ಶಿಕ್ಷಣವೇ ಶಕ್ತಿ

Monday 21 December 2020

ಕನ್ನಡ ವ್ಯಾಕರಣ ಮಾಹಿತಿ

ಕನ್ನಡ ಅಕ್ಷರಮಾಲೆ

ಕನ್ನಡ ಭಾಷೆಯ ವರ್ಣಮಾಲೆ


ಇತಿಹಾಸ

  • ಅಶೋಕನ ಬ್ರಾಹ್ಮೀ ಲಿಪಿ ಉತ್ತರಕ್ಕೆ ಕಾಲಸಿ ಮತ್ತು ಭಾರತ-ನೇಪಾಲ ಗಡಿಯಲ್ಲಿರುವ ರುಮ್ಮಿಂದೈಯಿಂದ ದಕ್ಷಿಣಕ್ಕೆ ಮೈಸೂರುವರೆಗೂ ಪುರ್ವಕ್ಕೆ ಒರಿಸ್ಸದಿಂದ ಪಶ್ಚಿಮಕ್ಕೆ ಜುನಾಗಢ ಮತ್ತು ಮುಂಬಯಿವರೆಗೂ ದೊರೆತ ಅಶೋಕ ಸಾಮ್ರಾಟನ ಧರ್ಮಶಾಸನಗಳಲ್ಲಿ ಕಂಡುಬರುತ್ತದೆ. ಈ ಲಿಪಿಯು ಅಶೋಕನ ಕಾಲದಲ್ಲಿ ಪ್ರಚಲಿತವಿದ್ದ ಪಾಕೃತ ಬಾಷೆಯಾಗಿ ಉಪಯೋಗಿಸಲ್ಪಟ್ಟಿದೆ.
  • ಆ ಕಾಲಕ್ಕಾಗಲೇ ಅದು ಪರಿಪುರ್ಣತೆಯನ್ನು ಪಡೆದಿದ್ದು ಪ್ರಾಕೃತ ಭಾಷೆಯ ಪ್ರತಿಯೊಂದು ಶಬ್ದ ಅಥವಾ ಧ್ವನಿಗೆ ಪ್ರತ್ಯೇಕವಾದ ಅಕ್ಷರ ಅಥವಾ ಸಂಜ್ಞೆಯನ್ನು ಅದರಲ್ಲಿ ಕಲ್ಪಿಸಲಾಗಿದೆ. ಈ ಲಿಪಿ ಎಡದಿಂದ ಬಲಕ್ಕೆ ಬರೆಯಲ್ಪಟ್ಟಿದ್ದು ಅದರಲ್ಲಿಯ ಸರಳ ಸುಂದರ, ಅಕ್ಷರಗಳು ಸುಲಭವಾಗಿ ಗುರುತಿಸುವಂತಿವೆ. ಈ ಅಕ್ಷರಗಳಿಗೆ ತಲೆಕಟ್ಟು ಇರುವುದಿಲ್ಲ. ಥ, ಪ, ಮ, ವ. ಲ, ಹ ಮುಂತಾದ ಅಕ್ಷರಗಳ ಬುಡಕಟ್ಟು ದುಂಡಾಗಿರುತ್ತವೆ.
  • ಸಂಸ್ಕೃತ ಭಾಷೆಯ ಋ, ವಿಸರ್ಗ, ಜಿಹ್ವಾ ಮೂಲೀಯ ಮತ್ತು ಉಪಧ್ಮಾನೀಯಗಳನ್ನು ನಿರ್ದೇಶಿಸುವ ಸಂಜ್ಞೆಗಳಿರುವುದಿಲ್ಲ. ಅದರಂತೆ ಪದಾದಿಯ ದೀರ್ಘ ಈ ಕಾರವಿಲ್ಲ. ಕರ್ಣಾಟಕದಲ್ಲಿ ಅಶೋಕನ ಬಾಹ್ಮೀ ಲಿಪಿಯ ಶಾನಗಳು ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ, ಸಿದ್ದಾಪುರ ಮತ್ತು ಜಟಿಂಗ ರಾಮೇಶ್ವರ ಎಂಬ ಸ್ಥಳಗಳಲ್ಲಿಯೂ ರಾಯಚೂರು ಜಿಲ್ಲೆಯ ಮಸ್ಕಿ, ಪಾಲ್ಕಗುಂಡು ಮತ್ತು ಗವಿಮಠ ಎಂಬ ಸ್ಥಳಗಳಲ್ಲಿಯೂ ದೊರೆತಿವೆ.
  • ಅಶೋಕನ ಬ್ರಾಹ್ಮೀ ಲಿಪಿ ಮುಂದೆ 3ನೆಯ ಶತಮಾನದ ವರೆಗೆ ಶುಂಗ, ಕುಶಾನ, ಕ್ಷತ್ರಪ, ಆಂಧ್ರ, ಶಾತವಾಹನ ಮುಂತಾದ ಅರಸರ ಶಾಸನಗಳಲ್ಲಿ ಭಾರತದ ಬೇರೆ ಬೇರೆ ಭಾಗಗಳಲ್ಲಿ ವಿಕಾಸ ಹೊಂದಿರುತ್ತದೆ. ಕುಶಾನ ಕಾಲದ ಲಿಪಿಯ ಅಕ್ಷರಗಳು ಕಡಿಮೆ ಎತ್ತರವಾಗಿಯೂ ಅಗಲವಾಗಿಯೂ ದಪ್ಪವಾಗಿಯೂ ಇರುತ್ತವೆ. ಕ್ಷತ್ರಪ ಹಾಗೂ ಶಾತವಾಹನರ ಕಾಲದ ಲಿಪಿಗಳೂ ಹೆಚ್ಚು ಕಡಿಮೆ ಇದೇ ವೈಶಿಷ್ಟ್ಯಗಳನ್ನೊಳಗೊಂಡಿವೆ.
  • ಕರ್ಣಾಟಕದಲ್ಲಿ ಅಶೋಕನ ಬ್ರಾಹ್ಮೀ ಲಿಪಿಯ ಮುಂದಿನ ಹಂತವನ್ನು 2-3ನೆಯ ಶತಮಾನದ ಮಳವಳ್ಳಿ ಮತ್ತು ಬನವಾಸಿಯ ಸಾತಕರ್ಣಿಯ ಶಾಸನಗಳಲ್ಲಿ ಕಾಣುತ್ತೇವೆ. ಇಲ್ಲಿಯೂ ಅಕ್ಷರಗಳ ಎತ್ತರ ಕಡಿಮೆಯಾಗಿದ್ದು ಕೆಲವು ಅಕ್ಷರಗಳಿಗೆ ತ್ರಿಕೋಣಾಕೃತಿಯುಳ್ಳ ತಲೆಕಟ್ಟು ಇರುತ್ತದೆ. ಅಗಲವಾದ ತುದಿಯುಳ್ಳ ಲೇಖನಿಯನ್ನು ಉಪಯೋಗಿಸಿದ್ದರಿಂದ ಇಂಥ ತಲೆಕಟ್ಟುಗಳು ತಲೆದೋರಿವೆಯೆಂದು ಕೆಲವು ವಿದ್ವಾಂಸರು ಹೇಳುತ್ತಾರೆ.
  • ಅ, ಕ, ರ ಮುಂತಾದ ಅಕ್ಷರಗಳ ಲಂಬರೇಖೆಯ ಕೆಳಭಾಗ ವೃತ್ತಾಕಾರವಾಗಿ ಎಡಗಡೆ ಹೊರಳಿದೆ. ಇತ್ತೀಚೆಗೆ ಗುಲ್ಬರ್ಗಾ ಜಿಲ್ಲೆಯ ಸನ್ನತಿ ಎಂಬ ಸ್ಥಳದಲ್ಲಿ ದೊರೆತ 3ನೆಯ ಶತಮಾನದ ಶಾನಗಳಲ್ಲಿಯ ಕೆಲವು ಅಕ್ಷರಗಳು ಆಂಧ್ರಪ್ರದೇಶದ ನಾಗಾರ್ಜುನ ಕೊಂಡದ ಇಕ್ಷ್ವಾಕು ಅರಸರ ಶಾಸನಗಳ ಅಕ್ಷರಗಳಂತೆ ಸುಂದರವಾಗಿಯೂ ಅಂಕಾರಯುತವಾಗಿಯೂ ಕೆತ್ತಲ್ಪಟ್ಟಿವೆ.

10-12ನೆಯ ಶತಮಾನ

  • ಕನ್ನಡ ಲಿಪಿ 10-12ನೆಯ ಶತಮಾನದಲ್ಲಿ ಕಲ್ಯಾಣಿ ಚಾಳುಕ್ಯರ ಶಾಸನಗಳಲ್ಲಿ ವಿಶೇಷ ಬದಲಾವಣೆಯನ್ನು ಹೊಂದಿ ಒಂದು ಮುಖ್ಯವಾದ ಹಂತವನ್ನು ಸೂಚಿಸುತ್ತಿವೆ. ಈ ಕಾಲದ ಕೆಲವು ಅಕ್ಷರಗಳು ಇನ್ನಷ್ಟು ದುಂಡಾಗಿದ್ದು ಆಧುನಿಕ ಕನ್ನಡ ಲಿಪಿಯ ಅಕ್ಷರಗಳ ಲಕ್ಷಣಗಳನ್ನು ವ್ಯಕ್ತಪಡಿಸುತ್ತದೆ. ಉದಾಹರಣೆಗಾಗಿ ಕ, ರ, ಯ ಮುಂತಾದ ಅಕ್ಷರಗಳ ಮೈಕಟ್ಟು ಹೆಚ್ಚು ಕಡಿಮೆ ಈಗಿನಂತೆಯೇ ಇದೆ. ಕೆಲವು ಅಕ್ಷರಗಳ ತಲೆಕಟ್ಟು ಕೋನಾಕೃತಿಯುಳ್ಳದಾಗಿದೆ.
  • ಚ, ವ, ಮ ಮುಂತಾದ ಅಕ್ಷರಗಳ ತಲೆಕಟ್ಟಿನ ಭಾಗ ಎರಡು ಭಾಗವಾಗಿ ಬೇರ್ಪಡೆಯಾಗಿದ್ದು ತಲೆಕಟ್ಟು ಬಲಭಾಗದ ರೇಖೆಗೆ ಹೊಂದಿ ಕೊಂಡಿರುತ್ತದೆ. ಅನೇಕ ಅಕ್ಷರಗಳ ತಲೆಕಟ್ಟು ಸ್ಪಷ್ಟವಾಗಿ ಎದ್ದುಕಾಣುವಂತಿದೆ. ಮುಂದೆ 12-13ನೆಯ ಶತಮಾನದಲ್ಲಿ ಹೊಯ್ಸಳ ಅರಸರ ಅನೇಕ ಶಾಸನಗಳನ್ನು ನುಣುಪಾದ ಕಲ್ಲಿನ ಹಲಗೆಗಳ ಮೇಲೆ ಅಲಂಕಾರಯುತವಾಗಿಯೂ ಕಲಾತ್ಮಕವಾಗಿಯೂ ಬರೆಯಲ್ಪಟ್ಟಿದ್ದು ಅಲ್ಲಿಯ ಅಕ್ಷರಗಳು ಬಹು ಸುಂದರವಾಗಿ ಕಾಣುತ್ತವೆ.
  • ಈ ಅಕ್ಷರಗಳನ್ನು ಸ್ಪಷ್ಟವಾಗಿಯೂ ಹೆಚ್ಚು ದುಂಡಾಗಿಯೂ ಬರೆಯಲಾಗಿದೆ. ಇಲ್ಲಿ ಕನ್ನಡ ಲಿಪಿ ಊರ್ಜಿತಾವಸ್ಥೆಯನ್ನು ಹೊಂದಿದೆಯೆಂದು ಹೇಳಬಹುದು. ಆದರೆ ಮುಂದಿನ 2-3 ಶತಮಾನಗಳ ಕಾಲದಲ್ಲಿ ಅಂದರೆ 14-16ನೆಯ ಶತಮಾನದ ವಿಜಯನಗರ ಅರಸರ ಶಾಸನಗಳಲ್ಲಿ ಅಕ್ಷರಗಳನ್ನು ಡೊಂಕು ಡೊಂಕಾಗಿ ಬರೆಯಲಾಗಿದ್ದು ಅವುಗಳ ಜೋಡಣೆಯ ವಿಷಯದಲ್ಲಿ ಅಷ್ಟು ಗಮನವನ್ನಿತ್ತಿಲ್ಲ.
  • ಆದುದರಿಂದ ಕಲ್ಯಾಣಿ ಚಾಳುಕ್ಯ ಹಾಗೂ ಹೊಯ್ಸಳರ ಕಾಲದ ಲಿಪಿಯ ಅಕ್ಷರಗಳಂತೆ ವಿಜನಗರ ಕಾಲದ ಲಿಪಿಯ ಅಕ್ಷರಗಳು ಅಂದವಾಗಿ ಕಾಣುವುದಿಲ್ಲ. ಆದರೂ ಈ ಕಾಲದ ಲಿಪಿಯ ಅಕ್ಷರಗಳು ಕನ್ನಡ ಲಿಪಿಯ ಬೆಳೆವಣಿಗೆಯ ದೃಷ್ಟಿಯಿಂದ ಗಮನಾರ್ಹವಾಗಿದೆ. ಅ, ಞ, ಣ, ಷ, ಳ ಮುಂತಾದ ಅಕ್ಷರಗಳು ಈಗಿನ ರೂಪಗಳನ್ನು ಹೆಚ್ಚಾಗಿ ಹೋಲುತ್ತವೆ.
  • ದ, ಡ, ಪ ಮುಂತಾದ ಅಲ್ಪಪ್ರಾಣದ ಅಕ್ಷರಗಳಿಗೆ ಕೆಳಗಡೆ ಒಂದು ರೇಖೆಯನ್ನು ಸೇರಿಸಿ ಧ, ಢ, ಫ, ಮುಂತಾದ ಮಹಾಪ್ರಾಣಗಳ ಸಂಜ್ಞೆಗಳನ್ನು ಸೂಚಿಸಲಾಗಿದೆ. ಇದುವರೆಗೆ ಅಕ್ಷರಗಳ ಮೇಲ್ಭಾಗದಲ್ಲಿ ಒಂದು ಚುಕ್ಕೆ ಅಥವಾ ಚಿಕ್ಕ ಬಿಂದುವಿನಿಂದ ಸೂಚಿಸಲ್ಪಡುತ್ತಿದ್ದ ಅನುಸ್ವಾರವನ್ನು ಆಯಾ ಅಕ್ಷರಗಳ ಬಲಗಡೆಗೆ ಅಷ್ಟೇ ಗಾತ್ರದ ಬಿಂದುವಿನಿಂದ ತೋರಿಸಲಾಗಿದೆ.
  • 18ನೆಯ ಶತಮಾನದಲ್ಲಿ ಮೈಸೂರು ಅರಸರ ಕಾಲದಲ್ಲಿ ಕನ್ನಡ ಲಿಪಿ ವಿಜಯನಗರ ಕಾಲದ ಅಕ್ಷರಗಳ ಕೆಲವು ಲಕ್ಷಣಗಳನ್ನು ಉಳಿಸಿಕೊಂಡಿದ್ದರೂ ಆಧುನಿಕ ಕನ್ನಡ ಲಿಪಿಗೆ ಬಹಳ ಹತ್ತಿರಬಾಗಿ ತೋರುತ್ತದೆ. ಇತ್ತೀಚೆಗೆ ಮುದ್ರಣ ಬಂದಮೇಲೆ ಇತರ ಲಿಪಿಗಳಂತೆ ಕನ್ನಡ ಲಿಪಿಯಾದರೂ ಒಂದು ಸ್ಥಿರತೆಯನ್ನು ಹೊಂದಿದ್ದರಿಂದ ಹೆಚ್ಚಿನ ವಿಕಾಸಕ್ಕೆ ಅಸ್ಪದವಿಲ್ಲದಂತಾಗಿದೆ. ಆದರೂ ಮುದ್ರಣದ ಲಿಪಿಯಲ್ಲಿ ಸಹ ಕಾಲಕಾಲಕ್ಕೆ ಕೆಲವು ಸುಧಾರಣೆಗಳನ್ನು ಮಾಡಿಕೊಂಡು ಹೆಚ್ಚಿನ ಅಂದವಾದ ಅಕ್ಷರಗಳನ್ನು ಅಚ್ಚು ಹಾಕುತ್ತಿರುವುದನ್ನು ನೋಡುತ್ತೇವೆ.

ಪರಿಣಾಮ

  • ಕನ್ನಡ ಲಿಪಿಯ ಒಂದು ವೈಶಿಷ್ಟ್ಯವೆಂದರೆ ಪ್ರಾಚೀನಕಾಲದಿಂದಲೂ ಕಾಗುಣಿತಾಕ್ಷರದ ಹೃಸ್ವ ಮತ್ತು ದೀರ್ಘ ಎ ಮತ್ತು ಏ ಕಾರಗಳನ್ನು ಹಾಗೂ ಒ ಮತ್ತು ಓ ಕಾರಗಳನ್ನು ಒಂದೇ ಸಂಜ್ಞೆಯಿಂದ ಸೂಚಿಸುತ್ತಿದ್ದು ಅವುಗಳಲ್ಲಿಯ ಹೃಸ್ವ ಮತ್ತು ದೀರ್ಘ ವರ್ಣಗಳ ಭೇದವನ್ನು ಸಂದರ್ಭಾನುಸಾರವಾಗಿ ತಿಳಿದುಕೊಳ್ಳಬೇಕಾಗಿತ್ತು.
  • ಇತ್ತೀಚೆಗೆ ಅಂದರೆ 17-18ನೆಯ ಶತಮಾನದಂದೀಚೆಗೆ ಮಾತ್ರ ಕಾಗುಣಿತಾಕ್ಷರದ ದೀರ್ಘ ಏ ಕಾರ, ದೀರ್ಘ, ಓ ಕಾರ ಮತ್ತು ದೀರ್ಘ ಈ ಕಾರಗಳನ್ನು ಆಯಾ ಅಕ್ಷರಗಳ ಬಲಗಡೆ ಕೋಡಿಯುಳ್ಳ ಒಂದು ರೇಖೆಯಿಂದ ಸೂಚಿಸಲಾಗಿದೆ.

ಇನ್ನು 4-5ನೆಯ ಶತಮಾನದಿಂದ 13-14ನೆಯ ಶತಮಾನದವರೆಗೆ ಕರ್ನಾಟಕ ಮತ್ತು ಆಂಧ್ರಪ್ರದೇಶದ ಶಾಸನಗಳಲ್ಲಿ ಸುಮಾರು ಒಂದೇ ಮಾದರಿಯ ಲಿಪಿಯನ್ನು ಉಪಯೋಗಿಸಿದ್ದುದರಿಂದ ಇವೆರಡೂ ಭಾಗದ ಲಿಪಿಗಳಿಗೆ ಕನ್ನಡ ತೆಲುಗು ಲಿಪಿಯೆಂದು ಹೇಳುವುದುಂಟು. ಅದರಲ್ಲೂ ವಿಶೇಷವಾಗಿ ಬಾದಾಮಿ ಚಳುಕ್ಯ, ರಾಷ್ಟ್ರಕೂಟ ಮತ್ತು ಕಲ್ಯಾಣಿ ಚಾಳುಕ್ಯರ ಕಾಲದ ಕನ್ನಡ ತೆಲುಗು ಲಿಪಿ ಒಂದೇ ಸ್ವರೂಪದ್ದಾಗಿದೆಯೆಂದು ಹೇಳಬಹುದು.

  • 14-15ನೆಯ ಶತಮಾನಗಳಲ್ಲಿ ಕನ್ನಡ ಮತ್ತು ತೆಲುಗು ಲಿಪಿಗಳಲ್ಲಿ ಕೆಲವು ವ್ಯತ್ಯಾಸಗಳು ತಲೆದೋರಿದ್ದು ಮುಂದಿನ ಎರಡು ಮೂರು ಶತಮಾನಗಳಲ್ಲಿ ಗಮನಾರ್ಹವಾದ ಭೇದಗಳು ಕಂಡುಬರುತ್ತವೆ. ಆದರೂ ಅಲ್ಪ ಪ್ರಯತ್ನದಿಂದ ಕನ್ನಡಿಗರು ತೆಲುಗು ಲಿಪಿಯನ್ನೂ ಅದರಂತೆ ಆಂಧ್ರರು ಕನ್ನಡ ಲಿಪಿಯನ್ನೂ ಸುಲಭವಾಗಿ ತಿಳಿದುಕೊಳ್ಳಬಹುದು. ಬಾದಾಮಿ ಚಳುಕ್ಯರ ಕಾಲದಲ್ಲ ಕನ್ನಡ ಲಿಪಿ ಮಹಾರಾಷ್ಟ್ರ ಮತ್ತು ಗುಜರಾತ್ ಪ್ರಾಂತ್ಯಗಳಲ್ಲಿಯೂ ಪ್ರಚಲಿತವಿದ್ದು ಮುಂದೆ ಅಲ್ಲಿ ನಾಗರೀ ಲಿಪಿ ಬಳಕೆಗೆ ಬಂತು. * ಅಂತೂ ಮೇಲಿನ ವಿವೇಚನೆಯಿಂದ ಕನ್ನಡ ಲಿಪಿ ಸು. 2000 ವರ್ಷಕ್ಕೂ ಹೆಚ್ಚಿನ ಪರಂಪರೆಯುಳ್ಳದ್ದಾಗಿದೆಯೆಂದು ವಿಶದವಾಗುತ್ತದೆ. ಒಂದು ಲಿಪಿಯ ಹುಟ್ಟು ಮತ್ತು ಬೆಳೆವಣಿಗೆ ಅದನ್ನು ಉಪಯೋಗಿಸುವ ಜನರ ಸಂಸ್ಕೃತಿಯ ಪ್ರತೀಕವಾಗಿರುತ್ತದೆ. ಒಂದು ಆದರ್ಶ ಲಿಪಿಯಲ್ಲಿ ಪ್ರತಿಯೊಂದು ಶಬ್ದದ ಉಚ್ಚಾರಣೆಗೆ ಅಸಂದಿಗ್ಧವಾದ ಸಂಜ್ಞೆಯಿರಬೇಕು. ಬರೆದಂತೆ ಓದುವಂತಿರಬೇಕು. ಓದಿದಂತೆ ಬರೆಯುವಂತೆಯೂ ಇರಬೇಕು.
  • ಅಂದರೆ ಉಚ್ಚಾರಿತ ಅಕ್ಷರ ಹಾಗೂ ಲಿಖಿತ ವರ್ಣ ಇವುಗಳ ಸಂಬಂಧ ಸಂಪುರ್ಣವಿರಬೇಕು. ಈ ದೃಷ್ಟಿಯಿಂದ ವಿಚಾರಿಸಿದರೆ ಕನ್ನಡ ಲಿಪಿ ಪರಿಪುರ್ಣತೆಯನ್ನು ಪಡೆದಿದೆಯೆಂದು ಹೇಳಬಹುದು. ಈ ಲಿಪಿಯಲ್ಲಿ ಸ್ವರ ಮತ್ತು ವ್ಯಂಜನಗಳು ಪುರ್ಣವಾಗಿದ್ದು ಆರ್ಯ ಮತ್ತು ದ್ರಾವಿಡ ಭಾಷೆಗಳ ಧ್ವನಿಗಳನ್ನು ಕೊರತೆಯಿಲ್ಲದೆ ಸೂಚಿಸಲಿಕ್ಕೆ ಉಪಯುಕ್ತವಾದ ಸಂಕೇತಗಳಿವೆ. ವ್ಯಂಜನಾಕ್ಷರಗಳೊಡನೆ ಸ್ವರಗಳ ಸುಂದರವಾದ ಸಂಯೋಗವಿದೆ.
  • ಹೀಗೆ ಕನ್ನಡ ಲಿಪಿ ಅಶೋಕನ ಬ್ರಾಹ್ಮೀಲಿಪಿಯಿಂದ ಉದ್ಬವಿಸಿ ಕಾಲಕ್ರಮದಿಂದ ಅನೇಕ ಮಾರ್ಪಾಟುಗಳನ್ನು ಹೊಂದಿ ವೈವಿಧ್ಯಪುರ್ಣವಾದ ವಿಕಾಸವನ್ನು ಪಡೆದು ಸಾಹಿತ್ಯ-ಸಂಸ್ಕೃತಿಗಳ ಹಿರಿಮೆಯನ್ನು ವ್ಯಕ್ತಪಡಿಸುತ್ತದೆ. ಕನ್ನಡ ವರ್ಣಮಾಲೆಯ ಪ್ರತಿಯೊಂದು ಅಕ್ಷರದ ಉಗಮ, ವಿಕಾಸ, ಉಚ್ಚಾರಣೆ ಮುಂತಾದ ವಿವರಗಳು ಆಯಾ ಅಕ್ಷರಗಳ ಶೀರ್ಷಿಕೆಗಳಲ್ಲಿ ಬಂದಿವೆ. ಅವನ್ನು ನೋಡಬಹುದು. ಈಚೆಗೆ ಪರಭಾಷೆಯ ಪದಗಳನ್ನು ಎರವಲಾಗಿ ತೆಗೆದುಕೊಳ್ಳಬೇಕಾದ ಅಗತ್ಯ ಒದಗಿಬಂದುದರಿಂದ ಈಚಿಣheಡಿ, ಈಚಿisಚಿಟ, Zoo, ಒಚಿಟಿ ಮೊದಲಾದುವನ್ನು; ಬರೆಯಲು ವಿಶಿಷ್ಟ ಸಂಜ್ಞೆಗಳನ್ನು ಬಳಸಲಾಗುತ್ತಿದೆ. ಉದಾ : ಫಾದರ್, ಫೈಸಲ್ ಜóÆ, ಮ್ಯಾನ್-ಹೀಗೆ.

ಸಂಜ್ಞಾ ಪ್ರಕರಣ :

ಕೇಶಿರಾಜನ ಸೂತ್ರದ ಪ್ರಕಾರ, ಅಕ್ಷರ ಮಾಲೆ/ವರ್ಣಮಾಲೆ ಎಂಬುದು ಒಂದು ಸಂಜ್ಞಾ ಪ್ರಕಾರವಾಗಿದೆ.

ಕವಿಗಳ್ ಸ್ವರದಿಂ ವರ್ಗದಿ

ನವರ್ಗದಿಂ ಯೋಗವಾಹದಿಂ ದೇಶಿಯಳು

ದ್ಭವಮಪ್ಪ ವರ್ಣದಿಂ ಪಂ

ಚ ವಿಧಂ ತಾನೆಂದು ತಿಳಿಸುವರ್ ಶುದ್ಧಗೆಯಂ

(ಸೂತ್ರ ವಿವರಣೆ:ಕವಿಗಳು ಸ್ವರದಿಂದವರ್ಗಾಕ್ಷರಗಳಿಂದ, ಅವರ್ಗೀಯ ಅಕ್ಷರಗಳಿಂದ, ಯೋಗವಾಹ ಅಕ್ಷರದಿಂದದಿಂದ, ಮತ್ತು ದೇಶಿಯ ಅಕ್ಷರಗಳಿಂದ ಹುಟ್ಟಿರುವ ಐದು ವಿಧದ ಅಕ್ಷರಗಳನ್ನು ಶುದ್ಧಗೆ ಎಂದು ಹೇಳುತ್ತಾರೆ) (ಸೂತ್ರಸಂಖ್ಯೆ – ೪೧)

ಕನ್ನಡದ ಶುದ್ಧಾಕ್ಷರಗಳ ವಿಧಗಳು

ಕೇಶಿರಾಜನ ಪ್ರಕಾರ ಕನ್ನಡ ಶುದ್ಧಗೆಯಲ್ಲಿ ಐದು ವಿಧಗಳು. ಅವುಗಳು ಕ್ರಮವಾಗಿ : ಸ್ವರ ಅಕ್ಷರಗಳು, ವರ್ಗೀಯ ವ್ಯಂಜನ ಅಕ್ಷರಗಳು, ಅವರ್ಗೀಯ ವ್ಯಂಜನ ಅಕ್ಷರಗಳು, ಯೋಗವಾಹ ಅಕ್ಷರಗಳು, ದೇಶಿಯ ಅಕ್ಷರಗಳು. ಆದರೆ ಕನ್ನಡ ಪಠ್ಯಾನುಸಾರ ಪ್ರಾಥಮಿಕ ಮತ್ತು ಮಾಧ್ಯಮಿಕ ತರಗತಿಯ ವಿದ್ಯಾರ್ಥಿಗಳು ಒಟ್ಟು ಕನ್ನಡ ಅಕ್ಷರಗಳನ್ನು ಈ ಕೆಳಗಿನಂತೆ ಗ್ರಹಿಸಿಕೊಂಡಿದ್ದಾರೆ.

More information: ಶುದ್ಧಾಕ್ಷರ ವಿಧಗಳು, ಗಣನೆ ...
ಶುದ್ಧಾಕ್ಷರ ವಿಧಗಳುಗಣನೆಅಕ್ಷರಗಳು
ಸ್ವರ೧೩ಅ - ಔ
ವರ್ಗೀಯ ವ್ಯಂಜನ೨೫ಕಚಟತಪ-ವರ್ಗಗಳು
ಅವರ್ಗೀಯ ವ್ಯಂಜನಯ-ಳ
ಯೋಗವಾಹಅನುಸ್ವಾರ(ಂ), ವಿಸರ್ಗ ( ಃ)
ಹಳಗನ್ನಡಱ(ರ) ಮತ್ತು ೞ(ಳ)
ಹೊಸ ಸೇರ್ಪಡೆಫ಼ ಮತ್ತು ಜ಼
Close


ಈ ರೀತಿ ಕನ್ನಡದಲ್ಲಿ ೫೪ ಅಕ್ಷರಗಳಿವೆ (ಫ಼, ಜ಼ ಸೇರಿ). ಪ್ರಸ್ತುತ ಕನ್ನಡದಲ್ಲಿ ಬಳಸುತ್ತಿರುವುದು ೪೯ ಅಕ್ಷರಗಳು.

More information: ಕನ್ನಡ ಅಕ್ಷರಮಾಲೆ ...
ಕನ್ನಡ ಅಕ್ಷರಮಾಲೆ
ಅ ಆ ಇ ಈ ಉ ಊ ಋ ೠ ಎ ಏ ಐ ಒ ಓ ಔ ಅಂ ಅಃ
ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ
ಯ ರ ಱ ಲ ವ ಶ ಷ ಸ ಹ ಳ ೞ
ಫ಼ ಜ಼
Close

ಕನ್ನಡ ವರ್ಣಮಾಲೆ

ಕನ್ನಡ ವರ್ಣಮಾಲೆಯಲ್ಲಿ ೪೯ಅಕ್ಷರಗಳಿವೆ. ಅವುಗಳನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ.

  1. ಸ್ವರಗಳು -೧೩
  2. ವ್ಯಂಜನಗಳು -೩೪
  3. ಯೋಗವಾಹಗಳು-೦೨

ಸ್ವರ

ಬೇರೊಂದು ಅಕ್ಷರದ ಸಹಾಯವಿಲ್ಲದೆ ಸ್ವತಂತ್ರವಾಗಿ ಉಚ್ಛರಿಸಲು ಬರುವ ವರ್ಣಮಾಲೆಯ ಮೊದಲ ಹದಿಮೂರು ಅಕ್ಷರಗಳನ್ನು ಸ್ವರ ಎಂದು ಕರೆಯುತ್ತಾರೆ.

ಸ್ವರಗಳ ವಿಧ

ಸ್ವರಗಳಲ್ಲಿ ಎರಡು ವಿಧ. ಅವು ಯಾವುವೆಂದರೆ ಹೃಸ್ವ ಸ್ವರಗಳು ಹಾಗೂ ದೀರ್ಘ ಸ್ವರಗಳು.

ಹೃಸ್ವ ಸ್ವರ

ಹೃಸ್ವ ಸ್ವರಗಳು (೬)ಆರು. ಒಂದು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ವರ್ಣಮಾಲೆಯ ಆರು ಅಕ್ಷರಗಳನ್ನು(ಅ,ಇ ಉ,ಋ,ಎ,ಒ) ಹೃಸ್ವ ಸ್ವರಗಳೆಂದು ಕರೆಯುವರು.

ದೀರ್ಘ

ಎರಡು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ವರ್ಣಮಾಲೆಯ (೭)ಏಳು ಅಕ್ಷರಗಳನ್ನು (ಆ,ಈ,ಊ,ಏ.ಐ.ಓ,ಔ) ದೀರ್ಘ ಸ್ವರಗಳೆಂದು ಕರೆಯುವರು.

ವ್ಯಂಜನ

ಬೇರೊಂದು ಅಕ್ಷರದ ಸಹಾಯವಿಲ್ಲದೆ ಸ್ವತಂತ್ರವಾಗಿ ಉಚ್ಛರಿಸಲು ಬಾರದ ವರ್ಣಮಾಲೆಯ(೩೪) ಮುವತ್ತು ನಾಲ್ಕು ಅಕ್ಷರಗಳನ್ನು ವ್ಯಂಜನಗಳೆಂದು ಕರೆಯುವರು. ಪ್ರಮುಖವಾಗಿ ವ್ಯಂಜನಗಳಲ್ಲಿ ಎರಡು ವಿಧ. ಅವು ಯಾವುವೆಂದರೆ

  1. ವರ್ಗೀಯ ವ್ಯಂಜನಗಳು(೨೫: ಕ,ಚ,ಟ,ತ,ಪ-ವರ್ಗಗಳು)
  2. ಅವರ್ಗೀಯ ವ್ಯಂಜನಗಳು(೯-ಯ ಇಂದ ಳ ವರೆಗೆ)

ವರ್ಗೀಯ ವ್ಯಂಜನ

ಒಂದು ವರ್ಗ ಅಥವಾ ಗುಂಪಿಗೆ ಸೇರಿಸಬಹುದಾದ ವರ್ಣಮಾಲೆಯ ಇಪ್ಪತ್ತೈದು(೨೫) ಅಕ್ಷರಗಳನ್ನು ವರ್ಗೀಯ ವ್ಯಂಜನ ಎಂದು ಕರೆಯುವರು. ಅವು ಯಾವುವೆಂದರೆ,

  1. ಕ-ವರ್ಗ, = ಕ, ಖ, ಗ, ಘ, ಙ.
  2. ಚ-ವರ್ಗ, = ಚ, ಛ, ಜ, ಝ, ಞ.
  3. ಟ-ವರ್ಗ ,= ಟ, ಠ, ಡ, ಢ, ಣ.
  4. ತ-ವರ್ಗ, = ತ, ಥ, ದ, ಧ, ನ.
  5. ಪ-ವರ್ಗ,= ಪ, ಫ, ಬ, ಭ, ಮ.

ಅವರ್ಗೀಯ ವ್ಯಂಜನ

ಒಂದು ಗುಂಪು ಅಥವಾ ಒಂದು ವರ್ಗಕ್ಕೆ ಸೇರಿಸಲು ಬಾರದ ವರ್ಣಮಾಲೆಯ ಕೊನೆಯ ಒಂಬತ್ತು ಅಕ್ಷರಗಳನ್ನು ಅವರ್ಗೀಯ ವ್ಯಂಜನಗಳೆಂದು ಕರೆಯುತ್ತಾರೆ. ಅವು ಯಾವುವೆಂದರೆ-ಯ,ರ,ಲ,ವ,ಶ,ಷ,ಸ,ಹ,ಳ.

ಕನ್ನಡ ಒತ್ತಕ್ಷರಗಳು

ಕನ್ನಡ ಒತ್ತಕ್ಷರಗಳು (೩೪)ಮುವತ್ನಾಲ್ಕು. ಅವು ಯಾವುವೆಂದರೆ:

  1. ಕ್ಕ ಖ್ಖ ಗ್ಗ ಘ್ಘ ಙ್ಙ
  2. ಚ್ಚ ಛ್ಛ ಜ್ಜ ಝ್ಝ ಞ್ಞ
  3. ಟ್ಟ ಠ್ಠ ಡ್ಡ ಢ್ಢ ಣ್ಣ
  4. ತ್ತ ಥ್ಥ ದ್ದ ಧ್ಧ ನ್ನ
  5. ಪ್ಪ ಫ್ಫ ಬ್ಬ ಭ್ಭ ಮ್ಮ
  6. ಯ್ಯ ರ್ರ ಲ್ಲ ವ್ವ ಶ್ಶ ಷ್ಷ ಸ್ಸ ಹ್ಹ ಳ್ಳ

ಯೋಗವಾಹಗಳು

ಸ್ವತಂತ್ರವಲ್ಲದ ಹಾಗೂ ಸ್ವರವೂ ಅಲ್ಲದ,ವ್ಯಂಜನವೂ ಅಲ್ಲದ ಸ್ವರಾಕ್ಷರಗಳ ಅಂತ್ಯದಲ್ಲಿನ ಹಾಗೂ ವ್ಯಂಜನಗಳ ಆರಂಭಾಕ್ಷರಗಳ ನಡುವಿನ ಎರಡು ಅಕ್ಷರಗಳನ್ನು (ಅನುಸ್ವಾರ-೦,ವಿಸರ್ಗ-ಃ)ಯೋಗವಾಹಗಳೆಂದು ಕರೆಯುತ್ತಾರೆ.

  • ಕರ್ನಾಟಕ ಸರ್ಕಾರವು ತನ್ನ ಪಠ್ಯ ಕ್ರಮದಿಂದ  ಸ್ವರವನ್ನು ಕನ್ನಡ ವರ್ಣಮಾಲೆಯಿಂದ ೧೯೯೦ ರಲ್ಲಿ ಬಿಟ್ಟಿತು.
  • ಹಳೆಗನ್ನಡದ ಮೂರು ಅಕ್ಷರಗಳಾದ  ಮತ್ತು ನ್(ನ್, ಇದಕ್ಕೆ ಯೂನಿಕೋಡ್ ಇಲ್ಲ) ಇವನ್ನು ಇಂದು ಹೆಚ್ಚಾಗಿ ಬಳಸುತ್ತಿಲ್ಲವಾದರೂ ಹಳೆಗನ್ನಡವನ್ನು ಓದಲು ಇವನ್ನು ತಿಳಿದಿರಬೇಕು.
  • ಇಂಗ್ಲಿಷ್‌ನ F ಮತ್ತು Z ಅಕ್ಷರಗಳಿಗೆ ಫ಼ ಮತ್ತು ಜ಼ (ಫ ಮತ್ತು ಜ) ಹೊಸ ಅಕ್ಷರಗಳು ಉಪಯೋಗಕ್ಕೆ ಬಂದಿವೆ.

ಸ್ವರಗಳು

  • ಕನ್ನಡದಲ್ಲಿ ಒಟ್ಟು ೧೩ ಸ್ವರಗಳಿವೆ. ಅವನ್ನು "ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ" ಹೀಗೆ 'ಅ'ಕಾರದಿಂದ ಮೊದಲು ಮಾಡಿ, 'ಔ'ಕಾರದ ವರೆಗೆ ಕೊನೆ ಮಾಡಿ, ಹೀಗೆ ಬರೆಯುವುದು ಸಂಸ್ಕೃತ ವ್ಯಾಕರಣದ ಅನುಕರಣೆ. ಸಂಸ್ಕೃತದಲ್ಲಿ ಈ ಬಗೆಯಲ್ಲಿ ಬರೆಯಲು ಕಾರಣ ಅದರ ಮಾಹೇಶ್ವರ ಸೂತ್ರ ಮತ್ತು ಸಂಧಿನಿಯಮಗಳು.
  • ಆದರೆ ಹೀಗೆ ಬರೆಯುವುದರಿಂದ ಕನ್ನಡದ ಸಂಧಿನಿಯಮಗಳನ್ನು ಅರಿಯಲು ಯಾವ ಅನುಕೂಲವೂ ಆಗುವುದಿಲ್ಲವೆಂಬ ಅಭಿಪ್ರಾಯವಿದೆ. "ಇ ಈ ಎ ಏ ಉ ಊ ಒ ಓ ಅ ಆ" ಎಂದು ಇನ್ನೊಂದು ಬಗೆಯಲ್ಲಿಯೂ ಬರೆಯುವುದುಂಟು. ಇಲ್ಲಿ ಸ್ವರಗಳನ್ನು ನಾಲಗೆಯ ತುದಿಯಿಂದ ಕೊನೆಯ ತನಕ ಅವುಗಳು ಹೊರಡುವ ನಾಲಗೆಯ ಭಾಗಕ್ಕೆ ಅನುಕ್ರಮವಾಗಿ ಬರೆಯಲಾಗಿದೆ.
  • ಅಂದರೆ "ಇ ಈ" ನಾಲಗೆಯ ತುತ್ತುದಿಯಿಂದ ಉಲಿದರೆ, "ಅ ಆ" ನಾಲಗೆಯ ಕಟ್ಟಕಡೆಯಲ್ಲಿ ಹೊರಡುವುದು. ೠ, ಱ, ೞ ಗಳನ್ನು ಬಿಟ್ಟಮಾತ್ರಕ್ಕೆ ಆ ಅಕ್ಷರಗಳು ಕನ್ನಡದಲ್ಲಿ ಇಲ್ಲ ಅಥವಾ ಜನರಿಗೆ ಉಚ್ಚರಿಸಲಾಗದೆಂದು ಹೇಳಲಾಗದು.

ಸ್ವರಗಳಲ್ಲಿ ನಾಲ್ಕು ವಿಧ

  • ಹೃಸ್ವಸ್ವರ/ಗಿಡ್ಡಸ್ವರ : ಒಂದು ಮಾತ್ರೆಯ ಕಾಲಾವಧಿಯಲ್ಲಿ ಉಚ್ಛರಿಸುವ ಅಕ್ಷರ. ಹೃಸ್ವ ಅಂದರೆ ಚಿಕ್ಕದು. ಒಂದು ಹ್ರಸ್ವ ಸ್ವರವನ್ನು ಉಳಿಯಲು (ಉಚ್ಚಾರ ಮಾಡಲು) ಬರಿ ಒಂದು ಮಾತ್ರೆಯಷ್ಟು( ಒಂದು ಸರತಿ ಕಣ್ಣು ಮಿಟುಕುವಷ್ಟು/ಎವೆಯಿಕ್ಕುವಷ್ಟು ) ಹೊತ್ತು ಬೇಕಾಗುವುದು. ಹೃಸ್ವ ಸ್ವರಗಳು : ಅ ಇ ಉ ಋ ಎ ಒ
  • ದೀರ್ಘಸ್ವರ/ಉದ್ದಸ್ವರ. : ಎರಡು ಮಾತ್ರೆಯ ಕಾಲಾವಧಿಯಲ್ಲಿ ಉಚ್ಛರಿಸುವ ಅಕ್ಷರ. ದೀರ್ಘ ಅಂದರೆ ಉದ್ದದ್ದು ಎಂದು. ಒಂದು ದೀರ್ಘ ಸ್ವರವನ್ನು ಉಲಿಯಲು ಎರಡು ಮಾತ್ರೆಯಷ್ಟು(ಎರಡು ಸರತಿ ಕಣ್ಣು ಮಿಟುಕುವಷ್ಟು/ಎವೆಯಿಕ್ಕುವಷ್ಟು) ಹೊತ್ತು ಬೇಕಾಗುವುದು. ದೀರ್ಘ ಸ್ವರಗಳು: ಆ ಈ ಊ ಏ ಐ ಓ ಔ
  • ಪ್ಲುತ ಸ್ವರ : ಮೂರು ಇಲ್ಲವೆ, ಅದಕ್ಕಿಂತ ಹೆಚ್ಚು ಮಾತ್ರೆಗಳ ಹೊತ್ತು ಉಳಿಯುವ ಸ್ವರ.
  • ಸಂಧ್ಯಕ್ಷರ : ಎರಡು ಸ್ವರಗಳಿಂದ ಉಂಟಾಗುವ ಅಕ್ಷರಗಳು. ಐ, ಔ, ಏ, ಓ

ಯೋಗವಾಹಗಳು

ಸ್ವತಂತ್ರವಾಗಿ ಪ್ರಯೋಗಿಸಲಾಗದೆ, ಯಾವುದಾದರು ಸ್ವರದೊಂದಿಗೆ ಮಾತ್ರ ಪ್ರಯೋಗ ಮಾಡಬಹುದಾದ ಅಕ್ಷರಗಳು. ಕನ್ನಡ ವರ್ಣಮಾಲೆಯಲ್ಲಿ ನಾಲ್ಕು ಯೋಗವಾಹಗಳಿದ್ದರೂ ಎರಡು ಯೋಗವಾಹಗಳು ಮಾತ್ರ ಬಳಕೆಯಲ್ಲಿವೆ.

  1. ಅನುಸ್ವಾರ/ಬಿಂದು (ಅಂ) ಮತ್ತು
  2. ವಿಸರ್ಗ (ಅಃ)
  3. ಉಪಾಧ್ಮಾನೀಯ ‍: ೲ
  4. ಜಿಹ್ಹಾಮೂಲೀಯ : ೱ

ಉದಾಹರಣೆಗೆ: ವಿವಿಧ ಸ್ವರಗಳೊಡನೆ ಅನುಸ್ವಾರ: ಅಂಜೂರ, ಆಂಧ್ರ, ಇಂಚರ, ಉಂಗುರ, ಎಂಬತ್ತು, ಒಂಟೆ, ಓಂಕಾರ
ಕನ್ನಡದಲ್ಲಿ ಪದದ ನಡುವಿನಲ್ಲಿ ಬರುವ ಅನುನಾಸಿಕ ವ್ಯಂಜನಗಳ ಅರ್ಧಾಕ್ಷರ (ನ್, ಮ್ ಮುಂತಾದವು) ಬದಲು ಅನುಸ್ವರವನ್ನು ಬಳಸುವುದುಂಟು.
ಉದಾ:

  • ಅಙ್ಕ = ಅಂಕ ( ಇದನ್ನು ಅಮ್ಕ ಎಂದು ಉಲಿಯಬಾರದು )
  • ಅಞ್ಚೆ = ಅಂಚೆ
  • ತಙ್ಗಿ = ತಂಗಿ
  • ಗಣ್ಟೆ = ಗಂಟೆ
  • ಅನ್ದ = ಅಂದ
  • ಅಮ್ಬ = ಅಂಬ
  • ವಿವಿಧ ಸ್ವರಗಳೊಡನೆ ವಿಸರ್ಗ: ಅಂತಃಕರಣ, ದುಃಖ

ಕನ್ನಡ ಅಕ್ಷರಗಳ ಉಚ್ಚಾರಣೆ

More information: ಕನ್ನಡ, ದೇವನಾಗರಿ ...
ಕನ್ನಡದೇವನಾಗರಿISO 15919 ಸಂಕೇತಉಚ್ಚಾರಣೆ
a
ā
i
ī
u
ū
ru
e
एॅē
ai
o
ō
au
ಅಂअंaom
ಅಃअःahā
ka
kha
ga
gha
nga
cha
chha
ja
jha
ña
ṭa
ṭa
ḍa
ḍha
ṇa
ta
tha
da
dha
na
pa
pha
ba
bha
ma
ya
ra
la
va
śa
ṣa
sa
ha
ḷa
Close

ಕನ್ನಡ ಅಕ್ಷರಗಳನ್ನು ಬರೆಯುವ ವಿಧಾನ

More information: ಅಕ್ಷರ, ಅಕ್ಷರ ಚಿತ್ರಸಂಚಲನೆ Animation ...
ಅಕ್ಷರಅಕ್ಷರ ಚಿತ್ರಸಂಚಲನೆ Animation
ಅಂ
ಅಃ




Close

ವ್ಯಂಜನಗಳು

ವ್ಯಂಜನಗಳಲ್ಲಿ ಎರಡು ವಿಧ. ವರ್ಗೀಯ ವ್ಯಂಜನ ಮತ್ತು ಅವರ್ಗೀಯ ವ್ಯಂಜನ. 'ಕ' ಅಕ್ಷರದಿಂದ 'ಮ' ಅಕ್ಷರದವರೆಗೆ ವರ್ಗೀಯ ವ್ಯಂಜನಗಳು. ಇದರಲ್ಲಿ ಐದು ವರ್ಗಗಳು. ಕ ವರ್ಗ, ಚ ವರ್ಗ, ಟ ವರ್ಗ, ತ ವರ್ಗ ಮತ್ತು ಪ ವರ್ಗ. 'ಯ' ಅಕ್ಷರದಿಂದ 'ಳ' ಅಕ್ಷರದವರೆಗೆ ಅವರ್ಗೀಯ ವ್ಯಂಜನಗಳು. ಪ್ರತಿ ವ್ಯಂಜನಕ್ಕೆ ಎರಡು ಸ್ವರಗಳಿವೆ:

  1. ಅಲ್ಪಪ್ರಾಣ: ಕ (ಕ್+ಅ)
  2. ಮಹಾಪ್ರಾಣ: ಕಾ (ಕ್+ಆ')

ಸಾಮಾನ್ಯ ವರ್ಣಮಾಲೆಯಲ್ಲಿ (ಅಕ್ಷರಮಾಲೆಯಲ್ಲಿ) ದೀರ್ಘ ಸ್ವರವು ಉಪಯೋಗವಾಗುತ್ತದೆ.

ಕನ್ನಡದ ಗುಣಿತಾಕ್ಷರಗಳು

More information: ಅ, ಆ ...
ಅಂಅಃ
ಕಾಕಿಕೀಕುಕೂಕೃಕೆಕೇಕೈಕೊಕೋಕೌಕಂಕಃಕ್
ಖಾಖಿಖೀಖುಖೂಖೃಖೆಖೇಖೈಖೊಖೋಖೌಖಂಖಃಖ್
ಗಾಗಿಗೀಗುಗೂಗೃಗೆಗೇಗೈಗೊಗೋಗೌಗಂಗಃಗ್
ಘಾಘಿಘೀಘುಘೂಘೃಘೆಘೇಘೈಘೊಘೋಘೌಘಂಘಃಘ್
ಙಾಙಿಙೀಙುಙೂಙೃಙೆಙೇಙೈಙೊಙೋಙೌಙಂಙಃಙ್
ಚಾಚಿಚೀಚುಚೂಚೃಚೆಚೇಚೈಚೊಚೋಚೌಚಂಚಃಚ್
ಛಾಛಿಛೀಛುಛೂಛೃಛೆಛೇಛೈಛೊಛೋಛೌಛಂಛಃಛ್
ಜಾಜಿಜೀಜುಜೂಜೃಜೆಜೇಜೈಜೊಜೋಜೌಜಂಜಃಜ್
ಝಾಝಿಝೀಝುಝೂಝೃಝೆಝೇಝೈಝೊಝೋಝೌಝಂಝಃಝ್
ಞಾಞಿಞೀಞುಞೂಞೃಞೆಞೇಞೈಞೊಞೋಞೌಞಂಞಃಞ್
ಟಾಟಿಟೀಟುಟೂಟೃಟೆಟೇಟೈಟೊಟೋಟೌಟಂಟಃಟ್
ಠಾಠಿಠೀಠುಠೂಠೃಠೆಠೇಠೈಠೊಠೋಠೌಠಂಠಃಠ್
ಡಾಡಿಡೀಡುಡೂಡೃಡೆಡೇಡೈಡೊಡೋಡೌಡಂಡಃಡ್
ಢಾಢಿಢೀಢುಢೂಢೃಢೆಢೇಢೈಢೊಢೋಢೌಢಂಢಃಢ್
ಣಾಣಿಣೀಣುಣೂಣೃಣೆಣೇಣೈಣೊಣೋಣೌಣಂಣಃಣ್
ತಾತಿತೀತುತೂತೃತೆತೇತೈತೊತೋತೌತಂತಃತ್
ಥಾಥಿಥೀಥುಥೂಥೃಥೆಥೇಥೈಥೊಥೋಥೌಥಂಥಃಥ್
ದಾದಿದೀದುದೂದೃದೆದೇದೈದೊದೋದೌದಂದಃದ್
ಧಾಧಿಧೀಧುಧೂಧೃಧೆಧೇಧೈಧೊಧೋಧೌಧಂಧಃಧ್
ನಾನಿನೀನುನೂನೃನೆನೇನೈನೊನೋನೌನಂನಃನ್
ಪಾಪಿಪೀಪುಪೂಪೃಪೆಪೇಪೈಪೊಪೋಪೌಪಂಪಃಪ್
ಫಾಫಿಫೀಫುಫೂಫೃಫೆಫೇಫೈಫೊಫೋಫೌಫಂಫಃಫ್
ಬಾಬಿಬೀಬುಬೂಬೃಬೆಬೇಬೈಬೊಬೋಬೌಬಂಬಃಬ್
ಭಾಭಿಭೀಭುಭೂಭೃಭೆಭೇಭೈಭೊಭೋಭೌಭಂಭಃಭ್
ಮಾಮಿಮೀಮುಮೂಮೃಮೆಮೇಮೈಮೊಮೋಮೌಮಂಮಃಮ್
ಯಾಯಿಯೀಯುಯೂಯೃಯೆಯೇಯೈಯೊಯೋಯೌಯಂಯಃಯ್
ರಾರಿರೀರುರೂರೃರೆರೇರೈರೊರೋರೌರಂರಃ
ಲಾಲಿಲೀಲುಲೂಲೃಲೆಲೇಲೈಲೊಲೋಲೌಲಂಲಃಲ್
ವಾವಿವೀವುವೂವೃವೆವೇವೈವೊವೋವೌವಂವಃವ್
ಶಾಶಿಶೀಶುಶೂಶೃಶೆಶೇಶೈಶೊಶೋಶೌಶಂಶಃಶ್
ಷಾಷಿಷೀಷುಷೂಷೃಷೆಷೇಷೈಷೊಷೋಷೌಷಂಷಃಷ್
ಸಾಸಿಸೀಸುಸೂಸೃಸೆಸೇಸೈಸೊಸೋಸೌಸಂಸಃಸ್
ಹಾಹಿಹೀಹುಹೂಹೃಹೆಹೇಹೈಹೊಹೋಹೌಹಂಹಃ
ಳಾಳಿಳೀಳುಳೂಳೃಳೆಳೇಳೈಳೊಳೋಳೌಳಂಳಃಳ್
Close

ಗುಣಿತಾಕ್ಷರ ಮತ್ತು ಒತ್ತಕ್ಷರ

ಕನ್ನಡದಲ್ಲಿ ಪ್ರತಿಯೊಂದು ವ್ಯಂಜನಗಳಿಗೂ ಪ್ರತ್ಯೇಕ ಒತ್ತಕ್ಷರಗಳಿವೆ. ಅವುಗಳು ಹೀಗಿವೆ;

More information: ಕ, ಖ ...
ಕ್ಕಕ್ಖಕ್ಗಕ್ಘಕ್ಙಕ್ಚಕ್ಛಕ್ಜಕ್ಝಕ್ಞಕ್ಟಕ್ಠಕ್ಡಕ್ಢಕ್ಣಕ್ತಕ್ಥಕ್ದಕ್ಧಕ್ನಕ್ಪಕ್ಫಕ್ಬಕ್ಭಕ್ಮಕ್ಯಕ್ರಕ್ಱಕ್ಲಕ್ವಕ್ಶಕ್ಷಕ್ಸಕ್ಹಕ್ಳಕ್ೞ
ಖ್ಕಖ್ಖಖ್ಗಖ್ಘಖ್ಙಖ್ಚಖ್ಛಖ್ಜಖ್ಝಖ್ಞಖ್ಟಖ್ಠಖ್ಡಖ್ಢಖ್ಣಖ್ತಖ್ಥಖ್ದಖ್ಧಖ್ನಖ್ಪಖ್ಫಖ್ಬಖ್ಭಖ್ಮಖ್ಯಖ್ರಖ್ಱಖ್ಲಖ್ವಖ್ಶಖ್ಷಖ್ಸಖ್ಹಖ್ಳಖ್ೞ
ಗ್ಕಗ್ಖಗ್ಗಗ್ಘಗ್ಙಗ್ಚಗ್ಛಗ್ಜಗ್ಝಗ್ಞಗ್ಟಗ್ಠಗ್ಡಗ್ಢಗ್ಣಗ್ತಗ್ಥಗ್ದಗ್ಧಗ್ನಗ್ಪಗ್ಫಗ್ಬಗ್ಭಗ್ಮಗ್ಯಗ್ರಗ್ಱಗ್ಲಗ್ವಗ್ಶಗ್ಷಗ್ಸಗ್ಹಗ್ಳಗ್ೞ
ಘ್ಕಘ್ಖಘ್ಗಘ್ಘಘ್ಙಘ್ಚಘ್ಛಘ್ಜಘ್ಝಘ್ಞಘ್ಟಘ್ಠಘ್ಡಘ್ಢಘ್ಣಘ್ತಘ್ಥಘ್ದಘ್ಧಘ್ನಘ್ಪಘ್ಫಘ್ಬಘ್ಭಘ್ಮಘ್ಯಘ್ರಘ್ಱಘ್ಲಘ್ವಘ್ಶಘ್ಷಘ್ಸಘ್ಹಘ್ಳಘ್ೞ
ಙ್ಕಙ್ಖಙ್ಗಙ್ಘಙ್ಙಙ್ಚಙ್ಛಙ್ಜಙ್ಝಙ್ಞಙ್ಟಙ್ಠಙ್ಡಙ್ಢಙ್ಣಙ್ತಙ್ಥಙ್ದಙ್ಧಙ್ನಙ್ಪಙ್ಫಙ್ಬಙ್ಭಙ್ಮಙ್ಯಙ್ರಙ್ಱಙ್ಲಙ್ವಙ್ಶಙ್ಷಙ್ಸಙ್ಹಙ್ಳಙ್ೞ
ಚ್ಕಚ್ಖಚ್ಗಚ್ಘಚ್ಙಚ್ಚಚ್ಛಚ್ಜಚ್ಝಚ್ಞಚ್ಟಚ್ಠಚ್ಡಚ್ಢಚ್ಣಚ್ತಚ್ಥಚ್ದಚ್ಧಚ್ನಚ್ಪಚ್ಫಚ್ಬಚ್ಭಚ್ಮಚ್ಯಚ್ರಚ್ಱಚ್ಲಚ್ವಚ್ಶಚ್ಷಚ್ಸಚ್ಹಚ್ಳಚ್ೞ
ಛ್ಕಛ್ಖಛ್ಗಛ್ಘಛ್ಙಛ್ಚಛ್ಛಛ್ಜಛ್ಝಛ್ಞಛ್ಟಛ್ಠಛ್ಡಛ್ಢಛ್ಣಛ್ತಛ್ಥಛ್ದಛ್ಧಛ್ನಛ್ಪಛ್ಫಛ್ಬಛ್ಭಛ್ಮಛ್ಯಛ್ರಛ್ಱಛ್ಲಛ್ವಛ್ಶಛ್ಷಛ್ಸಛ್ಹಛ್ಳಛ್ೞ
ಜ್ಕಜ್ಖಜ್ಗಜ್ಘಜ್ಙಜ್ಚಜ್ಛಜ್ಜಜ್ಝಜ್ಞಜ್ಟಜ್ಠಜ್ಡಜ್ಢಜ್ಣಜ್ತಜ್ಥಜ್ದಜ್ಧಜ್ನಜ್ಪಜ್ಫಜ್ಬಜ್ಭಜ್ಮಜ್ಯಜ್ರಜ್ಱಜ್ಲಜ್ವಜ್ಶಜ್ಷಜ್ಸಜ್ಹಜ್ಳಜ್ೞ
ಝ್ಕಝ್ಖಝ್ಗಝ್ಘಝ್ಙಝ್ಚಝ್ಛಝ್ಜಝ್ಝಝ್ಞಝ್ಟಝ್ಠಝ್ಡಝ್ಢಝ್ಣಝ್ತಝ್ಥಝ್ದಝ್ಧಝ್ನಝ್ಪಝ್ಫಝ್ಬಝ್ಭಝ್ಮಝ್ಯಝ್ರಝ್ಱಝ್ಲಝ್ವಝ್ಶಝ್ಷಝ್ಸಝ್ಹಝ್ಳಝ್ೞ
ಞ್ಕಞ್ಖಞ್ಗಞ್ಘಞ್ಙಞ್ಚಞ್ಛಞ್ಜಞ್ಝಞ್ಞಞ್ಟಞ್ಠಞ್ಡಞ್ಢಞ್ಣಞ್ತಞ್ಥಞ್ದಞ್ಧಞ್ನಞ್ಪಞ್ಫಞ್ಬಞ್ಭಞ್ಮಞ್ಯಞ್ರಞ್ಱಞ್ಲಞ್ವಞ್ಶಞ್ಷಞ್ಸಞ್ಹಞ್ಳಞ್ೞ
ಟ್ಕಟ್ಖಟ್ಗಟ್ಘಟ್ಙಟ್ಚಟ್ಛಟ್ಜಟ್ಝಟ್ಞಟ್ಟಟ್ಠಟ್ಡಟ್ಢಟ್ಣಟ್ತಟ್ಥಟ್ದಟ್ಧಟ್ನಟ್ಪಟ್ಫಟ್ಬಟ್ಭಟ್ಮಟ್ಯಟ್ರಟ್ಱಟ್ಲಟ್ವಟ್ಶಟ್ಷಟ್ಸಟ್ಹಟ್ಳಟ್ೞ
ಠ್ಕಠ್ಖಠ್ಗಠ್ಘಠ್ಙಠ್ಚಠ್ಛಠ್ಜಠ್ಝಠ್ಞಠ್ಟಠ್ಠಠ್ಡಠ್ಢಠ್ಣಠ್ತಠ್ಥಠ್ದಠ್ಧಠ್ನಠ್ಪಠ್ಫಠ್ಬಠ್ಭಠ್ಮಠ್ಯಠ್ರಠ್ಱಠ್ಲಠ್ವಠ್ಶಠ್ಷಠ್ಸಠ್ಹಠ್ಳಠ್ೞ
ಡ್ಕಡ್ಖಡ್ಗಡ್ಘಡ್ಙಡ್ಚಡ್ಛಡ್ಜಡ್ಝಡ್ಞಡ್ಟಡ್ಠಡ್ಡಡ್ಢಡ್ಣಡ್ತಡ್ಥಡ್ದಡ್ಧಡ್ನಡ್ಪಡ್ಫಡ್ಬಡ್ಭಡ್ಮಡ್ಯಡ್ರಡ್ಱಡ್ಲಡ್ವಡ್ಶಡ್ಷಡ್ಸಡ್ಹಡ್ಳಡ್ೞ
ಢ್ಕಢ್ಖಢ್ಗಢ್ಘಢ್ಙಢ್ಚಢ್ಛಢ್ಜಢ್ಝಢ್ಞಢ್ಟಢ್ಠಢ್ಡಢ್ಢಢ್ಣಢ್ತಢ್ಥಢ್ದಢ್ಧಢ್ನಢ್ಪಢ್ಫಢ್ಬಢ್ಭಢ್ಮಢ್ಯಢ್ರಢ್ಱಢ್ಲಢ್ವಢ್ಶಢ್ಷಢ್ಸಢ್ಹಢ್ಳಢ್ೞ
ಣ್ಕಣ್ಖಣ್ಗಣ್ಘಣ್ಙಣ್ಚಣ್ಛಣ್ಜಣ್ಝಣ್ಞಣ್ಟಣ್ಠಣ್ಡಣ್ಢಣ್ಣಣ್ತಣ್ಥಣ್ದಣ್ಧಣ್ನಣ್ಪಣ್ಫಣ್ಬಣ್ಭಣ್ಮಣ್ಯಣ್ರಣ್ಱಣ್ಲಣ್ವಣ್ಶಣ್ಷಣ್ಸಣ್ಹಣ್ಳಣ್ೞ
ತ್ಕತ್ಖತ್ಗತ್ಘತ್ಙತ್ಚತ್ಛತ್ಜತ್ಝತ್ಞತ್ಟತ್ಠತ್ಡತ್ಢತ್ಣತ್ತತ್ಥತ್ದತ್ಧತ್ನತ್ಪತ್ಫತ್ಬತ್ಭತ್ಮತ್ಯತ್ರತ್ಱತ್ಲತ್ವತ್ಶತ್ಷತ್ಸತ್ಹತ್ಳತ್ೞ
ಥ್ಕಥ್ಖಥ್ಗಥ್ಘಥ್ಙಥ್ಚಥ್ಛಥ್ಜಥ್ಝಥ್ಞಥ್ಟಥ್ಠಥ್ಡಥ್ಢಥ್ಣಥ್ತಥ್ಥಥ್ದಥ್ಧಥ್ನಥ್ಪಥ್ಫಥ್ಬಥ್ಭಥ್ಮಥ್ಯಥ್ರಥ್ಱಥ್ಲಥ್ವಥ್ಶಥ್ಷಥ್ಸಥ್ಹಥ್ಳಥ್ೞ
ದ್ಕದ್ಖದ್ಗದ್ಘದ್ಙದ್ಚದ್ಛದ್ಜದ್ಝದ್ಞದ್ಟದ್ಠದ್ಡದ್ಢದ್ಣದ್ತದ್ಥದ್ದದ್ಧದ್ನದ್ಪದ್ಫದ್ಬದ್ಭದ್ಮದ್ಯದ್ರದ್ಱದ್ಲದ್ವದ್ಶದ್ಷದ್ಸದ್ಹದ್ಳದ್ೞ
ಧ್ಕಧ್ಖಧ್ಗಧ್ಘಧ್ಙಧ್ಚಧ್ಛಧ್ಜಧ್ಝಧ್ಞಧ್ಟಧ್ಠಧ್ಡಧ್ಢಧ್ಣಧ್ತಧ್ಥಧ್ದಧ್ಧಧ್ನಧ್ಪಧ್ಫಧ್ಬಧ್ಭಧ್ಮಧ್ಯಧ್ರಧ್ಱಧ್ಲಧ್ವಧ್ಶಧ್ಷಧ್ಸಧ್ಹಧ್ಳಧ್ೞ
ನ್ಕನ್ಖನ್ಗನ್ಘನ್ಙನ್ಚನ್ಛನ್ಜನ್ಝನ್ಞನ್ಟನ್ಠನ್ಡನ್ಢನ್ಣನ್ತನ್ಥನ್ದನ್ಧನ್ನನ್ಪನ್ಫನ್ಬನ್ಭನ್ಮನ್ಯನ್ರನ್ಱನ್ಲನ್ವನ್ಶನ್ಷನ್ಸನ್ಹನ್ಳನ್ೞ
ಪ್ಕಪ್ಖಪ್ಗಪ್ಘಪ್ಙಪ್ಚಪ್ಛಪ್ಜಪ್ಝಪ್ಞಪ್ಟಪ್ಠಪ್ಡಪ್ಢಪ್ಣಪ್ತಪ್ಥಪ್ದಪ್ಧಪ್ನಪ್ಪಪ್ಫಪ್ಬಪ್ಭಪ್ಮಪ್ಯಪ್ರಪ್ಱಪ್ಲಪ್ವಪ್ಶಪ್ಷಪ್ಸಪ್ಹಪ್ಳಪ್ೞ
ಫ್ಕಫ್ಖಫ್ಗಫ್ಘಫ್ಙಫ್ಚಫ್ಛಫ್ಜಫ್ಝಫ್ಞಫ್ಟಫ್ಠಫ್ಡಫ್ಢಫ್ಣಫ್ತಫ್ಥಫ್ದಫ್ಧಫ್ನಫ್ಪಫ್ಫಫ್ಬಫ್ಭಫ್ಮಫ್ಯಫ್ರಫ್ಱಫ್ಲಫ್ವಫ್ಶಫ್ಷಫ್ಸಫ್ಹಫ್ಳಫ್ೞ
ಬ್ಕಬ್ಖಬ್ಗಬ್ಘಬ್ಙಬ್ಚಬ್ಛಬ್ಜಬ್ಝಬ್ಞಬ್ಟಬ್ಠಬ್ಡಬ್ಢಬ್ಣಬ್ತಬ್ಥಬ್ದಬ್ಧಬ್ನಬ್ಪಬ್ಫಬ್ಬಬ್ಭಬ್ಮಬ್ಯಬ್ರಬ್ಱಬ್ಲಬ್ವಬ್ಶಬ್ಷಬ್ಸಬ್ಹಬ್ಳಬ್ೞ
ಭ್ಕಭ್ಖಭ್ಗಭ್ಘಭ್ಙಭ್ಚಭ್ಛಭ್ಜಭ್ಝಭ್ಞಭ್ಟಭ್ಠಭ್ಡಭ್ಢಭ್ಣಭ್ತಭ್ಥಭ್ದಭ್ಧಭ್ನಭ್ಪಭ್ಫಭ್ಬಭ್ಭಭ್ಮಭ್ಯಭ್ರಭ್ಱಭ್ಲಭ್ವಭ್ಶಭ್ಷಭ್ಸಭ್ಹಭ್ಳಭ್ೞ
ಮ್ಕಮ್ಖಮ್ಗಮ್ಘಮ್ಙಮ್ಚಮ್ಛಮ್ಜಮ್ಝಮ್ಞಮ್ಟಮ್ಠಮ್ಡಮ್ಢಮ್ಣಮ್ತಮ್ಥಮ್ದಮ್ಧಮ್ನಮ್ಪಮ್ಫಮ್ಬಮ್ಭಮ್ಮಮ್ಯಮ್ರಮ್ಱಮ್ಲಮ್ವಮ್ಶಮ್ಷಮ್ಸಮ್ಹಮ್ಳಮ್ೞ
ಯ್ಕಯ್ಖಯ್ಗಯ್ಘಯ್ಙಯ್ಚಯ್ಛಯ್ಜಯ್ಝಯ್ಞಯ್ಟಯ್ಠಯ್ಡಯ್ಢಯ್ಣಯ್ತಯ್ಥಯ್ದಯ್ಧಯ್ನಯ್ಪಯ್ಫಯ್ಬಯ್ಭಯ್ಮಯ್ಯಯ್ರಯ್ಱಯ್ಲಯ್ವಯ್ಶಯ್ಷಯ್ಸಯ್ಹಯ್ಳಯ್ೞ
ರ್‍ಕರ್‍ಖರ್‍ಗರ್‍ಘರ್‍ಙರ್‍ಚರ್‍ಛರ್‍ಜರ್‍ಝರ್‍ಞರ್‍ಟರ್‍ಠರ್‍ಡರ್‍ಢರ್‍ಣರ್‍ತರ್‍ಥರ್‍ದರ್‍ಧರ್‍ನರ್‍ಪರ್‍ಫರ್‍ಬರ್‍ಭರ್‍ಮರ್‍ಯರ್‍ರರ್‍ಱರ್‍ಲರ್‍ವರ್‍ಶರ್‍ಷರ್‍ಸರ್‍ಹರ್‍ಳರ್‍ೞ
ಱ್ಕಱ್ಖಱ್ಗಱ್ಘಱ್ಙಱ್ಚಱ್ಛಱ್ಜಱ್ಝಱ್ಞಱ್ಟಱ್ಠಱ್ಡಱ್ಢಱ್ಣಱ್ತಱ್ಥಱ್ದಱ್ಧಱ್ನಱ್ಪಱ್ಫಱ್ಬಱ್ಭಱ್ಮಱ್ಯಱ್ರಱ್ಱಱ್ಲಱ್ವಱ್ಶಱ್ಷಱ್ಸಱ್ಹಱ್ಳಱ್ೞ
ಲ್ಕಲ್ಖಲ್ಗಲ್ಘಲ್ಙಲ್ಚಲ್ಛಲ್ಜಲ್ಝಲ್ಞಲ್ಟಲ್ಠಲ್ಡಲ್ಢಲ್ಣಲ್ತಲ್ಥಲ್ದಲ್ಧಲ್ನಲ್ಪಲ್ಫಲ್ಬಲ್ಭಲ್ಮಲ್ಯಲ್ರಲ್ಱಲ್ಲಲ್ವಲ್ಶಲ್ಷಲ್ಸಲ್ಹಲ್ಳಲ್ೞ
ವ್ಕವ್ಖವ್ಗವ್ಘವ್ಙವ್ಚವ್ಛವ್ಜವ್ಝವ್ಞವ್ಟವ್ಠವ್ಡವ್ಢವ್ಣವ್ತವ್ಥವ್ದವ್ಧವ್ನವ್ಪವ್ಫವ್ಬವ್ಭವ್ಮವ್ಯವ್ರವ್ಱವ್ಲವ್ವವ್ಶವ್ಷವ್ಸವ್ಹವ್ಳವ್ೞ
ಶ್ಕಶ್ಖಶ್ಗಶ್ಘಶ್ಙಶ್ಚಶ್ಛಶ್ಜಶ್ಝಶ್ಞಶ್ಟಶ್ಠಶ್ಡಶ್ಢಶ್ಣಶ್ತಶ್ಥಶ್ದಶ್ಧಶ್ನಶ್ಪಶ್ಫಶ್ಬಶ್ಭಶ್ಮಶ್ಯಶ್ರಶ್ಱಶ್ಲಶ್ವಶ್ಶಶ್ಷಶ್ಸಶ್ಹಶ್ಳಶ್ೞ
ಷ್ಕಷ್ಖಷ್ಗಷ್ಘಷ್ಙಷ್ಚಷ್ಛಷ್ಜಷ್ಝಷ್ಞಷ್ಟಷ್ಠಷ್ಡಷ್ಢಷ್ಣಷ್ತಷ್ಥಷ್ದಷ್ಧಷ್ನಷ್ಪಷ್ಫಷ್ಬಷ್ಭಷ್ಮಷ್ಯಷ್ರಷ್ಱಷ್ಲಷ್ವಷ್ಶಷ್ಷಷ್ಸಷ್ಹಷ್ಳಷ್ೞ
ಸ್ಕಸ್ಖಸ್ಗಸ್ಘಸ್ಙಸ್ಚಸ್ಛಸ್ಜಸ್ಝಸ್ಞಸ್ಟಸ್ಠಸ್ಡಸ್ಢಸ್ಣಸ್ತಸ್ಥಸ್ದಸ್ಧಸ್ನಸ್ಪಸ್ಫಸ್ಬಸ್ಭಸ್ಮಸ್ಯಸ್ರಸ್ಱಸ್ಲಸ್ವಸ್ಶಸ್ಷಸ್ಸಸ್ಹಸ್ಳಸ್ೞ
ಹ್ಕಹ್ಖಹ್ಗಹ್ಘಹ್ಙಹ್ಚಹ್ಛಹ್ಜಹ್ಝಹ್ಞಹ್ಟಹ್ಠಹ್ಡಹ್ಢಹ್ಣಹ್ತಹ್ಥಹ್ದಹ್ಧಹ್ನಹ್ಪಹ್ಫಹ್ಬಹ್ಭಹ್ಮಹ್ಯಹ್ರಹ್ಱಹ್ಲಹ್ವಹ್ಶಹ್ಷಹ್ಸಹ್ಹಹ್ಳಹ್ೞ
ಳ್ಕಳ್ಖಳ್ಗಳ್ಘಳ್ಙಳ್ಚಳ್ಛಳ್ಜಳ್ಝಳ್ಞಳ್ಟಳ್ಠಳ್ಡಳ್ಢಳ್ಣಳ್ತಳ್ಥಳ್ದಳ್ಧಳ್ನಳ್ಪಳ್ಫಳ್ಬಳ್ಭಳ್ಮಳ್ಯಳ್ರಳ್ಱಳ್ಲಳ್ವಳ್ಶಳ್ಷಳ್ಸಳ್ಹಳ್ಳಳ್ೞ
ೞ್ಕೞ್ಖೞ್ಗೞ್ಘೞ್ಙೞ್ಚೞ್ಛೞ್ಜೞ್ಝೞ್ಞೞ್ಟೞ್ಠೞ್ಡೞ್ಢೞ್ಣೞ್ತೞ್ಥೞ್ದೞ್ಧೞ್ನೞ್ಪೞ್ಫೞ್ಬೞ್ಭೞ್ಮೞ್ಯೞ್ರೞ್ಱೞ್ಲೞ್ವೞ್ಶೞ್ಷೞ್ಸೞ್ಹೞ್ಳೞ್ೞ
Close

ಸ೦ಯುಕ್ತಾಕ್ಷರಗಳಲ್ಲಿ ಎರಡು ವಿಧಗಳಿವೆ.

ಅವರ್ಗೀಯ ವ್ಯಂಜನ ಎಂದರೇನು?ಅವು ಎಷ್ಟಿವೆ?

ಒಂದು ಗುಂಪು ಅಥವಾ ಒಂದು ವರ್ಗಕ್ಕೆ ಸೇರಿಸಲು ಬಾರದ ವರ್ಣಮಾಲೆಯ ಕೊನೆಯ ಒಂಬತ್ತು ಅಕ್ಷರಗಳನ್ನು ಅವರ್ಗೀಯ ವ್ಯಂಜನಗಳೆಂದು ಕರೆಯುತ್ತಾರೆ. ಅವು ಯಾವುವೆಂದರೆ-ಯ,ರ,ಲ,ವ,ಶ,ಷ,ಸ,ಹ,ಳ.

ಭಾರತ ಸಂವಿಧಾನ ಸಂಪೂರ್ಣ ಮಾಹಿತಿ

ಭಾರತದ ಸಂವಿಧಾನ

ಭಾರತ ದೇಶದ ಸಂವಿಧಾನ


ಭಾರತದ ಸಂವಿಧಾನವು ಭಾರತದ ಜನರನ್ನು ಆಳುವ ಸರಕಾರದ ಮೂಲ ರಚನೆಯನ್ನು ನಿರ್ದಿಷ್ಟಪಡಿಸುತ್ತದೆ. ಈ ಸಂವಿಧಾನವು ೯ ಡಿಸೆಂಬರ್ ೧೯೪೭ ರಿಂದ ೨೬ ನವೆಂಬರ್ ೧೯೪೯ರ ಮಧ್ಯ ಭಾರತದ ಸಂವಿಧಾನ ರಚನಾ ಸಭೆಯಿಂದ ರಚನೆಗೊಂಡು, ೨೬ ಜನವರಿ ೧೯೫೦ ರಂದು ಜಾರಿಗೆ ಬಂದಿತು. ಆದ್ದರಿಂದ ಭಾರತದಲ್ಲಿ ಪ್ರತಿವರ್ಷ ಜನವರಿ ೨೬ ರಂದು ಗಣರಾಜ್ಯೋತ್ಸವ ಆಚರಿಸಲಾಗುತ್ತದೆ. ಭಾರತದ ಸಂವಿಧಾನ ಇಲ್ಲಿಯವರೆಗಿನ ಮೂಲದ ಪ್ರಕಾರ ೩೬೫( ನಂತರ ೪೬೭) ವಿಧಿಗಳು ೨೨ (ನಂತರ ೨೫)ಭಾಗಗಳಲ್ಲಿಯೂ, ೮(ನಂತರ ೧೨) ಅನುಚ್ಛೇದಗಳನ್ನೂ, ೧೧೮ ತಿದ್ದುಪಡಿಗಳನ್ನೂ ಹೊಂದಿರುವ ಈ ಸಂವಿಧಾನ ಯಾವುದೇ ದೇಶದ ಲಿಖಿತ ಸಂವಿಧಾನಕ್ಕಿಂತ ದೀರ್ಘವಾದುದ್ದು. ಈ ಸಂವಿಧಾನದ ಆಂಗ್ಲ ಭಾಷೆಯ ಆವೃತ್ತಿಯು ೧,೧೭,೩೬೯ ಶಬ್ದಗಳನ್ನು ಹೊಂದಿದೆ.

Quick Facts: ಭಾರತದ ಸಂವಿಧಾನ, ಮೂಲ ಶೀರ್ಷಿಕೆ ...
ಭಾರತದ ಲಾಂಛನ
ಸಂವಿಧಾನ ಪ್ರಕ್ರಿಯೆಯ ವಿವರ
  • ಮೂಲ ಶೀರ್ಷಿಕೆ : भारतीय संविधान (IAST: ಭಾರತದ ಸಂವಿಧಾನ)
  • ಅಂಗೀಕರಿಸಿದ ದಿನ: 26 ನವೆಂಬರ್ 1949; 70 ವರ್ಷಗಳ ಹಿಂದೆ(2020)
  • ಜಾರಿಯಾದ ದಿನಾಂಕ : 26 ಜನವರಿ 1950; 69 ವರ್ಷಗಳ ಹಿಂದೆ(2020)
  • ವ್ಯವಸ್ಥೆ : ಸಾಂವಿಧಾನಿಕ ಸಂಸದೀಯ ಸಮಾಜವಾದಿ ಜಾತ್ಯತೀತ ಗಣರಾಜ್ಯ
  • ಶಾಖೆಗಳು : ಮೂರು (ಕಾರ್ಯನಿರ್ವಾಹಕ, ಶಾಸಕಾಂಗ ಮತ್ತು ನ್ಯಾಯಾಂಗ)
  • ಶಾಸಕಾಂಗ ಸಭೆ : ಎರಡು (ರಾಜ್ಯಸಭೆ ಮತ್ತು ಲೋಕಸಭೆ)
  • ಕಾರ್ಯನಿರ್ವಾಹಕ : ಪ್ರಧಾನಮಂತ್ರಿ ನೇತೃತ್ವದ ಕ್ಯಾಬಿನೆಟ್ ಸಂಸತ್ತಿನ ಕೆಳಮನೆಗೆ ಕಾರಣವಾಗಿದೆ:
  • ನ್ಯಾಯಾಂಗ : ಸುಪ್ರೀಂ ಕೋರ್ಟ್, ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯಗಳು
  • ಫೆಡರಲಿಸಂ : ಏಕೀಕೃತ ಕೇಂದ್ರ ಆಡಳಿತ (ಅರೆ-ಫೆಡರಲ್):
  • ಚುನಾವಣಾ ಕಾಲೇಜು : ಹೌದು, ಅಧ್ಯಕ್ಷೀಯ ಮತ್ತು ಉಪಾಧ್ಯಕ್ಷ ಚುನಾವಣೆಗಳಿಗೆ
  • ಭದ್ರ- ಕಾನೂನು ಷರತ್ತುಗಳು : 2
  • ತಿದ್ದುಪಡಿಗಳು : 104
  • ಸ್ಥಳ : ಪಾರ್ಲಿಮೆಂಟ್ ಹೌಸ್, ನವದೆಹಲಿ, ಭಾರತ
  • ಮೂಲ ಕರಡು ಲೇಖಕರು :ಬೆನೆಗಲ್ ನರ್ಸಿಂಗ್ ರಾವ್
  • ಸಂವಿಧಾನದ ಲೇಖಕರು:ಸಭೆಯ ಕರಡು ಸಮಿತಿ
  • ಸಂವಿಧಾನ ಸಭೆಯ ಸಾಂವಿಧಾನಿಕ ಸಲಹೆಗಾರ:ಘಟಕ ಸುರೇಂದ್ರ ನಾಥ್ ಮುಖರ್ಜಿ-& ಭಾರತದ ಸಂವಿಧಾನ ಸಭೆಯ ಮುಖ್ಯ ಕರಡುಗಾರರು
  • ಭಾರತದ ಸಂವಿಧಾನ ಸಭೆಯ ಕರಡು ಸಮಿತಿ ಅಧ್ಯಕ್ಷರು: ಬಿ.ಆರ್.ಅಂಬೇಡ್ಕರ್
  • ಭಾರತದ ಸಂವಿಧಾನ ಸಭೆಯ ಅಧ್ಯಕ್ಷರು:ಡಾ. ಬಾಬು ರಾಜೇಂದ್ರಪ್ರಸಾದ್
  • ಸಹಿ ಮಾಡಿದವರು ಸಂವಿಧಾನ ಸಭೆಯ: 284 ಸದಸ್ಯರು
  • ಸೂಪರ್‌ಸೀಡೆಡ್ (ರದ್ದು): ಭಾರತ ಸರ್ಕಾರ ಕಾಯ್ದೆ 1935
  • ಚಾಲನೆಯಲ್ಲಿ: ಭಾರತೀಯ ಸ್ವಾತಂತ್ರ್ಯ ಕಾಯ್ದೆ 1947
.

ಸಂವಿಧಾನದ ಮಹತ್ವ/ಪ್ರಾಮುಖ್ಯತೆ

  • ಸಂವಿಧಾನವು ದೇಶದ ಜನರನ್ನು ಆಳುವ ಸರಕಾರದ ಮೂಲ ರಚನೆಯನ್ನು ನಿರ್ದಿಷ್ಟಪಡಿಸುತ್ತದೆ. ಅದು ಕಾರ್ಯಾಂಗಶಾಸಕಾಂಗ ಮತ್ತು ನ್ಯಾಯಾಂಗಗಳನ್ನು ಸರಕಾರದ ಮೂರು ಮುಖ್ಯ ಅಂಗಗಳಾಗಿ ಏರ್ಪಡಿಸುತ್ತದೆ. ಸಂವಿಧಾನವು ಪ್ರತಿ ಅಂಗದ ಅಧಿಕಾರದ ವ್ಯಾಖ್ಯೆಯನ್ನು ನೀಡುವುದಲ್ಲದೆ ಅವುಗಳ ಜವಾಬ್ದಾರಿಯನ್ನೂ ಖಚಿತಗೊಳಿಸುತ್ತದೆ.
  • ವಿಭಿನ್ನ ಅಂಗಗಳ ನಡುವಿನ ಸಂಬಂಧವನ್ನೂ ಜನತೆ ಹಾಗೂ ಸರಕಾರದ ನಡುವಿನ ಸಂಬಂಧವನ್ನೂ ನಿಯಂತ್ರಿಸುತ್ತದೆ. ಸಂವಿಧಾನವು ದೇಶದ ಎಲ್ಲ ಕಾನೂನುಗಳಿಗಿಂತ ಹೆಚ್ಚಿನ ಸ್ಥಾನವನ್ನು ಹೊಂದಿದೆ. ಸರಕಾರವು ಮಾಡುವ ಪ್ರತಿಯೊಂದು ಕಾನೂನು ಸಂವಿಧಾನಕ್ಕೆ ಅನುಗುಣವಾಗಿರಬೇಕು. ಭಾರತದ ಸಂವಿಧಾನವು ದೇಶದ ಗುರಿಗಳು - ಪ್ರಜಾಪ್ರಭುತ್ವಸಮಾಜವಾದಜಾತ್ಯತೀತತೆ ಮತ್ತು ರಾಷ್ಟ್ರೀಯ ಸಮಗ್ರತೆ ಎಂದು ಸ್ಪಷ್ಟಪಡಿಸುತ್ತದೆ. * ಅದು ಪ್ರಜೆಗಳ ಹಕ್ಕುಗಳನ್ನು ಮತ್ತು ಕರ್ತವ್ಯಗಳನ್ನು ಖಚಿತವಾಗಿ ವಿಧಿಸುತ್ತದೆ. ಸಂವಿಧಾನವು ೩೭೦ನೇ ವಿಧಿ ಮತ್ತು ಸಂವಿಧಾನ ಆಜ್ಞೆ (ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯ ಕುರಿತು), ೧೯೫೪ ರಲ್ಲಿ ಒದಗಿಸಲಾದ ಕೆಲವು ಅಪವಾದಗಳು ಮತ್ತು ಬದಲಾವಣೆಗೊಳಪಟ್ಟಿದೆ.

ಇತಿಹಾಸ

ಸಂಪುಟ ಸಮಿತಿ


  • ಮೂವರು ಬ್ರಿಟೀಷ್ ಮಂತ್ರಿಗಳ ತಂಡವೊಂದು, ಭಾರತದ ಸ್ವಾತಂತ್ರ್ಯದ ಬಗ್ಗೆ, ಪರಿಹಾರ ಹುಡುಕಲು ಭಾರತಕ್ಕೆ ಬಂದಿತು. ಈ ತಂಡವನ್ನು 'ಸಂಪುಟ ಸಮಿತಿ' (Cabinet Mission) ಎಂದು ಕರೆಯಲಾಯಿತು.
  • ಸಂವಿಧಾನದ ರೂಪುರೇಷೆಗಳನ್ನು ಚರ್ಚಿಸಿದ ಈ ಸಮಿತಿಯು, ಕರಡು ಸಂವಿಧಾನ ರಚನಾ ಸಮಿತಿಯು ಅನುಸರಿಸಬೇಕಾದ ಕಾರ್ಯವಿಧಾನದ ಕೆಲವು ವಿವರಗಳನ್ನು ಸ್ಪಷ್ಟಪಡಿಸಿತು. ಬ್ರಿಟಿಷ್ ಭಾರತದ ಪ್ರಾಂತ್ಯಗಳ ೨೯೬ ಸ್ಥಾನಗಳಿಗೆ ಚುನಾವಣೆಗಳು ೧೯೪೬ರ ಜುಲೈ - ಅಗಸ್ಟ್ ಹೊತ್ತಿಗೆ ಮುಗಿದವು. ಆಗಸ್ಟ್ ೧೫೧೯೪೭ರಂದು ಭಾರತದ ಸ್ವಾತಂತ್ರ್ಯದೊಂದಿಗೆ ಸಂವಿಧಾನರಚನಾ ಸಮಿತಿಯು ಸಂಪೂರ್ಣವಾಗಿ ಸ್ವಾಯತ್ತ ಸಭೆಯಾಗಿ ಮಾರ್ಪಟ್ಟಿತು. ಈ ಸಮಿತಿಯು ಡಿಸೆಂಬರ್ ೯೧೯೪೬ರಂದು ತನ್ನ ಕೆಲಸವನ್ನು ಆರಂಭಿಸಿತು.

ಸಂವಿಧಾನ ರಚನಾಸಭೆ

  • ಭಾರತದ ಸಂವಿಧಾನ ರಚನಾ ಸಭೆ
  • ಭಾರತದ ಜನತೆ ಪ್ರಾಂತೀಯ ಸಭೆಗಳ ಸದಸ್ಯರನ್ನು ಆರಿಸಿ, ಆ ಸಭೆಗಳು ಸಂವಿಧಾನರಚನಾ ಸಭೆಯ ಸದಸ್ಯರನ್ನು ಆರಿಸಿದರು. ಸಂವಿಧಾನ ರಚನಾಸಭೆಯಲ್ಲಿ ಭಾರತದ ವಿವಿಧ ಪ್ರದೇಶಗಳಿಗೆ ಹಾಗೂ ಸಮುದಾಯಗಳಿಗೆ ಸೇರಿದ ಸದಸ್ಯರು ಇದ್ದರು. ಬೇರೆ ಬೇರೆ ರಾಜಕೀಯ ವಿಚಾರಧಾರೆಗಳನ್ನು ಪ್ರತಿನಿಧಿಸುವ ಸದಸ್ಯರೂ ಅಲ್ಲಿ ಇದ್ದರು.
  • ಜವಾಹರ್‍ಲಾಲ್ ನೆಹರೂರಾಜೇಂದ್ರ ಪ್ರಸಾದ್ಸರ್ದಾರ್ ಪಟೇಲ್ಮೌಲಾನಾ ಅಬುಲ್ ಕಲಂ ಆಝಾದ್ ಮತ್ತು ಶ್ಯಾಮ್ ಪ್ರಸಾದ್ ಮುಖರ್ಜಿ ಇವರುಗಳು ಸಭೆಯ ಚರ್ಚೆಗಳಲ್ಲಿ ಭಾಗವಹಿಸಿದ ಕೆಲವು ಪ್ರಮುಖ ವ್ಯಕ್ತಿಗಳಾಗಿದ್ದರು. ಪರಿಶಿಷ್ಟ ವರ್ಗಗಳಿಗೆ ಸೇರಿದ ಮೂವತ್ತಕ್ಕೂ ಹೆಚ್ಚು ಸದಸ್ಯರಿದ್ದರು.
  • ಆಂಗ್ಲೋ-ಇಂಡಿಯನ್ ಸಮುದಾಯವನ್ನು ಫ್ರಾಂಕ್ ಆಂಟನಿ ಅವರೂ ಪಾರ್ಸಿ ಜನರನ್ನು ಎಚ್.ಪಿ. ಮೋದಿ ಅವರೂ ಪ್ರತಿನಿಧಿಸಿದ್ದರು. ಆಂಗ್ಲೊ-ಇಂಡಿಯನ್ನರ ಹೊರತಾದ ಎಲ್ಲ ಕ್ರೈಸ್ತರನ್ನು ಪ್ರತಿನಿಧಿಸಿದ ಖ್ಯಾತ ಕ್ರೈಸ್ತರಾದ ಹರೇಂದ್ರ ಕುಮಾರ್ ಮುಖರ್ಜಿಯವರು ಅಲ್ಪಸಂಖ್ಯಾತರ ಸಮಿತಿಯ ಅಧ್ಯಕ್ಷರಾಗಿ ಇದ್ದರು.
  • ಸಂವಿಧಾನ ತಜ್ಞರಾದ ಅಲ್ಲಾಡಿ ಕೃಷ್ಣಸ್ವಾಮಿ, ಬಿ.ಆರ್.ಅಂಬೇಡ್ಕರ್ , ಬಿ.ಎನ್.ರಾವ್ ಮತ್ತು ಕೆ.ಎಂ. ಮುನ್ಶಿಯವರೂ ಸಭೆಯ ಸದಸ್ಯರಾಗಿದ್ದರು. ಸರೋಜಿನಿ ನಾಯ್ಡು ಮತ್ತು ವಿಜಯಲಕ್ಷ್ಮಿ ಪಂಡಿತ್ ಪ್ರಮುಖ ಮಹಿಳಾ ಸದಸ್ಯರಾಗಿದ್ದರು. ಡಾ. ಸಚ್ಚಿದಾನಂದ ಸಿನ್ಹಾರವರು ಸಂವಿಧಾನರಚನಾಸಭೆಯ ತಾತ್ಕಲಿಕ ಅಧ್ಯಕ್ಷರಾಗಿದ್ದರು.
  • ನಂತರ, ಡಾ.ರಾಜೇಂದ್ರ ಪ್ರಸಾದ್ ಅವರು ಅಧ್ಯಕ್ಷರಾಗಿಯೂ ಬಿ.ಆರ್.ಅಂಬೇಡ್ಕರ್ ಅವರು ಕರಡು ಸಮಿತಿ ಅಧ್ಯಕ್ಷರಾಗಿಯೂ ಆಯ್ಕೆಯಾದರು. ಸಂವಿಧಾನ ರಚನಾಸಭೆಯು ಎರಡು ವರ್ಷ ೧೧ ತಿಂಗಳು ೧೮ ದಿನಗಳ ಕಾಲದ ಅವಧಿಯಲ್ಲಿ ೧೬೬ ದಿನ ಸಮಾವೇಶಗೊಂಡಿತು. ಈ ಸಮಾವೇಶಗಳಿಗೆ ಸಾರ್ವಜನಿಕರಿಗೂ ಹಾಗು ಪತ್ರಕರ್ತರಿಗೂ ಪ್ರವೇಶವಿತ್ತು.

ಕರಡು ಸಮಿತಿ

ಬಿ.ಎನ್.ರಾವ್-1988 (stamp of India
ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಕ್ಷರು, (ಮಧ್ಯದಲ್ಲಿ ಕುಳಿತವರು) ಇತರ ಸದಸ್ಯರೊಂದಿಗೆ ಭಾರತೀಯ ಸಂವಿಧಾನದ ಕರಡು ಸಮಿತಿ. (ಎಡದಿಂದ ಕುಳಿತು) ಶ್ರೀ. ಎನ್. ಮಾಧವರಾವ್, ಸಯ್ಯದ್ ಸದುಲ್ಲಾ, ಡಾ. ಅಂಬೇಡ್ಕರ್ (ಅಧ್ಯಕ್ಷರು), ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಸರ್. ಬಿ.ಎನ್.ರಾವ್ ಬೆನೆಗಲ್ ನರಸಿಂಗ್ ರಾವ್; ಎಡದಿಂದ ನಿಂತಿರುವುದು - ಶ್ರೀ. S.N. ಮುಖರ್ಜಿ, ಜುಗಲ್ ಕಿಶೋರ್ ಖನ್ನಾ ಮತ್ತು ಕೇವಲ್ ಕೃಷ್ಣನ್. (ಆಗಸ್ಟ್ 29, 1947)
  • 1946 ರಲ್ಲಿ ಭಾರತೀಯ ಸಂವಿಧಾನವನ್ನು ರಚಿಸುವ ಸಂವಿಧಾನ ಸಭೆಗೆ ಸಂವಿಧಾನಾತ್ಮಕ ಸಲಹೆಗಾರರಾಗಿ ಬಿ.ಎನ್.ರಾವ್ ನೇಮಕಗೊಂಡರು. ಸಂವಿಧಾನದ ಅದರ ಪ್ರಜಾಪ್ರಭುತ್ವದ ಚೌಕಟ್ಟಿನ ಸಾಮಾನ್ಯ ರಚನೆಗೆ ಅವರು ಕಾರಣರಾಗಿದ್ದರು ಮತ್ತು 1948 ರ ಫೆಬ್ರುವರಿಯಲ್ಲಿ ಅದರ ಆರಂಭಿಕ ಕರಡು ಸಿದ್ಧತೆ ಮಾಡಿದರು.  1946 ರಲ್ಲಿ ಭಾರತದ ಸಂವಿಧಾನವನ್ನು ಕರಡನ್ನು ರಚಿಸುವಲ್ಲಿನ ತನ್ನ ಸಂಶೋಧನೆಯ ಭಾಗವಾಗಿ, ರಾವ್ ಅವರು, ಯು.ಎಸ್.ಎ., ಕೆನಡಾ, ಐರ್ಲೆಂಡ್ ಮತ್ತು ಯುನೈಟೆಡ್ ಕಿಂಗ್ಡಮ್ಗೆ ಪ್ರವಾಸ ಕೈಗೊಂಡರು. ಅಲ್ಲಿ ಅವರು ನ್ಯಾಯಾಧೀಶರು, ವಿದ್ವಾಂಸರು ಮತ್ತು ಅಧಿಕಾರಿಗಳೊಂದಿಗೆ ಸಂವಿಧಾನಾತ್ಮಕ ಕಾನೂನಿನ ಬಗ್ಗೆ ವೈಯಕ್ತಿಕ ಸಮಾಲೋಚನೆಗಳನ್ನು ನಡೆಸಿದ್ದರು.ಈ ಡ್ರಾಫ್ಟ್ ಅನ್ನು 26 ನವೆಂಬರ್ 1949 ರಂದು ಭಾರತದ ಸಂವಿಧಾನ ಸಭೆಯಿಂದ ಚರ್ಚಿಸಲಾಯಿತು, ಪರಿಷ್ಕರಿಸಲಾಯಿತು ಮತ್ತು ಅಂತಿಮವಾಗಿ ಅಳವಡಿಸಲಾಯಿತು. 
  • ನರಸಿಂಗ ರಾಯರು (ಬಿ.ಎನ್.ರಾವ್) ಸರಕಾರ ಕೇಳಿ ಕೊಂಡಂತೆ ಸಂವಿಧಾನದ ಕರಡು ಸಿದ್ಧ ಪಡಿಸಿದರು. ಇದರಲ್ಲಿ ಒಟ್ಟು 243 ವಿಧಿಗಳೂ 13 ಅನುಚ್ಛೇದಗಳೂ ಇದ್ದವು. ಇದನ್ನು ಮುಂದಿಟ್ಟು ಕೊಂಡು ಬಿ.ಆರ್.ಅಂಬೇಡ್ಕರ್ ಆದ್ಯಕ್ಷತೆಯಲ್ಲಿ ಸಂವಿಧಾನ ಕರಡು ರಚನಾ ಸಮಿತಿಯು ಸಂವಿಧಾನವನ್ನು ಬೆಳೆಸುವ, ತಿದ್ದುವ, ಪರಿಷ್ಕರಿಸುವ ಕೆಲಸವನ್ನು ಕೈಗೆತ್ತಿ ಕೊಂಡಿತು. ಬಿ.ಎನ್.ರಾವ್ ಬರೆದ ಮೂಲ ಸಂವಿಧಾನಕ್ಕೆ ನಂತರ ಹಲವು ವಿಧಿಗಳನ್ನು ಸೇರಿಸಲಾಯಿತು; ಕೆಲವನ್ನು ಪರಿಷ್ಕಾರ ಮಾಡಲಾಯಿತು. ಮೊದಲ ಕರಡು ಪ್ರತಿಯನ್ನು ಅದು ಸಂಸತ್ತಿಗೆ ಸಲ್ಲಿಸಿದಾಗ ಅದರಲ್ಲಿ 315 ವಿಧಿಗಳೂ 8 ಅನುಚ್ಛೇದಗಳೂ ಇದ್ದವು. ಕೊನೆಗೆ ಸಂಸತ್ತಿನ ಒಪ್ಪಿಗೆ ಪಡೆಯುವ ಸಮಯಕ್ಕೆ ಅದರಲ್ಲಿ ಮತ್ತಷ್ಟು ವಿಧಿಗಳು ಸೇರ್ಪಡೆಯಾಗಿ ಅವುಗಳ ಸಂಖ್ಯೆ 395ಕ್ಕೇರಿತು.  

ಸಂವಿಧಾನದ ಕರಡು ರಚನಾ ಸಮಿತಿ

  • ಡಾ. ಬಿ. ಆರ್. ಅಂಬೇಡ್ಕರ್ ಕರಡು ಸಮಿತಿ ಅಧ್ಯಕ್ಷರಾಗಿ, ಅವರೊಂದಿಗೆ ಸಮಿತಿಯ ಇತರ 6 ಸದಸ್ಯರು ನೇಮಕಗೊಂಡರು: ಕೆ.ಎಂ.ಮುನ್ಶಿ, ಮುಹಮ್ಮದ್ ಸಾದುಲಾ, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಗೋಪಾಲ ಸ್ವಾಮಿ ಅಯ್ಯಂಗಾರ್, ಎನ್. ಮಾಧವ ರಾವ್ (ಅವರು ಅನಾರೋಗ್ಯದ ಕಾರಣ ರಾಜೀನಾಮೆ ನೀಡಿದ ಬಿ.ಎಲ್. ಮಿಟ್ಟರ್ ಅವರ ಬದಲಿಗೆ); ಟಿ. ಟಿ. ಕೃಷ್ಣಮಾಚಾರಿ (ಅವರು 1948 ರಲ್ಲಿ ನಿಧನರಾದ ಡಿ.ಪಿ.ಖೈತಾನ್ ಬದಲಿಗೆ),ಬಿ.ಎನ್.ರಾವ್.

ಆಶಯಗಳ ನಿಷ್ಕರ್ಷೆ(ಧೇಯಗಳ ನಿರ್ಣಯ)

ಜವಹರಲಾಲ್ ನೆಹರುರವರು ಸಂವಿಧಾನವನ್ನು ಹಸ್ತಾಕ್ಷರಿಸುತ್ತಿರುವುದು

ಸಂವಿಧಾನದ ಮೂಲ ತತ್ವಗಳನ್ನು ಜವಹರಲಾಲ್ ನೆಹರುರವರು ತಮ್ಮ ಆಶಯಗಳ ನಿಷ್ಕರ್ಷೆ ಯಲ್ಲಿ ಸ್ಪಷ್ಟಪಡಿಸಿದ್ದಾರೆ :

  1. ಭಾರತವು ಸ್ವತಂತ್ರ, ಸಾರ್ವಭೌಮ, ಗಣರಾಜ್ಯ.;
  2. ಭಾರತವು ಹಿಂದಿನ ಬ್ರಿಟಿಷ್ ಭಾರತದ ಪ್ರದೇಶಗಳು, ಭಾರತದ ರಾಜ್ಯಗಳು ಮತ್ತು ಭಾರತವನ್ನು ಸೇರಬಯಸುವ ಇತರ ಪ್ರದೇಶಗಳ ಒಕ್ಕೂಟ.
  3. ಒಕ್ಕೂಟವನ್ನು ಸೇರುವ ಪ್ರದೇಶಗಳು ಸ್ವಾಯತ್ತ ಘಟಕಗಳಾಗಿದ್ದು ಒಕ್ಕೂಟಕ್ಕೆ ಒಪ್ಪಿಸಿದ ಅಧಿಕಾರಗಳ ಹೊರತಾಗಿ ಸರಕಾರದ ಮತ್ತು ಆಡಳಿತದ ಎಲ್ಲ ಅಧಿಕಾರಗಳನ್ನು ಮತ್ತು ಕರ್ತವ್ಯಗಳನ್ನು ಚಲಾಯಿಸಬಲ್ಲವಾಗಿರುತ್ತವೆ ;
  4. ಸ್ವತಂತ್ರ ಸಾರ್ವಭೌಮ ಭಾರತದ ಮತ್ತು ಅದರ ಸಂವಿಧಾನದ ಎಲ್ಲಾ ಅಧಿಕಾರಗಳು ಮತ್ತು ಅಧಿಕರಣಗಳು ಭಾರತದ ಪ್ರಜೆಗಳಿಂದ ದೊರೆಯಲ್ಪಡುತ್ತವೆ;
  5. ಭಾರತದ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ; ಕಾನೂನಿನ ಮುಂದೆ ಸಮಾನ ಸ್ಥಾನಮಾನ ಮತ್ತು ಅವಕಾಶಗಳು; ಮತ್ತು ಕಾನೂನು ಮತ್ತು ಸಾರ್ವಜನಿಕ ಸದಾಚಾರದ ಮಿತಿಗಳಲ್ಲಿನ ಮಾತು, ಅಭಿವ್ಯಕ್ತಿ, ನಂಬಿಕೆ, ಭಕ್ತಿ, ಆರಾಧನೆ, ಉದ್ಯೋಗ, ಸಂಗ-ಸಹವಾಸ ಮತ್ತು ಕೃತ್ಯಗಳ ಮೂಲಭೂತ ಹಕ್ಕುಗಳು ಆಶ್ವಾಸಿತವಾಗಿದೆ ಮತ್ತಿವುಗಳು ಒದಗಿಸಲ್ಪಡುತ್ತವೆ;
  6. ಅಲ್ಪಸಂಖ್ಯಾತರಿಗೆ, ಹಿಂದುಳಿದ ಮತ್ತು ಆದಿವಾಸಿ ಪ್ರಾಂತ್ಯಗಳಿಗೆ, ದೀನ ಮತ್ತು ಹಿಂದುಳಿದ ವರ್ಗಗಳಿಗೆ ಸಮರ್ಪಕ ಸಂರಕ್ಷಣೆಗಳು ಒದಗಿಸಲಾಗುತ್ತದೆ;
  7. ಭಾರತ ಗಣರಾಜ್ಯದ ಭೂಮಿ, ಸಾಗರ ಮತ್ತು ವಾಯು ಪರಿಮಿತಿಗಳ ಸಾರ್ವಭೌಮತೆಯನ್ನು ಎಲ್ಲಾ ನಾಗರೀಕ ದೇಶಗಳಂತೆ ನ್ಯಾಯವಾಗಿ ಮತ್ತು ಕಾನೂನಿಗನುಸಾರವಾಗಿ ಕಾಪಾಡಲ್ಪಡುತ್ತದೆ;
  8. ಈ ದೇಶವು ಲೋಕಶಾಂತಿ ಮತ್ತು ಮನುಕುಲದ ಉದ್ಧಾರಕ್ಕೆ ತನ್ನ ಸಂಪೂರ್ಣ ಮತ್ತು ಮನಸಾರ ಪ್ರಯತ್ನವನ್ನು ಮಾಡುವುದು.

ವೈಶಿಷ್ಟ್ಯಗಳು

ಸಮಾಜೋದ್ಧಾರಕ್ಕೆ ಒತ್ತು

ಕರಡು ಸಮಿತಿಯ ಅಧ್ಯಕ್ಷರಾದ ಡಾ. ಬಾಬಾಸಾಹೇಬ್ ಅಂಬೇಡ್ಕರ್, ಭಾರತೀಯ ಸಂವಿಧಾನದ ಅಂತಿಮ ಕರಡನ್ನು ಸಂವಿಧಾನ ಸಭೆಯ ಅಧ್ಯಕ್ಷ ಡಾ.ರಾಜೇಂದ್ರ ಪ್ರಸಾದ್ ಅವರಿಗೆ ನೀಡುವ ಮೂಲಕ 1949 ರ ನವೆಂಬರ್ 25 ರಂದು ಸಂವಿಧಾನ ಸಭೆಯಲ್ಲಿ ಮಂಡಿಸಿದರು

ಭಾರತ ಸಂವಿಧಾನದ ಮುಕ್ತ ಪ್ರಜಾಪ್ರಭುತ್ವದ ಸಿದ್ಧಾಂತಗಳ ನಿರೂಪಣೆಯಲ್ಲಿ ಪಾಶ್ಚಿಮಾತ್ಯ ನ್ಯಾಯಶಾಸ್ತ್ರದ ಪ್ರಭಾವ ಗಮನೀಯವಾದುದು. ಆದರೆ ಈ ಸಂವಿಧಾನ ವೈಶಿಷ್ಟ್ಯವೆಂದರೆ ಇದರಲ್ಲಿರುವ ಸಾಮಾಜಿಕ ಅಸಮಾನತೆಗಳನ್ನು ಕೊನೆಗೊಳಿಸುವ ಉದ್ದೇಶವುಳ್ಳ ತತ್ವಗಳು ಮತ್ತು ಸಮಾಜೋದ್ಧಾರದ ಆಕಾಂಕ್ಷೆಗಳು. ಸಂವಿಧಾನ ತಜ್ಞ ಗ್ರಾನ್ವಿಲ್ ಆಸ್ಟಿನನ, "ಸರ್ವೋದ್ಧಾರಕ್ಕೆ ಸಮಾಜವನ್ನು ಪುನಶ್ಚೇತನಗೊಳಿಸಲು ಪ್ರಾಯಶಃ ಬೇರೆ ಯಾವ ದೇಶದ ಸಂವಿಧಾನವೂ ಇಷ್ಟು ಒತ್ತು ನೀಡಿಲ್ಲ" ಎಂದು ಅಭಿಪ್ರಾಯಿಸಿದ್ದಾನೆ.

ಕೇಂದ್ರೀಕರಣ

ಈ ಸಂವಿಧಾನದ ಅಡಿಯಲ್ಲಿ ಹೆಚ್ಚು ಅಧಿಕರಣ ಕೇಂದ್ರ ಸರ್ಕಾರ ಮತ್ತು ಪ್ರಧಾನ ಮಂತ್ರಿಯ ಕೈಗಳಲ್ಲಿ ಕ್ರೋಢಿಕೃತವಾಗಿದೆ. ಭಾರತದಲ್ಲಿ ಹಲವಾರು ಜಾತಿ, ಪಂಗಡ, ಪ್ರಾಂತ್ಯಗಳು ತಮ್ಮದೇ ವೈಶಿಷ್ಟ್ಯಗಳನ್ನು ಹೊಂದಿದ್ದರೂ, ಈ ಕೇಂದ್ರೀಕರಣವನ್ನು ಸಂವಿಧಾನದಲ್ಲಿ ಅಳವಡಿಸಲಾಯಿತು.

  • ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಬೆಂಬಲಿಗರು ಪ್ರಾದೇಶಿಕ ಪ್ರಾಮುಖ್ಯತೆಯುಳ್ಳ ವಿಕೇಂದ್ರೀಕೃತ ಪಂಚಾಯತಿ ಪದ್ಧತಿಯನ್ನು ಅಳವಡಿಸಬೇಕೆಂಬ ಅಭಿಪ್ರಾಯವನ್ನು ಹೊಂದಿದ್ದರು. ಆದರೆ ಆಧುನಿಕತೆಯ ಬೆಂಬಲಿಗರಾದ ಜವಹರಲಾಲ್ ನೆಹರು ಮತ್ತು ಅವರ ಬೆಂಬಲಿಗ ನೇತಾರರ ಅಭಿಪ್ರಾಯ ಮೇಲ್ಗೈ ಹೊಂದಿ, ಪ್ರಬಲ ಕೇಂದ್ರೀಕೃತ ಸಂಸದೀಯ ರಾಜ್ಯಗಳ ಒಕ್ಕೂಟ ವ್ಯವಸ್ಥೆಯನ್ನು ಅಳವಡಿಸಲಾಯಿತು.
  • ಸಂವಿಧಾನ ಸ್ಥಾಪನೆಯ ನಂತರದ ವರ್ಷಗಳಲ್ಲಿ ಕ್ರಮೇಣ ಪ್ರಾಂತ್ಯಗಳು ಮತ್ತು ಪಂಗಡಗಳು ತಮ್ಮ ವೈಶಿಷ್ಟ್ಯಗಳ ನಿಟ್ಟಿನಲ್ಲಿ ಹೆಚ್ಚು ಅಧಿಕಾರಗಳನ್ನು ಬಯಸಿವೆ. ಈ ಬೆಳವಣಿಗೆ ಸಂವಿಧಾನದ ಕೇಂದ್ರೀಕರಣ ತತ್ವಗಳಿಗೆ ಅಸಮ್ಮತವಾಗಿದೆ. ಆದರೆ ಸಂವಿಧಾನ ದಲ್ಲಿ ಅಳವಡಿತ ಇತರ ನಿಯಂತ್ರಣಗಳಾದ ಚುನಾವಣಾ ಪ್ರಾಧಿಕಾರಸರ್ವೋಚ್ಛ ನ್ಯಾಯಾಲಯ ಮತ್ತು ಮುಂತಾದವುಗಳು ಸಮತೋಲನವನ್ನು ಕಾಪಾಡುತ್ತವೆ. ಇತ್ತೀಚೆಗೆ ಪ್ರಾಂತೀಯ ರಾಜಕೀಯ ಪಕ್ಷಗಳು ಹೆಚ್ಚು ಜನಪ್ರಿಯತೆ ಹೊಂದುತ್ತಿರುವುದರಿಂದ, ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರಗಳು ಸಾಮಾನ್ಯವಾಗಿ, ಅಧಿಕಾರ ಹೆಚ್ಚು ವಿಕೇಂದ್ರೀಕೃತವಾಗುತ್ತಿದೆ.

ಬೇರೆ ದೇಶಗಳ ಸಂವಿಧಾನಗಳಿಂದ ಅಳವಡಿಸಿಗೊಂಡ ತತ್ವಗಳು

ಸಂವಿಧಾನದ ಅಂತಿಮ ರೂಪವು ಅನೇಕ ಇತರ ಸಮಕಾಲೀನ ಸಂವಿಧಾನಗಳ ಬೇರೆಬೇರೆ ತತ್ವಗಳಿಗೆ ಋಣಿಯಾಗಿದೆ.

ಬ್ರಿಟನ್ನಿನ ಸಂವಿಧಾನ

  1. ಸರಕಾರದ ಸಂಸದೀಯ ಸ್ವರೂಪ
  2. ಏಕಸ್ವಾಮ್ಯ ಪೌರತ್ವ
  3. ನ್ಯಾಯದ ಪ್ರಭುತ್ವ
  4. ಲೋಕಸಭಾಧ್ಯಕ್ಷ ಮತ್ತವರ ಪಾತ್ರ
  5. ಶಾಸನೆ ರಚನೆಯ ವಿಧಾನ
  6. ನ್ಯಾಯ ನಿರ್ಧರಿಸುವ ಕಾರ್ಯವಿಧಾನ (ಲೇಖನ ೧೩)

ಅಮೇರಿಕ ಸಂಯುಕ್ತ ಸಂಸ್ಥಾನದ ಸಂವಿಧಾನ

  1. ಮೂಲಭೂತ ಹಕ್ಕುಗಳು
  2. ರಾಜ್ಯಗಳ ಒಕ್ಕೂಟದ ಸರ್ಕಾರದ ಮಾದರಿ
  3. ನ್ಯಾಯಾಂಗದ ಸ್ವಾತಂತ್ರ್ಯತೆ ಮತ್ತು ಶಾಸಕಾಂಗದ ನಿರ್ಧಾರಗಳನ್ನು ಪರಿಶೀಲಿಸುವ ಅಧಿಕಾರ.
  4. ರಾಷ್ಟ್ರಪತಿಗೆ ಮಹಾಸೇನಾಧಿಪತಿಯ ಪಟ್ಟ (ಲೇಖನ ೫೨)
  5. ನ್ಯಾಯ ನಿರ್ಧರಿಸುವ ಕಾರ್ಯವಿಧಾನ (ಲೇಖನ ೧೩)

ಐರ್ಲೆಂಡ್ ದೇಶದ ಸಂವಿಧಾನ

  1. ಸರ್ಕಾರಿ ಕಾರ್ಯನೀತಿಯ ಸಾಂವಿಧಾನಿಕ ತಾಕೀತು (ರಾಜ್ಯ ನೀತಿ ನಿರ್ದೇಶಕ ತತ್ವಗಳು)

ಫ್ರಾನ್ಸ್ ದೇಶದ ಸಂವಿಧಾನ

  1. ಸ್ವಾತಂತ್ರ್ಯ,
  2. ಸಮಾನತೆ ಮತ್ತು
  3. ಭ್ರಾತೃ‍ತ್ವ ಆದರ್ಶಗಳು

ಕೆನಡಾ ದೇಶದ ಸಂವಿಧಾನ

  1. ರಾಜ್ಯಗಳ ಒಕ್ಕೂಟದೊಂದಿಗೆ ಪ್ರಬಲ ಕೇಂದ್ರ ಸರ್ಕಾರದ ಮಾದರಿ
  2. ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದ ಮೇಲುಳಿದ ಶಕ್ತಿಗಳು

ಆಸ್ಟ್ರೇಲಿಯ ದೇಶದ ಸಂವಿಧಾನ

  1. ಪ್ರಸ್ತುತ ವಿಷಯಗಳ ಪಟ್ಟಿ
  2. ರಾಜ್ಯಗಳ ಮಧ್ಯ ಅನಿರ್ಭಂದಿತ ವ್ಯಾಪರ - ವಹಿವಾಟಿಗೆ ಸ್ವಾತಂತ್ರ್ಯ


  1. ಮೂಲಭೂತ ಕರ್ತವ್ಯಗಳು

ಜಪಾನ್ ದೇಶದ ಸಂವಿಧಾನ

(ಲೇಖನ ೫೧-ಎ)

ಜರ್ಮನಿ ದೇಶದ ಸಂವಿಧಾನ

  • ತುರ್ತು ಪರಿಸ್ಥಿತಿಯ ಏರ್ಪಾಡು (ಲೇಖನ ೩೬೮)

ಪೀಠಿಕೆ

(ಪ್ರಸ್ತಾವನೆ)
ಭಾರತ ಸಂವಿಧಾನದ ಪೀಠಿಕೆ
ಭಾರತದ ಪ್ರಜೆಗಳಾದ ನಾವು, ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ ಗಣತಂತ್ರವನ್ನಾಗಿ ವಿಧಿಯುಕ್ತವಾಗಿ ಸ್ಥಾಪಿಸಿ, ಅದರ ಎಲ್ಲಾ ಪ್ರಜೆಗಳಿಗೆ,
ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ;ವನ್ನು
ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಮತ್ತು ಆರಾಧನೆಗಳಲ್ಲಿ ಸ್ವಾತಂತ್ರ್ಯ;ವನ್ನು
ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆ;
ಗಳನ್ನು ದೊರಕಿಸಿ,
ವೈಯಕ್ತಿಕ ಘನತೆ ಮತ್ತು ದೇಶದ ಒಗ್ಗಟ್ಟು ಮತ್ತು ಐಕ್ಯತೆಗೆ ಎಲ್ಲರಲ್ಲೂ ಭ್ರಾತೃತ್ವತೆ ಯನ್ನು ಪ್ರೋತ್ಸಾಹಿಸಲು ನಿರ್ಧರಿಸಿ;
ನಮ್ಮ ಸಂವಿಧಾನ ರಚನಾಸಭೆಯಲ್ಲಿ ಈ ೧೯೪೯ರ ನವೆಂಬರ್ ಮಾಹೆಯ ೨೬ನೇ ದಿನದಂದು, ನಾವಾಗಿ ನಾವೇ ಈ ಸಂವಿಧಾನವನ್ನು ಸ್ವೀಕರಿಸಿ, ಶಾಸನವನ್ನಾಗೆ ವಿಧಿಸಿಕೊಳ್ಳುತ್ತೇವೆ.
  • ಪೀಠಿಕೆಯು ಭಾರತದ ಸಂವಿಧಾನದ ಒಂದು ಅಂಗವಲ್ಲ; ಏಕೆಂದರೆ ಇದನ್ನು ನ್ಯಾಯಾಲಯದಲ್ಲಿ ಪ್ರಯೋಗಿಸಲು ಸಾಧ್ಯವಿಲ್ಲ. ಹಾಗಿದ್ದರೂ, ಸಂವಿಧಾನದಲ್ಲಿ ದ್ವಂದ್ವ ಇರುವಂತೆ ಕಂಡುಬರುವಲ್ಲಿ ಪೀಠಿಕೆಯನ್ನು ಉಪಯೋಗಿಸಿ ದ್ವಂದ್ವ ನಿವಾರಿಸಬಹುದಾದ ಕಾರಣ ಸರ್ವೋಚ್ಛ ನ್ಯಾಯಾಲಯವು ಪೀಠಿಕೆಯನ್ನು ಸಂವಿಧಾನದ ಒಂದು ಅಂಗವಾಗಿ ಪರಿಗಣಿಸಿದೆ.
  • ಇದಕ್ಕೆ ಉದಾಹರಣೆ, 'ಕೇಶವಾನಂದ ಭಾರತಿ ಮತ್ತು ಕೇರಳ ಸರ್ಕಾರ' ಪ್ರಕರಣ. ಅದಾಗ್ಯೂ, ಪೀಠಿಕೆಯನ್ನು ಸಂವಿಧಾನದ ಲೇಖನದಲ್ಲಿ ದ್ವಂದ್ವ ಇದ್ದಾಗ ಮಾತ್ರ, ಮತ್ತಷ್ಟು ಅರ್ಥವತ್ತಾಗಿಸುವ ಸಾಧನವನ್ನಾಗಿ ಬಳಸಬಹುದೇ ಹೊರತು, ಹಕ್ಕು ಸಾಧಿಸುವ ಸಂವಿಧಾನದ ಒಂದು ಪ್ರತ್ಯೇಕ ವಿಭಾಗವೆಂದು ಪರಿಗಣಿಸಲಾಗದು.
  • ಪೀಠಿಕೆಯ ಮೂಲಪ್ರತಿಯಲ್ಲಿ "ಸಾರ್ವಭೌಮ ಪ್ರಜಾಪ್ರಭುತ್ವ ಗಣರಾಜ್ಯ" ಎಂದಿತ್ತು. ಎರಡು ಹೆಚ್ಚಿನ ಪದಗಳಾದ "ಸಮಾಜವಾದಿ" ಮತ್ತು "ಜಾತ್ಯಾತೀತ" ಪದಗಳನ್ನು ೧೯೭೬ರಲ್ಲಿ ಸಂವಿಧಾನದ ೪೨ನೆ ತಿದ್ದುಪಡಿಯಲ್ಲಿ ಸೇರಿಸಲಾಯಿತು. ಆ ಸಮಯದಲ್ಲಿ ತುರ್ತುಪರಿಸ್ಥಿತಿ ಜಾರಿಯಲ್ಲಿದ್ದಿದ್ದರಿಂದ, ಸಂವಿಧಾನಕ್ಕೆ ತಿದ್ದುಪಡಿ ತರಲು ಸಾಧ್ಯವೆ ಎಂಬುದನ್ನು ಹಿಂದಿನ ಅನುಭವದ ಆಧಾರದಲ್ಲಿ ಪರಿಶೀಲಿಸಿ, ಸರ್ದಾರ್ ಸ್ವರಣ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿನ ಸಮಿತಿಯು ಈ ತಿದ್ದುಪಡಿಯನ್ನು ಕಾರ್ಯಗತಗೊಳಿಸಬಹುದೆಂದು ಶಿಫಾರಸು ಮಾಡಿತು.

ಪೀಠಿಕೆಯ ಮಹತ್ವ

  • ಪೀಠಿಕೆಯಲ್ಲಿರುವ ಕೆಲವು ವಾಕ್ಯಗಳು, ಭಾರತದ ಸಂವಿಧಾನವು ರಚಿತವಾಗಿರುವ ಕೆಲವು ಮೂಲಭೂತ ಮೌಲ್ಯಗಳು ಮತ್ತು ಸಾತ್ವಿಕ ಸೂಚಿಗಳನ್ನು ಎತ್ತಿ ತೋರಿಸುತ್ತದೆ. ಈ ಪೀಠಿಕೆಯು ನಮ್ಮ ಸಂವಿಧಾನದ ದಿಕ್ಸೂಚಿಯಂತೆ ಕೆಲಸ ಮಾಡುತ್ತದೆ ಮತ್ತು ನ್ಯಾಯಾಧೀಶರು ಸಂವಿಧಾನವನ್ನು ಇದೇ ದಾರಿಯಲ್ಲಿ ವ್ಯಾಖ್ಯಾನಿಸಿ ಮುನ್ನಡೆಸುತ್ತಾರೆ.
  • ಭಾರತದ ಸಂವಿಧಾನದ ಪೀಠಿಕೆಯಲ್ಲಿ ವ್ಯಕ್ತಪಡಿಸಿರುವ ಹಾಗು ತಿದ್ದುಪಡಿ ಮಾಡಲು ಸಾದ್ಯವಿಲ್ಲದ ಆಶಯಗಳನ್ನು ಬಹಳಷ್ಟು ಸಂದರ್ಭಗಳಲ್ಲಿ ಭಾರತದ ಸರ್ವೋಚ್ಛ ನ್ಯಾಯಾಲಯ ಎತ್ತಿ ಹಿಡಿದಿದೆ. ಪೀಠಿಕೆಯು ಸಂವಿಧಾನದ ಒಂದು ಭಾಗವಾದರೂ ಅದನ್ನು ಅಥವಾ ಅದರ ಯಾವುದೇ ಅಂಶವನ್ನು ಕಾನೂನಿಗನುಸಾರವಾಗಿ ಜಾರಿ(ಹೇರು) ಮಾಡುವಂತಿಲ್ಲ.
  • ಪೀಠಿಕೆಯ ಮೊದಲ ಪದಗಳು - "ನಾವು, ಜನರು " - ಭಾರತದಲ್ಲಿ ಅಧಿಕಾರ ಜನಗಳ ಕೈನಲ್ಲಿದೆ ಎಂಬ ಅಂಶದ ಪ್ರಾಮುಖ್ಯತೆಯನ್ನು ಹೇಳುತ್ತದೆ. ಪೀಠಿಕೆಯು, ಭಾರತದ ಪ್ರತಿಯೂಬ್ಬ ನಾಗರೀಕ ಹಾಗು ಸರ್ಕಾರ ಅನುಸರಿಸಬೇಕಾದ ಮತ್ತು ಸಾಧಿಸಬೇಕಾದ ಬಹು ಮುಖ್ಯ ರಾಷ್ಟ್ರೀಯ ಧ್ಯೇಯಗಳನ್ನು ಬಿಡಿಸಿ ಹೇಳುತ್ತದೆ. ಅವುಗಳೆಂದರೆ ಸಮಾಜವಾದಜಾತಿ ನಿರಪೇಕ್ಷತೆ ಮತ್ತು ರಾಷ್ಟ್ರೀಯ ಭಾವೈಕ್ಯತೆ. ಕೊನೆಯದಾಗಿ ಅದರಲ್ಲಿ ಸಂವಿಧಾನವನ್ನು ಅಂಗೀಕರಿಸಿದ ದಿನಾಂಕ - ನವೆಂಬರ್ ೨೬ ೧೯೪೯ ಎಂದು ಹೇಳುತ್ತದೆ.

ಪೀಠಿಕೆಯ ಕೆಲವು ಪದಗಳ ನಿರೂಪಣೆ

ಸಾರ್ವಭೌಮ

ಸಾರ್ವಭೌಮ ಎಂಬ ಪದದ ಅರ್ಥ ಪರಮಾಧಿಕಾರ ಅಥವಾ ಸ್ವತಂತ್ರ ಎಂದು. ಭಾರತವು ಆಂತರಿಕವಾಗಿ ಹಾಗೂ ಬಾಹ್ಯವಾಗಿ ಸಾರ್ವಭೌಮ. ಬಾಹ್ಯವಾಗಿ ಯಾವುದೇ ವಿದೇಶೀ ಶಕ್ತಿಯ ಅಧೀನದಲ್ಲಿ ಭಾರತ ಇಲ್ಲ ಹಾಗೂ ಆಂತರಿಕವಾಗಿ ಒಂದು ಮುಕ್ತ, ಜನರಿಂದ ಆರಿಸಲ್ಪಟ್ಟ ಸರಕಾರ ಕಾನೂನು ಸುವ್ಯವಸ್ಥೆ ಕಾಪಾಡುತ್ತದೆ.

ಸಮಾಜವಾದಿ

ಸಮಾಜವಾದಿ ಪದವು ಪೀಠಿಕೆಗೆ ೧೯೭೬ರಲ್ಲಿ ೪೨ನೇ ತಿದ್ದುಪಡಿಯಿಂದ ಸೇರಿಸಲ್ಪಟ್ಟಿತು. ಇದರ ಅರ್ಥ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ. ಸಾಮಾಜಿಕ ಸಮಾನತೆಯ ಅರ್ಥ ಧರ್ಮಜಾತಿಲಿಂಗಭಾಷೆ ಇತ್ಯಾದಿಗಳ ಆಧಾರದ ಮೇಲೆ ತಾರತಮ್ಯ ಮಾಡದೇ ಇರುವುದು. ಸಾಮಾಜಿಕ ಸಮಾನತೆಯ ಅಡಿಯಲ್ಲಿ ಎಲ್ಲರಿಗೂ ಸಮಾನ ಸ್ಥಾನಮಾನ ಮತ್ತು ಅವಕಾಶಗಳಿವೆ. ಆರ್ಥಿಕ ಸಮಾನತೆಯ ಅರ್ಥ ಭಾರತ ಸರಕಾರ ಎಲ್ಲರಿಗೂ ಸಮಾನ ಆರ್ಥಿಕ ಅವಕಾಶಗಳನ್ನು ಹಾಗೂ ಎಲ್ಲರಿಗೂ ಯೋಗ್ಯವಾದ ಜೀವನಮಟ್ಟವನ್ನು ಕಲ್ಪಿಸಲು ಯತ್ನಿಸುತ್ತದೆ. ಇದರ ತತ್ತ್ವಾರ್ಥ ಒಂದು ಸುಖೀ ರಾಜ್ಯದ ನಿರ್ಮಾಣಕ್ಕೆ ಬದ್ಧರಾಗುವುದಾಗಿದೆ. ಭಾರತವು ಮಿಶ್ರ ಅರ್ಥವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಸರಕಾರವು ಸಾಮಾಜಿಕ ಸಮಾನತೆಯನ್ನು ಸಾಧಿಸಲು ಬಹಳಷ್ಟು ಕಾನೂನುಗಳನ್ನು ಮಾಡಿದೆ. ಇವುಗಳಲ್ಲಿ ಅಸ್ಪೃಶ್ಯತೆ ಮತ್ತು ಜೀತಪದ್ಧತಿ ನಿವಾರಣೆ, ಸಮಾನ ಭತ್ಯೆ ಮಸೂದೆ ಮತ್ತು ಬಾಲಕಾರ್ಮಿಕ ನಿಷೇಧ ಮಸೂದೆ ಸೇರಿವೆ.

ಜಾತ್ಯತೀತ

ಜಾತ್ಯತೀತ ಎಂಬ ಪದವನ್ನು ಪೀಠಿಕೆಗೆ ೧೯೭೬ರ ೪೨ನೇ ತಿದ್ದುಪಡಿಯ ಮೂಲಕ ಸೇರಿಸಲಾಯಿತು. ಇದರ ಅರ್ಥ ಎಲ್ಲ ಧರ್ಮಗಳ ಸಮಾನತೆ ಮತ್ತು ಧಾರ್ಮಿಕ ಸಹನೆ. ಭಾರತವು ಯಾವುದೇ ಅಧಿಕೃತ ಧರ್ಮವನ್ನು ಹೊಂದಿಲ್ಲ. ಪ್ರತಿಯೊಬ್ಬರಿಗೂ ತಮ್ಮ ಆಯ್ಕೆಯ ಧರ್ಮದ ಪ್ರಚಾರವನ್ನು ಮಾಡುವ ಹಾಗೂ ಆಚರಿಸುವ ಹಕ್ಕಿದೆ. ಸರಕಾರವು ಯಾವುದೇ ಧರ್ಮದ ಪರ ಅಥವಾ ವಿರುದ್ಧ ನಿಲುವನ್ನು ತಳೆಯುವಂತಿಲ್ಲ. ಎಲ್ಲ ಪ್ರಜೆಗಳು ತಮ್ಮ ಧಾರ್ಮಿಕ ಭಾವನೆಗಳ ಹೊರತಾಗಿಯೂ ಕಾನೂನಿನ ಕಣ್ಣಿನಲ್ಲಿ ಸಮಾನರಾಗಿದ್ದಾರೆ. ಸರಕಾರೀ ಅನುದಾನಿತ ಶಾಲೆಗಳಲ್ಲಿ ಯಾವುದೇ ಧರ್ಮದ ಆಚಾರ-ಪ್ರಚಾರ ನಡೆಯುವಂತಿಲ್ಲ. ಬೊಮ್ಮಾಯಿ vs ಭಾರತ ಸರಕಾರ ದಾವೆಯಲ್ಲಿ ಸರ್ವೋಚ್ಛ ನ್ಯಾಯಾಲಯವು ಜಾತ್ಯತೀತತೆಯು ಭಾರತ ಸಂವಿಧಾನದ ವಿನ್ಯಾಸದ ಒಂದು ಸಮಗ್ರ ಅಂಗ ಎಂದು ಭಾವಿಸಿದೆ.

ಪ್ರಜಾಪ್ರಭುತ್ವ

ಪ್ರಜಾಪ್ರಭುತ್ವವಾದ ಭಾರತ ದೇಶದ ಪ್ರಜೆಗಳು ಕೇಂದ್ರ, ರಾಜ್ಯ ಹಾಗೂ ಪ್ರಾದೇಶಿಕ ವಿಭಾಗಗಳಲ್ಲಿ ತಮ್ಮ ಸರಕಾರವನ್ನು ಸಾರ್ವತ್ರಿಕ ಮತಾಧಿಕಾರದ ಪದ್ಧತಿಯ ಮೂಲಕ ಆರಿಸುತ್ತಾರೆ. ಭಾರತದ ಎಲ್ಲ ೧೮ ವರ್ಷಗಳ ವಯೋಮಿತಿಯ ಮೇಲಿರುವ ಕಾನೂನುಬದ್ಧ ಮತ ಚಲಾಯಿಸುವ ಅಧಿಕಾರ ಹೊಂದಿರುವ ಪ್ರಜೆಗಳು ಧರ್ಮ, ಜಾತಿ, ಮತ, ಲಿಂಗ ಅಥವಾ ಶಿಕ್ಷಣ ಮಟ್ಟದ ಭೇದವಿಲ್ಲದೇ ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ.

ಗಣತಂತ್ರ

ಗಣತಂತ್ರವು ರಾಜಪ್ರಭುತ್ವಕ್ಕೆ ವಿರುದ್ದವಾದದ್ದು. ರಾಜಪ್ರಭುತ್ವದಲ್ಲಿ ಒಂದು ರಾಜ್ಯದ ಮುಖ್ಯಸ್ತರು ವಂಶ ಪಾರಂಪರೆಯ ಆಧಾರದ ಮೇಲೆ ಜೀವಮಾನದವರೆಗೆ ಅಥವಾ ಸಿಂಹಾಸನವನ್ನು ತ್ಯಜಿಸುವವರೆಗೆ ನೇಮಿತಗೊಳ್ಳುತ್ತಾರೆ. ಪ್ರಜಾಪ್ರಭುತ್ವದಲ್ಲಿ ಗಣತಂತ್ರ ಎಂದರೆ " ಒಂದು ರಾಷ್ಟ್ರದ ಮುಖ್ಯಸ್ಥರನ್ನು ಪ್ರತ್ಯೇಕ್ಷ ಅಥವಾ ಪರೋಕ್ಷ ಚುನಾವಣೆಯ ಮೂಲಕ ಆಯ್ಕೆ ಮಾಡುವುದಕ್ಕೆ ಗಣತಂತ್ರ" ಎನ್ನುವರು.

ಅನುಚ್ಛೇಧಗಳು

ಅನುಚ್ಛೇಧಗಳನ್ನು ಸಂವಿಧಾನದ ತಿದ್ದುಪಡಿಯ ಮುಖಾಂತರ ಸೇರಿಸಬಹುದು. ಪ್ರಚಲಿತದಲ್ಲಿರುವ ೧೨ ಅನುಚ್ಛೇಧಗಳು ಇವುಗಳನ್ನು ಒಳಗೊಂಡಿವೆ. ರಾಜ್ಯ ಸರ್ಕಾರ ಹಾಗು ಕೇಂದ್ರಾಡಳಿತ ಪ್ರದೇಶಗಳ ಅಧಿಕಾರ ಪರಮಾವದಿ; ಉನ್ನತ ಅಧಿಕಾರಿಗಳ ಸಂಬಳ(ವರಮಾನ);ಪ್ರಮಾಣವಚನಗಳ ವಿಧಗಳು; ರಾಜ್ಯಸಭೆ(ರಾಜ್ಯಗಳ ಪರಿಷತ್ತು - ಸಂಸತ್ತಿನ ಮೇಲ್ಮನೆ)ಯಲ್ಲಿ ಪ್ರತಿ ರಾಜ್ಯ ಹಾಗು ಕೇಂದ್ರಾಡಳಿತ ಪ್ರದೇಶಗಳಿಗೆ ಇಂತಿಷ್ಟು ಎಂದು ಸ್ಥಾನಗಳನ್ನು ನಿಗದಿಪಡಿಸುವುದು. ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಆಡಳಿತ ಮತ್ತು ನಿಯಂತ್ರಣಕ್ಕೆ ವಿಶೇಷ ಏರ್ಪಾಟು ಕಲ್ಪಿಸುವುದು;ಅಸ್ಸಾಮಿನಲ್ಲಿರುವ ಬುಡಕಟ್ಟು ಪ್ರದೇಶಗಳ ಆಡಳಿತಕ್ಕೆ ಏರ್ಪಾಟು ಕಲ್ಪಿಸುವುದು; ಕೇಂದ್ರ(ಕೇಂದ್ರ ಸರ್ಕಾರ),ರಾಜ್ಯ ಹಾಗು ದ್ವಂದ್ವ ಜವಾಬ್ದಾರಿಗಳ ಪಟ್ಟಿಗಳು; ಅಧಿಕೃತ ಭಾಷೆಗಳು ; ಸ್ಥಳ ಮತ್ತು ಅವಧಿಯ ಸುಧಾರಣೆ ; ಭಾರತದೊಂದಿಗೆ ಸಿಕ್ಕಿಂನ್ ಸಂಯೋಗ; ಸಂಸತ್ ಸದಸ್ಯರು ಮತ್ತು ವಿಧಾನ ಸಭಾ ಸದಸ್ಯರ ಪಕ್ಷಾಂತರ ವಿರುದ್ದ ವಿಶೇಷ ಏರ್ಪಾಟು ಕಲ್ಪಿಸುವುದು ; ಗ್ರಾಮೀಣ ಅಭಿವೃದ್ಧಿ ; ಮತ್ತು ನಗರ ಯೋಜನೆ .

ತಿದ್ದುಪಡಿಗಳು

ಭಾರತದ ಸಂವಿಧಾನವನ್ನು ತಿದ್ದುಪಡಿ ಮಾಡಲು ಈ ಕೆಳಗಿನ ಪ್ರಕ್ರಿಯೆಗಳಿವೆ:

  1. ಸಂಸತ್ತಿನಲ್ಲಿ ಸಾಮಾನ್ಯ ಬಹುಮತದಿಂದ: ಸಂಸತ್ತಿನಲ್ಲಿ ತಿದ್ದುಪಡಿ ಮತಕ್ಕೆ ಬಂದಾಗ ಅಲ್ಲಿರುವ ಅರ್ಧಕ್ಕಿಂತ ಹೆಚ್ಚು ಸಂಸದೀಯರ ಅಂಗೀಕಾರವಿದ್ದರೆ, ಈ ತಿದ್ದುಪಡಿ ರಾಷ್ಟ್ರಪತಿಯ ಸಮ್ಮತಿಗೆ ಕಳುಹಿಸಬಹುದು.
  2. ಸಂಸತ್ತಿನಲ್ಲಿ ವಿಶೇಷ ಬಹುಮತದಿಂದ: ಸಂಸತ್ತಿನಲ್ಲಿ ಅರ್ಧಕ್ಕಿಂತ ಹೆಚ್ಚು ಸದಸ್ಯರು ಹಾಜರಿದ್ದು, ಅವರಲ್ಲಿ ೩ರಲ್ಲಿ ೨ ಭಾಗ ಸಂಸದೀಯರು ತಿದ್ದುಪಡಿಯನ್ನು ಅಂಗೀಕರಿಸಿದರೆ ಅ ತಿದ್ದುಪಡಿ ರಾಷ್ಟ್ರಪತಿಯ ಸಮ್ಮತಿಗೆ ಕಳುಹಿಸಬಹುದು.
  3. ಕೇಂದ್ರ ಮತ್ತು ರಾಜ್ಯಗಳ ಸಂಬಂಧದ ಬಗೆಗಿನ ತಿದ್ದುಪಡಿಗಳಿಗೆ ಮೇಲಿನಂತೆ ಸಂಸತ್ತಿನ ವಿಶೇಷ ಬಹುಮತವಿದ್ದು, ಅದರೊಂದಿಗೆ ಕನಿಷ್ಟ ಅರ್ಧ ರಾಜ್ಯಗಳ ಶಾಸನಸಭೆಗಳಲ್ಲಿ ವಿಶೇಷ ಬಹುಮತ ಗಳಿಸಿದರೆ, ಈ ತಿದ್ದುಪಡಿ ರಾಷ್ಟ್ರಪತಿಯ ಸಮ್ಮತಿಗೆ ಕಳುಹಿಸಬಹುದು. 

ಮೇಲಿನಂತೆ ಸಂವಿಧಾನ ತಿದ್ದುಪಡಿ ಒಂದು ಕಠಿಣ ಪ್ರಕ್ರಿಯೆಯಾದರೂ, ಭಾರತದ ಸಂವಿಧಾನ ಪ್ರಪಂಚದ ಅತೀ ತಿದ್ದಲ್ಪಟ್ಟ ಸಂವಿಧಾನಗಳಲ್ಲಿ ಒಂದಾಗಿದೆ. ಮೊಟ್ಟಮೊದಲ ತಿದ್ದುಪಡಿ ಸಂವಿಧಾನದ ಅಳವಡಿಕೆಯ ಒಂದು ವರ್ಷದೊಳಗೆಯೆ ಆಯಿತು. ಇದರಲ್ಲಿ ಹಲವಾರು ಸಣ್ಣ ಬದಲಾವಣೆಗಳನ್ನು ಮಾಡಲಾಯಿತು. ನಂತರದಿಂದ ವರ್ಷಕ್ಕೆ ಸರಾಸರಿ ೨ ತಿದ್ದುಪಡಿಗಳಷ್ಟು ಆಗಿವೆ. ಈ ಸಂವಿಧಾನ ಸವಿಸ್ತಾರವಾಗಿರುವುದರಿಂದ, ಬೇರೆ ಜನತಂತ್ರ ದೇಶಗಳಲ್ಲಿ ವಿಶೇಷ ಕಾಯಿದೆ (ordinance) ಮೂಲಕ ಜಾರಿಗೆ ತರಬಲ್ಲ ಕಾಯಿದೆಗಳನ್ನು ಭಾರತದಲ್ಲಿ ತಿದ್ದುಪಡಿಯಿಂದ ಮಾತ್ರ ತರಲಾಗುತ್ತದೆ.

೧೯೭೪ರ ಕೇಶವಾನಂದ ಭಾರತಿ ವಿರುದ್ಧ ಕೇರಳಾ ರಾಜ್ಯ ಸರ್ಕಾರ ಮೊಕದ್ದಮೆಯಲ್ಲಿ ಭಾರತದ ಸರ್ವೋಚ್ಛ ನ್ಯಾಯಾಲಯ ನೀಡಿದ ಒಂದು ಪ್ರಮುಖ ತೀರ್ಪಿನಲ್ಲಿ ಸಂವಿಧಾನದತ್ತ ನ್ಯಾಯಾಂಗ ಪರಿಶೀಲನೆಯ ಶಕ್ತಿಯನ್ನು ಶಾಸಕಾಂಗದ ಸಂವಿಧಾನದ ತಿದ್ದುಪಡಿಗಳನ್ನೂ ಪರಿಶೀಲಿಸುವುದಕ್ಕೆ ವಿಸ್ತರಿಸಿ ಸಂವಿಧಾನದ ಮೂಲಭೂತ ತತ್ವಗಳ ವ್ಯಾಖ್ಯಾನವನ್ನು ಸ್ಥಾಪಿಸಿತು. ಇದರಡಿಯಲ್ಲಿ ೩೯ನೇ ತಿದ್ದುಪಡಿಯನ್ನು ಮತ್ತು ೪೨ನೇ ತಿದ್ದುಪಡಿಯ ಭಾಗಗಳನ್ನು ಅಸಂವಿಧಾನಿಕ ಎಂದು ಘೋಷಿಸಿ ಅವನ್ನು ತೆಗೆದು ಹಾಕಿತು. ಎಚ್.ಎಮ್.ಸೀರ್ವಾಯ್‍ರಂತಃ ಕೆಲ ಸಂವಿಧಾನಿಕ ತಜ್ಞರು ಇದು ಸಂವಿಧಾನ ಶಿಲ್ಪಿಗಳ ಆಶಯಗಳ ಉಲ್ಲಂಘನೆಯೆಂದು ಅಭಿಪ್ರಾಯಿಸಿದ್ದಾರೆ.

ಭಾರತದ ಸಂವಿಧಾನ ಇಲ್ಲಿಯವರೆಗೂ ೧೦೮ ತಿದ್ದುಪಡಿಗಳನ್ನು ಕಂಡಿದ್ದು, ಇತ್ತೀಚೆಗೆ ೨೦೧೦ ನೇ ವರ್ಷ ಮಾರ್ಚ ೯ರಂದು ರಾಜ್ಯಸಭೆಯಲ್ಲಿ ಮಹಿಳಾ ವಿಧೆಯಕ ಅಂಗೀಕಾರವಾಗಿ ರಾಷ್ತ್ರಪತಿಗಲಳ ಅಂಕಿತಕ್ಕಾಗಿ ಹೋಗಿದೆ.

ಇತ್ತೀಚೆಗೆ ೨೦೧೭ ನೇ ಜೂನ್ ೧ ರಂದು ಸರಕು ಸೇವಾ ತೇರಿಗೆಯನ್ನು ೧೦೧ ತಿದ್ದುಪಡಿ ಶಾಸನ ವಾಗಿ ರೂಪಗೊಂಡಿತು. ಇದು ೧೨೨ನೇ ಅನ್ವೆಯ ತಿದ್ದುಪಡಿಯಲ್ಲಿತು.

ಲೇಖನಗಳು

  • ಭಾಗ ೧ - ವಿಧಿ ೧-೪ ಕೇಂದ್ರ ಮತ್ತು ಅದರ ಆಡಳಿತದ ಮೇಲೆ
  • ಭಾಗ ೨ - ೫-೧೧ ಪೌರತ್ವ ದ ಮೇಲೆ
  • ಭಾಗ ೩ - 1) ಲೇಖನಗಳು ೧೨-೩೫ ಮೂಲಭೂತ ಹಕ್ಕುಗಳು
2) ಲೇಖನಗಳು ೧೪-೧೮ಸಮಾನತೆಯ ಹಕ್ಕು,
3) ಲೇಖನಗಳು ೧೯-೨೨ ಸ್ವಾತಂತ್ರ್ಯದ ಹಕ್ಕು,
4) ಲೇಖನಗಳು ೨೩-೨೪ ಶೋಷಣೆಯ ವಿರುದ್ಧ ಹಕ್ಕು,
5) ಲೇಖನಗಳು ೨೫-೨೮ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು,
6) ಲೇಖನಗಳು ೨೯-೩೧ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು,
7) ಲೇಖನಗಳು ೩೨-೩೫ ಸಾಂವಿಧಾನಿಕ ಪರಿಹಾರದ ಹಕ್ಕು
  • ವಿಶೇಷ ಹಕ್ಕು:ಖಾಸಗಿತನದ ಹಕ್ಕು ಮೂಲಭೂತ ಹಕ್ಕು: ದಿ.24 ಆಗಸ್ಟ್, 2017 ರಂದು ಸುಪ್ರೀಂ ಕೋರ್ಟ್‌ನ ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠವು

ಚಾರಿತ್ರಿಕ ತೀರ್ಪು ನೀಡಿ, "ಖಾಸಗಿತ್ವದ ಹಕ್ಕು ಸಂವಿಧಾನ ನೀಡಿರುವ ಮೂಲಭೂತ ಹಕ್ಕಿನ ಭಾಗವೇ ಆಗಿದೆ" ಎಂದು ಸರ್ವಾನುಮತದಿಂದ ಹೇಳಿದೆ.

  • ಭಾಗ ೪ - ಸರ್ಕಾರಿ ಕಾರ್ಯನೀತಿಯ ಸಾಂವಿಧಾನಿಕ ತಾಕೀತುಗಳನ್ನೊಳಗೊಂಡ ಲೇಖನಗಳಾದ ೩೬ - ೫೧(ರಾಜ್ಯನೀತಿ ನಿರ್ದೇಶಕ ತತ್ವಗಳು)
  • ಭಾಗ ೪(ಎ) ಲೇಖನ ೫೧ ಅ ಒಳಗೊಂಡಿದೆ - ಪ್ರತಿ ಭಾರತೀಯ ನಾಗರಿಕನ ಮೂಲಭೂತ ಕರ್ತವ್ಯಗಳು

ಅಧ್ಯಾಯ ೧

  • ಲೇಖನಗಳು ೫೨-೭೮ ಕಾರ್ಯಾಂಗ ದ ಬಗ್ಗೆ ಅ
  • ಲೇಖನಗಳು ೫೨-೭೩ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಗಳ ಬಗ್ಗೆ,
  • ಲೇಖನಗಳು ೭೪-೭೫ ಮಂತ್ರಿ ಪರಿಷತ್ತಿನ ಮೇಲೆ,
  • ಲೇಖನ ೭೬ ಭಾರತದ ಮುಖ್ಯ ಅಟಾರ್ನಿ ಜನರಲ್,
  • ಲೇಖನಗಳು ೭೭-೭೮ ಸರಕಾರದ ವ್ಯವಹಾರಗಳನ್ನು ನಡೆಸುವ ಬಗ್ಗೆ
ಅಧ್ಯಾಯ ೨ - ಲೇಖನಗಳು ೭೯-೧೨೨ ಸಂಸತ್ತು ಬಗ್ಗೆ.
  • ಲೇಖನಗಳು ೭೯-೮೮ ಸಂಸತ್ತಿನ ಸಂವಿಧಾನದ ಬಗ್ಗೆ,
  • ಲೇಖನಗಳು ೮೯-೯೮ ಸಂಸತ್ತಿನ ಅಧಿಕಾರಿಗಳ ಬಗ್ಗೆ,
  • ಲೇಖನಗಳು ೯೯-೧೦೦ ವ್ಯವಹಾರಗಳನ್ನು ನಡೆಸುವ ಬಗ್ಗೆ,
  • ಲೇಖನಗಳು ೧೦೧-೧೦೪ ಸದಸ್ಯರ ಉಚ್ಚಾಟನೆಯ ಬಗ್ಗೆ,
  • ಲೇಖನಗಳು ೧೦೫-೧೦೬ ಸಂಸತ್ತು ಮತ್ತು ಸಂಸತ್ಸದಸ್ಯರ ಅಧಿಕಾರ, ಸೌಕರ್ಯಗಳು, ಮತ್ತು ವಿಶೇಷಾಧಿಕಾರಗಳ ಬಗ್ಗೆ,
  • ಲೇಖನಗಳು ೧೦೭-೧೧೧ ಶಾಸಕಾಂಗದ ಕಾರ್ಯವಿಧಾನದ ಬಗ್ಗೆ,
  • ಲೇಖನಗಳು ೧೧೨-೧೧೭ ಆರ್ಥಿಕ ವಿಚಾರಗಳ ಕಾರ್ಯವಿಧಾನದ ಬಗ್ಗೆ,
  • ಲೇಖನಗಳು ೧೧೮-೧೨೨ ಸಾಮಾನ್ಯ ಕಾರ್ಯವಿಧಾನಗಳ ಬಗ್ಗೆ.
ಅಧ್ಯಾಯ ೩ - ಲೇಖನ ೧೨೩ ರಾಷ್ಟ್ರಪತಿಗಳ ಶಾಸಕಾಂಗ ಅಧಿಕಾರಗಳ ಬಗ್ಗೆ.
  • ಲೇಖನ ೧೨೩ ಸಂಸತ್ತಿನ ವಿರಾಮಕಾಲದಲ್ಲಿ ರಾಷ್ಟ್ರಪತಿಗಳು ಸುಗ್ರೀವಾಜ್ಝ್ನೆ ಹೊರಡಿಸುವ ಬಗ್ಗೆ
ಅಧ್ಯಾಯ ೪ - ಲೇಖನಗಳು ೧೨೪-೧೪೭ ಕೇಂದ್ರ ನ್ಯಾಯಾಂಗದ ಬಗ್ಗೆ.
  • ಲೇಖನಗಳು ೧೨೪-೧೪೭ ಪರಮೋಚ್ಛ ನ್ಯಾಯಾಲಯದ (ಸುಪ್ರೀಂ ಕೋರ್ಟ್) ರಚನೆ ಮತ್ತು ಸಂವಿಧಾನಗಳ ಬಗ್ಗೆ
ಅಧ್ಯಾಯ ೫ - ಲೇಖನಗಳು ೧೪೮-೧೫೧ ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಬಗ್ಗೆ.
  • ಲೇಖನಗಳು ೧೪೮ - ೧೫೧ ಕಾಂಪ್ಟ್ರೋಲರ್ ಮತ್ತು ಆಡಿಟರ್-ಜನರಲ್‍ನ ಅಧಿಕಾರಗಳು ಮತ್ತು ಕರ್ತವ್ಯಗಳ ಬಗ್ಗೆ
  • ಭಾಗ ೬ - ರಾಜ್ಯಗಳ ಬಗ್ಗೆ ಲೇಖನಗಳು.
ಅಧ್ಯಾಯ ೧ - ಲೇಖನ ೧೫೨ ಭಾರತದ ರಾಜ್ಯದ ಸಾಮಾನ್ಯ ವ್ಯಾಖ್ಯಾನ
ಅಧ್ಯಾಯ ೨ - ಲೇಖನಗಳು ೧೫೩-೧೬೭ ಕಾರ್ಯಾಂಗದ ಬಗ್ಗೆ
  • ಲೇಖನಗಳು ೧೫೩-೧೬೨ ರಾಜ್ಯಪಾಲರ ಬಗ್ಗೆ,
  • ಲೇಖನಗಳು ೧೬೩-೧೬೪ ಮಂತ್ರಿ ಪರಿಷತ್ತಿನ ಮೇಲೆ,
  • ಲೇಖನ ೧೬೫ ರಾಜ್ಯದ ಅಡ್ವೋಕೇಟ್-ಜನರಲ್ ರ ಬಗ್ಗೆ.
  • ಲೇಖನಗಳು ೧೬೬-೧೬೭ ಸರಕಾರದ ವ್ಯವಹಾರಗಳನ್ನು ನಡೆಸುವ ಬಗ್ಗೆ.
ಅಧ್ಯಾಯ ೩ - ಲೇಖನಗಳು ೧೬೮ - ೨೧೨ ರಾಜ್ಯಗಳ ಶಾಸಕಾಂಗದ ಬಗ್ಗೆ.
  • ಲೇಖನಗಳು ೧೬೮ - ೧೭೭ ಸಾಮಾನ್ಯ ಮಾಹಿತಿ
  • ಲೇಖನಗಳು ೧೭೮ - ೧೮೭ ರಾಜ್ಯ ಶಾಸಕಾಂಗದ ಅಧಿಕಾರಿಗಳ ಬಗ್ಗೆ,
  • ಲೇಖನಗಳು ೧೮೮ - ೧೮೯ ಕಾರ್ಯನಿರ್ವಣೆಯ ಬಗ್ಗೆ,
  • ಲೇಖನಗಳು ೧೯೦ - ೧೯೩ ಸದಸ್ಯರನ್ನು ವಜಾ ಮಾಡುವ ಬಗ್ಗೆ,
  • ಲೇಖನಗಳು ೧೯೪ - ೧೯೫ ಸಭೆಯ ಮತ್ತದರ ಸದಸ್ಯರ ಅಧಿಕಾರಗಳು, ಸವಲತ್ತುಗಳು ಮತ್ತು ಕಾನೂನಿಕ ಸಂರಕ್ಷಣೆಗಳು,
  • ಲೇಖನಗಳು ೧೯೬ - ೨೦೧ ಶಾಸಕಾಂಗದ ಕಾರ್ಯವಿಧಾನದ ಬಗ್ಗೆ,
  • ಲೇಖನಗಳು ೨೦೨ - ೨೦೭ ಅರ್ಥಿಕ ವಿಷಯಗಳಲ್ಲಿ ಕಾರ್ಯವಿಧಾನಗಳ ಬಗ್ಗೆ,
  • ಲೇಖನಗಳು ೨೦೮ - ೨೧೨ ಇತರೆ ಸಾಮಾನ್ಯ ಕಾರ್ಯವಿಧಾನಗಳ ಬಗ್ಗೆ.
ಅಧ್ಯಾಯ ೪ - ಲೇಖನ ೨೧೩ ರಾಜ್ಯಪಾಲರ ಶಾಸಕಾಂಗ ಅಧಿಕಾರಗಳ ಬಗ್ಗೆ
  • ಲೇಖನ ೨೧೩ - ರಾಷ್ಟ್ರಪತಿಗೆ ಸಂಸತ್ತು ಸಭೆಯಲ್ಲಿಲ್ಲದ ಕಾಲದಲ್ಲಿ ವಿಧೇಯಕಗಳನ್ನು ನೀಡುವ ಅಧಿಕಾರದ ಬಗ್ಗೆ.
ಅಧ್ಯಾಯ ೫ - ಲೇಖನಗಳು ೨೧೪ - ೨೩೧ ರಾಜ್ಯಗಳ ಉಚ್ಚನ್ಯಾಯಾಲಯಗಳ ಬಗ್ಗೆ.
  • ಲೇಖನಗಳು ೨೧೪ - ೨೩೧ ರಾಜ್ಯಗಳ ಉಚ್ಚನ್ಯಾಯಾಲಯಗಳ ಬಗ್ಗೆ.
ಅಧ್ಯಾಯ ೬ - ಲೇಖನಗಳು ೨೩೩ - ೨೩೭ ಅಧೀನ ನ್ಯಾಯಾಲಯಗಳ ಬಗ್ಗೆ.
  • ಲೇಖನಗಳು ೨೩೩ - ೨೩೭ ಅಧೀನ ನ್ಯಾಯಾಲಯಗಳ ಬಗ್ಗೆ
  • ಭಾಗ ೭ - ಮೊದಲನೆ ಅನುಚ್ಛೇಧದ 'ಬಿ' ಭಾಗದಲ್ಲಿರುವ ರಾಜ್ಯಗಳ ಬಗ್ಗೆ ಲೇಖನಗಳು.
  • ಲೇಖನ ೨೩೮ ಲೇಖನ ೨೩೮ರ ರದ್ದುಪಡಿಸುವಿಕೆ. ಅದರ ಬದಲು ಸಂವಿಧಾನ (ಏಳನೇ ತಿದ್ದುಪಡಿ) ಕಾಯಿದೆ, ೧೯೫೬, ಎಸ್. ೨೯ ಮತ್ತು ಅನುಚ್ಛೇದ.
  • ಭಾಗ ೮ - ಕೇಂದ್ರಾಡಳಿತ ಪ್ರದೇಶಗಳ ಬಗ್ಗೆ ಲೇಖನಗಳು
  • ಲೇಖನಗಳು ೨೩೯ - ೨೪೨ ಆಳ್ವಿಕೆ, ಸಚಿವ ಸಂಪುಟದ ರಚನೆ ಮತ್ತು ಉಚ್ಚ ನ್ಯಾಯಾಲಯಗಳ ಬಗ್ಗೆ
  • ಭಾಗ ೯ - ಪಂಚಾಯತಿ ಪದ್ಧತಿಯ ಬಗ್ಗೆ ಲೇಖನಗಳು
  • ಲೇಖನಗಳು ೨೪೩ - ೨೪೩ಓ ಗ್ರಾಮ ಸಭೆ ಮತ್ತು ಪಂಚಾಯತಿ ಪದ್ಧತಿಯ ಬಗ್ಗೆ
  • ಭಾಗ ೯ಎ - ನಗರಪಾಲಿಕೆಗಳ ಬಗ್ಗೆ ಲೇಖನಗಳು.
  • ಲೇಖನಗಳು ೨೪೩ಪಿ - ೨೪೩ಜೆಡ್‍ಜಿ ನಗರಪಾಲಿಕೆಗಳ ಬಗ್ಗೆ
  • ಭಾಗ ೧೦ - ಪರಿಶಿಷ್ಟ ಪಂಗಡಗಳಿರುವ ಪ್ರದೇಶಗಳ ಬಗ್ಗೆ ಲೇಖನಗಳು.
  • ಲೇಖನಗಳು ೨೪೪ - ೨೪೪ಎ ಆಳ್ವಿಕೆ, ಸಚಿವ ಸಂಪುಟದ ರಚನೆ ಮತ್ತು ಶಾಸನಸಭೆಗಳ ಬಗ್ಗೆ.

ಭಾಗ ೧೧ - ಕೇಂದ್ರ ಮತ್ತು ರಾಜ್ಯಗಳ ಸಂಭಂಧಗಳ ಬಗ್ಗೆ

ಅಧ್ಯಾಯ ೧ - ಲೇಖನಗಳು ೨೪೫ - ೨೫೫ ಶಾಸಕಾಂಗದ ಅಧಿಕಾರಗಳ ವಿತರಣೆಯ ಬಗ್ಗೆ:
  • ಲೇಖನಗಳು ೨೪೫ - ೨೫೫ ಶಾಸಕಾಂಗದ ಸಂಬಂಧಗಳ ವಿತರಣೆಯ ಬಗ್ಗೆ:
  • ಸಂವಿಧಾನದ 11ನೇ ಅಧ್ಯಾಯವು ಒಕ್ಕೂಟ (UNION) ಮತ್ತು ರಾಜ್ಯಗಳ ನಡುವೆ ಹಂಚಿಕೆಯಾಗಿರುವ ಶಾಸನಗಳ ರಚನೆಯ ಅಧಿಕಾರದ ಕುರಿತು ಸ್ಪಷ್ಟವಾಗಿ ಹೇಳಿದೆ .
  • 245 ರಿಂದ 255 ನೇ ವಿಧಿಯು ಹಲವು ಹಂತಗಳಲ್ಲಿ ಶಾಸನಗಳ ರಚನೆಯ ಅಧಿಕಾರವನ್ನು ಒಕ್ಕೂಟ (ಕೇಂದ್ರ) ಮತ್ತು ರಾಜ್ಯಗಳ ನಡುವೆ ಹಂಚಿಕೆ ಮಾಡಿದೆ. ಸಂಸತ್ ಇಡೀ ಭಾರತದ ಭೂ ಭಾಗಕ್ಕೆ ಅಥವಾ ಆಯ್ದ ಪ್ರದೇಶವೊಂದಕ್ಕೆ ಶಾಸನ ರಚಿಸುವ ಅಧಿಕಾರವನ್ನು ಹೊಂದಿದೆ. ರಾಜ್ಯವು ಅದರ ಭೌಗೋಳಿಕ ಪ್ರದೇಶದ ವ್ಯಾಪ್ತಿಗೆ ಮಾತ್ರ ಶಾಸನ ರಚಿಸಲು ಅವಕಾಶ ಹೊಂದಿದೆ. ಸಂವಿಧಾನದ 7ನೇ ಅನುಸೂಚಿಯು ಮೂರು ಪ್ರಕಾರದ ಪ್ರತ್ಯೇಕ ಪಟ್ಟಿಯನ್ನು ಹೊಂದಿದೆ.
೧)ಒಕ್ಕೂಟದ ಪಟ್ಟಿ (UNION LIST) 97 ವಿಷಯಗಳನ್ನು ಒಳಗೊಂಡಿದೆ. ಈ ಎಲ್ಲಾ ವಿಷಯಗಳ ಕುರಿತು ಅಗತ್ಯ ಕಾನೂನು ರಚಿಸುವ ಅಧಿಕಾರ ಸಂಸತ್ತಿಗೆ ಮಾತ್ರ ಇದೆ.
೨)ರಾಜ್ಯ ಪಟ್ಟಿಯಲ್ಲಿ (STATE LIST) 66 ವಿಷಯಗಳಿದ್ದು ಇವುಗಳ ಕುರಿತು ಶಾಸನ ರಚಿಸುವ ಅಧಿಕಾರ ರಾಜ್ಯಗಳಿಗೆ ಇದೆ.
೩)ಸಮವರ್ತಿ ಪಟ್ಟಿಯಲ್ಲಿ (CONCURRENT LIST) 47 ವಿಷಯಗಳಿವೆ. ಈ ಪಟ್ಟಿಯ ಅನುಸಾರ ಶಾಸನ ರಚಿಸುವ ಅಧಿಕಾರ ಕೇಂದ್ರ ಮತ್ತು ರಾಜ್ಯಗಳಿಗೂ ಇದೆ.
  • ರಾಜ್ಯ ರಚಿಸಿದ ಶಾಸನವು ಸಂಸತ್ತಿನಿಂದ ರಚಿಸಲಾದ ಶಾಸನಕ್ಕೆ ತದ್ವಿರುದ್ಧ ಆಗಿದ್ದರೆ ಅಂತಹ ಸಂದರ್ಭದಲ್ಲಿ ಸಂಸತ್ತಿನಿಂದ ರಚಿಸಲ್ಪಟ್ಟ ಶಾಸನಕ್ಕೇ ಮಾನ್ಯತೆ ಲಭಿಸುತ್ತದೆ. ಇದಲ್ಲದೇ ಈ ಮೇಲಿನ ಮೂರು ಪಟ್ಟಿಯಲ್ಲಿ ಇರದ ಯಾವುದೇ ವಿಷಯದ ಕುರಿತು ಸೂಕ್ತ ಮತ್ತು ಅಗತ್ಯ ಕಾನೂನು ರಚಿಸುವ ಅಧಿಕಾರ (RESIDUARY POWER) ಸಂಸತ್ತಿಗೆ ಇದೆ.()

ಅಧ್ಯಾಯ ೨ - ಲೇಖನಗಳು ೨೫೬ - ೨೬೩ ಆಡಳಿತದ ಸಂಬಂಧಗಳು

  • ಲೇಖನಗಳು ೨೫೬ - ೨೬೧ - ಸಾಮಾನ್ಯ
  • ಲೇಖನಗಳು ೨೬೨ - ನೀರಿನ ವಿವಾದಗಳ ಬಗ್ಗೆ.
  • ಲೇಖನಗಳು ೨೬೩ - ರಾಜ್ಯಗಳ ಮಧ್ಯೆ ಸಂಯೋಜನೆಯ ಬಗ್ಗೆ.
ಅಧ್ಯಾಯ ೧ - ಲೇಖನಗಳು ೨೬೪ - ೨೯೧ ಹಣಕಾಸಿನ ಬಗ್ಗೆ
  • ಲೇಖನಗಳು ೨೬೪ - ೨೬೭ ಸಾಮಾನ್ಯ
  • ಲೇಖನಗಳು ೨೬೮ - ೨೮೧ ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ಆದಾಯದ ಹಂಚುವಿಕೆ ಬಗ್ಗೆ
  • ಲೇಖನಗಳು ೨೮೨ - ೨೯೧ ಇತರೆ ಹಣಕಾಸಿನ ಬಗ್ಗೆ ಮುನ್ನೇರ್ಪಾಡುಗಳು
ಅಧ್ಯಾಯ ೨ - ಲೇಖನಗಳು ೨೯೨ - ೨೯೩ ಸಾಲಗಳ ಬಗ್ಗೆ
  • ಲೇಖನಗಳು ೨೯೨ - ೨೯೩ ರಾಜ್ಯಗಳು ಸಾಲ ಮಾಡುವ ಬಗ್ಗೆ
ಅಧ್ಯಾಯ ೩ - ಲೇಖನಗಳು ೨೯೪ - ೩೦೦ ಸ್ವತ್ತು, ಒಪ್ಪಂದಗಳು, ಹಕ್ಕುಗಳು, ಹೊಣೆಗಾರಿಕೆ, ಅಭಾರಗಳು ಮತ್ತು ದಾವೆಗಳ ಬಗ್ಗೆ
  • ಲೇಖನಗಳು ೨೯೪ - ೩೦೦ ಸ್ವತ್ತುಗಳ ಹಕ್ಕುಗಳು, ಹೊಣೆಗಾರಿಕೆ ಮತ್ತು ಅಭಾರಗಳು ಉತ್ತರಾಧಿಕಾರದ ಬಗ್ಗೆ.
ಅಧ್ಯಾಯ ೪ - ಲೇಖನ ೩೦೦ಎ ಸ್ವತ್ತಿನ ಮೇಲಿನ ಹಕ್ಕುಗಳ ಬಗ್ಗೆ
  • ಲೇಖನ ೩೦೦ಎ - ಜನರ ಸ್ವತ್ತುಗಳನ್ನು ಕಾನೂನುಬಾಹಿರವಾಗಿ ತಗೆದುಕೊಳ್ಳದಿರುವ ಬಗ್ಗೆ
  • ಭಾಗ ೧೩ - ಭಾರತದ ಸಂಸ್ಥಾನದ ಒಳಗೆ ವ್ಯಾಪಾರ ಮತ್ತು ವಾಣಿಜ್ಯಗಳ ಬಗ್ಗೆ ಲೇಖನಗಳು
  • ಲೇಖನಗಳು ೩೦೧ - ೩೦೫ ವ್ಯಾಪಾರ ಮತ್ತು ವಾಣಿಜ್ಯಗಳ ಸ್ವಾತಂತ್ರ್ಯತೆ ಹಾಗು ಅದರ ಮೇಲೆ ಸಂಸತ್ತು ಮತ್ತು ರಾಜ್ಯಗಳಿಗೆ ನಿರ್ಬಂಧನೆಗಳನ್ನು ಹೇರುವ ಅಧಿಕಾರದ ಬಗ್ಗೆ
  • ಲೇಖನ ೩೦೬ - ರದ್ದುಪಟ್ಟಿದೆ - ಅದರ ಬದಲು ಸಂವಿಧಾನ (ಏಳನೇ ತಿದ್ದುಪಡಿ) ಕಾಯಿದೆ, ೧೯೫೬, ಎಸ್. ೨೯ ಮತ್ತು ಅನುಚ್ಛೇದ.
  • ಲೇಖನ ೩೦೭ - ಲೇಖನ ೩೦೧ ರಿಂದ ೩೦೪ರಲ್ಲಿರುವ ಕಾರ್ಯಗಳನ್ನು ನಡೆಸುವ ಪ್ರಾಧಿಕಾರವನ್ನು ನೇಮಿಸುವ ಬಗ್ಗೆ.
  • ಭಾಗ ೧೪ - ರಾಜ್ಯ ಮತ್ತು ಕೇಂದ್ರದಡಿಯಲ್ಲಿರುವ ಸೇವೆಗಳ ಬಗ್ಗೆ ಲೇಖನಗಳು
ಅಧ್ಯಾಯ ೫ - ಲೇಖನಗಳು ೩೦೮ - ೩೧೪ ಸೇವೆಗಳ ಬಗ್ಗೆ
  • ಲೇಖನಗಳು ೩೦೮ - ೩೧೩ ಸೇವೆಗಳ ಬಗ್ಗೆ
  • ಲೇಖನ ೩೧೪ - ರದ್ದುಪಟ್ಟಿದೆ - ಅದರ ಬದಲು ಸಂವಿಧಾನ (ಇಪ್ಪತೆಂಟನೇ ತಿದ್ದುಪಡಿ) ಕಾಯಿದೆ, ೧೯೭೨, ಎಸ್. ೩ (೨೯-೮-೧೯೭೨ರಿಂದ ಜಾರಿಗೆ).
ಅಧ್ಯಾಯ ೨ - ಲೇಖನಗಳು ೩೧೫ - ೩೨೩ ಲೋಕಸೇವ ಆಯೋಗಗಳ ಬಗ್ಗೆ
  • ಲೇಖನಗಳು ೩೧೫ - ೩೨೩ ಲೋಕಸೇವ ಆಯೋಗಗಳ ಬಗ್ಗೆ
  • ಭಾಗ ೧೪ಎ - ಆಯೋಗಗಳ ಬಗ್ಗೆ ಲೇಖನಗಳು
  • ಲೇಖನಗಳು ೩೨೩ಎ - ೩೨೩ಬಿ
  • ಭಾಗ ೧೫ - ಚುನಾವಣೆಗಳ ಬಗೆಗಿನ ಲೇಖನಗಳನ್ನು ಒಳಗೊಂಡಿದೆ
  • ಲೇಖನಗಳು ೩೨೪ - ೩೨೯ ಚುನಾವಣೆಗಳ ಬಗ್ಗೆ
  • ಲೇಖನ ೩೨೯ ಎ - ರದ್ದುಪಟ್ಟಿದೆ - ಅದರ ಬದಲು ಸಂವಿಧಾನ (ನಲ್ವತ್ತನಾಲ್ಕನೇ ತಿದ್ದುಪಡಿ) ಕಾಯಿದೆ, ೧೯೭೮, ಎಸ್.೩೬ (೨೦-೬-೧೯೭೯ರಿಂದ ಜಾರಿಗೆ).
  • ಭಾಗ ೧೬ - ಕೆಲ ವರ್ಗಗಳಿಗೆ ವಿಶೇಷ ಸವಲತ್ತುಗಳನ್ನು ಒದಗಿಸುವ ಬಗ್ಗೆ ಲೇಖನಗಳು.
ಅಧ್ಯಾಯ ೧ - ಲೇಖನಗಳು ೩೪೩ - ೩೪೪ ಕೇಂದ್ರದ ಭಾಷೆಯ ಬಗ್ಗೆ
  • ಲೇಖನಗಳು ೩೪೩ - ೩೪೪ ಕೇಂದ್ರದ ಅಧಿಕೃತ ಭಾಷೆಯ ಬಗ್ಗೆ
  • ಅಧ್ಯಾಯ ೨ - ಲೇಖನಗಳು ೩೪೫ - ೩೪೭ ಪ್ರಾಂತೀಯ ಭಾಷೆಗಳ ಬಗ್ಗೆ
  • ಲೇಖನಗಳು ೩೪೫ -೩೪೭ ಪ್ರಾಂತೀಯ ಭಾಷೆಗಳ ಬಗ್ಗೆ
ಅಧ್ಯಾಯ ೩ - ಲೇಖನಗಳು ೩೪೮ - ೩೪೯ ಸರ್ವೋಚ್ಛ ನ್ಯಾಯಾಲಯ, ಉಚ್ಚ ನ್ಯಾಯಾಲಯಗಳ ಭಾಷೆಗಳ ಬಗ್ಗೆ, ಇತ್ಯಾದಿ
  • ಲೇಖನಗಳು ೩೪೮ - ೩೪೯ ಸರ್ವೋಚ್ಛ ನ್ಯಾಯಾಲಯ, ಉಚ್ಚ ನ್ಯಾಯಾಲಯಗಳ ಭಾಷೆಗಳ ಬಗ್ಗೆ, ಇತ್ಯಾದಿ
ಅಧ್ಯಾಯ ೪ - ಲೇಖನಗಳು ೩೫೦ - ೩೫೧ ವಿಶೇಷ ನಿರ್ದೇಶಕಗಳ ಬಗ್ಗೆ
  • ಲೇಖನ ೩೫೦ - ಅಹವಾಲುಗಳನ್ನು ಸಲ್ಲಿಸುವಲ್ಲಿ ಉಪಯೋಗಿಸಬೇಕಾಗಿರುವ ಭಾಷೆಯ ಬಗ್ಗೆ.
  • ಲೇಖನ ೩೫೦ ಎ - ಮಾತೃಭಾಷೆಯಲ್ಲಿ ಪ್ರಾಥಮಿಕ ಮಟ್ಟದಲ್ಲಿ ಶಿಕ್ಷಣ ದೊರಕಿಸುವಿಕೆಯ ಬಗ್ಗೆ
  • ಲೇಖನ ೩೫೦ಬಿ - ಭಾಷಾ ಅಲ್ಪಸಂಖ್ಯಾತರಿಗೆ ವಿಶೇಷ ಅಧಿಕಾರಿ ನೇಮಕದ ಬಗ್ಗೆ.
  • ಲೇಖನ ೩೫೧ - ಹಿಂದಿ ಭಾಷೆಯ ಬೆಳವಣೆಗೆಯ ಬಗ್ಗೆ ನಿರ್ದೇಶಕ.
  • ಭಾಗ ೧೮ - ತುರ್ತುಪರಿಸ್ಥಿತಿಗಳ ಮುನ್ನೇರ್ಪಾಡಿನ ಬಗ್ಗೆ ಲೇಖನಗಳು
  • ಲೇಖನಗಳು ೩೫೨ - ೩೫೯ - ತುರ್ತು ಪರಿಸ್ಥಿತಿಗಳ ಮುನ್ನೇರ್ಪಾಡುಗಳು.
  • ಲೇಖನ ೩೫೯ಎ - ರದ್ದುಪಟ್ಟಿದೆ - ಅದರ ಬದಲು ಸಂವಿಧಾನ (ಅರವತ್ತಮೂರನೇ ತಿದ್ದುಪಡಿ) ಕಾಯಿದೆ, ೧೯೮೯, ಎಸ್. ೩ (೬-೧-೧೯೯೦ರಿಂದ ಜಾರಿಗೆ).
ಲೇಖನ ೩೬೦ - ಹಣಕಾಸಿನ ತುರ್ತು ಪರಿಸ್ಥಿತಿಗಳಿಗೆ ಮುನ್ನೇರ್ಪಾಡುಗಳು.
  • ಭಾಗ ೧೯ - ಇತರೆ ವಿಷಯಗಳು
  • ಲೇಖನಗಳು ೩೬೧ - ೩೬೧ಎ - ಇತರೆ ವಿಷಯಗಳು
  • ಲೇಖನ ೩೬೨ - ರದ್ದುಪಟ್ಟಿದೆ - ಅದರ ಬದಲು ಸಂವಿಧಾನ (ಇಪ್ಪತ್ತೇಳನೇ ತಿದ್ದುಪಡಿ) ಕಾಯಿದೆ, ೧೯೭೧, ಎಸ್.೨ .
  • ಲೇಖನಗಳು ೩೬೩ - ೩೬೭ - ಇತರೆ
  • ಭಾಗ ೨೦ - ಸಂವಿಧಾನದ ತಿದ್ದುಪಡಿಯ ಬಗೆಗಿನ ಲೇಖನಗಳು.
  • ಲೇಖನ ೩೬೮ - ಶಾಸನಸಭೆಗಿರುವ ಸಂವಿಧಾನವನ್ನು ತಿದ್ದುವ ಅಧಿಕಾರಗಳು ಮತ್ತದನ್ನು ಮಾಡುವ ವಿಧಾನ.
  • ಭಾಗ ೨೧ - ತಾತ್ಕಾಲಿಕ, ಹಂಗಾಮಿ ಮತ್ತು ವಿಶೇಷ ಮುನ್ನೇರ್ಪಾಡುಗಳ ಬಗ್ಗೆ ಲೇಖನಗಳು
  • ಲೇಖನಗಳು ೩೬೯ -೩೭೮ಎ ತಾತ್ಕಾಲಿಕ, ಹಂಗಾಮಿ ಮತ್ತು ವಿಶೇಷ ಮುನ್ನೇರ್ಪಾಡುಗಳ ಬಗ್ಗೆ
  • ಲೇಖನಗಳು ೩೭೯ - ೩೯೧ - ರದ್ದುಪಟ್ಟಿದೆ - ಅದರ ಬದಲು ಸಂವಿಧಾನ (ಏಳನೇ ತಿದ್ದುಪಡಿ) ಕಾಯಿದೆ, ೧೯೫೬, ಎಸ್. ೨೯ ಮತ್ತು ಅನುಚ್ಛೇದ.
  • ಲೇಖನ ೩೯೨ - ಸಂಕಷ್ಟ ಪರಿಸ್ಥಿತಿಗಳನ್ನು ನಿವಾರಿಸಲು ರಾಷ್ಟ್ರಪತಿಯ ಅಧಿಕಾರಗಳು.
  • ಭಾಗ ೨೨ - ಸಂಕ್ಷಿಪ್ತ ಶೀರ್ಷಿಕೆ, ಪ್ರಾರಂಭದ ದಿನ, ಹಿಂದಿ ಭಾಷೆಯ ಅಧಿಕೃತ ಪಠ್ಯ ಮತ್ತು ರದ್ದು ಮಾಡುವಿಕೆಯ ಬಗ್ಗೆ ಲೇಖನಗಳು
  • ಲೇಖನಗಳು ೩೯೩ -೩೯೫ ಪ್ರಾರಂಭವಾಗುವ ದಿನ, ಹಿಂದಿ ಭಾಷೆಯ ಅಧಿಕೃತ ಪಠ್ಯ ಮತ್ತು ರದ್ದು ಮಾಡುವಿಕೆ 

ಲೇಖನ ೩೭೦

  • ಭಾರತದ ಸಂವಿಧಾನದ ೩೭೦ನೇ ವಿಧಿ
  • "ಕಾಶ್ಮೀರದ ಬಗೆಗೆ ಈ ಲೇಖನದಲ್ಲಿರುವ ಭರವಸೆಯನ್ನು ಆ ಸಮಯದಲ್ಲಿ ಅಸ್ತಿತ್ವದಲ್ಲಿದ್ದ ಪರಿಸ್ಥಿತಿಯನ್ನು ಅನುಸರಿಸಿ ಸೇರಿಕೆ ಮಾಡಲಾಯಿತು. 

ಲೇಖನ ೩೭೦ ಮತ್ತು ೩೫ ಎ ರದ್ದು

  • ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ೩೭೦ನೇ ವಿಧಿ, ಮತ್ತು ೩೫ಎ ವಿಧಿಯನ್ನು ರದ್ದುಪಡಿಸುವ ಶಿಫಾರಸಿಗೆ ಸುಗ್ರೀವಾಜ್ಞೆ ಮೂಲಕ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಂಕಿತ ಹಾಕುವ ಮೂಲಕ ರದ್ದುಪಡಿಸಿದರು. ೩೭೦ ನೇ ವಿಧಿಯನ್ನು ರದ್ದುಪಡಿಸುವ ವಿಧೇಯಕವನ್ನು ಆಗಸ್ಟ್ ೫, ೨೦೧೯ ರಂದು ಕೇಂದ್ರ ಗೃಹಸಚಿವ ಅಮಿತ್ ಶಾ ಮಂಡಿಸಿದರು. ವಿಧೇಯಕಕ್ಕೆ ರಾಜ್ಯಸಭೆಯಲ್ಲಿ ಅಂಗೀಕಾರ ದೊರಕಿತು. ಇದು ದಿ ೬ ಆಗಸ್ಟ್ ೨೦೧೯ ಲೋಕಸಭೆ ಅಂಗೀಕರಿಸುವ ಮೂಲಕ ಅಧಿಸೂಚನೆಯ ಎರಡೂ ನಿಯಮಗಳು ಖಾಯಂ ಆಗಿ ರದ್ದಾಯಿತು. 

ಟೀಕೆಗಳು

ಪಾಶ್ಚಿಮಾತ್ಯ ಸಂವಿಧಾನಗಳಿಂದ ಪ್ರೇರಿತ ಭಾರತದ ಸಂವಿಧಾನವು ಅವುಗಳಿಗಿಂತ ಭಿನ್ನವಾಗಿದೆ, ಹೇಗೆಂದರೆ ಶಾಸಕಾಂಗ ವನ್ನು ನಾಡಿನ ಪ್ರಧಾನ ಕಾನೂನು ರಚಿಸುವ ಅಂಗವನ್ನಾಗಿ ಸಂವಿಧಾನವು ಎತ್ತಿ ಹಿಡಿಯುತ್ತದೆ. ಈ ರೀತಿಯಾಗಿ ಶಾಸಕಾಂಗ ವು ಕಾರ್ಯಾಂಗ ಮತ್ತು ನ್ಯಾಯಾಂಗ ಗಳಿಗಿಂತ ಬಲಿಷ್ಠವಾಗಿದೆ. ಸಂವಿಧಾನದ ಮೂಲಭೂತ ವಿನ್ಯಾಸವು ಮಜಬೂತಾಗಿದ್ದರೂ, ಅಧಿಕಾರಶಾಹೀ ವರ್ಗಕ್ಕೆ ದುರುಪಯೋಗದ ಆಸ್ಪದ ಕೊಡುವುದೆಂಬ ಟೀಕೆಯೂ ಸೇರಿದೆ. ದೇಶದಲ್ಲಿ ವ್ಯಾಪಿಸಿರುವ ಭ್ರಷ್ಟಾಚಾರ ಹಾಗೂ ಬಡತನಗಳೇ ಇದಕ್ಕೆ ಸಾಕ್ಷಿಗಳಾಗಿಿಿಿವೆ.


*ಭಾರತದ ಸಂವಿಧಾನದ ವಿಧಿಗಳು*


: 💐ಭಾರತ ಸಂವಿಧಾನ 💐


ಭಾಗ -1 ( ಒಕ್ಕೂಟ ಮತ್ತು ಭೂಪ್ರದೇಶ) 


1ಒಕ್ಕೂಟದ ಹೆಸರು 

2ನೂತನ  ರಾಜ್ಯಗಳ ರಚನೆ 

3ಸರಹದ್ದುಗಳು 


ಭಾಗ -2 


5ಪೌರತ್ವ 

6ಪಾಕ್ನಿಂದ ಭಾರತಕ್ಕೆ ಬಂದ ಪೌ. ಹಕ್ಕು .

7ಭಾರತದಿಂದ ಪಾಕ್ ಗೆ ಹೋದ ಪೌ. ಹಕ್ಕು 

8ವಿದೇಶದಲ್ಲಿರುವ ಭಾರತೀಯರಿಗೆ ಪೌ.ಹಕ್ಕು


ಭಾಗ -3 ( ಮೂಲಭೂತ ಹಕ್ಕುಗಳು ) 


14ಸಮಾನೆತೆಯ ಹಕ್ಕು

15ತಾರತಮ್ಯ ನಿಷೇಧ

16 ಉದ್ಯೋಗದಲ್ಲಿ ಸಮಾನತೆ 

17ಅಸ್ಪ್ರಶ್ಯತೆ ನಿರ್ಮೊಲನೆ

18ಬಿರುಡುಗಳ ರದ್ದತಿ

19 6 ಸ್ವಾತಂತ್ರ್ಯಗಳು 

20ಅಪರಾಧಗಳ ಬಗ್ಗೆ ಅಪರದಿಯೆಂದು ನಿರ್ಣಯಿಸುವ ಸಂಬಂಧದಲ್ಲಿ ರಕ್ಸ್ಷಣೆ

21ಜೀವಿಸುವ ಹಕ್ಕು

21("ಎ) ವಿದ್ಯಾಭ್ಯಾಸದ ಹಕ್ಕು 

23ಮಾನವ ಮಾರಾಟ , ಬಲವಂತ ದುಡಿಮೆ 

24ಬಾಲಕಾ... ಕ ನಿಷೇಧ

25ಧಾರ್ಮಿಕ ಆಚರಣೆ 

26ಧಾರ್ಮಿಕ ಸ್ವಾತಂತ್ರ್ಯ

27ಧರ್ಮದ ಉನ್ನತಿಗಾಗಿ ತೆರಿಗೆಗಳ ವಿನಾಯ್ತಿ 

29ಅಲ್ಪಸಂಖ್ಯಾತರಿಗೆ ಹಿತಾಸಕ್ತಿ ಸಂರಕ್ಷಣೆ 

30 ಅಲ್ಪಸಂಖ್ಯಾತರಿಗೆ ಶಿಕ್ಷಣ ಸಂಸ್ಥೆಗಳ ಸ್ಥಾಪನ  :


 ಭಾಗ-4(ಎ) ಮೂಲಭೂತ ಕರ್ತವ್ಯಗಳು


51(ಎ)11ಮೂಲಭೂತ ಕರ್ತವ್ಯಗಳು 

💐ಭಾಗ -5(ಕೇಂದ್ರ ಸರ್ಕಾರ )

52 ರಾಷ್ಪಪತಿ 

54ರಾಷ್ಪಪತಿ ಚುನಾವಣೆ

58ರಾಷ್ಪಪತಿಯ ಅರ್ಹತೆಗಳು 

60ರಾಷ್ಪಪತಿಯ ಪ್ರಮಾಣ ವಚನ 

61 ಮಹಾಭಿಯೋಗ 

63ಉಪರಾಷ್ಪಪತಿ 

67ಉಪರಾಷ್ಪಪತಿ ಪದವಧಿ 

72ರಾಷ್ಪಪತಿ ಕ್ಷಮಾಧಾನ 

74 ರಾಷ್ಪಪತಿಗೆ ಮಂತ್ರಿಮಂಡಲದ ನೆರವು

75ಪ್ರಧಾನಿ  ಮಂತ್ರಿಮಂಡಲದ ನೇಮಕ 

76ಅ ....ಜನರಲ್ 

79 ಸಂಸತ್ತಿನ ರಚನೆ 

80 ರಾಜ್ಯಸಭೆ ರಚನೆ 

81ಲೋಕಸಭೆ ರಚನೆ

87ರಾಷ್ಪಪತಿಯ ವಿಶೇಷ ಭಾಷಣ 

88ಅ... ಜನರಲ್ ಹಕ್ಕುಗಳು 

89ರಾಜ್ಯಸಭೆಯ ಸಭಾಪತಿ & ಉಪಸಭಾಪತಿ 

93ಲೋಕಸಭೆಯ ಸಭಾಪತಿ &ಉಪಸಭಾಪತಿ 

99ಸಂಸತ್ ಸದಸ್ಯರಿಂದ ಪ್ರಮಾಣವಚನ 

100ಸದನದಲ್ಲಿ ಮತದಾನ ಮತ್ತು ಕೊರಂ

102 ಸದಸ್ಯರ ಅನರ್ಹತೆ ಗಳು

108 ಸಂಸತ್ತಿನ ಜಿಂಟಿ ಅಧಿವೇಶನ 

112ಕೇಂದ್ರ ಬಜೆಟ್ 

120ಸಂಸತ್ತಿನ ಬಳಸಬೇಕಾದ ಭಾಷೆಗಳು 

122 ಸಂಸತ್ತಿನಲ್ಲಿ ನ್ಯಾ.. ಹಸ್ತಕ್ಷಪ ಇಲ್ಲ 

123 ರಾಷ್ಪಪತಿ ಸುಗ್ರಿವಾನೇ 

124ಸವೋಚ್ಚ್ ನ್ಯಾಯಾಲಯ 

129 ದಾಖಲೆಯ ನ್ಯಾಯಲಯವಾಗಿ (ಸ) 

131ಸವೋಚ್ಚ್ ನ್ಯಾ  .. ಮೂಲಾಧಿಕಾರ 

133 ಸವೋಚ್ಚ್  ನ್ಯಾ. ಸಿವಿಲ್ ಅಪೀಲು 

134ಸವೋಚ್ಚ್ ನ್ಯಾ . ಕ್ರಿಮಿನಲ್ ಅಪೀಲು 

143 ಸಲಹಾ ನ್ಯಾಯಾಧಿಕರಣ 

148 ಸಿ ಎ ಜಿ


💐ಭಾಗ -6(ರಾಜ್ಯಗಳು)


153 ರಾಜ್ಯಪಾಲರು

155 ರಾಜ್ಯಪಾಲರ ನೇಮಕ 

157 ರಾಜ್ಯಪಾಲರ ಅರ್ಹತೆ ಗಳು

161 ರಾಜ್ಯಪಾಲರ ಕ್ಷಮಾಧಾನ 

163 ರಾಜ್ಯಪಾಲರಿಗೆ ಮಂತ್ರಿಮಂಡಲದ ನೆರವು 

165 ರಾಜ್ಯ ಅಡ್ವಾಕೆಟ್ ಜನರಲ್ 

170 ವಿಧಾನಸಭೆಗಳ ರಚನೆ

171ವಿಧಾನಪರಿಷತ್ತಿನ ರಚನೆ 

175 ರಾಜ್ಯಪಾಲರ ಜಿಂಟಿ ಅಧಿವೇಶನ 

178 ವಿಧಾನಸಭೆಯ ಅಧ್ಯಕ್ಷರು & ಉಪಾಧ್ಯಕ್ಷರು 

189 ಸದನದಲ್ಲಿ ಮತದಾನ &ಕೋರಂ

202 ರಾಜ್ಯ ಬಜೆಟ್

213 ರಾಜ್ಯಪಾಲರ ಸುಗ್ರೀವಾಜೆ 

214 ಉಚ್ಚನ್ಯಾಯಾಲಯ 

226 ರಿಟ್ಗಳನ್ನು ಹೊರಡಿಸುವ ಅಧಿಕಾರ 

233 ಜಿಲ್ಲಾ ನ್ಯಾಯಾಧೀಶರ ನೇಮಕಾತಿ 


ಭಾಗ -7 (ನಿರಸನಗೊಳಿಸಿದೆ )


💐ಭಾಗ - 8 (ಕೇಂದ್ರಾಡಳಿತ ಪ್ರದೇಶಗಳು) 


239(ಎ ಎ) ದೆಹಲಿಗೆ ವಿಶೇಷ ಉಪಬಂಧಗಳು 

240 ಕೇಂದ್ರಾಡಳಿತ ಪ್ರದೇಶ ರಾಷ್ಪಪತಿ ಅಧಿಕಾರ 


💐ಭಾಗ -9(ಪಂಚಾಯಿತಿಗಳು )


243- ಸ್ಥಳೀಯ ಸರ್ಕಾರಗಳು 


💐ಭಾಗ -10 (ಅನುಸೂಚಿತ ಬುಡಕಟ್ಟು ಪ್ರದೇಶಗಳು)

244 -ಅನುಸೂಚಿತ ಬುಡಕಟ್ಟು ಪ್ರದೇಶ ಆಡಳಿತ 


💐ಭಾಗ - 11 (ಕೇಂದ್ರ & ರಾಜ್ಯಗಳ ಸಂಬಂಧಗಳು) 


262- ಅಂತಾರಾಜ್ಯ ನದಿ ವಿವಾದಗಳ ಇತ್ಯರ್ಥ 


💐ಭಾಗ -12(ಹಣಕಾಸು , ಕರಾರು & ದಾವೆ ) 


266- ಸಂಚಿತ ವಿಧಿ 

280- ಹಣಕಾಸು ಆಯೋಗ 

300(ಎ) ಆಸ್ತಿಯ ಹಕ್ಕಿಗೆ ಕಾನೂನಿನ ನೆರವು 


💐 ಭಾಗ - 13 (ವ್ಯಾಪಾರ ,ವಾಣಿಜ್ಯ & ಸಂಪರ್ಕ ) 

302 ನಿರ್ಬಂಧ ವಿಧಿಸುವ ಸಂಸತ್ತಿನ ಅಧಿಕಾರ 


💐ಭಾಗ - 14 (ಲೋಕಸೇವಾ ಆಯೋಗಗಳು ) 


312 ಅಖಿಲ ಭಾರತ ಸೇವೆಗಳು 

315 upsc & kpsc


💐💐💐💐💐💐💐💐


ಭಾಗ - 15 (ಚುನಾವಣೆಗಳು) 

324- ಚುನಾವಣಾಆಯೋಗ 

326 ವಯಸ್ಕರ ಮತದಾನ ಪದ್ಧತಿ 

💐💐💐💐💐💐💐💐💐

ಭಾಗ -16 ಕೆಲವು ವರ್ಗಗಳ ವಿಶೇಷ   ಉಪಬಂಧ 

330 - sc& st ಲೋಕಸಭೆಯಲ್ಲಿ ಮೀಸಲಾತಿ 

331- ಲೋಕಸಭೆಯಲ್ಲಿ ಆಂಗ್ಲೋ  ಇಂಡಿಯನ್ 

332- sc&st  ವಿಧಾನಸಭೆಯಲ್ಲಿ ಮೀಸಲಾತಿ 

333-ವಿಧಾನಸಭೆಯಲ್ಲಿ ಆಂಗ್ಲೋ ಇಂಡಿಯನ್ 

💐💐💐💐💐💐💐💐💐

ಭಾಗ - 17 (ರಾಜ್ಯ ಭಾಷೆ ) 

335- ರಾಜ್ಯ ಆಡಳಿತ ಭಾಷೆಗಳು 

350- ಎ ಪ್ರಾ .. ಹಂತದಲ್ಲಿ ಮಾ....ಭಾಷಾ ಶಿಕ್ಷಣ

💐💐💐💐💐💐💐💐💐

ಭಾಗ - 18 (ತುರ್ತುಪರಿಸ್ಥಿತಿಗಳು)

352- ರಾಷ್ಟ್ರೀಯ ತುರ್ತುಪರಿಸ್ಥಿತಿ 

356- ರಾಜ್ಯ ತುರ್ತು ಪರಿಸ್ಥಿತಿ 

360- ಹಣಕಾಸು ತುರ್ತುಪರಿಸ್ಥಿತಿ 

💐💐💐💐💐💐💐💐💐

ಭಾಗ- 19 (ಇತರೆ ) 

364 - ವಿಮಾನ ನಿಲ್ದಾಣ , ಬಂದರುಗಳು 

ಭಾಗ - 20 ( ಸಂವಿಧಾನದ ತಿದ್ದುಪಡಿಗಳು) 

368- ತಿದ್ದುಪಡಿಗಳು 

💐💐💐💐💐💐💐💐💐

ಭಾಗ -21(ವಿಶೇಷ ಉಪಬಂಧಗಳು ) 

370-ಜಮ್ಮು ಕಾಶ್ಮೀರಕ್ಕೆ ಸಂಬಂಧ 

371- ಮಹಾರಾಷ್ಟ್ರ & ಗುಜರಾತ್ 

371ಜೆ ಹೈದರಾಬಾದ್ ಕರ್ನಾಟಕ

ಭಾಗ -22(ಹಿಂದಿ & ನಿರಸನಗಳು) 

394 - ಎ ಹಿಂದಿ ಭಾಷೆಯಲ್ಲಿ ಅಧಿಕೃತ ಪಠ್ಯ

395- ನಿರಸನಗಳು

➖➖➖➖➖➖➖➖➖➖

ಸಂಗ್ರಹ :✍️ T.A.ಚಂದ್ರಶೇಖರ


ಪ್ರಮುಖ ಅಂಶಗಳು

ಮೊರಾರ್ಜಿ ಪ್ರವೇಶ ಪರೀಕ್ಷೆ 2023-24 ನೇ ಸಾಲಿಗೆ ಮೊರಾರ್ಜಿ ದೇಸಾಯಿ / ಕಿತ್ತೂರು ರಾಣಿ ಚೆನ್ನಮ್ಮ / ಏಕಲವ್ಯ / ಅಟಲ್‌ ಬಿಹಾರಿ ವಾಜಪೇಯಿ / ಡಾ.ಬಿ.ಆರ್.‌ ಅಂಬೇಡ್ಕರ್‌ ...

ಪ್ರಮುಖ ಕಲಿಕಾಂಶಗಳು