ಶಿಕ್ಷಣವೇ ಶಕ್ತಿ

Friday 4 June 2021

ಸಾಮಾನ್ಯ ಜ್ಞಾನ ೧೭

ಸಂಗ್ರಹ T. A ಚಂದ್ರಶೇಖರ

 6360396463

ಗವರ್ನರ್ ಜನರಲ್ ಮತ್ತು ಬ್ರಿಟಿಷ್ ಭಾರತದ ವೈಸರಾಯ್ ಗಳ ಪಟ್ಟಿ



ಗವರ್ನರ್ ಜನರಲ್ ಮತ್ತು ಬ್ರಿಟಿಷ್ ಭಾರತದ ವೈಸರಾಯ್ ಗಳ ಪಟ್ಟಿ

1.ವಾರನ್ ಹೇಸ್ಟಿಂಗ್ಸ್  (1774 – 1785)

(1) ಮೊದಲ ಬಂಗಾಳದ ಗವರ್ನರ್ ಜನರಲ್ ,
(2) ಇತನ ಅಧಿಕಾರಾವಧಿಯಲ್ಲಿ ರೆಗ್ಯುಲೇಟಿಂಗ್ 1773 ಕಾಯಿದೆಯನ್ನು ಪರಿಚಯಿಸಲಾಯಿತು. ಇದು ಬಂಗಾಳದಲ್ಲಿದ್ದ ದ್ವಿಮುಖ ಸರ್ಕಾರದ ಅಂತ್ಯಗೊಳಿಸಿತು.
(3) ಇತನನ್ನು ಆಡಳಿತದ ಕೆಟ್ಟ ನಿರ್ವಹಣೆ ಮತ್ತು ವೈಯಕ್ತಿಕ ಭ್ರಷ್ಟಾಚಾರದ ಕಾರಣಗಳಿಂದ ವಜಾಗೊಳಿಸಲಾಯಿತು. ಆದರೆ ಅಂತಿಮವಾಗಿ ನಿರ್ದೋಷಿಯೆಂದು ತೀರ್ಮಾನಿಸಲಾಯಿತು.
(4) ಕಂದಾಯ ಮಂಡಳಿ ಮತ್ತು ವ್ಯಾಪಾರ ಮಂಡಳಿಯ ರಚನೆ.
(5) ಜಿಲ್ಲಾಧಿಕಾರಿ ಹುದ್ದೆ ಸೃಷ್ಟಿ.

2.ಲಾರ್ಡ್ ಕಾರ್ನ್ ವಾಲಿಸ್ (1786 – 1793)

(1) ಬಂಗಾಳದಲ್ಲಿ ಖಾಯಂ ಜಮೀನ್ದಾರೀ ಪದ್ಧತಿ ಜಾರಿಗೆ (1793)
(2) ಪೊಲೀಸ್ ಠಾಣೆಗಳ ಸ್ಥಾಪನೆ. ಪೊಲೀಸ್ ಸುಧಾರಣೆಗಳು ಜಾರಿಯಾದವು.
(3) ಮೈಸೂರು ರಾಜ ಟಿಪ್ಪು ಸುಲ್ತಾನನನ್ನು ಸೋಲಿಸಲು ಮೂರನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಬ್ರಿಟಿಷ್ ಪಡೆಗಳ ಭಾಗಿ.

3.ಲಾರ್ಡ್ ವೆಲ್ಲೆಸ್ಲಿ (1798 – 1805)

(1) ಭಾರತೀಯ ರಾಜರನ್ನು ನಿಯಂತ್ರಿಸಲು ಸಹಾಯಕ ಸೈನ್ಯ ಪದ್ಧತಿ (policy of Subsidiary Alliance) ಯನ್ನು ಪರಿಚಯಿಸಿದ.
(2) ಹೈದರಾಬಾದ್ ಪ್ರಾಂತ್ಯವು ಈ ಸಹಾಯಕ ಸೈನ್ಯ ಪದ್ಧತಿಗೆ ಒಳಗಾದ ಮೊದಲ ದೇಶೀಯ ಸಂಸ್ಥಾನ.

4.ಲಾರ್ಡ್ ಮಿಂಟೋ I (1807 – 1813)

(1) ಮಹಾರಾಜ ರಂಜಿತ್ ಸಿಂಗ್ ನೊಂದಿಗೆ ಅಮೃತಸರ ಒಡಂಬಡಿಕೆ.
5.ಮಾರ್ಕ್ವೆಸ್ಟ್ ಆಫ್ ಹೇಸ್ಟಿಂಗ್ (1813-1823)
(1) ಉನ್ನತ ಹುದ್ದೆಗಳಿಗೆ ಭಾರತೀಯರನ್ನು ನೇಮಿಸಿದ ಮೊದಲಿಗ.
(2) ಟೆನೆನ್ಸಿ ಕಾಯಿದೆ (1828)

6.ಲಾರ್ಡ್ ವಿಲಿಯಂ ಬೆಂಟಿಂಕ್ (1828 – 1835)

(1) ಭಾರತದ ಮೊದಲ ಗವರ್ನರ್ ಜನರಲ್ ನಾಗಿ ನೇಮಕ. (ಈ ಮೊದಲು ಬಂಗಾಳದ ಗವರ್ನರ್ ಜನರಲ್ ಎಂಬ ಹುದ್ದೆ ಇತ್ತು).
(2) ಸತಿ ಪದ್ಧತಿಯ ನಿಷೇಧ.
(3) ಭಾರತೀಯರನ್ನು ಮತ್ತೆ ಅಧೀನ ನ್ಯಾಯಾಧೀಶರಾಗಿ ನೇಮಕ ಜಾರಿ,
(4) ಇಂಗ್ಲೀಷ್ ಉನ್ನತ ಶಿಕ್ಷಣದ ಭಾಷೆಯಾಯಿತು.
(5) ಮಧ್ಯ ಭಾರತದಲ್ಲಿ ಥಗ್ಗರನ್ನು ನಿಗ್ರಹಿಸಲಾಯಿತು.
(6) 1835ರಲ್ಲಿ ಕಲ್ಕತ್ತಾದಲ್ಲಿ ವೈದ್ಯಕೀಯ ಕಾಲೇಜು ಆರಂಭ.

7.ಸರ್ ಚಾರ್ಲ್ಸ್ ಮೆಟಾಕೆಫ್ (1835 – 1836)

(1) ಮೊದಲ ಬಾರಿಗೆ ದೇಶೀಯ ಪತ್ರಿಕೆಗಳಿಗೆ ಸ್ವಾತಂತ್ರ್ಯ. ಎಲ್ಲಾ ನಿರ್ಬಂಧಗಳನ್ನು ರದ್ದು. (ಭಾರತದ ವೃತ್ತ ಪತ್ರಗಳ ನಿರ್ಬಂಧ ವಿಮೋಚಕ)

8.ಲಾರ್ಡ್ ಆಕ್ಲೆಂಡ್ (1836 – 1842)
(1) ಮೊದಲ ಅಫಘಾನ್ ಯುದ್ಧ.

9.ಲಾರ್ಡ್ ಡಾಲ್ ಹೌಸಿ (1848 – 1856)

(1) ಬಾಂಬೆಯಿಂದ ಥಾಣೆಯವರೆಗೆ ಮೊದಲ ಭಾರತೀಯ ರೈಲ್ವೆ ಮಾರ್ಗ ನಿರ್ಮಾಣ. (1853)
(2) ಕೋಲ್ಕತ್ತಾದಿಂದ ಆಗ್ರಾದವರೆಗೆ ಟೆಲಿಗ್ರಾಫ್ ತಂತಿಯ ನಿರ್ಮಾಣ. (1853)
(3) ‘ದತ್ತು ಮಕ್ಕಳಿಗೆ ಹಕ್ಕಿಲ್ಲ’ ಪದ್ಧತಿ ಜಾರಿಗೆ. ಆ ಮೂಲಕ ಸತಾರ (1848), ಜೈಪುರ ಮತ್ತು ಸಂಬಲ್ ಪುರ್ (1849), ಉದಯ್ ಪುರ (1852), ಝಾನ್ಸಿ (1853) ಮತ್ತು ನಾಗ್ಪುರ (1854) ರಾಜ್ಯಗಳನ್ನು ವಶಪಡಿಸಿಕೊಳ್ಳಲಾಯಿತು.
(4) ಶಿಮ್ಲಾವನ್ನು ಬೇಸಿಗೆ ರಾಜಧಾನಿಯಾಗಿ ಮಾಡಿದ.
(5) ಲೋಕೋಪಯೋಗಿ ಇಲಾಖೆ ರಚನೆ
(6) ವಿಧವಾ ಮರುವಿವಾಹ ಕಾಯಿದೆ, (1856)ಯ ಅನುಷ್ಠಾನದೊಂದಿಗೆ ವಿಧವೆಯರ  ಮರುಮದುವೆ ಕಾನೂನುಬದ್ಧಗೊಳಿಸಲಾಯಿತು.
(7) ಭಾರತೀಯ ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆ ಪ್ರಾರಂಭ (1853)

10.ಲಾರ್ಡ್ ಕ್ಯಾನಿಂಗ್ (1856 – 1862)

(1)1857ರ (ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ) ಸಿಪಾಯಿ ದಂಗೆಯ ಸಮಯದಲ್ಲಿದ್ದ ಗವರ್ನರ್ ಜನರಲ್. ದಂಗೆಯ ನಂತರ ಭಾರತದ ಮೊದಲ ವೈಸ್ರಾಯ್ ನಾಗಿ ನೇಮಕ.
(2) ‘ದತ್ತು ಮಕ್ಕಳಿಗೆ ಹಕ್ಕಿಲ್ಲ’ ಪದ್ಧತಿ ರದ್ದು.
(3) 1861ರಲ್ಲಿ ಭಾರತೀಯ ಕೌನ್ಸಿಲ್ ಕಾಯಿದೆ ಜಾರಿಗೆ.
(4) 1854 ರ ‘ವುಡ್ಸ್ ಡಿಸ್ ಪ್ಯಾಚ್’ ನ ಪ್ರಕಾರ ಕಲ್ಕತ್ತಾ, ಬಾಂಬೆ ಮತ್ತು ಮದ್ರಾಸ್ ವಿಶ್ವವಿದ್ಯಾಲಗಳ ಆರಂಭ.
(5) 1858ರ ವಿಕ್ಟೋರಿಯಾ ಮಹಾರಾಣಿಯ ಮಹಾಸನ್ನದು “ಭಾರತದ ಮ್ಯಾಗ್ನಾಕಾರ್ಟಾ” ಪ್ರಕಟ.
(6) 1837ರಲ್ಲಿ ಮೆಕಾಲೆಯು ತಯಾರಿಸಿದ್ದ ‘ಭಾರತೀಯ ದಂಡ ಸಂಹಿತೆಯ ಜಾರಿ.(1860)
(7) ಸಿವಿಲ್ ಪ್ರೊಸೀಜರ್ ಕೋಡ್ಸ್ ಜಾರಿ.(1861)

11.ಲಾರ್ಡ್ ಲಾರೆನ್ಸ್ (1864 – 1869)

(1) ಎರಡನೇ ಸಿಖ್ ಯುದ್ಧದ ನಂತರ ಇತನು ಪಂಜಾಬ್ ಆಡಳಿತ ಇಲಾಖೆಯ ಸದಸ್ಯನಾದನು. ಮತ್ತು ಪಂಜಾಬಿನಲ್ಲಿ ಹಲವಾರು ಜವಾಬ್ದಾರಿಯುತ ಸುಧಾರಣೆಗಳನ್ನು ಜಾರಿಯಲ್ಲಿ ತಂದು “ಪಂಜಾಬ್ ದ ಸಂರಕ್ಷಕ” ನೆಂದು ಖ್ಯಾತನಾದನು.
(2) 1865 ರಲ್ಲಿ ಕಲ್ಕತ್ತಾ, ಬಾಂಬೆ ಮತ್ತು ಮದ್ರಾಸ್ ಗಳಲ್ಲಿ ಹೈಕೋರ್ಟ್ ಗಳನ್ನು ಸ್ಥಾಪಿಸಲಾಯಿತು.

12.ಲಾರ್ಡ್ ಮಾಯೋ (1869  – 1872)

(1) ಭಾರತದಲ್ಲಿ ಪ್ರಥಮ ಜನಗಣತಿ (1871)
(2) 1872 ರಲ್ಲಿ ಅಂಡಮಾನ್ ದ್ವೀಪಗಳ ಭೇಟಿ ಸಂದರ್ಭದಲ್ಲಿ (ಕೈದಿ ಶೇರ್ ಅಲಿಯಿಂದ) ಭಾರತದಲ್ಲಿ ಕೊಲ್ಲಲ್ಪಟ್ಟ ಏಕ ಮಾತ್ರ ವೈಸರಾಯ್ .
(3) ಕೃಷಿ ಇಲಾಖೆಯ ಸ್ಥಾಪನೆ.

13.ಲಾರ್ಡ್ ಲಿಟ್ಟನ್ (1876- 1880)

(1) 1877 ರಲ್ಲಿ ದೆಹಲಿ ದರ್ಬಾರ್ ಆಯೋಜಿಸಿ, ರಾಣಿ ವಿಕ್ಟೋರಿಯಾಗೆ ‘ಕೈಸರ್-ಇ-ಹಿಂದ್’ ಬಿರುದು ಪ್ರಧಾನ.
(2) ಭಾರತದ ವೃತ್ತ ಪತ್ರಗಳ ಮೇಲೆ ನಿರ್ಬಂಧ ವಿಧಿಸುವ ‘ದೇಶೀಯ ಪತ್ರಿಕಾ ಕಾಯಿದೆ’ ಜಾರಿಗೆ (1878)
(3) ಶಸ್ತ್ರಾಸ್ತ್ರ ಕಾಯಿದೆ – (1878).
(4) ಸರ್.ಸಯ್ಯದ್ ಅಹ್ಮದ್ ಖಾನರಿಂದ ಅಲಿಘಡದಲ್ಲಿ ಮಹಮ್ಮದನ್ ಆಂಗ್ಲೋ ಓರಿಯಂಟಲ್ ಕಾಲೇಜು ಸ್ಥಾಪನೆ. (1877)
(5) ನಾಗರಿಕ ಸೇವಾ ಪರೀಕ್ಷೆ ಪ್ರವೇಶ ವಯಸ್ಸನ್ನು 21 ರಿಂದ 19ಕ್ಕೆ ಇಳಿಸಲಾಯಿತು.

14.ಲಾರ್ಡ್ ರಿಪ್ಪನ್ (1880 – 1884)

(1) ಭಾರತದ ವೃತ್ತ ಪತ್ರಗಳ ಮೇಲೆ ನಿರ್ಬಂಧ ವಿಧಿಸುವ ‘ದೇಶೀಯ ಪತ್ರಿಕಾ ಕಾಯಿದೆ’ ರದ್ದು. (1882)
(2) ನಾಗರಿಕ ಸೇವಾ ಪರೀಕ್ಷೆ ಪ್ರವೇಶ ವಯಸ್ಸನ್ನು ಪುನಃ 19 ರಿಂದ 21ಕ್ಕೆ ಏರಿಸಲಾಯಿತು. (3) ಬಾಲಕಾರ್ಮಿಕ ಪದ್ಧತಿಯನ್ನು ನಿಷೇಧಿಸಲು ಮೊದಲ ಫ್ಯಾಕ್ಟರಿ ಕಾಯಿದೆ ಅಂಗೀಕಾರ (1881)
(4) ‘ಭಾರತೀಯ ಸ್ಥಳೀಯ ಸರ್ಕಾರಗಳ ಪಿತಾಮಹ’ – ದೇಶದಲ್ಲಿ ನಗರ ಸಭೆಗಳು, ಜಿಲ್ಲಾ ಮತ್ತು ಸ್ಥಳೀಯ ಮಂಡಳಿಗಳ ಸ್ಥಾಪನೆ. (1882)
(5) ಇಲ್ಬರ್ಟ್ ಬಿಲ್ ಕಾಯಿದೆ ಜಾರಿಗೆ (1883)

15.ಲಾರ್ಡ್ ಡಫೆರಿನ್ನ (1884 – 1894)

(1) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ರಚಿಸಲಾಯಿತು. (1885)

16.ಲಾರ್ಡ್ ಲಾನ್ಸ್ ಡೌನ್  (1888 – 1894)

(1) ಭಾರತೀಯ ಕೌನ್ಸಿಲ್ ಕಾಯಿದೆ (1892)
(2) ಬ್ರಿಟಿಷ್ ಭಾರತ ಮತ್ತು ಅಫ್ಘಾನಿಸ್ಥಾನ ನಡುವೆ ಗಡಿರೇಖೆ ಗುರುತಿಸಲು ಡುರಾಂಡ್ ಆಯೋಗದ ನೇಮಕ.

17.ಲಾರ್ಡ್ ಕರ್ಜನ್ (1899 – 1905)

(1) ಬಂಗಾಳದ ವಿಭಜನೆ (1905)
(2) ಸ್ವದೇಶಿ ಚಳವಳಿಯ ಆರಂಭ.
(3) ಕೃಷಿ ಬ್ಯಾಂಕುಗಳ ಸ್ಥಾಪನೆ. ಬಂಗಾಳದ ಪೂಸಾದಲ್ಲಿ ಕೃಷಿ ಸಂಶೋಧನಾ ಸಂಸ್ಥೆ ಸ್ಥಾಪನೆ (1904)
(4) ಪುರಾತನ ಸ್ಮಾರಕಗಳ ಸಂರಕ್ಷಣಾ ಕಾಯಿದೆ ಜಾರಿ, ಪುರಾತತ್ವ ಇಲಾಖೆ ರಚನೆ (1901)
(5) ಸರ್. ಥಾಮಸ್ ರಾಲೆ. ಅಧ್ಯಕ್ಷತೆಯಲ್ಲಿ ವಿಶ್ವವಿದ್ಯಾಲಯ ಆಯೋಗ ನೇಮಕ, ‘ಭಾರತೀಯ ವಿಶ್ವವಿದ್ಯಾಲಯಗಳ ಕಾಯಿದೆ ಜಾರಿ. (1904)
(6) ಪೊಲೀಸ್ ಆಯೋಗ ರಚನೆ.
(7) ಕ್ರಿಮಿನಲ್ ತನಿಖಾ ಇಲಾಖೆ ರಚನೆ.

18.ಲಾರ್ಡ್ ಮಿಂಟೋ (1905 – 1910)

(1) ಭಾರತೀಯ ಮಂಡಳಿ ಕಾಯಿದೆ -1909 ಅಥವಾ ಮಾರ್ಲೆ-ಮಿಂಟೊ ಸುಧಾರಣೆಗಳನ್ನು ಅಂಗೀಕರಿಸಿತು.
(2) ಮುಸ್ಲಿಂರಿಗೆ ಪ್ರತ್ಯೇಕ ಮತಕ್ಷೇತ್ರ ಪ್ರಾತಿನಿಧ್ಯ.

19.ಲಾರ್ಡ್ ಹಾರ್ಡಿಂಗ್ (1910 – 1916)

(1) ಇಂಗ್ಲೆಂಡ್ ನ ದೊರೆ Vನೇ ಜಾರ್ಜ್ ನ ಪಟ್ಟಾಭಿಷೇಕ – ದೆಹಲಿ ದರ್ಬಾರ್ (1911)
(2) ಭಾರತದ ರಾಜಧಾನಿ ಕಲ್ಕತ್ತಾದಿಂದ ದೆಹಲಿಗೆ ಸ್ಥಳಾಂತರಿಸಲಾಯಿತು (1911)
(3) ಅನ್ನಿ ಬೆಸೆಂಟ್ ರಿಂದ ಹೋಮ್ ರೂಲ್ ಚಳುವಳಿ ಆರಂಭಿಸಲಾಯಿತು. (1921)
(4) ಮಹಾತ್ಮ ಗಾಂಧಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಆಗಮನ (1915)

20.ಲಾರ್ಡ್ ಚೆಲ್ಮ್ಸ್ ಫೋರ್ಡ್  (1916 – 1921)

(1) ಭಾರತ ಸರ್ಕಾರದ ಕಾಯಿದೆ -1919 (ಮೊಂಟಾಗು ಚೆಲ್ಮ್ಸ್ ಫೋರ್ಡ್ ಸುಧಾರಣೆಗಳು)
(2) ರೌಲಟ್ ಕಾಯಿದೆ -1919 ಜಾರಿಗೆ.
(3) ಜಲಿಯನ್ ವಾಲಾ ಬಾಗ್ ದುರಂತ. (ಏಪ್ರೀಲ್ 13, 1919)
(4) ಖಿಲಾಪತ್ ಚಳುವಳಿ.
(5) ಅಸಹಕಾರ ಚಳುವಳಿ.

21.ಲಾರ್ಡ್ ರೆಡಿಂಗ್ (1921 – 1926)

(1) ರೌಲಟ್ ಆಕ್ಟ್ಅನ್ನು ರದ್ದುಗೊಳಿಸಲಾಯಿತು.
(2) ಸ್ವರಾಜ್ ಪಕ್ಷ ರಚಿಸಲಾಯಿತು.
(3) ಚೌರಿ ಚೌರ ಘಟನೆ.

22.ಲಾರ್ಡ್ ಇರ್ವಿನ್ (1926 – 1931)

(1) ಸೈಮನ್ ಆಯೋಗ ಭಾರತಕ್ಕೆ ಭೇಟಿ – (1928)
(2) ದಂಡಿ ಸತ್ಯಾಗ್ರಹ ಪ್ರಾರಂಭಿಸಲಾಯಿತು ಭಾರತಕ್ಕೆ ಭೇಟಿ ನೀಡಿದರು.
(3) ನಾಗರಿಕ ಅಸಹಕಾರ ಚಳುವಳಿಯನ್ನು 1930 ರಲ್ಲಿ ಆರಂಭಿಸಲಾಯಿತು.
(4) ಗಾಂಧಿ – ಇರ್ವಿನ್ ಒಪ್ಪಂದಕ್ಕೆ ಸಹಿ
(5) ಮೊದಲ ದುಂಡು ಮೇಜಿನ ಸಭೆ.

23.ಲಾರ್ಡ್ ವಿಲ್ಲಿಂಗ್ಡನ್ (1931 – 1936)

(1) 1931ರಲ್ಲಿ ಎರಡನೇ ಮತ್ತು ಮೂರನೆಯ ದುಂಡು ಮೇಜಿನ ಸಭೆ
(2) ಬ್ರಿಟಿಷ್ ಪ್ರಧಾನಮಂತ್ರಿ ರಾಮ್ಸೆ ಮ್ಯಾಕ್ ಡೊನಾಲ್ಡ್ ರಿಂದ ಕಮ್ಯುನಲ್ ಅವಾರ್ಡ್   ಪ್ರಾರಂಭ.
(3) ಪೂನಾ ಒಪ್ಪಂದದ ಸಹಿ.
(4) 1935ರ ಭಾರತ ಸರಕಾರದ ಆಕ್ಟ್ ನ್ನು ಪ್ರಾಂತ್ಯಗಳಲ್ಲಿ ಜಾರಿಗೆ.

24.ಲಾರ್ಡ್ ಲಿನ್ಲಿತ್ಗೋ (1936 – 1944)

(1) 2ನೇ ಮಹಾಯುದ್ಧದ ಆರಂಭ.
(2) ಕ್ರಿಪ್ಸ್ ಸಮಿತಿ 1942ರಲ್ಲಿ ಭಾರತಕ್ಕೆ ಭೇಟಿ.
(3) ಭಾರತ ಬಿಟ್ಟು ತೊಲಗಿ ಚಳುವಳಿ.

25.ಲಾರ್ಡ್ ವಾವೆಲ್ (1944 – 1947)

(1) ಕ್ಯಾಬಿನೆಟ್ ನಿಯೋಗದ ಯೋಜನೆ.
(2) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ನಡುವೆ ಶಿಮ್ಲಾ ಸಮ್ಮೇಳನ.
(3) ಮುಸ್ಲಿಂ ಲೀಗ್ ನಿಂದ ಡೈರೆಕ್ಟ್ ಆ್ಯಕ್ಷನ್ ಡೇ.
(4) ನೆಹರೂ ನೇತೃತ್ವದ ಮಧ್ಯಂತರ ಸರ್ಕಾರದ ರಚನೆ.

26.ಲಾರ್ಡ್ ಮೌಂಟ್ ಬ್ಯಾಟನ್ (ಮಾರ್ಚ್ 1947 – ಆಗಸ್ಟ್ 1947)

(1) ಸ್ವತಂತ್ರ ಭಾರತದ ಮೊದಲ ಗವರ್ನರ್ ಜನರಲ್ ಹಾಗೂ ಬ್ರಿಟಿಷ್ ಭಾರತದ ಕೊನೆಯ ವೈಸರಾಯ್.
(2) ಭಾರತದ ವಿಭಜನೆ.
(3) ಸಿ ರಾಜಗೋಪಾಲಾಚಾರಿ, ಸ್ವಾತಂತ್ರ್ಯ ಭಾರತದ ಭಾರತದ ಮೊದಲ ಮತ್ತು ಕಡೆಯ ಗವರ್ನರ್ ಜನರಲ್ ಉತ್ತರಾಧಿಕಾರಿ

⭐⭐⭐⭐⭐⭐⭐⭐⭐⭐⭐⭐⭐⭐⭐

ಕನ್ನಡ ಕವಿಗಳು / ಸಾಹಿತಿಗಳ ಆತ್ಮಕಥೆಗಳು

ಕ್ರ. ಸಂ. - ವ್ಯಕ್ತಿ - ಆತ್ಮಕಥೆ

1. ಕುವೆಂಪು - ನೆನಪಿನ ದೋಣಿಯಲ್ಲಿ

2. ಶಿವರಾಮ ಕಾರಂತ - ಹುಚ್ಚು ಮನಸಿನ ಹತ್ತು ಮುಖಗಳು

3. ಮಾಸ್ತಿ - ಭಾವ

4. ಅ.ನ.ಕೃ. - ಬರಹಗಾರನ ಬದುಕು

5. ಸ.ಸ.ಮಾಳವಾಡ. ದಾರಿ ಸಾಗಿದೆ

6. ಎಸ್.ಎಲ್.ಭೈರಪ್ಪ - ಭಿತ್ತಿ

7. ಬಸವರಾಜ ಕಟ್ಟೀಮನಿ - ಕಾದಂಬರಿಕಾರನ ಬದುಕು

8. ಪಿ.ಲಂಕೇಶ್ - ಹುಳಿ ಮಾವಿನ ಮರ

9. ಎ.ಎನ್.ಮೂರ್ತಿರಾವ್ - ಸಂಜೆಗಣ್ಣಿನ ಹಿನ್ನೋಟ

10. ಎಚ್.ನರಸಿಂಹಯ್ಯ - ಹೋರಾಟದ ಬದುಕು

11. ಗುಬ್ಬಿ ವೀರಣ್ಣ - ಕಲೆಯೇ ಕಾಯಕ

12. ಹರ್ಡೇಕರ್ ಮಂಜಪ್ಪ - ಕಳೆದ ನನ್ನ ಮೂವತ್ತು ವರ್ಷಗಳ ಕಾಣಿಕೆ

13. ಸ.ಜ.ನಾಗಲೋಟಿಮಠ - ಬಿಚ್ಚಿದ ಜೋಳಿಗೆ

14. ಬೀchi - ಭಯಾಗ್ರಫಿ

15. ಸಿದ್ದಲಿಂಗಯ್ಯ - ಊರು ಕೇರಿ

16. ಕುಂ.ವೀರಭದ್ರಪ್ಪ - ಗಾಂಧಿ ಕ್ಲಾಸು

⭐⭐⭐⭐⭐⭐⭐⭐⭐⭐⭐⭐⭐⭐⭐

ವಿಶ್ವ ವಿಖ್ಯಾತ ಜೋಗ ಜಲಪಾತ


ಜೋಗ ಜಲಪಾತ 

ವಿಶ್ವವಿಖ್ಯಾತ ಜೋಗವು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿದೆ. ಪ್ರತಿ ಸೆಕೆಂಡಿಗೆ 34 ಲಕ್ಷ ಟನ್‌ ನೀರು ಬೀಳುತ್ತದೆ. ದೇಶದಲ್ಲಿಯೇ ದೊಡ್ಡ ಪ್ರಮಾಣದ ಜಲವಿದ್ಯುತ್‌ ಪೂರೈಸುವ ಪ್ರದೇಶವೂ ಇದಾಗಿದೆ. ಜೀವನದಲ್ಲಿ ಒಮ್ಮೆಯಾದರೂ ನೋಡು ಜೋಗದ ಗುಂಡಿ ಎಂಬ ಕವಿ ಮಾತೊಂದಿದೆ. ಇಂಥ ಸುಂದರ ಜೋಗದ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯೋಣ.


* ನಾಲ್ಕು ಜಲಪಾತಗಳೂ ಸೇರಿ ಒಂದು ಜಲಪಾತವಾಗಿ ರೂಪುಗೊಂಡಿದೆ. ರಾಜ, ರಾಣಿ, ರೋರೆರ್‌, ರಾಕೆಟ್‌. ಮಳೆಗಾಲದಲ್ಲಿ ತುಂಬಿ ಹರಿಯುವ ಜೋಗವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಪ್ರವಾಸಿಗರು ನಿತ್ಯ ಭೇಟಿ ನೀಡುತ್ತಾರೆ.

* ಶರಾವತಿ ನದಿಯೇ ಜೋಗ ಜಲಪಾತಕ್ಕೆ ಮೂಲ. 929 ಅಡಿ ಎತ್ತರದಿಂದ ಧುಮ್ಮಿಕ್ಕುತ್ತದೆ. ನಯಾಗರ ಜಲಪಾತದ ನೀರಿನ ಮೊತ್ತ ಜೋಗದ್ದಕ್ಕಿಂತ ಅಧಿಕವಾಗಿದ್ದರೂ, ಅದರ ಎತ್ತರ ಜೋಗದಷ್ಟು ಇಲ್ಲ.

* ನಾಲ್ಕು ಪ್ರತ್ಯೇಕ ಬಿರುಕುಗಳಿಂದ ನದಿ ರಭಸದಿಂದ ಬೀಳುತ್ತದೆ. ಅದು ಧುಮುಕುವ ಠೀವಿ ಮನಮೋಹಕವಾದ್ದು. ಜಲಪಾತದ ನಾಲ್ಕು ಕವಲುಗಳ ಪೈಕಿ ರಾಜಾ ಸುಮಾರು 829 ಅಡಿ ಆಳಕ್ಕೆ ಧುಮುಕುತ್ತದೆ. ರಾಜಾ ಬೀಳುತ್ತಿರುವಂತೆಯೇ ಸ್ವಲ್ಪ ಕೆಳಗೆ, ಬಂಡೆಯ ಬಿರುಕಿನಿಂದ ಹರಿದು ಬೀಳುವ ರೋರರ್ ಜಲಪಾತವನ್ನು ಅಪ್ಪಿಕೊಂಡು, ಅದರೊಂದಿಗೆ ಕೆಳಗೆ ಬೀಳುತ್ತದೆ.

* ಮೂರನೇಯ ಜಲಪಾತ ರಾಕೆಟ್ ಬಂಡೆಯ ಮೇಲಿನಿಂದ ಹಲವು ಧಾರೆಗಳಲ್ಲಿ ಚಿಮ್ಮಿ ತಳಕ್ಕೆ ಕುಪ್ಪಳಿಸುತ್ತದೆ. ರಾಣಿ ಜಲಪಾತ (ಲೇಡಿ ಬ್ಲಾಂಚೆ) ಬೀಳುವ ರಭಸದಿಂದೇಳುವ ನೊರೆಯಿಂದ ಸೊಗಸುಗಾತಿಯಂತೆ ಪ್ರಪಾತಕ್ಕೆ ಇಳಿಯುತ್ತದೆ.

* ಜಲಪಾತದ ಬಂಡೆಯ ಅಂಚುಗಳಲ್ಲಿರುವ ಪೊಟರೆಗಳಲ್ಲಿ ಕಾಡು ಪಾರಿವಾಳಗಳು ಮನೆ ಮಾಡಿಕೊಂಡು ಪ್ರಪಾತದ ಬಳಿ ಗುಂಪುಗುಂಪಾಗಿ ಹಾರುತ್ತಿರುತ್ತವೆ. ಈ ಜಲಪಾತದ ಭೋರ್ಗರೆತ ಮೌನವನ್ನು ಸೀಳಿ, ನಾದ ಅಲೆಯನ್ನು ಹೊರಡಿಸುತ್ತದೆ. ಪ್ರವಾಸಿಗರ ನೆಚ್ಚಿನ ಪ್ರವಾಸಿ ತಾಣಗಳಲ್ಲಿ ಜೋಗವೂ ಒಂದು.
⭐⭐⭐⭐⭐⭐⭐⭐⭐⭐⭐⭐⭐⭐⭐

*ಕರ್ನಾಟಕದ ಪ್ರಮುಖ ಸಾಂಸ್ಕೃತಿಕ ಸಂಸ್ಥೆಗಳು*

★ ನೀನಾಸಂ = ಶಿವಮೊಗ್ಗದ ಸಾಗರ ತಾಲ್ಲೂಕಿನ ಹೆಗ್ಗೋಡಿನಲ್ಲಿದೆ. ನೀಲಕಂಠೇಶ್ವರ ನಾಟ್ಯ ಸೇವಾ ಸಂಘಂ (ನಿನಾಸಂ) ನಿನಾಸಂ ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಖ್ಯಾತ ನಾಟಕಕಾರ ಕೆ.ವಿ. ಸುಬ್ಬಣ್ಣ 1949 ರಲ್ಲಿ ಸ್ಥಾಪಿಸಿದರು. 

✦ ಕೆ.ವಿ. ಸುಬ್ಬಣ್ಣ = ಇವರು ಖ್ಯಾತ ನಾಟಕಕಾರರು. ನಿನಾಸಂ ಸಂಸ್ಥಾಪಕರು. 1991 ರಲ್ಲಿ ರಾಮೋನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ದೊರೆತಿದೆ. ಇವರು ಅಕ್ಷರ ಪ್ರಕಾಶನ ಸ್ಥಾಪಿಸಿದರು. 1994 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 2003 ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. 2004 ರಲ್ಲಿ ಪದ್ಮಶ್ರೀ ಪ್ರಶಸ್ತಿ ದೊರೆತಿದೆ. 

★ ರಂಗಾಯಣ = ಇದು ಮೈಸೂರಿನಲ್ಲಿದೆ. 1989 ರಲ್ಲಿ ಕರ್ನಾಟಕ ಸರ್ಕಾರ ಸ್ಥಾಪಿಸಿತು. ರಂಗಯಾತ್ರೆ ಕೈಗೊಳ್ಳುತ್ತದೆ ಇದು ಬಿ.ವಿ. ಕಾರಂತರ ಕನಸಿನ ಕೂಸು. 

ಬಿ.ವಿ. ಕಾರಂತ = ಸಂಗೀತಗಾರರು, ಪದ್ಮಶ್ರೀ ಪುರಸ್ಕೃತರು. ಇವರ ಆತ್ಮಚರಿತ್ರೆ ‘She told frontine’.

📕📒📘📗📙📕📒📘📗📙📕📒📘📗📙

*ವಿವಿಧ ದೇಶಗಳ ಸಂಸತ್ತುಗಳ ಹೆಸರುಗಳು*

1) ಆಫ್ಘಾನಿಸ್ತಾನ = ಶೋರಾ 

2) ಜಪಾನ್ = ಡಯಟ್ 

3) ಅಮೆರಿಕ = ಕಾಂಗ್ರೆಸ್ 

4) ಇಸ್ರೇಲ್ = ಕೈಸೆಟ್ 

5) ಭಾರತ = ಸಂಸತ್  

6) ಡೆನ್ಮಾರ್ಕ್ = ಪ್ಲೋಕೆಟಿಂಗ್ 

7) ಬ್ರಿಟನ್ = ಪಾರ್ಲಿಮೆಂಟ್ 

8) ಪಾಕಿಸ್ತಾನ = ನ್ಯಾಷನಲ್ ಅಸೆಂಬ್ಲಿ 

9) ನೇಪಾಳ = ರಾಷ್ಟ್ರೀಯ ಪಂಚಾಯತ್ 

10) ಚೀನಾ = ಯುಆನ್ 

11) ರಷ್ಯಾ = ಡುಮ (Duma)

🔴🔴🔴🔴🔴🔴🔴🔴🔴🔴🔴🔴🔴🔴🔴

ಅತಿ ಹೆಚ್ಚು, ಕಡಿಮೆ(ಹನಿ, ತುಂತುರೂ) ನೀರಾವರಿ ಹೊಂದಿರುವ ಪ್ರದೇಶಗಳು

💦ಅತಿ ಹೆಚ್ಚು ಹನಿ ನೀರಾವರಿಯ ಜಿಲ್ಲೆ➖ ಬಾಗಲಕೋಟೆ

💦 ಅತಿ ಹೆಚ್ಚು ತುಂತುರು ನೀರಾವರಿಯ ಜಿಲ್ಲೆ ➖ಮಂಡ್ಯ, ಮೈಸೂರು

💦 ಅತಿ ಹೆಚ್ಚು ನೀರಾವರಿಗೆ ಜಿಲ್ಲೆ➖ಬೆಳಗಾವಿ

💦ಅತಿ ಕಡಿಮೆ ನೀರಾವರಿಗೆ ಜಿಲ್ಲೆ ➖ಕೊಡಗು

💦 ಏಷ್ಯಾದ ದೊಡ್ಡ ಹನಿ ನೀರಾವರಿ ಯೋಜನೆಯನ್ನು ಬಾಗಲಕೋಟೆ ಜಿಲ್ಲೆಯಲ್ಲಿ ಪ್ರಾರಂಭಿಸಲಾಗಿದೆ.

💦 ಅತಿ ಹೆಚ್ಚು ಕಾಲುವೆ ನೀರಾವರಿ ಹೊಂದಿರುವ ಜಿಲ್ಲೆ➖ ರಾಯಚೂರು

💦ಅತಿ ಕಡಿಮೆ ಕಾಲುವೆ ನೀರಾವರಿ ಹೊಂದಿರುವ ಜಿಲ್ಲೆ➖ ಬೆಂಗಳೂರು ನಗರ

💦 ಅತಿ ಹೆಚ್ಚು ಬಾವಿ ನೀರಾವರಿ ಹೊಂದಿರುವ ಜಿಲ್ಲೆ ➖ಬೆಳಗಾವಿ

💦 ಅತಿ ಹೆಚ್ಚು ಕೆರೆ ನೀರಾವರಿ ಹೊಂದಿರುವ ಜಿಲ್ಲೆ ➖ ಶಿವಮೊಗ್ಗ.

💥💥💥💥💥💥💥💥💥💥💥💥💥💥

®🇮🇳🌹ಭಾರತದಲ್ಲಿ ಕೃಷಿಗೆ ಸಂಬಂಧಿಸಿದ ಪ್ರಮುಖ ಸಂಶೋಧನಾ ಕೇಂದ್ರಗಳು......

🍁 ಭಾರತದ ಕೃಷಿ ಸಂಶೋಧನಾ ಸಂಸ್ಥೆ ➖ದೆಹಲಿ

🍁ಕೇಂದ್ರೀಯ ಹತ್ತಿ ಸಂಶೋಧನಾ ಸಂಸ್ಥೆ ➖ನಾಗಪುರ (ಮಹಾರಾಷ್ಟ್ರ)

🍁 ಕೇಂದ್ರೀಯ ಹತ್ತಿ ತಂತ್ರಜ್ಞಾನ ಸಂಶೋಧನಾ ಸಂಸ್ಥೆ ➖ಮುಂಬೈ

🍁ಕೇಂದ್ರೀಯ ಭತ್ತ ಸಂಶೋಧನ ಕೇಂದ್ರ➖ ಕಟಕ್ (ಒರಿಸ್ಸ)

🍁ಭಾರತದ ದ್ವಿದಳಧಾನ್ಯ ಸಂಶೋಧನಾ ಸಂಸ್ಥೆ ➖ಕಾನ್ಪುರ್ (ಉತ್ತರಪ್ರದೇಶ)

🍁ಭಾರತದ ಕಬ್ಬು ಸಂಶೋಧನಾ ಕೇಂದ್ರ ➖ ಲಕ್ನೌ  (ಉತ್ತರ ಪ್ರದೇಶ)

🍁 ಭಾರತೀಯ ತರಕಾರಿ ಸಂಶೋಧನಾ  ಕೇಂದ್ರ➖ ವಾರಣಾಸಿ (ಉತ್ತರಪ್ರದೇಶ)

🍁ಭಾರತೀಯ ರೇಷ್ಮೆ ಸಂಶೋಧನಾ ಕೇಂದ್ರ➖   ಮೈಸೂರು (ಕರ್ನಾಟಕ)

🍁 ರಾಷ್ಟ್ರೀಯ ಹೈನುಗಾರಿಕೆ ಸಂಶೋಧನಾ ಕೇಂದ್ರ➖ ಕರ್ನಲ್ (ಹರಿಯಾಣ)

🍁ಭಾರತದ ಅರಣ್ಯ ಸಂಶೋಧನಾ ಕೇಂದ್ರ ➖ ಡೆಹರಾಡೂನ್ (ಉತ್ತರಖಂಡ್)

🍁 ಭಾರತದ ತೆಂಗು ಸಂಶೋಧನಾ ಸಂಸ್ಥೆ ➖ಕಾಸರಗೋಡು (ಕೇರಳ)

🍁 ಭಾರತೀಯ ಚಹಾ ಸಂಶೋಧನಾ ಸಂಸ್ಥೆ ➖  ಜೋಹುಟ್ (ಅಸ್ಸಾಂ)

🍁 ಭಾರತೀಯ ಕಾಫಿ ಸಂಶೋಧನಾ ಸಂಸ್ಥೆ➖ ಚಿಕ್ಕಮಗಳೂರು (ಕರ್ನಾಟಕ)

🍁 ಭಾರತದ ಆಹಾರ ತಂತ್ರಜ್ಞಾನ ಸಂಸ್ಥೆ➖ ಮೈಸೂರು (ಕರ್ನಾಟಕ)

🍁 ಭಾರತದ ರೈಲು ತಂತ್ರಜ್ಞಾನ ಸಂಶೋಧನಾ ಸಂಸ್ಥೆ ➖ ವಡೋದರ (ಗುಜರಾತ್)

🍁 ಭಾರತದ ಮಸಾಲೆ ಪದಾರ್ಥಗಳ ಸಂಶೋಧನಾ ಸಂಸ್ಥೆ ➖ ಕಲ್ಲಿಕೋಟೆ (ಕೇರಳ)

🍁 ಭಾರತದ ಜೇನು ಸಂಶೋಧನಾ ಸಂಸ್ಥೆ➖ ಪುಣೆ (ಮಹಾರಾಷ್ಟ್ರ)

🍁 ಭಾರತೀಯ ಮೆಕ್ಕೆಜೋಳ ಸಂಶೋಧನಾ ಸಂಸ್ಥೆ➖ ಮಂಡ್ಯ (ಕರ್ನಾಟಕ)

🍁 ಭಾರತ ಭಾರತೀಯ ಪೆಟ್ರೋಲಿಯಂ ಸಂಶೋಧನಾ ಕೇಂದ್ರ ➖ಡೆಹರಾಡೂನ್ (ಉತ್ತರಾಖಂಡ್)

🍁 ಕೇಂದ್ರೀಯ ಎಮ್ಮೆ ಸಂಶೋಧನಾ ಸಂಸ್ಥೆ ➖  ಹಿಸ್ಸಾರ್ (ಹರಿಯಾಣ )

🍁 ಸಾವಯವ ಕೃಷಿಯ ರಾಷ್ಟ್ರೀಯ ಕೇಂದ್ರ ➖ಗಾಜಿಯಾಬಾದ್ (ಉತ್ತರಪ್ರದೇಶ)

🍁 ಭಾರತೀಯ ಮಾವು ಸಂಶೋಧನಾ ಕೇಂದ್ರ ➖ವಿಜಯವಾಡ (ಆಂಧ್ರಪ್ರದೇಶ)

🍁 ಭಾರತೀಯ ಖನಿಜ ಸಂಶೋಧನಾ ಸಂಸ್ಥೆ➖ ಧನಬಾದ್ (ಓಡಿಸ್ಸಾ).

🌱🌱🌱🌱🌱🌱🌱🌱🌱🌱🌱🌱🌱🌱🌱

ಸಾಗರಮಾಲಾ ಯೋಜನಕ್ಕೆ ಆಯ್ಕೆಯಾದ 6 ಬಂದರುಗಳು.....

🔸 ರಾಜ್ಯ= ಸ್ಥಳ= ಬಂದರುಗಳು.

1) ಪಶ್ಚಿಮ ಬಂಗಾಳ= ಪಶ್ಚಿಮ ಬಂಗಾಳ.= ಸಾಗರ ಐಲ್ಯಾಂಡ್.

2) ತಮಿಳುನಾಡು= ಕನ್ಯಾಕುಮಾರಿ= ಇನಿಯಾo/ ಕನ್ಯಾಕುಮಾರಿ.

3) ಮಹಾರಾಷ್ಟ್ರ= ವಧವಾನ=ವಧವಾನ ಬಂದರು

4) ಕರ್ನಾಟಕ=ಬೇಲಿಕೆರಿ =ಬೇಲಿಕೆರಿ ಬಂದರು.

5) ಓಡಿಶಾ = ಪಾರದ್ವಿಪ=ಪಾರದ್ವಿಪ ಹೊರವಲಯ ಬಂದರು.

6) ತಮಿಳುನಾಡು= ಸರ್ ಖಾಜಿ=

ಸರ್ ಖಾಜಿ.


No comments:

ಪ್ರಮುಖ ಅಂಶಗಳು

ಮೊರಾರ್ಜಿ ಪ್ರವೇಶ ಪರೀಕ್ಷೆ 2023-24 ನೇ ಸಾಲಿಗೆ ಮೊರಾರ್ಜಿ ದೇಸಾಯಿ / ಕಿತ್ತೂರು ರಾಣಿ ಚೆನ್ನಮ್ಮ / ಏಕಲವ್ಯ / ಅಟಲ್‌ ಬಿಹಾರಿ ವಾಜಪೇಯಿ / ಡಾ.ಬಿ.ಆರ್.‌ ಅಂಬೇಡ್ಕರ್‌ ...

ಪ್ರಮುಖ ಕಲಿಕಾಂಶಗಳು