ಶಿಕ್ಷಣವೇ ಶಕ್ತಿ

Friday 21 May 2021

ದಿವಂಗತ ರಾಜೀವ್ ಗಾಂಧೀ ಪುಣ್ಯ ಸ್ಮರಣೆ

ರಾಜೀವ್ ಗಾಂಧಿ

ಭಾರತದ ಮಾಜಿ ಪ್ರಧಾನ ಮಂತ್ರಿ


ರಾಜೀವ್ ಗಾಂಧಿ (೧೯೮೪-೧೯೮೯) ಭಾರತದ ೬ ನೇ ಪ್ರಧಾನಿಯಾಗಿದ್ದರು. ಇವರು ಭಾರತದ ಪ್ರಧಾನಿ 'ಶ್ರೀಮತಿ ಇಂದಿರಾ ಗಾಂಧಿ', ಹಾಗೂ 'ಫಿರೋಝ್ ಗಾಂಧಿ' ದಂಪತಿಗಳ ಮೊದಲ ಮಗ.

Quick Facts: ರಾಜೀವ್ ಗಾಂಧಿ राजीव गांधी, ರಾಷ್ಟ್ರಪತಿ ...
ರಾಜೀವ್ ಗಾಂಧಿ
राजीव गांधी

ಅಧಿಕಾರ ಅವಧಿ
೩೧ ಅಕ್ಟೊಬರ್ ೧೯೮೪ – ೨ ಡಿಸೆಂಬರ್ ೧೯೮೯
ರಾಷ್ಟ್ರಪತಿಜೈಲ್ ಸಿಂಗ್
ರಾಮಸ್ವಾಮಿ ವೆಂಕಟರಾಮನ್
ಪೂರ್ವಾಧಿಕಾರಿಇಂದಿರಾ ಗಾಂಧಿ
ಉತ್ತರಾಧಿಕಾರಿವಿಶ್ವನಾಥ ಪ್ರತಾಪ ಸಿಂಗ್

ವಿದೇಶಾಂಗ ಸಚಿವ
ಅಧಿಕಾರ ಅವಧಿ
೨೫ ಜುಲೈ ೧೯೮೭ – ೨೫ ಜೂನ್ ೧೯೮೮
ಪೂರ್ವಾಧಿಕಾರಿನಾರಾಯಣ ದತ್ತ ತಿವಾರಿ
ಉತ್ತರಾಧಿಕಾರಿನರಸಿಂಹ ರಾವ್
ಅಧಿಕಾರ ಅವಧಿ
೩೧ ಅಕ್ಟೋಬರ್ ೧೯೮೪ – ೨೫ ಸೆಪ್ಟೆಂಬರ್ ೧೯೮೫
ಪೂರ್ವಾಧಿಕಾರಿಇಂದಿರಾ ಗಾಂಧಿ
ಉತ್ತರಾಧಿಕಾರಿಬಲಿರಾಂ ಭಗತ್

ಹಣಕಾಸು ಸಚಿವ
ಅಧಿಕಾರ ಅವಧಿ
೨೪ ಜನವರಿ ೧೯೮೭ – ೨೫ ಜುಲೈ ೧೯೮೭
ಪೂರ್ವಾಧಿಕಾರಿವಿಶ್ವನಾಥ ಪ್ರತಾಪ ಸಿಂಗ್
ಉತ್ತರಾಧಿಕಾರಿನಾರಾಯಣ ದತ್ತ ತಿವಾರಿ

ರಕ್ಷಣಾ ಸಚಿವ
ಅಧಿಕಾರ ಅವಧಿ
೨೫ ಸೆಪ್ಟೆಂಬರ್ ೧೯೮೫ – ೨೪ ಜನವರಿ ೧೯೮೭
ಪೂರ್ವಾಧಿಕಾರಿನರಸಿಂಹ ರಾವ್
ಉತ್ತರಾಧಿಕಾರಿವಿಶ್ವನಾಥ ಪ್ರತಾಪ ಸಿಂಗ್
ವೈಯಕ್ತಿಕ ಮಾಹಿತಿ
ಜನನ೨೦ ಆಗಸ್ಟ್ ೧೯೪೪
ಮುಂಬಯಿBritish India
ಮರಣ೨೧ ಮೇ ೧೯೯೧ (aged ೪೬)
ಶ್ರಿಪೆರುಂಬುದೂರ್,ಭಾರತ
ರಾಜಕೀಯ ಪಕ್ಷಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಸಂಗಾತಿ(ಗಳು)ಸೊನಿಯಾ ಗಾಂಧಿ
ಮಕ್ಕಳುರಾಹುಲ್ ಗಾಂಧಿ
ಪ್ರಿಯಾಂಕ
ಅಭ್ಯಸಿಸಿದ ವಿದ್ಯಾಪೀಠಟ್ರಿನಿಟಿ ಕಾಲೇಜು, ಕೆಂಬ್ರಿಡ್ಜ್
ಇಂಪೀರಿಯಲ್ ಕಾಲೇಜು,ಲಂಡನ್
ಧರ್ಮಹಿಂದೂ
ಸಹಿಚಿತ್ರ:Rajiv Gandhi Signature.svg
Close
ಇಂದಿರಾ ಗಾಂಧಿಜವಹರ್‍ಲಾಲ್ ನೆಹರು, ರಾಜೀವ್ ಗಾಂಧಿ ಮತ್ತು ಸಂಜಯ್ ಗಾಂಧಿ
Prime Minister Rajiv Gandhi with Ram Kishore Shukla in 1988.
Meeting Russian Hare Krishna devotees in 1989.

ಜನನ, ಜೀವನ

  • ರಾಜೀವ್ ಗಾಂಧಿ (ಜನನ : ಆಗಸ್ಟ್ ೨೦೧೯೪೪) ತಂದೆ ಫಿರೋಝ್ ಗಾಂಧಿ. ಇವರು ಇಟಲಿಯ ಮೂಲದವರಾದ ಸೋನಿಯ ಮೈನೊ ಅವರನ್ನು ವಿವಾಹವಾಗಿದ್ದರು. ಇವರಿಗೆ ಇಬ್ಬರು ಮಕ್ಕಳು- ರಾಹುಲ್ ಮತ್ತು ಪ್ರಿಯಾಂಕ. ೧೯೬೨ರಲ್ಲಿ ಕೇಂಬ್ರಿಡ್ಜ್ ನ ಟ್ರಿನಿಟಿ ಕಾಲೇಜ್ ನಲ್ಲಿ ಇಂಜಿನೀಯರಿಂಗ್ ಮಾಡಲು ಹೋದರಾದರೂ ೧೯೬೫ ರವರೆಗೂ ಅಲ್ಲೇ ಇದ್ದು ಪದವಿ ಪಡೆಯದೇ ವಾಪಾಸಾದರು.
  • ಅವರು ಮೊದ ಮೊದಲು ರಾಜಕೀಯವನ್ನು ಇಷ್ಟ ಪಡುತ್ತಿರಲಿಲ್ಲ. ಪೈಲೆಟ್ ಆಗಬೇಕೆಂಬುದು ಅವರ ಬಹುದಿನದ ಬಯಕೆಯಾಗಿತ್ತು. ಆ ಆಸೆ ಅವರಿಗೆ ಈಡೇರಲಿಲ್ಲ.ತಾಯಿಯ ಆಡಳಿತದಲ್ಲಿ ನಿಗಾ ವಹಿಸಿದ್ದ ಸಹೋದರ ಸಂಜಯ ಗಾಂಧಿ ಮರಣಾನಂತರ, ಅನಿವಾರ್ಯವಾಗಿ ರಾಜಕೀಯಕ್ಕೆ ಧುಮುಕಿದ ಇವರು ಸಂಜಯ್ ಗಾಂಧಿಯವರ ಕ್ಷೇತ್ರ ಅಮೇಥಿಯಿಂದ ೨ ಲಕ್ಷ ಮತಗಳ ಅಂತರದಲ್ಲಿ ಶರದ್ ಪವಾರ್ ವಿರುದ್ದ ಆರಿಸಿ ಬಂದರು.

ರಾಜಕೀಯ

Rajiv Gandhi
  • ಶ್ರೀಮತಿ ಇಂದಿರಾಗಾಂಧಿ ಅವರ ಮರಣದ ನಂತರ ಭಾರತದ ಪ್ರಧಾನ ಮಂತ್ರಿಯಾದರು. ಇವರು ಭಾರತದ ಮೊದಲ ಯುವ (೪೦ ನೇ ವಯಸ್ಸಿನಲ್ಲಿ ) ಪ್ರಧಾನಿಯಾಗಿದ್ದರು. ೧೯೮೪ ರ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ (೪೦೪ ಸ್ಥಾನಗಳು) ಗೆದ್ದಿದ್ದರು. ಬಹು ಬೇಗನೆ ಜನಪ್ರಿಯ ಪ್ರಧಾನ ಮಂತ್ರಿಗಳೆನಿಸಿದರು. ಜನಮುಖಿ ಕಾರ್ಯಗಳಿಗೆ ಇಂಬು ಕೊಟ್ಟರು. ಶ್ರೀಲಂಕಾದ ಎಲ್.ಟಿ.ಟಿ ಸಮಸ್ಯೆಯ ನಿಗ್ರಹಕ್ಕೋಸ್ಕರ ಅವರು, ಶ್ರೀಲಂಕಾಕ್ಕೆ ಭಾರತದ ಸೈನ್ಯವನ್ನು ಕಳುಹಿಸಿಕೊಟ್ಟ ಪರಿಣಾಮವಾಗಿ, ಅವರು ತಮ್ಮ ಜೀವವನ್ನು ತೆರಬೇಕಾಯಿತು.

ನಿಧನ

ತಮಿಳುನಾಡಿನ ಪೆರಂಬೂರಿಗೆ ಬಹಿರಂಗ ಚುನಾವಣಾ ಭಾಷಣವನ್ನು ಮಾಡಲು ಹೋಗಿ, ಶ್ರೀಲಂಕಾದ ಎಲ್.ಟಿ.ಟಿಯವರ ಮಾನವ ಬಾಂಬ್ ಧಾಳಿಗೆ ತುತ್ತಾದರು. ಅವರ ಸುಂದರ ಕಾಯ ಬಾಂಬ್ ಧಾಳಿಯಿಂದ ಚೂರು ಚೂರಾಗಿತ್ತು.

ಹೆಚ್ಚಿನ ಓದಿಗೆ - ಹೊರ ಸಂಪರ್ಕ

ಪ್ರಮುಖ ಅಂಶಗಳು

ಮೊರಾರ್ಜಿ ಪ್ರವೇಶ ಪರೀಕ್ಷೆ 2023-24 ನೇ ಸಾಲಿಗೆ ಮೊರಾರ್ಜಿ ದೇಸಾಯಿ / ಕಿತ್ತೂರು ರಾಣಿ ಚೆನ್ನಮ್ಮ / ಏಕಲವ್ಯ / ಅಟಲ್‌ ಬಿಹಾರಿ ವಾಜಪೇಯಿ / ಡಾ.ಬಿ.ಆರ್.‌ ಅಂಬೇಡ್ಕರ್‌ ...

ಪ್ರಮುಖ ಕಲಿಕಾಂಶಗಳು