ಶಿಕ್ಷಣವೇ ಶಕ್ತಿ

Thursday 27 May 2021

ಭಾರತದ ಅತ್ಯುನ್ನತವಾದ ನ್ಯಾಯಪೀಠ

ಭಾರತದ ಸರ್ವೋಚ್ಛ ನ್ಯಾಯಾಲಯ


ಭಾರತದ ಸರ್ವೋಚ್ಛ ನ್ಯಾಯಾಲಯವು ಭಾರತೀಯ ನ್ಯಾಯ ವ್ಯವಸ್ಥೆಯಲ್ಲಿ ಅತೀ ಹೆಚ್ಚಿನ ಅಧಿಕಾರವುಳ್ಳ ನ್ಯಾಯಾಲಯವಾಗಿದೆ. ಭಾರತದ ಸಂವಿಧಾನದ ಛೇದ ೫, ಅನುಚ್ಛೇದ ೪ರ ಮೂಲಕ ಈ ನ್ಯಾಯಾಲಯವನ್ನು ಸ್ಥಾಪಿಸಲಾಗಿದೆ. ಸರ್ವೋಚ್ಛ ನ್ಯಾಯಾಲಯದ ಮೂಲ ಉದ್ದೇಶವೆಂದರೆ: ಸಂವಿಧಾನದ ರಕ್ಷಣೆ, ಸಂವಿಧಾನಿಕ ಮೂಲಭೂತ ಹಕ್ಕುಗಳ ರಕ್ಷಣೆ ಮತ್ತು ಯಾವುದೇ ಖಟ್ಲೆಯ ವಾದದ ಕೊನೆಯಹಂತ.

ಭಾರತದ ಸರ್ವೋಚ್ಛ ನ್ಯಾಯಾಲಯ
Emblem of the Supreme Court of India.svg
ಸರ್ವೋಚ್ಛ ನ್ಯಾಯಾಲಯದ ಮುದ್ರೆ
ಸ್ಥಾಪನೆಜನವರಿ ೨೮, ೧೯೫೦
ದೇಶಭಾರತ
ಸ್ಥಳಭಗವಾನ್ ದಾಸ್ ರಸ್ತೆ, ನವ ದೆಹಲಿ, ಭಾರತ, 110201
ಅಕ್ಷಾಂಶ ಮತ್ತು ರೇಖಾಂಶ28°37′20″N77°14′23″E / 28.622237°N 77.239584°E
ಧ್ಯೇಯವಾಕ್ಯयतो धर्मस्ततो जयः॥ (Yato dharmas tato jayah) 
ಧರ್ಮ ಎಲ್ಲಿದೆಯೋ ಅಲ್ಲಿ ಜಯವಿದೆ.
ಸಂಯೋಜನೆ ಪದ್ಧತಿCollegium System
ಅಧಿಕೃತ ಗೊಳಿಸಿದ್ದುಭಾರತದ ಸಂವಿಧಾನ
ನ್ಯಾಯಾಧೀಶರ ಅಧಿಕಾರ ಅವಧಿ65 ವರ್ಷ
ಸ್ಥಾನಗಳ ಸಂಖ್ಯೆ34(33+1)
ಜಾಲತಾಣsupremecourtofindia.nic.in
ಭಾರತದ ಮುಖ್ಯ ನ್ಯಾಯಾಧೀಶರು
ಪ್ರಸ್ತುತSharad Arvind Bobde
ಇಂದ18 ನವೆಂಬರ್ 2019
Supreme Court of India, front view 02.jpg

ಭಾರತದ ಸರ್ವೋಚ್ಛ ನ್ಯಾಯಾಲಯವು ೨೮ನೇಯ ಜನವರಿ ೧೯೫೦ರಂದು ತನ್ನ ಮೊದಲನೆಯ ಖಟ್ಲೆಯ ವಿಚಾರಣೆಯನ್ನು ಕೈಗೆತ್ತಿಕೊಂಡಿತು. ಸರ್ವೋಚ್ಚ ನ್ಯಾಯಾಲಯದ ಅಧಿಕಾರ ಹಾಗೂ ಕಾರ್ಯಗಳು. 1.ಪ್ರಾರಂಭಿಕ ಅಥವಾ ಮೂಲ ಅಧಿಕಾರ ಕಾರ್ಯಗಳು. 2.ಮನವಿ ಅಧಿಕಾರ 3.ಸಲಹಾ ಅಧಿಕಾರ.

ಮುಖ್ಯ ನ್ಯಾಯಮೂರ್ತಿಗಳು 

ಸುಪ್ರೀಂಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠದ ನೇತೃತ್ವ ವಹಿಸಿದ್ದ ನ್ಯಾಯಮೂರ್ತಿ ಜಗದೀಶ್‌ ಸಿಂಗ್‌ ಖೇಹರ್‌ ಅವರು ಭಾರತದ 44ನೇ ಮುಖ್ಯ ನ್ಯಾಯಮೂರ್ತಿಯಾಗಿ ದಿ.5 Jan, 2017 ಬುಧವಾರ ಅಧಿಕಾರ ಸ್ವೀಕರಿಸಿದರು. 64 ವರ್ಷದ ಖೇಹರ್‌ ಅವರು ದೇಶದ ನ್ಯಾಯಾಂಗ ವ್ಯವಸ್ಥೆಯ ಸರ್ವೋಚ್ಚ ಹುದ್ದೆಯನ್ನು ಅಲಂಕರಿಸಿದ ಸಿಖ್‌ ಸಮುದಾಯದ ಮೊದಲ ವ್ಯಕ್ತಿ. ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಖೇಹರ್‌ ಅವರು ಆಗಸ್ಟ್‌ 27 ರವರೆಗೆ ಈ ಹುದ್ದೆಯನ್ನು ನಿರ್ವಹಿಸಿದರು.[೧]

  • 45ನೇ ಮುಖ್ಯನ್ಯಾಯಮೂರ್ತಿಯಾಗಿ ಮಿಶ್ರಾ (63) ಅವರು 2017 ಆಗಸ್ಟ್ ತಿಂಗಳ 28ರಂದು ಅಧಿಕಾರ ಸ್ವೀಕರಿಸಿದ್ದರು. ಹಾಲಿ ಮುಖ್ಯ ನ್ಯಾಯಮೂರ್ತಿ ಜೆ.ಎಸ್ ಖೇಹರ್ ಅವರು ಇದೇ 27ರಂದು ನಿವೃತ್ತರಾಗಿದ್ದಾರೆ.

ನೂತನ ಮುಖ್ಯ ನ್ಯಾಯಮೂರ್ತಿ

ಸುಪ್ರೀಂಕೋರ್ಟ್​​ನ 46ನೇ ಮುಖ್ಯ ನ್ಯಾಯಮೂರ್ತಿಯಾಗಿ ರಂಜನ್ ಗೋಗೊಯ್ ಅವರು ಬುಧವಾರ ಅ.3 ಪ್ರಮಾಣ ವಚನ ಸ್ವೀಕರಿಸಿದರು. ಮುಖ್ಯ ನ್ಯಾಯಮೂರ್ತಿಯಾಗಿದ್ದ ದೀಪಕ್ ಮಿಶ್ರಾ ಅವರ ಅವಧಿ ಅ.2ಕ್ಕೆ ಮುಕ್ತಾಯಗೊಂಡಿತ್ತು. ದೀಪಕ್ ಮಿಶ್ರಾ ಅವರು 13 ತಿಂಗಳು ಮುಖ್ಯನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿದ್ದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನ್ಯಾ.ರಂಜನ್ ಗೋಗೊಯ್ ಅವರಿಗೆ ಪ್ರಮಾಣವಚನ ಬೋಧಿಸಿದರು. ಅಸ್ಸಾಂ ರಾಜ್ಯದಿಂದ ಮುಖ್ಯನ್ಯಾಯಮೂರ್ತಿಯಾಗಿ ನೇಮಕಗೊಂಡ ಮೊದಲ ನ್ಯಾಯಮೂರ್ತಿ ಎಂಬ ಹೆಗ್ಗಳಿಕೆಗೂ ರಂಜನ್ ಗೋಗೊಯ್ ಪಾತ್ರರಾದರು. ನ್ಯಾ.ಗೋಗೊಯ್ ಅವರ ಅಧಿಕಾರಾವಧಿ 2019 ನವೆಂಬರ್ 17ಕ್ಕೆ ಮುಕ್ತಾಯಗೊಂಡಿದೆ. ಒಟ್ಟು 13 ತಿಂಗಳು ಸುಪ್ರೀಂಕೋರ್ಟ್​ನ ಮುಖ್ಯನ್ಯಾಯಮೂರ್ತಿಯಾಗಿ ಗೋಗೊಯ್ ಕಾರ್ಯ ನಿರ್ವಹಿಸಿದ್ದಾರೆ.

  • 18 ನವಂ 2019 ರಂದು SA Bobde:ಎಸ್.ಎ.ಬೋಬ್ಡೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಎಸ್​ಎ ಬೋಬ್ಡೆ ಪ್ರಮಾಣವಚನ ಸ್ವೀಕಾರ ... ರಂಜನ್ ಗೊಗೋಯ್ ನಿವೃತ್ತಿ ಹೊಂದಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್​ ಮುಖ್ಯ ... ಶರದ್ ಅರವಿಂದ್ ಬೋಬ್ಡೆ ಸುಪ್ರೀಂಕೋರ್ಟ್​ನ ಅತ್ಯಂತ ಹಿರಿಯ ನ್ಯಾಯಮೂರ್ತಿಯಾಗಿದ್ದಾರೆ.[೨]

ನೋಡಿ

🌿🌿🌿🌿🌿🌿🌿🌿🌿🌿🌿🌿

ಪ್ರತಿ ನಿತ್ಯ ಎಲ್ಲ ವಿಷಯಾಧರಿತ ವಿಷಯಗಳು ಇಲ್ಲಿ ಅಪಡೇಟ್ ಆಗುತ್ತಿರುತ್ತವೆ. ಇಲ್ಲಿ ಕೇವಲ ಸ್ಟಡಿಗೆ ಸಂಬಂಧಿಸಿದ್ದು ಮಾತ್ರ ಹಂಚಿಕೊಳ್ಳಲಾವುದು. (ವಿಷಯ ಆಧಾರಿತ , ಪ್ರಚಲಿತ ವಿದ್ಯಮಾನ, 

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ಮಾಹಿತಿಗೆ ಅವಕಾಶ

⭐⭐⭐⭐⭐⭐⭐⭐⭐⭐⭐⭐⭐⭐⭐

ವಾಟ್ಸ್ ಅಪ್ ಗ್ರೂಪ್ಸ್

ಹೊಸಬೆಳಕು 1

1 to 7th ಕ್ಲಾಸ್ ಸ್ಟಡಿ ಗ್ರೂಪ್ 

ಶಿಕ್ಷಣವೇ ಶಕ್ತಿ

ENGLISH LANGUAGE CLUB

8th to 10th class study groups

PUC ಸ್ಟಡಿ ಗ್ರೂಪ್ಸ್

ಸಮಾನ್ಯ ಜ್ಞಾನ - ೧೨

SHEKHAR TALAWAR:
🌹 *ಹೊಸಬೆಳಕು* 🌹
━━━━━━━━━━━━━━━━
# *ಭಾರತದ ಪಕ್ಷಗಳು* #
━━━━━━━━━━━━━━━━ 
*ಅಖಿಲ ಭಾರತ ಕಾಂಗ್ರೆಸ್ ಪಕ್ಷ*

        1885ರಲ್ಲಿ  ಸ್ಥಾಪನೆಯಾಯಿತು.ಭಾರತದ ಹಳೆಯದಾದ ಪಕ್ಷಗಳಲ್ಲಿ ಒಂದಾಗಿದೆ.ಇದು ದೇಶದಲ್ಲಿ ಅತೀ ಹೆಚ್ಚು ಆಡಳಿತ ನಡೆಸಿದ ಪಕ್ಷವಾಗಿದೆ.
━━✴️ *ಭಾರತೀಯ ಜನತಾ ಪಕ್ಷ :* 

      1980 ರಲ್ಲಿ ಸ್ಥಾಪನೆಯಾಯಿತು.ಹಿಂದುತ್ವ , ಹಿಂದೂ ರಾಷ್ಟ್ರೀಯತೆ ಜೊತೆ ಗುರುತಿಸಿಕೊಂಡಿದೆ.ಔದರ ಸ್ಥಾಪಕರು ಅಟಲೊ ಬಿಹಾರಿ ವೋಜಪೇಯಿ & ಶ್ಯಾಮ್ ಪ್ರಸಾದ್ ಮುಖಜಿ೯.
━━━━━━━━━━━━━
✴️ *ಜನತಾ ದಳ ಪಕ್ಷ* :

        1989ರಲ್ಲಿ ವಿ.ಪಿ.ಸಿಂಗ್ ರ ನೇತೃತ್ವದಲ್ಲಿ ಸ್ಥಾಪನೆಯಾಯಿತು.ಜಯಪ್ರಕಾಶ್ ನಾರಾಯಣರ ಸಿದ್ಧಾಂತಗಳನ್ನು ಅಳವಡಿಸಿಕೊಂಡಿದೆ.
━━━━━━━━━━━━━
✴️ *ಕಮ್ಯೂನಿಸ್ಟ್ ಪಾಟಿ೯ ಆಫ್ ಇಂಡಿಯಾ :* 

      1920ರಲ್ಲಿ ಎಂ.ಎನ್.ರಾಯ್ ರಿಂದ ಸ್ಥಾಪನೆ.ಕಾಮಿ೯ಕ ಮತ್ತು ದುಡಿಯುವ ವಗ೯ದವರ ಹಿತಾಸಕ್ತಿ ಕಾಪಾಡುವುದಕ್ಕಾಗಿ ಈ ಪಕ್ಷ ಸ್ಥಾಪನೆಯಾಯಿತು.
━━━━━━━━━━━━━
✴️ *ಕಮ್ಯೂನಿಸ್ಟ್ ಪಾಟಿ೯ ಆಫ್ ಇಂಡಿಯಾ (ಮಾಕ್ವಿ೯ಸ್ಟ್ ):* 

        ಸಿಪಿಎ ಪಕ್ಷದಿಂದ ಪ್ರತ್ಯೇಕಗೊಂಡು 1964 ರಲ್ಲಿ ಸ್ಥಾಪನೆಯಾಯಿತು.ಇದು ಕೂಡ ಕಾಮಿ೯ಕರು , ರೈತರು ಹಾಗೂ ಹಿಂದುಳಿದ ವಗ೯ದವರ ಹಿತಾಸಕ್ತಿಗೆ ಹೋರಾಡುವ ಪಕ್ಷವಾಗಿದೆ.
━━━━━━━━━━━━━
✴️ *ರಾಷ್ಟ್ರೀಯ ಜನತಾ ದಳ* :

        ಜನತಾದಳದಲ್ಲಿನ ಭಿನ್ನಾಭಿಪ್ರಾಯದಿಂದಾಗಿ ಲಾಲೂ ಪ್ರಸಾದ್ ಯಾದವ್ 1997 ರಲ್ಲಿ ಈ ಪಕ್ಷವನ್ನು ಸ್ಥಾಪಿಸಿದರು.
━━━━━━━━━━━━━
✴️ *ಸಮಾಜವಾದಿ ಪಾಟಿ೯  :* 

        ಜನತಾದಳ ಎಸ್ ಮತ್ತು ಜನತಾ ಪಕ್ಷ ಕೂಡಿಕೊಂಡು 1992ರಲ್ಲಿ ಸ್ಥಾಪನೆಯಾಯಿತು. ಇದರ ಸ್ಥಾಪಕರು ಮುಲಾಯಂ ಸಿಂಗ್ ಯಾದವ್ ರವರು.
━━━━━━━━━━━━━
✴️ *ಬಹುಜನ ಸಮಾಜವಾದಿ ಪಾಟಿ೯ :* 

         1984ರಲ್ಲಿ ಕಾನ್ಶಿರಾಂ ಇದನ್ನು ಸ್ಥಾಪಿಸಿದರು. ಇದು ಅನುಸೂಚಿತ ಜಾತಿ ,ಅನುಸೂಚಿತ ಪಂಗಡದವರ ಹಿತವನ್ನು ಕಾಪಾಡುವುದಕ್ಕಾಗಿ ಹೋರಾಟ ಮಾಡುತ್ತದೆ .
━━━━━━━━━━━━━
✴️ *ಆಲ್ ಇಂಡಿಯಾ ತೃಣಮೂಲ ಕಾಂಗ್ರೇಸ್* :

        ಕಾಂಗ್ರೇಸ್ ಪಕ್ಷದಲ್ಲಿನ ಭಿನ್ನಾಭಿಪ್ರಾಯದಿಂದಾಗಿ 1998ರಲ್ಲಿ ಮಮತಾ ಬ್ಯಾನಜಿ೯ ಈ ಪಕ್ಷವನ್ನು ಸ್ಥಾಪಿಸಿದರು.
━━━━━━━━━━━━━
✴ *ನ್ಯಾಷನಲಿಸ್ಟ್ ಕಾಂಗ್ರೇಸ್ ಪಾಟಿ೯* :

      ಕಾಂಗ್ರೇಸ್ ಪಕ್ಷದ ಭಿನ್ನಾಭಿಪ್ರಾಯದಿಂದಾಗಿ 1999ರಲ್ಲಿ ಶರದ್ ಪವಾರ್, ಪಿ.ಎ.ಸಂಗ್ಮಾ ಮತ್ತು ತಾರೀಕ್ ಅನ್ವರ್ ಕೂಡಿಕೊಂಡು ಸ್ಥಾಪನೆ ಮಾಡಿದರು.
━━━━━━━━━━━━━
✴️ *ಅಕಾಲಿದಳ ಪಕ್ಷ* :

      ಪಂಜಾಬ್ ನ ಪ್ರಮುಖ ಪಕ್ಷವಾಗಿದೆ.1920ರಲ್ಲಿ ಸಿಖ್ಖರ ಹೌತಾಸಕ್ತಿ ಕಾಪಾಡುವುದಕ್ಕಾಗಿ ಸ್ಥಾಪನಗಯಾಯಿತು.
━━━━━━━━━━━━━
✴️ *ಆಲ್ ಇಂಡಿಯಾ ಫಾವ೯ಡ್೯ ಬ್ಲಾಕ್ :* 

        1940ರಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಇದನ್ನು  ಸ್ಥಾಪಿಸಿದರು.ಸಮಾಜವಾದ ರಾಷ್ಟ್ರ ಕಟ್ಟುವುದು ಇದರ ಉದ್ದೇಶವಾಗಿದೆ.
━━━━━━━━━━━━━
✴ *ಅಸ್ಸಾಂ ಗಣ ಪರಿಷತ್ತು* :

        1985ರಲ್ಲಿ ಪ್ರಫುಲ್ ಕುಮಾರ್ ಮಹಾಂತ ಇದನ್ನು ಸ್ಥಾಪಿಸಿದರು.ಇದು ಅಸ್ಸಾಂನ ಪ್ರಮುಖ ಪಕ್ಷವಾಗಿದೆ.
━━━━━━━━━━━━━
✴ *ತೆಲುಗು ದೇಶಂ* : 

          1982ರಲ್ಲಿ ಎನ್.ಟಿ.ರಾಮರಾವ್ ಆಂಧ್ರಪ್ರದೇಶದಲ್ಲಿ ಸ್ಥಾಪನೆ ಮಾಡಿದರು.ಇದು ಬಡತನ ಮತ್ತು ಸಾಮಾಜಿಕ ಅಸಮಾನತೆ ಹೋಗಲಾಡಿಸುವ ಉದ್ದೇಶ ಹೊಂದಿದೆ.
━━━━━━━━━━━━━

🌹 *ಹೊಸಬೆಳಕು*🌹
==========================
🔰⚜️⚜️ *ಬ್ಯಾಕ್ಟೀರಿಯಾ ದಿಂದ ಬರುವ ರೋಗಗಳು* ⚜️⚜️🔰
👇👇👇👇👇👇👇👇👇👇
✅ಪ್ಲೇಗ್ - ಯರ್ ಸಿನಿಯಾ ಫೆಸ್ಟಿಸ್

✅ಟೆಟಾನಸ್ ( ಧನುರ್ವಾಯು )
ಕ್ಲಾಸ್ಟ್ರೀಡಿಯಂ ಟೆಟನಿ

✅ಡಿಪ್ತಿರಿಯಾ - ಕ್ರೋನಿಯಾ ಡಿಪ್ತಿರಿಯಾ.

✅ಗಂಟಲುಬೇನೆ - ಸ್ಟೇಪ್ಟೋಕೋಕಸ್
ರವಿಕುಮಾರ

 ✅ಕುಷ್ಟರೋಗ  ಮೈಕೋಬ್ಯಾಕ್ಟಿರಿಯಾ

✅ ಟೈಫಾಯಿಡ್ - ಸಾಲ್ಮೇನೆಲ್ಲಾ ಟೈಫಿ

✅ಅಂತ್ರಾಕ್ಸ - ಬ್ಯಾಸಿಲೆಸ್ ಅಂತ್ರಾಸಿಸ್

✅ಇಂಪ್ಲೋಯಂಜ - ಅರ್ಥೂಮಿಕ್ಸೂ ವೈರಸ್

✅ ಮಂಪ್ಸ - ಪ್ಯಾರಾಮೈಕ್ಸೋ ವೈರಸ್

✅ಡೆಂಗ್ಯೂ - ಅರ್ಬೋ ವೈರಸ್

✅ಮಲೇರಿಯಾ - ಪ್ಲಾಸ್ಮೋಡಿಯಂ ವೈವಾಕ್ಸ
( ಹೆಣ್ಣು ಅನಾಫೇಲಿಸ್ ಸೊಳ್ಳೆ)

🌹 *ಹೊಸಬೆಳಕು*🌹
===≠====================≠=
🔰 *ಕರ್ನಾಟಕದ ಪ್ರಮುಖ ವನ್ಯ ಜೀವಿಧಾಮಗಳು* 🔰✍️📚📚📚
1.ರಂಗನತಿಟ್ಟು - *ಮಂಡ್ಯ -1940* 

2.ಅರಬ್ಬಿತಿಟ್ಟು - *ಮೈಸೂರು-1950* 

3.ಬ್ರಹ್ಮಗಿರಿ - *ಕೊಡಗು-1974* 

4.ಮೂಕಾಂಬಿಕಾ - *ಉಡುಪಿ -1974*

5.ನುಗು- *ಮೈಸೂರು-1974*

6.ಶರಾವತಿ ಘಾಟ್- *ಶಿವಮೊಗ್ಗ -1974* 

7.ಸೋಮೇಶ್ವರ - *ದಕ್ಷಿಣ ಕನ್ನಡ -1974* 

8.ಶೆಟ್ಟಹಳ್ಳಿ - *ಶಿವಮೊಗ್ಗ -1974* 

9.ರಾಣೆಬೆನ್ನೂರು *-ಹಾವೇರಿ -1974* 

10.ಪುಷಗಿರಿ - *ಕೊಡಗು-1974* 

11.ಮೇಲುಕೋಟೆ -ಮಂಡ್ಯ - 1974

12.ಘಟಪ್ರಭಾ - *ಬೆಳಗಾವಿ-1974* 

13.ಕಾವೇರಿ- *ಚಾಮರಾಜನಗರ-1987* 

14.ತಲಕಾವೇರಿ- *ಕೊಡಗು-1987* 

15.ಆದಿಚುಂಚನಗಿರಿ (ನವಿಲು ಧಾಮ )- *ಮಂಡ್ಯ- 1981* 

16.ಭದ್ರಾ- ಚಿಕ್ಕಮಗಳೂರು/ *ಶಿವಮೊಗ್ಗ -1974* 

17.ಬಿಳಿಗಿರಿ ರಂಗನ ಬೆಟ್ಟ - *ಚಾಮರಾಜನಗರ-1987* 

18.ದಾಂಡೇಲಿ- *ಉತ್ತರ ಕನ್ನಡ -1987* 

19.ಗುಡುವಿ ಪಕ್ಷಿಧಾಮ *-ಶಿವಮೊಗ್ಗ -1989* 

20.ದರೋಜಿ ಕರಡಿ ಧಾಮ - *ಬಳ್ಳಾರಿ-1989* 

21.ಅತ್ತಿವೇರಿ ಪಕ್ಷಿಧಾಮ - *ದಕ್ಷಿಣ ಕನ್ನಡ -2009* 
🌺🌺🌺🌺🌺🌺🌺🌺🌺🌺

🌹 *ಹೊಸಬೆಳಕು*🌹
===≠=======================
 *ಮರುಭೂಮಿಯ ಬುಡಕಟ್ಟು ಜನಾಂಗಗಳು...* 
==========================
☘ ಗೋಬಿ ಮರುಭೂಮಿ -  ಮಂಗೋಲಿಯ

☘ ಸಹರಾ ಮರುಭೂಮಿ -  ಟಾರೆಜಸ್
 
☘ಥಾರ್ ಮರುಭೂಮಿ  -  ಮೈನಾ

☘ ಸೌದಿ ಅರೇಬಿಯಾ ಮರುಭೂಮಿ  -  ಬಿಡೋಯಿನ್

☘ ಅಟಕಾಮ ಮರುಭೂಮಿ  -  ಹೊಟೆಂಟೋಸ್  

☘ ಕಲಹರಿ ಮರುಭೂಮಿ  -  ಬುಷ್ ಮನ್

☘ಆಸ್ಟ್ರೇಲಿಯಾ  -  ಬಿಂಡುಬಸ್/ ಬಿಂಡುಬಿ
🔹🔹🔹🔹🔹🔹🔹🔹🔹🔹

🌹 *ಹೊಸಬೆಳಕು*🌹
==========================
*"ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೇಳಬಹುದಾದ ಪ್ರಮುಖ ಪ್ರಶ್ನೋತ್ತರಗಳು"* 
==================
1.ಮತ ಸುಧಾರಣೆಯ "ಉಷಾತಾರೆ" ಯಾರು..? 
= "ಜಾನ್ ವೈಕ್ಲಿಫ್ "

2. ಭಾರತಕ್ಕೆ ಕ್ರೈಸ್ತ ಧರ್ಮವನ್ನು ಪರಿಚಯಿಸಿದ ಸಂತ ಯಾರು.? 
= ಫ್ರಾನ್ಸಿಸ್ಕೋ ಝೇವಿಯಾರ್ ಸೈಂಟ್ ( 1506-1552) 

3.ಕ್ರುಸೇಡ್ಸ್ ಎಂದರೇನು.?
= ಕ್ರೈಸ್ತ ನಾಡುಗಳ ರಕ್ಷಣೆ ಅರಬ್ ಮತ್ತು ಕ್ರೈಸ್ತರ ನಡುವೆ ಆದ ಧರ್ಮಯುದ್ಧಗಳು

4. ಯಾರು ಮತ್ತು ಯಾವಾಗ ಭಾರತಕ್ಕೆ ಜಲಮಾರ್ಗವನ್ನು ಕಂಡುಹಿಡಿದರು.?
= ವಾಸ್ಕೋಡಿಗಾಮ, 1498

5. ಕೊಲಂಬಸ್ ಬಳಸಿದ ಹಡಗುಗಳು ಯಾವವು.? 
= ಸಂತ, ಮೇರಿಯಾ, ನೈನಾ ಮತ್ತು ಪಿಂಟಾಗಳು

6.ಯಾರು ಮತ್ತು ಯಾವಾಗ "ಪೆಸಿಫಿಕ್" ಸಾಗರವನ್ನು ಶೋಧಿಸಿದರು.? 
= ಸ್ಪೈನಿನ ಬಲ್ ಬೋವಾ,1513

7.ಭೌಗೋಳಿಕ ಅನ್ವೇಷಣಾಕಾರರನ್ನು ಹೆಸರಿಸಿ
= ವಾಸ್ಕೋಡಿಗಾಮ , ಕೊಲಂಬಸ್, ಮೆಗಲನ್,ಕೇಬ್ರಾಲ್,ಡ್ರೇಕ್

8.ಬೊಕಾಶಿಯೊ ಯಾರು .? ಅವನ ಕೃತಿ ಯಾವುದು.?
= ಇಟಲಿಯ ಪ್ರಸಿದ್ಧ ಮಾನವತಾವಾದಿ,ಡೆಕೆಮರಾನ್ 

9.ಪಾಪಕ್ಷಮಾಪಣಾ ಪತ್ರಗಳೆಂದರೇನು.? ಅಥವಾ ಇಂಡಲ್ ಜೆನ್ಸ್ ಎಂದರೇನು.?
= ಪೋಪ್ ನು ಹಣ ಗಳಿಸಲು ಪಾಪವಿಮುಕ್ತಿಗೆ ಜನರಿಗೆ ಮಾರುತ್ತಿದ್ದ ಪತ್ರಗಳು.

10.ಮತಸುಧಾರಣೆಯ ಪಿಥಾಮಹ ಯಾರು.? ಅವನು ಯಾವ ದೇಶದವನು.?
= ಮಾರ್ಟಿನ್ ಲೂಥರ್, ಜರ್ಮನಿ

11.ವೈಜ್ಞಾನಿಕ ಸಮಾಜವಾದದ ಪಿಥಾಮಹ - "ಕಾರ್ಲ್ ಮಾರ್ಕ್ಸ್" ಕೃತಿಗಳು - "ದಾಸ್ ಕ್ಯಾಪಿಟಲ್" ಮತ್ತು ಕಮ್ಯೂನಿಸ್ಟ್ ಮ್ಯಾನಿಫೆಸ್ಟೋಗಳು

12.ರಷ್ಯಾ ಕ್ರಾಂತಿಯ ಹಂತಗಳು - 
'ಮಾರ್ಚ್ ಕ್ರಾಂತಿ' & 'ಅಕ್ಟೋಬರ್ ಕ್ರಾಂತಿ'

13."ಕಾಮನ್ ಸೆನ್ಸ್" ಪತ್ರಿಕೆಯನ್ನು ಯಾರು ಹೊರಡಿಸಿದರು .?
- "ಥಾಮಸ್ ಪೈನ್"

14.ಖೋತಾ ಮೇಡಂ ಯಾರು.? 
- "ಮೇರಿ ಅಂಟಾಯಿನೆಟ್"

15.ಲೆಟರ್ಸ್ ಆನ್ ದಿ ಇಂಗ್ಲಿಷ್ -ಈ ಕೃತಿಯನ್ನು ಬರೆದವರು ಯಾರು.- "ವೊಲ್ಟೇರ್"

16. ಪ್ರಜಾಪ್ರಭುತ್ವವಾದಿಗಳ ಬೈಬಲ್ ಯಾವುದು.? "ಸಾಮಾಜಿಕ ಒಪ್ಪಂದ" 

17. ಫ್ರೆಂಚ್ ಕ್ರಾಂತಿಯ ಎರಡು ಪಂಥಗಳು ಯಾವುವು.? - ಗಿರಾಂಡಿಸ್ಟ್ ಮತ್ತು ಜಾಕೋಬಿನ್ ರು 

18.ತೈತ್ಸ್ ಎಂದರೇನು.? ಗ್ಯಾಬೆಲ್ಲೆ ಎಂದರೇನು.?
- ಫ್ರೆಂಚ್ ರು ಚರ್ಚ್ ಗೆ ಕೊಡುತ್ತಿದ್ದ ತೆರಿಗೆ
- ಉಪ್ಪಿನ ತೆರಿಗೆ

19. ಪಿರಾಮಿಡ್ ಕದನ ಎಂದರೇನು.? 
- ನೆಪೋಲಿಯನ್ ಈಜೀಪ್ಟ್ ಸರದಾರರನ್ನು ಸೋಲಿಸಿದ ಕದನ 

20.ಅಬುಕಿರ್ ಕದನ ಎಂದರೇನು.? 
- ನೆಪೋಲಿಯನ್ ಮತ್ತು ಟರ್ಕರಿಗೆ ನಡೆದ ಕದನವಿದು

21.ಕೆಂಪಾಗಿ ದಳದ ಸ್ಥಾಪಕ :- "ಗ್ಯಾರಿಬಾಲ್ಡಿ"

22. ಜರ್ಮನಿಯ ಏಕೀಕರಣದ ನಾಯಕತ್ವ ವಹಿಸಿದ ರಾಜ್ಯ ಯಾವುದು .? ಪ್ರಾಷ್ಯಾ

23.ಡೂಮ ಎಂದರೇನು.
- ರಷ್ಯಾದ ಪಾರ್ಲಿಮೆಂಟ್

24.ಅಕ್ಟೋಬರ್ ಕ್ರಾಂತಿ ಎಂದು ನಡೆಯಿತು.? - ಅಕ್ಟೋಬರ್,28 ರಿಂದ ನವೆಂಬರ್ 7,1917

25.ಲೆನಿನ್ ನ ಘೋಷಣೆ ಏನು.? 
"ಹಟ್ಟಿಗೆಗಳಿಗೆ ಶಾಂತಿ ಅರಮನೆಗಳಿಗೆ ಯುದ್ದ"

26 ಕೆಂಪು ಸೈನ್ಯದ ಸ್ಥಾಪಕ ಯಾರು .?
- ಟ್ರಾಟಸ್ಕಿ

27. ಸಾಮಾಜಿಕ ಒಪ್ಪಂದ ಕೃತಿಯ ಕತೃ ಯಾರು.? ಅದರ ಮತ್ತೊಂದು ಹೆಸರೇನು.? 
- ರೂಸೋ, 'ಪ್ರಜಾಪ್ರಭುತ್ವವಾದಿಗಳ ಬೈಬಲ್'

28. ವಾಟರ್ ಲೂ ಕದನ ಯಾವಾಗ ನಡೆಯಿತು.?
- ಜೂನ್ 18,1815

29. "ಲೀಜನ್  ಆಫ್ ಹಾನರ್" ಎಂದರೇನು.?
- ಸರಕಾರಿ ನೌಕರರಲ್ಲಿ ಪ್ರತಿಭಾವಂತರನ್ನು ಗೌರವಿಸಲು ನೆಪೋಲಿಯನ್ ಸ್ಥಾಪಿಸಿದ ಸಂಸ್ಥೆ  ಇದು

30. ಇಟಲಿಯ ಏಕೀಕರಣದ ಶಿಲ್ಪಿ ಯಾರು .?
- "ಕೌಂಟ್ ಕೌವೂರ್ "

31. ಯಾವ ವರ್ಷ ವರ್ಸೇಲ್ಸ್ ಒಪ್ಪಂದವಾಯಿತು.?
- '1919'

32. ನಾಜಿ ಪಕ್ಷದ ಚಿಹ್ನೆ .?- 'ಸ್ವಸ್ತಿಕ್'

33. ಹಿಟ್ಲರ್ನ  ಕೃತಿಗಳು ಯಾವುವು..?
- ಮೈನ್ ಕಾಂಫ್ ( ನನ್ನ ಹೋರಾಟ) 

34.ಫ್ಯೂರರ್ ಎಂದರೇನು.?
- ನಾಯಕ ಎಂದರ್ಥ ( ಹಿಟ್ಲರ್)

35.ಹಿಟ್ಲರ್ ನ ಸೈನ್ಯದ ಹೆಸರೇನು.? 
- "ಬ್ರೌನ್ ಷರ್ಟ್ಸ್"

36. ಫ್ಯಾಸಿಸಂ ಎಂದರೇನು.?
- 'ದಂಡಗಳ ಕಟ್ಟು ಎಂದರ್ಥ'

37. ಬೋಯರ್ಸ್ ಎಂದರೆ ಯಾರು.?
- ಡಚ್ಚರು

38. ಮಂಡೇಲಾ ಎಷ್ಟು ವರ್ಷ ಜೈಲಿನಲ್ಲಿದ್ದರು.?
- 27 ವರ್ಷ

39.1993ರ ಶಾಂತಿಗಾಗಿ ನೊಬೆಲ್ ಪ್ರಶಸ್ತಿ ಪಡೆದ ಆಫ್ರಿಕಾದ 3ಬಿಳಿಯರ ಅಧ್ಯಕ್ಷ ಯಾರು.? - "ಡಬ್ಲ್ಯೂ .ಡಿ .ಕ್ಲರ್ಕ್"

40. ನೊಬೆಲ್ ಪ್ರಶಸ್ತಿ ಪಡೆದ ಆಫ್ರಿಕಾದ ಅಧ್ಯಕ್ಷ ಯಾರು.? 
"ನೆಲ್ಸನ್ ಮಂಡೇಲಾ"

🌹 *ಹೊಸಬೆಳಕು*🌹
==========================
📚 ಪ್ರಮುಖ ಸಾಹಿತಿಗಳ  *ಕಾದಂಬರಿಗಳು*
📚📚📚📚📚📚📚📚
1) "ಕುವೆಂಪು"
🔸 *ಕಾನೂರು ಹೆಗ್ಗಡತಿ*
🔹 *ಮಲೆಗಳಲ್ಲಿ ಮದುಮಗಳು,*

2) "ಶಿವರಾಮ್ ಕರಂತ್" 
🔹 *ವಿಚಿತ್ರಕೂಟ*. 
🔸 *ಮರಳಿ ಮಣ್ಣಿಗೆ.* 
🔹 *ಮೂಕಜ್ಜಿಯ ಕನಸುಗಳು.*

3) "ಮಾಸ್ತಿ ವೆಂಕಟೇಶ್ ಅಯ್ಯಂಗಾರ್"
🔹 *ಚೆನ್ನಬಸವನಾಯಕ*
🔸 *ಚಿಕ್ಕವೀರ ರಾಜೇಂದ್ರ*
🔹 *ಶೇಷಮ್ಮ*

4) "ವಿ ಕೃ ಗೋಕಾಕ್"
🔸 *ಸಮರಸವೇ ಜೀವನ*
🔹 *ದಲಿತ ಸಮುದ್ರಯಾನ*
🔸 *ಇಜ್ಜೋಡ*

5) "ಯು,ಆರ್ ಅನಂತಮೂರ್ತಿ"
🔹 *ಸಂಸ್ಕಾರ*, 
🔸 *ಅವಸ್ಥೆ*
🔹 *ಘಟಶ್ರಾದ್ಧ*
🔸 *ಭವ*
🔹 *ಭರ*
🔸 *ದಿವ್ಯ* 

6) "ಚಂದ್ರಶೇರ್ ಕಂಬಾರ"
🔸 *ಕರಿಮಾಯಿ*
🔹 *ಸಿಂಗಾರೆವ್ವ*
🔸 *ಅಣ್ಣ-ತಂಗಿ*
🔹 *ಅರಮೆನೆ*

7) "ಬೀಚಿ"
🔸 *ದಸಕೊಟ*
🔹 *ಸರಸ್ವತಿ*
🔸 *ಸಂಹಾರ*
🔹 *ಖಾದಿ ಸೀರೆ*
🔸 *ದೇವರಿಲ್ಲದ ಗುಡಿ*

8) "ಅ ನ ಕೃ"
🔸 *ಸಂಧ್ಯಾರಾಗ*
🔹 *ನಟಸಾರ್ವಭೌಮ*
🔸 *ಜೀವನ ಯಾತ್ರೆ*
🔹 *ಸಾಹಿತ್ಯ ರತ್ನ*

9) "ಎಸ್ಎಲ್ ಬೈರಪ್ಪ"
🔸 *ವಂಶವೃಕ್ಷ*, 
🔹 *ನಾಯಿ ನೆರಳು*
🔸 *ದಾಟು*
🔹 *ಪರ್ವ*
🔸 *ಮಂದ್ರಾ*
🔹 *ಯಾನ*
🔸 *ತಬ್ಬಲಿ ನೀನಾದೆ ಮಗನೆ*
🔹 *ನೆಲೆ*

10) "ಪೂರ್ಣಚಂದ್ರ ತೇಜಸ್ವಿ"
🔸 *ಚಿದಂಬರ ರಹಸ್ಯ*
🔹 *ಕರ್ವಾಲೋ*
🔸 *ಕಿರಗೂರಿನ ಗಯ್ಯಾಳಿಗಳು*
🔹 *ಜುಗಾರಿ ಕ್ರಾಸ್*

11) "ಅನುಪಮ ನಿರಂಜನ್"
🔸 *ಅನಂತ ಗೀತಾ*
🔹 *ಶ್ವೇತಾಂಬರಿ*
🔸 *ಹೃದಯವಲ್ಲಭ*
🔹 *ಸ್ನೇಹ ಪಲ್ಲವಿ*
🔸 *ಆಕಾಶಗಂಗೆ*

12) "ಬರಗೂರು ರಾಮಚಂದ್ರಪ್ಪ"
🔹 *ಸೂತ್ರ*
🔸 *ಭಾರತ ನಗರಿ*
🔹 *ಒಂದು ಊರಿನ ಕಥೆ*
🔸 *ಸ್ವಪ್ನ ಮಂಟಪ*

13) "ದೇವನೂರು ಮಹಾದೇವ"
🔸 *ಕುಸುಮಬಾಲೆ*

14) "ಬಿ ಟಿ ಲಲಿತಾ ನಾಯಕ"
🔹 *ಗತಿ*
🔸 *ನೆಲೆ*
🔹 *bale*

15) "ಡಾ// ಹಂಪನಾಗರಾಜಯ್ಯ"
🔸 *ಬಸವ ಪ್ರಕಾಶ್*
🔹 *ಶೊರ ರಾಣಿ*
🔸 *ಚೆನ್ನಮ್ಮಾಜಿ*

16)ಡಾ// "ಗೀತಾ ನಾಗಭೂಷಣ್"
🔹 *ತಾವರೆಯ ಹೂವು*
🔸 *ಚಂದನದ ಚಿಗುರು*
🔹 *ಸಪ್ನ ವರ್ಣದ ಸ್ವಪ್ನ*

17) "ವೈದೇಹಿ"
🔹 *ಅಸ್ಪೃಶ್ಯರು*
=====================
*

🌹 *ಹೊಸಬೆಳಕು*🌹
🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳
*ರಾಷ್ಟ್ರಧ್ವಜ*  
🌺🟢🌺🟢🌺🟢🌺🟢🌺🟢🌺🟢

=> ಭಾರತದ ರಾಷ್ಟ್ರ ಧ್ವಜದ ಉದ್ದ & ಅಗಲದ ಅನುಪಾತ 3:2 

=> ಭಾರತದ ರಾಷ್ಟ್ರಧ್ವಜದ ಬಣ್ಣ ಕೆಸರಿ,ಬಿಳಿ,ಹಸಿರು ಹೊಂದಿದೆ 

=> ಭಾರತದ ರಾಷ್ಟ್ರಧ್ವಜದ ಮಧ್ಯಭಾಗದಲ್ಲಿ 24 ಕಡ್ಡಿಗಳನ್ನು ಹೊಂದಿರುವ ಅ ಫ್ಶೋಕನು ಹೊರಡಿಸಿದ ಸಾರನಾಥ ಸೂಪ್ತದಿಂದ ಪಡೆದಿರುವ ಧರ್ಮ ಚಕ್ರವಿದೆ.ಇದು ನಿಲಿ ಬಣ್ಣದಿಂದ ಕೂಡಿದೆ. 

=> ಭಾರತದ ಸಂವಿಧಾನ ರಚನಾ ಸಭೆಯು 22 ಜುಲೈ 1947 ರಲ್ಲಿ ರಾಷ್ಟ್ರಧ್ವಜವನ್ನು ಅಳವಡಿಸಿಕೊಂಡಿತು. 

=> ಭಾರತದ ಧ್ವಜಸಂಹಿತೆ(flag code) 26 ಜನೆವರಿ 2002 ರಂದು ಜಾರಿಗೆ ಬಂದಿತು. 

=> ಭಾರತದ ಪ್ರತಿಯೊಬ್ಬ ರಾಷ್ಟ್ರಧ್ವಜ ಹಾರಿಸುವುದು ಮೂಲಭೂತ ಹಕ್ಕು ಎಂದು ಕಲಂ 19(i) ವಿವರಿಸುವುದು. 

=> ಭಾರತದ ತ್ರಿವರ್ಣ ಧ್ವಜವನ್ನು ಮೊಟ್ಟಮೊದಲಿಗೆ ತಯಾರಿಸಿದವರು ಮೇಡಂ ಭೀಕಾಜಿ ಕಾಮಾ. 

=> ಭಾರತದ ಧ್ವಜವನ್ನು ಮೊದಲಿಗೆ ಲಾಹೋರದ ರಾವಿ ನದಿಯ ದಂಡೆ ಮೇಲೆ 1928 ರ ಕಾಂಗ್ರೆಸ್ಸ ಅಧಿವೇಶನದಲ್ಲಿ ಜವಾಹರಲಾಲ ನೆಹರೂ ಹಾರಿಸಿದರು. 

=> ಕೆಂಪು ಕೋಟೆಯ ಮೇಲೆ ಪ್ರತಿ ವರ್ಷ ರಾಷ್ಟ್ರೀಯ ಧ್ವಜ ಹಾರಿಸುವವರು ಪ್ರಧಾನಮಂತ್ರಿಗಳು 

=> ತ್ರಿವರ್ಣ ಧ್ವಜದ ವಿನ್ಯಾಸಗೊಳಿಸಿದವರು ಪಿಂಗಳಿ ವೆಂಕಯ್ಯ. 

=> ರಾಷ್ಟ್ರ ಧ್ವಜ ಕರ್ನಾಟಕದಲ್ಲಿ ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿ ತಯಾರಿಸಲಾಗುತ್ತದೆ
🔹🌺🔹🌺🔹🌺🔹🌺🔹🌺🔹🌺

🌹 *ಹೊಸಬೆಳಕು*🌹
==========================
🌎 *ಭಾರತದ ವಿಶ್ವ ಪಾರಂಪರಿಕ ತಾಣಗಳು* 🕌

☀ಕಾಜೀ ರಂಗ ವನ್ಯ ಪ್ರಾಣಿ ಧಾಮ
🛣 ಅಸ್ಸಾಂ 
🗒
1985

☀ಮಾನಸ ವನ್ಯ ಪ್ರಾಣಿ ಧಾಮ
🛣ಅಸ್ಸಾಂ
🗒1985

☀ಮಹಾಬೋಧಿ ಮಂದಿರ ಸಂಕೀರಣ ,ಬೋಧಗಂಬಾ
🛣ಬಿಹಾರ
🗒2002

☀ಹುಮಾಯೂನ ಸಮಾಧಿ
🛣ದೆಹಲಿ
🗒1993

☀ಕುತುಬ್ ಮಿನಾರ್
🛣ದೆಹಲಿ
🗒1993

☀ಕೆಂಪುಕೋಟೆ
🛣ದೆಹಲಿ
🗒2007

☀ಗೋವಾದ ಚರ್ಚಗಳು ಮತ್ತು ಆಶ್ರಮಗಳು
🛣ಗೋವಾ
🗒1986

☀ಚಂಪಾನರ್ - ಪಾವಗಢ್ ಪುರಾತತ್ವ ಉದ್ಯಾನ
🛣ಗುಜರಾತ್
🗒2004

☀ಹಂಪಿಯ ಸ್ಮಾರಕಗಳು
🛣ಕರ್ನಾಟಕ
🗒1986

☀ಪಟ್ಟದಕಲ್ಲು ಸ್ಮಾರಕಗಳು
🛣ಕರ್ನಾಟಕ
🗒1987

☀ಸಾಂಚಿಯ ಬೌದ್ಧ ಸ್ಮಾರಕಗಳು
🛣ಮಧ್ಯ ಪ್ರದೇಶ
🗒1989

☀ಭಿಂಬೆಟ್ಯಾದ ಗುಹೆಗಳು
🛣ಮಧ್ಯ ಪ್ರದೇಶ
🗒2003

☀ಖಜುರಾಹೊ ಸ್ಮಾರಕಗಳು
🛣ಮಧ್ಯ ಪ್ರದೇಶ
🗒1986

☀ಅಜಂತಾ ಗುಹೆಗಳು
🛣ಮಹಾರಾಷ್ಟ್ರ
🗒1983

☀ಎಲ್ಲೋರಾದ ಗುಹೆಗಳು
🛣ಮಹಾರಾಷ್ಟ್ರ
🗒1983

☀ಎಲಿಫೆಂಟಾ ಗುಹೆಗಳು
🛣ಮಹಾರಾಷ್ಟ್ರ
🗒1987

☀ಛತ್ರಪತಿ ಶಿವಾಜಿ ಟರ್ಮಿನಸ್ ಮುಂಬೈ
🛣ಮಹಾರಾಷ್ಟ್ರ
🗒2004

☀ಸೂರ್ಯ ದೇವಾಲಯ ಕೊನಾರ್ಕ
🛣ಓಡಿಶಾ 
🗒1984

☀ಕೆವೂಲಾಡೇನ್ ರಾಷ್ಟ್ರೀಯ ಉದ್ಯಾನ ಭರತಪುರ
🛣ರಾಜಸ್ಥಾನ್
🗒1985

☀ಜಂತರ್ ಮಂತರ್ ,ಜೈಪುರ್
🛣ರಾಜಸ್ಥಾನ
🗒2010

☀ಚೋಳ ದೇವಾಲಯಗಳು
🛣ತಮಿಳುನಾಡು
🗒1987

☀ಮಹಾಬಲಿಪುರಂ ಮಂದಿರಗಳು
🛣ತಮಿಳುನಾಡು
🗒1984

☀ಆಗ್ರಾ ಕೋಟೆ
🛣ಉತ್ತರ ಪ್ರದೇಶ
🗒1983

☀ಫತೆಪುರ ಸಿಕ್ರಿ
🛣ಉತ್ತರ ಪ್ರದೇಶ
🗒1986

☀ತಾಜ್ ಮಹಲ್ 
🛣ಉತ್ತರ ಪ್ರದೇಶ
🗒1983

☀ಭಾರತದ ಪರ್ವತ ರೇಲ್ವೆಗಳು ,ನೀಲಗಿರಿ
🛣ತಮಿಳುನಾಡು
🗒1999

☀ನಂದಾದೇವಿ ಮತ್ತು ಪುಷ್ಪ ಕಣಿವೆ ರಾಷ್ಟ್ರೀಯ ಉದ್ಯಾನ
🛣ಉತ್ತರಾಖಂಡ
🗒1988,2005

☀ಸುಂದರಬನ್ ರಾಷ್ಟ್ರೀಯ ಉದ್ಯಾನ
🛣ಪಶ್ಚಿಮ ಬಂಗಾಳ
🗒1987

☀ಪಶ್ಚಿಮ ಘಟ್ಟಗಳು
🛣ತಮಿಳುನಾಡು,ಕರ್ನಾಟಕ,ಮಹಾರಾಷ್ಟ್ರ
🗒2012

☀ರಾಜಸ್ಥಾನದ ಬೆಟ್ಟದ ಕೋಟೆಗಳು
🛣ರಾಜಸ್ಥಾನ
🗒2013

☀ರಾಣಿಯ ಬಾವಿ (ರಾಣಿ ಕಿವಾವ್)
🛣ಗುಜರಾತ್ 
🗒2014

☀ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನ
🛣ಹಿಮಾಚಲ ಪ್ರದೇಶ
🗒2014

☀ನಳಂದಾ
🛣ಬಿಹಾರ
🗒2016


☀ಕಾಂಚನಗಂಗಾ ರಾಷ್ಟ್ರೀಯ ಉದ್ಯಾನ
🛣ಸಿಕ್ಕಿಂ
🗒2016

☀ಚಂಡೀಗಡದ ಆಡಳಿತಾತ್ಮಕ ಕಟ್ಟಡ ಸಂಕೀರ್ಣ
🛣ಚಂಡೀಗಡ
🗒2016

🌹 *ಹೊಸಬೆಳಕು*🌹
 *==========================* 
🌹 *ಪರಿಸರ ಸಂಬಂಧಿತ ದಿನಗಳು (Environment Related Days)* 
 🌱🌱🌱🌱🌱🌱🌱🌱🌱🌱🌱

🌎ವಿಶ್ವ ತೇವಭೂಮಿ ದಿನ - ಫೆಬ್ರವರಿ 02

🌎ವಿಶ್ವ ವನ್ಯಜೀವಿ ದಿನ - ಮಾರ್ಚ್ 03

🌎ನದಿಗಳ ಅಂತರರಾಷ್ಟ್ರೀಯ ದಿನಾಚರಣೆ - ಮಾರ್ಚ್ 14

🌎ಅಂತರರಾಷ್ಟ್ರೀಯ ಅರಣ್ಯ ದಿನ - ಮಾರ್ಚ್ 21

🌎ವಿಶ್ವ ಜಲ ದಿನ - ಮಾರ್ಚ್ 22

🌎ವಿಶ್ವ  ಹವಾಮಾನ ದಿನ - ಮಾರ್ಚ್ 23

🌎ಭೂಮಿಯ ದಿನ - ಎಪ್ರಿಲ್ 22

🌎ಜೈವಿಕ ವೈವಿಧ್ಯತೆಗಾಗಿ ಅಂತರರಾಷ್ಟ್ರೀಯ ದಿನ - ಮೇ 22

🌎ಪರಿಸರ ಪರಿಸರ ದಿನ - ಜೂನ್ 05

🌎ವಿಶ್ವ ಸಾಗರ ದಿನ - ಜೂನ್ 08

🌎ಅಂತರರಾಷ್ಟ್ರೀಯ ಹವಾಮಾನ ಬದಲಾವಣೆಯ ದಿನ - ಜೂನ್ 21

🌎ವಿಶ್ವ ಮಳೆಕಾಡು ದಿನ - ಜೂನ್ 22

🌎ವಿಶ್ವ ಪ್ರಕೃತಿ ಸಂರಕ್ಷಣಾ ದಿನ
 - ಜುಲೈ 28

🌎ವಿಶ್ವ ಓಜೋನ್ ದಿನ - ಸೆಪ್ಟೆಂಬರ್ 16

🌎ಪರಿಸರ ಪರಿಸರ ಆರೋಗ್ಯ ದಿನ - ಸೆಪ್ಟೆಂಬರ್ 26

🌎ವಿಶ್ವ ನದಿಗಳ ದಿನ - ಸೆಪ್ಟೆಂಬರ್ ಕೊನೆಯ ವಾರ

🌎ವಿಶ್ವ ಪ್ರಾಣಿಗಳ ದಿನ - ಅಕ್ಟೋಬರ್ 4

🌎ಹವಾಮಾನ ಕ್ರಿಯೆಯ ಅಂತರರಾಷ್ಟ್ರೀಯ ದಿನ - ಅಕ್ಟೋಬರ್ 24

🌎ವಿಶ್ವ ಮೀನುಗಾರಿಕೆ ದಿನ - ನವೆಂಬರ್ 21

🌎ವಿಶ್ವ  ಮಣ್ಣಿನ ದಿನ - ಡಿಸೆಂಬರ್ 05

🌎ಅಂತರರಾಷ್ಟ್ರೀಯ ಪರ್ವತ ದಿನ - ಡಿಸೆಂಬರ್ 11

🌿🌿🌿🌿🌿🌿🌿🌿🌿🌿🌿🌿

ಪ್ರತಿ ನಿತ್ಯ ಎಲ್ಲ ವಿಷಯಾಧರಿತ ವಿಷಯಗಳು ಇಲ್ಲಿ ಅಪಡೇಟ್ ಆಗುತ್ತಿರುತ್ತವೆ. ಇಲ್ಲಿ ಕೇವಲ ಸ್ಟಡಿಗೆ ಸಂಬಂಧಿಸಿದ್ದು ಮಾತ್ರ ಹಂಚಿಕೊಳ್ಳಲಾವುದು. (ವಿಷಯ ಆಧಾರಿತ , ಪ್ರಚಲಿತ ವಿದ್ಯಮಾನ, 

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ಮಾಹಿತಿಗೆ ಅವಕಾಶ

⭐⭐⭐⭐⭐⭐⭐⭐⭐⭐⭐⭐⭐⭐⭐

ವಾಟ್ಸ್ ಅಪ್ ಗ್ರೂಪ್ಸ್

ಹೊಸಬೆಳಕು 1

1 to 7th ಕ್ಲಾಸ್ ಸ್ಟಡಿ ಗ್ರೂಪ್ 

ಶಿಕ್ಷಣವೇ ಶಕ್ತಿ

ENGLISH LANGUAGE CLUB

8th to 10th class study groups

PUC ಸ್ಟಡಿ ಗ್ರೂಪ್ಸ್

ಪ್ರಮುಖ ಅಂಶಗಳು

ಮೊರಾರ್ಜಿ ಪ್ರವೇಶ ಪರೀಕ್ಷೆ 2023-24 ನೇ ಸಾಲಿಗೆ ಮೊರಾರ್ಜಿ ದೇಸಾಯಿ / ಕಿತ್ತೂರು ರಾಣಿ ಚೆನ್ನಮ್ಮ / ಏಕಲವ್ಯ / ಅಟಲ್‌ ಬಿಹಾರಿ ವಾಜಪೇಯಿ / ಡಾ.ಬಿ.ಆರ್.‌ ಅಂಬೇಡ್ಕರ್‌ ...

ಪ್ರಮುಖ ಕಲಿಕಾಂಶಗಳು