ್ ನಲ್ಲಿ ಅಣು ಪರೀಕ್ಷೆ 1974 ಮೇ 18 ರಂದು ಮಾಡಲಾಯಿತು,( ಇದಕ್ಕೆ *ಸ್ಮೈಲಿಂಗ್ ಬುದ್ಧ* ಎಂದು ಹೆಸರು ಕೊಡಲಾಯಿತು)
==============================
🌟 *5ನೇ ಪಂಚವಾರ್ಷಿಕ ಯೋಜನೆ*(1974-79)
🔹ಕಾರ್ಯಗತ ಗೊಂಡ ಅವಧಿ= *1-4-1974 ರಿಂದ 31-3-1979* ರವರೆಗೆ,
🔸 ಅಧ್ಯಕ್ಷರು= *ಶ್ರೀಮತಿ ಇಂದಿರಾಗಾಂಧಿ*
🔹 ಉಪಾಧ್ಯಕ್ಷರು= *ಪಿ.ಎನ್ ಹಕ್ಸನ್*
🔸 ಒಟ್ಟು ಹೂಡಿಕೆ= *39.303 ಕೋಟಿ*
🔹ಆದ್ಯತೆ= *ಉದ್ಯೋಗ, ಬಡತನ ನಿರ್ಮೂಲನೆ, ಮತ್ತು ಸಾಮಾಜಿಕ ನ್ಯಾಯ*
🔸1975 ಅಕ್ಟೋಬರ್ 2 ರಂದು *ಪ್ರಾದೇಶಿಕ ಗ್ರಾಮೀಣ ಬ್ಯಾಂಕ್* ಸ್ಥಾಪನೆಗೆ *ಆರ್.ಜಿ ಸರಣಯ್ಯ ಸಮಿತಿ ಶಿಫಾರಸ್ಸು* ಮಾಡಿತ್ತು.
🔹 ಈ ಯೋಜನೆಯಲ್ಲಿ *ಉಳುವವನೇ ಭೂಮಿಯ ಒಡೆಯ* ನಿರ್ಧಾರ ತೆಗೆದುಕೊಳ್ಳಲಾಯಿತು.
✍️🔸 ಜೀತ ಪದ್ಧತಿ ರದ್ದು= *1976*
🔹 ಯೋಜನೆಯಲ್ಲಿ *ಕೂಲಿಗಾಗಿ ಕಾಳು ಯೋಜನೆ=1977 ಜಾರಿಯಾಯಿತು*
==============================
🌷 *ಆರನೇ ಪಂಚವಾರ್ಷಿಕ ಯೋಜನೆ*( 1980-85)
🔸 ಕಾರ್ಯಗತ ಗೊಂಡ ಅವಧಿ= *1-4-1980 ರಿಂದ 31-3-1985* ರವರಿಗೆ.
🔹 ಅಧ್ಯಕ್ಷರು= *ಇಂದಿರಾ ಗಾಂಧಿ ಮತ್ತು ರಾಜೀವ ಗಾಂಧಿ*
🔸 ಉಪಾಧ್ಯಕ್ಷರು= *ನಾರಾಯಣ ದತ್ತ ತಿವಾರಿ, ಎಸ್ ಬಿ ಚೌಹಾಣ್ ಪ್ರಕಾಶ್ ಚಂದ್ರ ಸೇಥಿ, ಮತ್ತು ಪಿ.ವಿ ನರಸಿಂಹ ರಾವ್*
🔸ಒಟ್ಟು ಹೂಡಿಕೆ= *1,09,500 ಕೋಟಿ*
🔹 ಆದ್ಯತೆ= *ಕೈಗಾರಿಕಾ ಅಭಿವೃದ್ಧಿ*
🔸 ಯೋಜನೆಯಲ್ಲಿ *NREP-1980 ರಲ್ಲಿ ಜಾರಿ*
🔹 *ಎರಡನೇ ಹಂತದ ಬ್ಯಾಂಕುಗಳ ರಾಷ್ಟ್ರೀಕರಣ- 1980*
🔸 ಈ ಯೋಜನೆಯಲ್ಲಿ 1982 ರಲ್ಲಿ *ನಬಾರ್ಡ್ ಬ್ಯಾಂಕ್ ಸ್ಥಾಪನೆ*( ಬಿ ಶಿವರಾಂ ಶಿಫಾರಸಿನ ಮೇರೆಗೆ)
🔹 *EXIM ಬ್ಯಾಂಕ್ ಸ್ಥಾಪನೆ= 1982*
🍁🍁🍁🍁🍁🍁🍁🍁🍁✍
🌸 *7ನೇ ಪಂಚವಾರ್ಷಿಕ ಯೋಜನೆ*=(1985-90)
🔸 ಕಾರ್ಯಗತಗೊಂಡ ಅವಧಿ= *1-4-1985 ರಿಂದ 31-3-1990* ರ ವರಗೆ
🔹 ಒಟ್ಟು ಹೂಡಿಕೆ= *1,80,000 ಕೋಟಿ*
🔸 ಅಧ್ಯಕ್ಷರು= *ರಾಜೀವ ಗಾಂಧಿ*
🔹 ಉಪಾಧ್ಯಕ್ಷರು= *ಮನ್ಮೋಹನ್ ಸಿಂಗ್, ಶಿವಶಂಕರ್,ಮಾಧವ ಸಿಂಗ್ ಸೋಲಂಕಿ*
🔸 ಆದ್ಯತೆ= *ಆಹಾರ ಉದ್ಯೋಗ ಮತ್ತು ಉತ್ಪಾದಕತೆ*
🔹 ಯೋಜನೆಯಲ್ಲಿ *ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯ*(MHRD) 1985 ರಲ್ಲಿ ಸ್ಥಾಪನೆ.
🔸 *ಇಂದಿರಾ ಆವಾಸ್ ಯೋಜನೆ*(IAY) 1985-86)( ಯೋಜನೆಯು ಮುಂದೆ 2015 ಜೂನ್ 25ರಂದು *ಪ್ರಧಾನಮಂತ್ರಿ ಅವಾಸ್ ಯೋಜನೆ* ಎಂದು ಮರುನಾಮಕರಣ ವಾಯಿತು,
ಈ ಯೋಜನೆ ಉದ್ದೇಶ= *ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನರಿಗೆ ವಸತಿಗಳನ್ನು ನಿರ್ಮಿಸುವ ಉದ್ದೇಶ*
🔹 ಪಂಚವಾರ್ಷಿಕ ಯೋಜನೆಯಲ್ಲಿ *1988 ರಲ್ಲಿ SEBI ಸ್ಥಾಪನೆಯಾಯಿತು.*
🔸1988ರಲ್ಲಿ *NRY*( ನೆಹರು ರೋಜ್ಗಾರ್ ಯೋಜನೆ) ಮತ್ತು *JRY*( ಜವಾಹರ್ ರೋಜಗಾರ್) ಯೋಜನೆಗಳು ಜಾರಿ ಬಂದವು .
🔹ಈ 7 ನೇ ಪಂಚವಾರ್ಷಿಕ ಯೋಜನೆಯಲ್ಲಿ 1989 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ *ಮಕ್ಕಳ ಒಡಂಬಡಿಕೆ ಘೋಷಣೆ ಆಯಿತು*.. ಮುಂದೆ 8ನೇ ಪಂಚವಾರ್ಷಿಕ ಯೋಜನೆಯಲ್ಲಿ ಇದಕ್ಕೆ *ಸಹಿ ಹಾಕಲಾಯಿತು*.
=================================
⚜️ *ಎಂಟನೇ ಪಂಚವಾರ್ಷಿಕ ಯೋಜನೆ*( 1992-97)
🔸 ಕಾರ್ಯಗತಗೊಂಡ ಅವಧಿ = *1-4-1992 ರಿಂದ 31-3-1997 ರ* ವರಗೆ.
🔹ಒಟ್ಟು ಹೂಡಿಕೆ= *4,34,100 ಕೋಟಿ*
🔸 ಅಧ್ಯಕ್ಷರು= *ನರಸಿಂಹ ರಾವ್, ವಾಜಪೇಯಿ, ದೇವೇಗೌಡರು*
🔹 ಉಪಾಧ್ಯಕ್ಷರು= *ಪ್ರಣಬ್ ಮುಖರ್ಜಿ*
🔸 ಆದ್ಯತೆ= *ಕೈಗಾರಿಕೆಗಳನ್ನು ಆಧುನಿಕರಣ ಮಾಡುವುದು*
🔹1993ರಲ್ಲಿ *ಪಂಚಾಯತ್ ರಾಜ್ ಕಾಯ್ದೆ, ನಗರ ಪಾಲಿಕೆ ಸ್ಥಾಪನೆ,*
🔸 *1993 ರಲ್ಲಿ ಪ್ರಧಾನ ಮಂತ್ರಿ ರೋಜ್ಗಾರ್ ಯೋಜನೆ*(PMRY) ಸ್ಥಾಪನೆ,
🔹1995ರಲ್ಲಿ *WTO ಯ ಸದಸ್ಯ ರಾಷ್ಟ್ರವಾಗಿ ಭಾರತ ಸೇರ್ಪಡೆ*
🔸1995ರಲ್ಲಿ *ಪೋಲಿಯೋ ಲಸಿಕೆ ಕಾರ್ಯಕ್ರಮ ಮತ್ತು HDI ಮೊದಲ ಬಾರಿಗೆ ಸಿದ್ಧಪಡಿಸಲಾಯಿತು.*
================================
🌻 *9ನೇ ಪಂಚವಾರ್ಷಿಕ ಯೋಜನೆ*=(1997-2002)
🔹 ಕಾರ್ಯಗತಗೊಂಡ ಅವಧಿ= *1-4-1997 ರಿಂದ31-3-2002 ರ* ವರಗೆ.
🔸 ಅಧ್ಯಕ್ಷರು= *ಐ.ಕೆ ಗುಜ್ರಾಲ್ ಮತ್ತು ವಾಜಪೇಯಿ*
🔹 ಉಪಾಧ್ಯಕ್ಷರು= *ಮಧು ದಂಡವತೆ. ಜಸ್ವಂತ್ ಸಿಂಗ್, ಕೆ.ಸಿ ಪಂತ್*
🔸 ಈ ಯೋಜನೆಯ ಕಾರ್ಯತಂತ್ರ= *ಪ್ರಗತಿಯೊಂದಿಗೆ ಸಾಮಾಜಿಕ ನ್ಯಾಯ ಮತ್ತು ಸಮಾನತೆ*
🔹1997ರಲ್ಲಿ *ಸ್ವರ್ಣ ಜಯಂತಿ ಶಹರಿ ರಾಜಗಾರ ಯೋಜನೆ ಮುಂದೆ 2012-2013ರಲ್ಲಿ *ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಎಂದು ಮರುನಾಮಕರಣ ಮಾಡಲಾಯಿತು*. ಮತ್ತೆ ಈ ಯೋಜನೆಯು 2016-17 ರಲ್ಲಿ *ದೀನ್ ದಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಎಂದು ಮರುನಾಮಕರಣ ಮಾಡಲಾಯಿತು*,
1999 ಸ್ವರ್ಣ ಜಯಂತಿ ಗ್ರಾಮ ಸ್ವರಾಜ್ ಗಾರ್ ಯೋಜನೆ ಇದನ್ನು 2010-11 ರಲ್ಲಿ *NRLM* ಎಂದು ಮರು ನಾಮಕರಣ ಮಾಡಲಾಯಿತು, ಇದನ್ನು ಕರ್ನಾಟಕ ಸರ್ಕಾರ "ಸಂಜೀವಿನಿ" ಎಂಬ ಹೆಸರಿನಲ್ಲಿ *ಅಜೀವಿಕಾ* ಯೋಜನೆ ಜಾರಿಗೆ ತಂದಿದೆ,
🔹2000 ಡಿಸೆಂಬರ್ 25 ರಂದು *ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ*(PMGSY) ಮತ್ತು *ಅಂತ್ಯೋದಯ ಅನ್ನ ಯೋಜನೆ*(AAY) ಜಾರಿಗೆ ಬಂದಿವೆ.
🔸2001 ರಲ್ಲಿ *ಸರ್ವಶಿಕ್ಷಣ ಅಭಿಯಾನ* ಜಾರಿಗೆ,
🔹2001 ರಲ್ಲಿ, *ವಾಲ್ಮೀಕಿ ಅಂಬೇಡ್ಕರ್ ಅವಾಸ ಯೋಜನೆ*,
🔸2001 ರಲ್ಲಿ, *ಸುವರ್ಣ ಚತುಷ್ಕೊನ ಪಥ ಯೋಜನೆ*.
===============================
♦️ *10ನೇ ಪಂಚವಾರ್ಷಿಕ ಯೋಜನೆ*=(2002-2007)
🔸ಕಾರ್ಯಗತಗೊಂಡ ಅವಧಿ= *1-4-2002 ರಿಂದ 31-3-2007 ರ* ವರಗೆ.
🔹 ಒಟ್ಟು ಹೂಡಿಕೆ= *15,25,639 ಕೋಟಿ*
🔸 ಅಧ್ಯಕ್ಷರು= *ಮನಮೋಹನ್ ಸಿಂಗ್*
🔹 ಉಪಾಧ್ಯಕ್ಷರು= *ಕೆ.ಸಿ ಪಂತ್, ಮಾಂಟೆಕ್ ಸಿಂಗ್ ಅಹ್ಲುವಾಲಿಯ*
🔸 ಈ ಯೋಜನೆಯಲ್ಲಿ *2002 ರಲ್ಲಿ 86ನೇ ತಿದ್ದುಪಡಿ ಮಾಡಿ 6 ರಿಂದ 14 ವರ್ಷದ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಜಾರಿ,*✍️
🔹2004ರಲ್ಲಿ *ಕಸ್ತೂರಿ ಬಾ ಗಾಂಧಿ ಬಾಲಿಕಾ ವಿದ್ಯಾಲಯ, ಮತ್ತು ಕೂಲಿಗಾಗಿ ಕಾಳು ಯೋಜನೆ ಜಾರಿಗೆ*,
🔸2005 ರಲ್ಲಿ *ಬೆಂಗಳೂರು ಒನ್,NHRM, SEZ, VAT, USHA, ASHA, ಕಾರ್ಯಕ್ರಮಗಳು* ಜಾರಿಗೆ ಆದವು.
================================
♣️ *11ನೇ ಪಂಚವಾರ್ಷಿಕ ಯೋಜನೆ*=(2007-12)
🔸ಕಾರ್ಯಗತಗೊಂಡ ಅವಧಿ= *1-4-2007 ರಿಂದ 31-3-2012 ರವರೆಗೆ*
🔹 ಹೊಟ್ಟು ಹೂಡಿಕೆ= *36,44,718 ಕೋಟಿ*
🔸 ಅಧ್ಯಕ್ಷರು= *ಮನಮೋಹನ್ ಸಿಂಗ್*
🔹 ಉಪಾಧ್ಯಕ್ಷರು= *ಮಾಂಟೆಕ್ ಸಿಂಗ್ ಅಹ್ಲುವಾಲಿಯ*
🔸 ಉದ್ದೇಶ= *ತೋರಿತ ಮತ್ತು ಸಮನ್ವಯ ಪ್ರಗತಿ*
🔸2008 ರಲ್ಲಿ *ನರೇಗಾ* ಯೋಜನೆಯು ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಣೆ ಮಾಡಲಾಯಿತು ಮತ್ತು, ಮತ್ತೆ ನರೇಗಾ ಯೋಜನೆಯು 2009 ಅಕ್ಟೋಬರ್ 2ರಂದು *MGNREGP* ಎಂದು ಮರುನಾಮಕರಣ ವಾಯಿತು,
🔸ಈ ಹನ್ನೊಂದನೇ ಪಂಚವಾರ್ಷಿಕ ಯೋಜನೆಯನ್ನು ಮನಮೋಹನ ಸಿಂಗ ಅವರು *ಭಾರತೀಯ ಶಿಕ್ಷಣ ಯೋಜನೆ* ಎಂದು ಕರೆದಿದ್ದಾರೆ,
================================
🌺 *12ನೇ ಪಂಚವಾರ್ಷಿಕ ಯೋಜನೆ*(2012-2017)
🔸 ಕಾರ್ಯಗತಗೊಂಡ ಅವಧಿ= *1-4-2012 ರಿಂದ 31-3-2017 ರ ವರಗೆ*
🔹ಒಟ್ಟು ಹೂಡಿಕೆ= *76,69,807 ಕೋಟಿ*
🔸 ಅಧ್ಯಕ್ಷರು= *ಮನಮೋಹನಸಿಂಗ್*
🔹 ಉಪಾಧ್ಯಕ್ಷರು= *ಮಾಂಟೆಕ್ ಸಿಂಗ್ ಅಹ್ಲುವಾಲಿಯ*
🔸 ಯೋಜನೆಯನ್ನು *ಆರೋಗ್ಯ ಯೋಜನೆ* ಎಂದು ಕರೆಯಲಾಗುತ್ತದೆ.
🔹2015 ಜನವರಿ 1ರಂದು ಪಂಚವಾರ್ಷಿಕ ಯೋಜನೆಯ ತೆಗೆದು *ನೀತಿ ಆಯೋಗ ಜಾರಿಗೆ ಬಂದಿತು*,
🌴 ಕರ್ನಾಟಕದ ಪ್ರಮುಖ ವನ್ಯ ಜೀವಿಧಾಮಗಳು
~~
1. ರಂಗನತಿಟ್ಟು - ಮಂಡ್ಯ -1940
2. ಅರಬ್ಬಿತಿಟ್ಟು -ಮೈಸೂರು-1950
3. ಬ್ರಹ್ಮಗಿರಿ -ಕೊಡಗು-1974
4. ಮೂಕಾಂಬಿಕಾ -ಉಡುಪಿ -1974
5. ನುಗು- ಮೈಸೂರು-1974
6. ಶರಾವತಿ ಘಾಟ್-ಶಿವಮೊಗ್ಗ -1974
7. ಸೋಮೇಶ್ವರ -ದಕ್ಷಿಣ ಕನ್ನಡ -1974
8. ಶೆಟ್ಟಹಳ್ಳಿ -ಶಿವಮೊಗ್ಗ -1974
9. ರಾಣೆಬೆನ್ನೂರು-ಹಾವೇರಿ -1974
10. ಪುಷಗಿರಿ -ಕೊಡಗು-1974
11. ಮೇಲುಕೋಟೆ -ಮಂಡ್ಯ - 1974
12. ಘಟಪ್ರಭಾ - ಬೆಳಗಾವಿ-1974
13. ಕಾವೇರಿ- ಚಾಮರಾಜನಗರ-1987
14. ತಲಕಾವೇರಿ- ಕೊಡಗು-1987
15. ಆದಿಚುಂಚನಗಿರಿ (ನವಿಲು ಧಾಮ )-ಮಂಡ್ಯ- 1981
16. ಭದ್ರಾ- ಚಿಕ್ಕಮಗಳೂರು/ಶಿವಮೊಗ್ಗ -1974
17. ಬಿಳಿಗಿರಿ ರಂಗನ ಬೆಟ್ಟ -ಚಾಮರಾಜನಗರ-1987
18. ದಾಂಡೇಲಿ-ಉತ್ತರ ಕನ್ನಡ -1987
19. ಗುಡುವಿ ಪಕ್ಷಿಧಾಮ -ಶಿವಮೊಗ್ಗ -1989
20. ದರೋಜಿ ಕರಡಿ ಧಾಮ -ಬಳ್ಳಾರಿ-1989
21. ಅತ್ತಿವೇರಿ ಪಕ್ಷಿಧಾಮ -ದಕ್ಷಿಣ ಕನ್ನಡ -2009
🔸🔸🔸🔸🔸🔸🔸🔸🔸🔸🔸🔸🔸🔸🔸
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
01. ಛತ್ರಪತಿ ಶಿವಾಜಿ/ಸಾಹರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
✔ ಮಹಾರಾಷ್ಟ್ರ (ಮುಂಬಯಿ).
02. ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
✔ ದೆಹಲಿ (ಪಾಲಂ).
03.ಸರ್ದಾರ್ ವಲ್ಲಭಭಾಯ್ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
✔ ಗುಜರಾತ್(ಅಹ್ಮದಾಬಾದ್).
04. ಮೀನಂಬಾಕಂ/ಅಣ್ಣಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
✔ ತಮಿಳುನಾಡು (ಚೆನ್ನೈ) .
05. ನೇತಾಜಿ ಸುಭಾಸ ಚಂದ್ರ ಬೋಸ್/ಢಂ ಢಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
✔ ಪಶ್ಚಿಮ ಬಂಗಾಳ (ಕೊಲ್ಕತ್ತಾ).
06. ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
✔ ಆಂಧ್ರಪ್ರದೇಶ (ಹೈದರಾಬಾದ್)
07. ಲೋಕಪ್ರಿಯ ಗೋಪಿನಾಥ್ ಬೊರ್ಡೊಲೊಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
✔ ಅಸ್ಸಾಂ (ಗುವಾಹಟಿ).
08. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
✔ ಮಹಾರಾಷ್ಟ್ರ (ನಾಗಪುರ).
09. ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
✔ ಉತ್ತರ ಪ್ರದೇಶ (ಲಖನೌ).
10. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
✔ ಕರ್ನಾಟಕ (ಬೆಂಗಳೂರು).
11. ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
✔ ಕೇರಳ (ಕೊಚ್ಚಿ ).
12. ವೀರ್ ಸಾವರ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
✔ ಅಂಡಮಾನ್ ಮತ್ತು ನಿಕೋಬಾರ್ (ಪೋರ್ಟ್ ಬ್ಲೇರ್).
13. ಕ್ಯಾಲಿಕಟ್/ಕರಿಪುರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
✔ ಕೇರಳ (ಕೊಳಿಕೋಡ್ ).
14. ತ್ರಿವೇಂದ್ರಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
✔ ಕೇರಳ (ತಿರುವನಂತಪುರಂ ).
15. ಗೋವಾ/ದಾಬೋಲಿಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
✔ ಗೋವಾ (ಪಣಜಿ).
16. ಮಂಗಳೂರು/ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
✔ ಕರ್ನಾಟಕ (ಮಂಗಳೂರು).
17. ಬಿಜು ಪಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ
ನಿಲ್ದಾಣ.
✔ ಒಡಿಶಾ (ಭುವನೇಶ್ವರ).
18. ತಿರುಚಿರಾಪಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
✔ ತಮಿಳುನಾಡು (ತಿರುಚಿರಾಪಳ್ಳಿ).
19. ಕೊಯಮತ್ತೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
✔ ತಮಿಳುನಾಡು (ಕೊಯಮತ್ತೂರು).
★•┈•┈•┈••✦✿✦••┈•┈•┈•★
ನಾನು ಹುಟ್ಟಿದ್ದು 01 ಏಪ್ರಿಲ್ 1990. ನಮ್ಮೂರು ಗುಣದಾಳ ತಾಲೂಕು ಬಬಲೇಶ್ವರ ಮತ್ತು ವಿಜಯಪುರ ಜಿಲ್ಲೆಗೆ ಸೇರಿದ ಒಂದು ಹಳ್ಳಿ. ಪಂಚನದಿಗಳಲ್ಲೊಂದಾದ ಕೃಷ್ಣಾ ನದಿಯ 3 ಕಿಮೀ ದೂರದಲ್ಲಿದೆ. ಬಯಲು ಸೀಮೆ ಹಾಗೂ ಬಿಸಿಲು ನಾಡಾದ ಗುಮ್ಮಟ ನಗರಿ ನನ್ನದು. ಬಡತನದಲ್ಲಿದ್ದರು ಪ್ರೀತಿಯ ಸಿರಿತನದಿಂದ ನನ್ನನ್ನು ಸಾಕಿ ತಿದ್ದಿ ಬೆಳೆಸಿದವರು ನನ್ನ ಕುಟುಂಬದವರು. ನನ್ನ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಗುಣದಾಳದಲ್ಲಿನ ಸರ್ಕಾರಿ ಶಾಲೆ ಮತ್ತು, ಪ್ರೌಢಶಾಲೆ ಅನುದಾನಿತ ಶಾಲೆಯಲ್ಲಿ, ಪದವಿಪೂರ್ವ ಶಿಕ್ಷಣ ,Degree, B.ಎಡ್ ವಿಜಯಪುರದಲ್ಲಿ, ಮುಗಿಸಿದೆ. 2014-15ರ ವರೆಗೆ ಒಂದು ವರ್ಷ ಜ್ಞಾನೋದಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ ಮುಂದೆ ಶ್ರೀ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2015-2022ರ ವರೆಗೆ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ 2022ರ ಮಧ್ಯ ವಿದ್ಯಾಸ್ಫೂರ್ತಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಸೇರಿ ಅಲ್ಲಿ ಪ್ರೌಢ ವಿಭಾಗದಲ್ಲಿ ಇಂಗ್ಲಿಷ್ ಭಾಷಾ ವಿಷಯ ಶಿಕ್ಷಕರಾಗಿ 2024 ಮೆ ವರೆಗೆ ಸೇವೆ ಸಲ್ಲಿಸಿ. 2024 ರಿಂದ ಪ್ರಸ್ತುತ (1 ರಿಂದ 8ನೆಯ ತರಗತಿಯ - ಜ್ಞಾನ ಗಂಗೋತ್ರಿ ಪೂರ್ವ ಪ್ರಾಥಾಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.ಧನ್ಯವಾದಗಳು
ಪ್ರಮುಖ ಅಂಶಗಳು
SSLC CORNER
Class-10 Study-Materials Final Exam Papers Notes & Solutions Model & Blue-Print Pre Board Papers Half Yearly ...
ಪ್ರಮುಖ ಕಲಿಕಾಂಶಗಳು
-
16 Tenses in English Grammar (Formula and Examples) Verb Tenses are different forms of verbs describing something happened in the past, happ...
-
*📚SSLC ಸಮಾಜ ವಿಜ್ಞಾನ ಪಾಸಿಂಗ್ ಪ್ಯಾಕೇಜ್* *📚SSLC ಮಾಡೆಲ್ ಪ್ರಶ್ನೆಪತ್ರಿಕೆಗಳು* *📚SSLC ವಿಷಯವಾರು ನೋಟ್ಸ್* *📚SSLC ಬಹುನಿರೀಕ್ಷಿತ ಪ್ರಶ್ನೆಗಳು* *📚SSLC ಪ...
-
1. ಕನ್ನಡ 1st ಪೇಪರ್ 2. ಮನೋವಿಜ್ಞಾನ 1 3. English 4. ಮನೋವಿಜ್ಞಾನ 2 5. ಸಮಾಜ ವಿಜ್ಞಾನ 6. ಶಿಶು ಮನೋವಿಜ್ಞಾನ 7. ಸಮಾಜ ವಿಜ್ಞಾನ ಬೋಧನಾ ಶಸ್ತ್ರ 8. ಭೂಗೋಳ ಶಾಸ...
-
*ದಿನಾಂಕ 18-12-2020 ವಾರ ಗುರುವಾರ ಇಂದಿನ ಹೋಂವರ್ಕ್* *4 ನೇ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಂವರ್ಕ್* ++++++++++++++++++++++ *ಪಾಠ -25 ನಮ್ಮ ರಾಜ್ಯ...
-
1️⃣9️⃣ 1️⃣2️⃣ 2️⃣0️⃣2️⃣0️⃣ *ದಿನಾಂಕ 19-12-2020 ವಾರ-ಶನಿವಾರ ಇಂದಿನ ಹೋಂವರ್ಕ್* ======================= *4 ನೇ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಂವರ...
-
ಬಿ. ಆರ್. ಅಂಬೇಡ್ಕರ್ ಸಮಾಜ ಸುಧಾರಕ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ( ಏಪ್ರಿಲ್ ೧೪ , ೧೮೯೧ - ಡಿಸೆಂಬರ್ ೬ , ೧೯೫೬ ) - ಭೀಮರಾವ್ ರಾಮ್ಜೀ ಅಂಬೇಡ್...
-
ವಚನ ಎಂದರೇನು? ವಿಧಗಳು ಯಾವುವು? ವಚನಗಳು ಸಾಹಿತ್ಯದ ದೃಷ್ಟಿಯಲ್ಲಿ ವಚನ ಎಂದರೆ – “ಪರಿಶುದ್ಧ / ನೀತಿಯುಕ್ತ ಮಾತು ಎಂದರ್ಥ .ಆದರೆ ವ್ಯಾಕರಣದ ದೃಷ್ಟಿಯಲ್ಲಿ...
-
* ಇಂದಿನ ಹೋಮ ವರ್ಕ್ ದಿನಾಂಕ 18-01-2021* *ವಾರ ಸೋಮವಾರ* *1 ನೇ ವರ್ಗದ ಗಣಿತ ಹೋಮ ವರ್ಕ್* *೨೧ ರಿಂದ ೫೦ ವರೆಗೆ ಕನ್ನಡ ಅಂಕಿಗಳನ್ನು ಪದ ರೂಪದಲ್ಲಿ ಬರೆಯಿರಿ* *...
-
ಶೈಕ್ಷಣಿಕ ಸಂಪನ್ಮೂಲಗಳು 9.4th class year plan 1.2020-21ನೇ ಸಾಲಿನ ಶಾಲಾ ವಾರ್ಷಿಕ ಕ್ರಿಯಾಯೋಜನೆ 2.2020-21ನೇ ಸಾಲಿನ ಶೈಕ್ಷಣಿಕ ಯೋಜನೆ (SAP) 4.2020-21 ನೇ ಸಾ...
-
Karnataka 5th 6th 7th 8th 9th Model Paper 2021 Summative (SA), Formative (FA) Kannada Hindi English KAR 5th 6th 7th 8th 9th Model Paper Summ...