ಶಿಕ್ಷಣವೇ ಶಕ್ತಿ

Saturday, 24 April 2021

ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ

ಭಾರತದಲ್ಲಿ ಪಂಚಾಯತ್ ರಾಜ್



ಪೀಠಿಕೆ

ಸ್ವತಂತ್ರ ಭಾರತದಲ್ಲಿ ಸ್ಥಳೀಯ ಸರ್ಕಾರಗಳು:
  • 1992 ರಿಂದ ಪಂಚಾಯತ್ ರಾಜ್ ವ್ಯವಸ್ಥೆಯನ್ನು (ಗ್ರಾಮ ಸಮಿತಿ ನಿಯಮ), ಗ್ರಾಮ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಚುನಾಯಿತ ಸಭೆ ಅಥವಾ ಸಮಿತಿಗಳನ್ನು ರಚಿಸುವ ಮೂಲಕ, ಮೂರು ಶ್ರೇಣಿ ವ್ಯವಸ್ಥೆಯನ್ನು ಸಂವಿಧಾನ ತಿದ್ದುಪಡಿ ಅಡಿಯಲ್ಲಿ ವಿಧ್ಯುಕ್ತಗೊಳಿಸಲಾಗಿದೆ. ಮಹಾತ್ಮ ಗಾಂಧಿಯವರ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಸ್ಥಳೀಯ ಸ್ವಾಯತ್ತತೆಯನ್ನು ಸಮನ್ವಯಗೊಳಿಸುವ ದೃಷ್ಟಿಯಿಂದ ಭಾರತೀಯ ಸರ್ಕಾರಿ ಆಡಳಿತವು ಆಧುನಿಕ ವ್ಯವಸ್ಥೆ ತರಲು ನಿರ್ಧರಿಸಿತು. ಅತಿಯಾಗಿ ಕೇಂದ್ರೀಕೃತವಾದ ಆಡಳಿತವನ್ನು ವಿಕೇಂದ್ರೀಕೃತಗೊಳಿಸಿ ಕೆಳ ಹಂತದ ಸ್ಥಳೀಯ ವಿವಿಧ ಸಮಿತಿಗಳು ಆಡಳಿತ ನಡೆಸುವುದು. ಈ ವ್ಯವಸ್ಥೆ ಸಾಂಪ್ರದಾಯಿಕ ಪಂಚಾಯತ್ ಆಡಳಿತವನ್ನು ಭಾಗಶಃ ಆಧರಿಸಿರುತ್ತದೆ. ಜನರು ಗ್ರಾಮೀಣ ಭಾಗದ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸ್ಥಳೀಯ ಸರ್ಕಾರದಲ್ಲಿ ಹೆಚ್ಚಿನ ಭಾಗವಹಿಸುವಿಕೆ ಉದ್ದೇಶವನ್ನು ಹೊಂದಿದೆ. ಆದರೂ 2015 ರಲ್ಲೂ, ಭಾರತದ ಎಲ್ಲಾ ಅನುಷ್ಠಾನ ಉದ್ದೇಶಿತ ಪ್ರದೇಶಗಳಲ್ಲಿ ಪ್ರತಿ ಗ್ರಾಮ ಅಥವಾ ಗುಂಪು ಹಳ್ಳಿಗಳ ಒಂದು ಗ್ರಾಪಂ, ಒಂದು ತಹಸಿಲ್ ಮಟ್ಟದ ಕೌನ್ಸಿಲ್ ಮತ್ತು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯತ್ ಇರುವಂತೆ ಮಾಡುವ ಯೋಜನೆ ಪೂರ್ಣಗೊಂಡಿಲ್ಲ.
ಸ್ಥಳೀಯ ಸರ್ಕಾರ -
  • ಗ್ರಾಮ ಮತ್ತು ಜಿಲ್ಲಾ ಮಟ್ಟದಲ್ಲಿ ಸರ್ಕಾರ. :ಸ್ಥಳೀಯ ಸಂಸ್ಥೆಗಳ ಆಡಳಿತಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಲು 73 ಮತ್ತು 74 ನೇ ಸಂವಿಧಾನ ತಿದ್ದುಪಡಿ ಕಾಯಿದೆಗಳು ಮತ್ತು ನಂತರದ 1992 ರಲ್ಲಿ ಮಾಡಿದ ತಿದ್ದುಪಡಿ, ಪುನಹ 73 ನೇ ಮತ್ತು 74 ನೆಯ ಕಲಂಗಳಿಗೆ ಸಾಂವಿಧಾನಿಕ ತಿದ್ದುಪಡಿಗಳನ್ನು ಸಂಸತ್ತು ಅನುಮೋದಿಸಿತು.
  • 73 ನೇ ತಿದ್ದುಪಡಿ ಗ್ರಾಮೀಣ ಸ್ಥಳೀಯ ಆಡಳಿತಕ್ಕೆ ಸಂಬಂಧಿಸಿದೆ ( ಪಂಚಾಯತ್ ರಾಜ್ ಸಂಸ್ಥೆಗಳು ಅಥವಾ ‘ಪಿಆರ್‍ಐ’ ಎಂದು ಕರೆಯಲ್ಪಡುವ ಸಂಸ್ಥೆಗಳು ) .
  • 74 ನೇ ತಿದ್ದುಪಡಿ ನಗರ ಸಭೆ ಅಥವಾ ನಗರ ಸ್ಥಳೀಯ ಆಡಳಿತ ವ್ಯವಸ್ಥೆ (ನಗರಪಾಲಿಕೆಗಳು )ಇವಕ್ಕೆ ಸಂಬಂಧಿಸಿದ ಆಡಳಿತ ವ್ಯವಸ್ಥೆಗೆ ನಿಯವi ಗಳನ್ನು ಕಲ್ಪಿಸಿದೆ.
  • 73 ನೇ ಮತ್ತು 74 ನೆಯ ತಿದ್ದುಪಡಿಗಳು ದೇಶಾದ್ಯಂತ ಪಂಚಾಯತಿ ರಾಜ್ ಮತ್ತು ನಗರಾಡಳಿತ ಸಂಸ್ಥೆಗಳ ರಚನೆಗಳಿಗೆ ಏಕರೂಪತೆಯನ್ನು ತರಲು ರಚಿಸಿದೆ.
  • 73 ನೇ ಮತ್ತು 74 ನೆಯ ತಿದ್ದುಪಡಿಗಳು 1993 ರಲ್ಲಿ ಜಾರಿಗೆ ಬಂದಿತು.
ಭಾರತ ಕೃಷಿ ಅವಲಂಬಿತವಾಗಿದೆ;
  • ಸುಮಾರು ಶೇಕಡಾ 65 ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಾರೆ. ಗ್ರಾಮೀಣ ಜನರು ಅಭಿವೃದ್ಧಿ ಯೋಜನೆಯಲ್ಲಿ, ನಿರ್ಧಾರಕ, ಮೇಲ್ವಿಚಾರಣೆ ಮಾಡುವ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ನಿರ್ವಹಣೆಯಲ್ಲಿ ತೊಡಗಿಸಿಕೊಳ್ಳುವ ಅಗತ್ಯವಿದೆ. ಅಭಿವೃದ್ಧಿಯ ಕ್ರಿಯೆಯನ್ನು ವೇಗಗೊಳಿಸುವ ಸಲುವಾಗಿ. ದುರದೃಷ್ಟವಶಾತ್ ಜನರು ಸಕ್ರಿಯವಾಗಿ ಪಾಲ್ಗೊಂಡಿಲ್ಲ. ಅಭಿವೃದ್ಧಿ ಪ್ರಕ್ರಿಯೆಯ ಚಾಲನೆಗೆ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಕೆಳಕ್ಕೆ, ಮತು ಮೇಲಿನ ಸ್ತರದಲ್ಲಿ ಪ್ರಸ್ತುತ ವ್ಯವಸ್ಥೆಯಲ್ಲಿ ಕೆಲವು ತೊಂದರೆಗಳನ್ನು ಇವೆ.
  • ಕಾರ್ಯಕ್ರಮಗಳನ್ನು ಮತ್ತು ಯೋಜನೆಗಳನ್ನು ಯಾಂತ್ರಿಕವಾಗಿ ಕೆಲವು ರಾಜ್ಯದಲ್ಲಿ ಹಳ್ಳಿಗಳ ಜನರ ಹೆಚ್ಚು ಒಳಗೊಳ್ಳುವಿಕೆ ಇಲ್ಲದೇ ಮಾಡಲಾಗುತ್ತದೆ. ಆದರೆ. ಹಳ್ಳಿಗಳ ಹೆಚ್ಚು ಒಳಗೊಳ್ಳುವಿಕೆಯು ತುರ್ತು ಅಗತ್ಯವಾಗಿದೆ. ಗ್ರಾಮ ಮಟ್ಟದಲ್ಲಿ ಪ್ರಬಲ ಆಡಳಿತ ಮತ್ತು ಅಭಿವೃದ್ಧಿಯ.ವ್ಯವಸ್ಥೆಯೇ ಪಂಚಾಯತ್ ರಾಜ್ ಸಂಸ್ಥೆಗಳಾಗಿವೆ (PRIsಪಿ.ಆರ್.ಐಗಳು)

ಆರಂಭಿಕ ಇತಿಹಾಸ

  • ಋಗ್ವೇದ (1700 ಃಅ) ಕಾಲದಲ್ಲಿ, ಸ್ವಯಂ ಆಡಳಿತ ಸಂಸ್ಥೆಗಳು ಗ್ರಾಮ ಇದ್ದವು ಎನ್ನಲು 'ಸಭೆ' ಎಂಬ ಪದ ಸಾಕ್ಷ್ಯಾಧಾರವನ್ನು ಸೂಚಿಸುತ್ತವೆ. ಕಾಲಾನಂತರದಲ್ಲಿ, ಈ ಸಂಸ್ಥೆಗಳು ಪಂಚಾಯತ್ (ಐದು ವ್ಯಕ್ತಿಗಳ ಸಮಿತಿ) ಆಯಿತು. ಪ್ರತಿಯೊಂದು ಹಳ್ಳಿಯಲ್ಲಿ ಪಂಚಾಯತ್ ಸಂಸ್ಥೆಗಳು ಜನಸಾಮಾನ್ಯರ ಆಡಳಿತದ ಕ್ರಿಯಾತ್ಮಕ ವ್ಯವಸ್ಥೆಯಾಗಿದ್ದವು. ಗ್ರಾಮ ಪಂಚಾಯತಿಯ ಚುನಾಯಿತ ಸಭೆ ಅಥವಾ ಪಂಚರು ದೊಡ್ಡ ಅಧಿಕಾರವನ್ನು ಹೊಂದಿದ್ದರು.. ಕಾರ್ಯಾಂಗ ಮತ್ತು ನ್ಯಾಯಾಂಗ ಎರಡೂ. ಜಮೀನು ಹಂಚಿಕೆ, ತೆರಿಗೆ ಸಂಗ್ರಹ ಮತ್ತು ಗ್ರಾಮದ ಪರವಾಗಿ ಸರ್ಕಾರಕ್ಕೆ ಪಾಲು ಹಣ ಸಲ್ಲಿಸುವುದು, ಈ ಕಾರ್ಯಗಲನ್ನು ನಿರ್ವಹಿಸುತ್ತಿದ್ದರು. ಹಲವಾರು ಪಂಚಾಯತ್. ಗ್ರಾಮ ಮಂಡಳಿಗಳ ಮೇಲೆ ಒಂದು ದೊಡ್ಡ ಪಂಚಾಯತ್ ಅಥವಾ ಕೌನ್ಸಿಲ್ ಮೇಲ್ವಿಚಾರಣೆ ಮಾಡುತ್ತಿತ್ತು ಮತ್ತು ಅನಗತ್ಯವಿದ್ದರೆ ಹಸ್ತಕ್ಷೇಪ ಇರಲಿಲ್ಲ. [2] ಜಾತೀಯತೆ ಮತ್ತು ಮಧ್ಯಯುಗದ ಅವಧಿಯಲ್ಲಿ, ಮೊಘಲ್ ಆಳ್ವಿಕೆಯಲ್ಲಿ ಊಳಿಗಮಾನ್ಯ ಆಡಳಿತದ ವ್ಯವಸ್ಥೆಯಲ್ಲಿ ನಿಧಾನವಾಗಿ ಹಳ್ಳಿಗಳ ಸ್ವಯಮಾಡಳಿತದ ವ್ಯವಸ್ಥೆ ಕ್ರಮೇಣ ಕ್ಷೀಣಿಸತೊಡಗಿತು. ಊಳಿಗಮಾನ್ಯ ಮುಖ್ಯಸ್ಥರು ಮತ್ತು ಆದಾಯ ಸಂಗ್ರಹಕಾರರು (ಜಮೀನ್ದಾರರು) ಎಂಬ ಒಂದು ಹೊಸ ವ್ಯವಸ್ಥೆ, ಆಡಳಿತಗಾರರ ಮತ್ತು ಜನರ ನಡುವೆ ಹೊರಹೊಮ್ಮಿತು. ಆದ್ದರಿಂದ ಹಳ್ಳಿಗಳ ಸ್ವಯಮಾಡಳಿತದ ಕ್ರಮ ಅವನತಿಹೊಂದಿತು. ಬ್ರಿಟಿಷ್ ಆಳ್ವಿಕೆಯ ಸಂದರ್ಭದಲ್ಲಿಯೂ ಪಂಚಾಯತ್ ಸ್ವಾಯತ್ತತೆಯು ಕ್ಷೀಣಿಸಿತು. ಸ್ಥಳೀಯ ನಾಗರಿಕ ಆಡಳಿತ ಮತ್ತು ಅಪರಾಧ ನ್ಯಾಯಾಲಯಗಳಸ್ಥಾಪನೆ, ಆದಾಯ -ಕರ ಸಂಗ್ರಹ ಆಡಳಿತ ಮತ್ತು ಪೊಲೀಸ್ ಸಂಸ್ಥೆಗಳು, ಭೂ ಮಾಲಿಕ ವ್ಯವಸ್ಥೆ ಇದರಿಂದ ಪಂಚಾಯತ್ ಸ್ವಾಯತ್ತತೆ ಕಡಿಮೆಯಾಯಿತು.
ಪೂರ್ವ ಬ್ರಿಟಿಷ್ ಕಾಲದಲ್ಲಿ ಪಂಚಾಯತಿ ರಾಜ್
  • ಪಂಚಾಯತ್ ಪದ ಪಂಚ (ಪಂಚಾಸ್ವನುಸ್ಥಿತಃ) ದಿಂದ ಪಡೆಯಲಾಗಿದೆ, “ಐದು ಜನರ ಸಭೆ” ಇದು ಪಂಚಾಯತಿ. ಪಂಚಾಯತಿ ರಾಜ್ ಭಾರತೀಯ ನಾಗರಿಕತೆಯಷ್ಟೇ ಪುರಾತನವಾದದ್ದು. ಋಗ್ವೇದಮನುಸಂಹಿತೆಉಪನಿಷತ್ತುಗಳು, ಜಾತಕ ಕಥೆಗಳು ಮತ್ತು ಇತರ ಗ್ರಂಥಗಳು ವ್ಯಾಪಕವಾಗಿ ಸ್ಥಳೀಯ ಆಡಳಿತದ ವಿಚಾರ ತಿಳಿಸುತ್ತವೆ, ಪಂಚಾಯತ್ ವ್ಯವಸ್ಥೆ ವಿಷಯ ಮನುಸ್ಮೃತಿ ಮತ್ತು ಮಹಾಭಾರತದ ಶಾಂತಿಪರ್ವದಲ್ಲಿ ಗ್ರಾಮ ಸಂಘಗಳ ಅಸ್ತಿತ್ವದ ಅನೇಕ ಉಲ್ಲೇಖಗಳು ಇವೆ ಆ ಅವಧಿಯಲ್ಲಿ, ಗ್ರಾಮ ಆಡಳಿತ ನಡೆಸಲಾಗುತ್ತಿತ್ತು ಮೇಲ್ವಿಚಾರಣೆಗೆ ಅಧ್ಯಕ್ಷ ಅಥವಾ ಮುಖ್ಯಸ್ಥ ಮತ್ತು ಇತರ ಅಧಿಕಾರಿಗಳು ಇರುತ್ತಿದ್ದರು ಸಂಖ್ಯಕ [ಅಕೌಂಟೆಂಟ್], ಪಶು ವೈದ್ಯರು, ಜಂಘಕಾರ್ಮಿಕ [ಗ್ರಾಮ ಕೊರಿಯರ್] ಚಿಕಿತ್ಸಕ [ವೈದ್ಯ ].ಇತ್ಯಾದಿ ಇದ್ದರು. ಗ್ರಾಮದ ಮುಖ್ಯಸ್ಥ ರಾಜಸ್ವ ಸಂಗ್ರಹ ಜವಾಬ್ದಾರಿಯನ್ನು ವಹಿಸುತ್ತಿದ್ದನು.
  • ರಾಜ್ಯದ ಬಾಕಿ ಸಂಗ್ರಹ ಮತ್ತು ಅಪರಾಧಿಗಳ ಚಟುವಟಿಕೆಗಳನ್ನು ನಿಯಂತ್ರಿಸುವ ಅಧಿಕಾರಿಗಳ ವಿಷಯ . ವಾಲ್ಮೀಕಿ ರಾಮಾಯಣದಲ್ಲಿ ಇವೆ ಗಣಪದ (ಗ್ರಾಮ ಫೆಡರೇಶನ್) ಬಹುಶಃ ಗ್ರಾಮ ಒಕ್ಕೂಟದ ಉಲ್ಲೇಖದ ಸಾಧ್ಯತೆಯಾಗಿದೆ. ಭಾರತದ ಪ್ರಾಚೀನ ಕಾಲದಿಂದ. ಗ್ರಾಮಗಳಲ್ಲಿ ಸ್ವಯಮಾಡಳಿತದ ಸಮುದಾಯಗಳು ಇದ್ದವು. ಇದನ್ನು ಸುಮಾರು ಕಾಲಮಾನದಲ್ಲಿ 200 ಬಾರಿ ಋಗ್ವೇದದಲ್ಲಿ ಉಲ್ಲೇಖಿಸಲಾಗಿದೆ. ಕ್ರಿ.ಪೂ.ದಲ್ಲೇ-ವೇದ ಕಾಲದಲ್ಲಿ ಗ್ರಾಮ ಆಡಳಿತದ ಮೂಲ ಘಟಕವನ್ನು ಹೊಂದಿತ್ತು. ಆಡಳಿತ ಜನಪ್ರಿಯ ಸಭೆಗಳ ಸ್ಥಾಪನೆಯನ್ನು ಒಳಗೊಂಡಿತ್ತು. ಇದು ವೇದ ಕಾಲದ ರಾಜಕೀಯ ವ್ಯವಸ್ಥೆಯ ಗಮನಾರ್ಹ ವೈಶಿಷ್ಟ್ಯ. ಅದರಲ್ಲಿ ಎರಡು- 'ಸಭಾ', ಮತ್ತು 'ಸಮಿತಿ' ಗಳು ವಿಶೇಷ ಉಲ್ಲೇಖಕ್ಕೆ ಅರ್ಹವಾಗಿವೆ. ಒಂದು ಸಮಿತಿ ಆಗಿತ್ತು. ಕೆಲವು ಸಂದರ್ಭಗಳಲ್ಲಿ ಆ ವೈದಿಕ ಜಾನಪದ ಸಭಾ ಒಬ್ಬ ರಾಜನನ್ನು ಆರಿಸುವ ಹಕ್ಕನ್ನು ಪಡೆದಿತ್ತು ನ್ಯಾಯಾಲಯದ ಕೆಲವು ಕಾರ್ಯಗಳನ್ನು ಚಲಾಯಿಸುತ್ತಿದ್ದರು. ಸಮಿತಿ ಮತ್ತು ಸಭಾ ಎರಡೂ, ಈಗಿನ ಜನರಿಗೆ ಅಪರಿಚಿತವಾದ ಚರ್ಚೆಮಾಡುವ ಸವಲತ್ತು ಮತ್ತು ಹಕ್ಕುಗಳನ್ನು ಹೊಂದಿತ್ತು. ಇತರ ಪ್ರಾಚೀನ ಜನರ ಜನಪ್ರಿಯ ಸಭೆಗಳು. ಗ್ರಾಮದ ಕಚೇರಿ. ಗ್ರಾಮದ ಮುಖ್ಯಸ್ಥ ನಾದ ಗ್ರಾಮಿಣಿಯ ಹುಟ್ಟು ಆಡಳಿತ ಗ್ರಾಮವು ಒಂದು ಆಡಳಿತ ಘಟಕವಾಗಿದ್ದುದನ್ನು ಸೂಚಿಸುತ್ತದೆ. ವೇದಗಳ ಕಾಲದ, ಸಮಿತಿ ನಂತರ ಮುಳುಗಿ ಜನಪ್ರಿಯ ಸಂಯೋಜನೆ ಕಣ್ಮರೆಯಾಯಿತು ಸಭಾ ಒಂದು ಕಿರಿದಾದ ರಾಜರ ಮಂಡಳಿಗೆ ಅನುಗುಣವಾದ ವ್ಯವಸ್ಥೆ ಬ0ದಿತು. ಕಾಲಕ್ರಮೇಣ, ಈ ಗ್ರಾಮ ಮಂಡಳಿಗಳು ಪಂಚಾಯತ್ ರೂಪದಲ್ಲಿ ಪಡೆದವು. ಜೊತೆಗೆ ಜಾತಿ ಪಂಚಾಯತ್ ಮಾದರಿಯ ಅಸ್ತಿತ್ವ ಸಹ ಇತ್ತು. ಗ್ರಾಮದ ಮುಖ್ಯಸ್ಥ ನಾದ ಗ್ರಾಮಿಣಿಯ ಆಡಳಿತವು ಗ್ರಾಮವು ಒಂದು ಆಡಳಿತ ಘಟಕವಾಗಿದ್ದುದನ್ನು ಹುಟ್ಟು ಸೂಚಿಸುತ್ತದೆ. ವೇದಗಳ ಕಾಲದ, ಸಮಿತಿ ನಂತರ ಮುಳುಗಿ ಜನಪ್ರಿಯ ಸಂಯೋಜನೆ ಕಣ್ಮರೆಯಾಯಿತು ಸಭಾ ಒಂದು ಕಿರಿದಾದ ರಾಜರ ಮಂಡಳಿಗೆ ಅನುಗುಣವಾದ ವ್ಯವಸ್ಥೆ ಬೋದಿತು. ಕಾಲಕ್ರಮೇಣ, ಈ ಗ್ರಾಮ ಮಂಡಳಿಗಳು ಪಂಚಾಯತ್ ರೂಪದಲ್ಲಿ ಪಡೆದವು. ಜೊತೆಗೆ ಜಾತಿ ಪಂಚಾಯತ್ ಮಾದರಿಯ ಅಸ್ತಿತ್ವ ಸಹ ಇತ್ತು.
  • ದಕ್ಷಿಣ ಭಾರತದಲ್ಲಿ, ಗ್ರಾಮ ಸಾಮಾನ್ಯವಾಗಿ ಒಂದು ಗ್ರಾಮ ಸಭೆ ಎಂಬ ಪಂಚಾಯತ್ `ನ್ನು ಹೊಂದಿತ್ತು. ಇವು ಕಾರ್ಯನಿರ್ವಾಹಕರ ವಿವಿಧ ಗುಂಪುಗಳು ಮತ್ತು ಜಾತಿಗಳ ಪ್ರತಿನಿಧಿಗಳನ್ನು ಒಳಗೊಂಡಿತ್ತು. ಈ ಗ್ರಾಮ ಸಂಸ್ಥೆಗಳು, ಉತ್ತರ ಮತ್ತು ದಕ್ಷಿಣ ಭಾರತದ, ಎರಡೂ ಭಾಗದಲ್ಲಿ ಆಡಳಿತದ ಮಹತ್ವ ಹೊಂದಿತ್ತು.
  • ಮೌರ್ಯರ ಅವಧಿಯಲ್ಲಿ, ಗ್ರಾಮವು ಆಡಳಿತದ ಮೂಲ ಘಟಕವನ್ನು ಹೊಂದಿತ್ತು. ಇವು ಸಾರ್ವಜನಿಕರ ವಿವಾದಗಳನ್ನು ಇತ್ಯರ್ಥಗೊಳಿಸಲು ಮತ್ತು ಮನರಂಜನಾ ಕಾರ್ಯಗಳನ್ನು ಸಂಘಟಿಸಲು, ಮತ್ತು ಅಪ್ರಾಪ್ತರ ಟ್ರಸ್ಟಿಯಾಗಿ ಕಾರ್ಯನಿರ್ವಹಿಸಲು ಇವು ಇದ್ದವು. ಗುಪ್ತರ ಕಾಲದಲ್ಲಿ ಗ್ರಾಮ ಜನಪದಗಳು ವಿಕಸನಗೊಂಡಿತು ಮಧ್ಯ ಭಾರತ ಮತ್ತು ಬಿಹಾರದಲ್ಲಿ ಗ್ರಾಮ ಜನಪದಗಳು ; ಪಂಚಮಂಡಲಗಳು . ಇದ್ದವು. ವಿವಾದಗಳನ್ನು ಬಗೆಹರಿಸಲು ಮತ್ತು ರಿಯಾಯಿತಿಗಳನ್ನು ಮರುಪಾವತಿಯನ್ನು ಮಾಡಲು ಇದ್ದವು.
ದಕ್ಷಿಣದ ಚೋಳರ ಶಾಸನ
  • ಈ ರಾಜವಂಶದಲ್ಲಿ ಗ್ರಾಮ ಸಭೆ ಮತ್ತು ಅವರ ಕಾರ್ಯನಿರ್ವಾಹಕರ ಕಾರ್ಯಗಳನ್ನು ತೋರಿಸುತ್ತದೆ. ಚುನಾಯಿತ ಪ್ರತಿನಿಧಿಗಳ ಸಮಿತಿಗಳು. ಗ್ರಾಮ ಆಡಳಿತ ನಡೆಸುತ್ತಿದ್ದವು. ಮಧ್ಯಕಾಲೀನ ಮತ್ತು ಮೊಗಲ್ ಅವಧಿಗಳಲ್ಲಿ, ಗ್ರಾಮದ ಆಡಳಿತವು ಜನರು ಆರಿಸಿದ ಸಮಿತಿಗಳ ಅಧೀನವಿತ್ತು. ಮೊಗಲ್ ಅವಧಿಯಲ್ಲಿ, ವಿಶೇಷವಾಗಿ ಶೇರ್ ಶಾ ನ ಕಾಲದಲ್ಲಿ ಹಳ್ಳಿಗಳ ಪಂಚಾಯ್ತಿಗಳ ಆಳ್ವಿಕೆಯು ನಡೆಯುತ್ತಿತ್ತು. ದೇರ್ ಓನ್ ಆಳ್ವಿಕೆ ದರು. ಪ್ರತಿ ಹಳ್ಳಿಯ ಹಿರಿಯರು ಪಂಚಾಯತ್ ನಲ್ಲಿ ಒಳಗೊಂಡಿರುವುದರಿಂದ ಜನರ ಹಿತಾಸಕ್ತಿ ಮತ್ತು ನ್ಯಾಯದ ಆಡಳಿತ ನೋಡಿಕೊಳ್ಳುತತ್ತಿದ್ದರು. ಗ್ರಾಮದ ಮುಖ್ಯಸ್ಥ ಮನುಷ್ಯ ಅರೆ ಸರ್ಕಾರಿ ಅಧಿಕಾರಿಯಾಗಿದ್ದು, ತಪ್ಪಿತಸ್ತರಿಗೆ ಶಿಕ್ಷೆ ಮಾಡವ ಅಧಿಕಾರವಿತ್ತು.

(

  • ಅಕ್ಬರ್’ನು ಈ ಗ್ರಾಮ ಪಂಚಾಯತ್ ವ್ಯವಸ್ಥೆಯನ್ನು , ನಾಗರಿಕ ಆಡಳಿತದವನ್ನು ಅಗತ್ಯವಾಗಿ ಅನಷ್ಠಾನ ಮಾಡಿದ. ಈ ಅವಧಿಯಲ್ಲಿ, ಪ್ರತಿ ಗ್ರಾಮವೂ ಹಿರಿಯರ ತನ್ನದೇ ಪಂಚಾಯತ್ ಆಡಳಿತ ಹೊಂದಿತ್ತು. ಇದು ತನ್ನದೇ ಆದ ವಿಶೇಷ ಅಧಿಕಾರವನ್ನು ಹೊಂದಿ, ಸ್ವಾಯತ್ತ ಆಗಿತ್ತು. ಸ್ಥಳೀಯ ತೆರಿಗೆ, ನಿರ್ವಾಹಕರ ನಿಯಂತ್ರಣ, ನ್ಯಾಯ ಮತ್ತು ದಂಡನೆ ಅಧಿಕಾರ ಚಲಾಯಿಸುತ್ತಿದ್ದರು. ಮೊಗಲರು ಒಂದು ಕ್ರಮಾನುಗತ (ತಳಮಟ್ಟದಿಂದ ಮೇಲಿನವರೆಗೆ) ವಿಸ್ತಾರವಾದ ಆಡಳಿತಾತ್ಮಕ ಯಂತ್ರವನ್ನು ಜಾರಿಗೆ ತಂದರು. ಶತಮಾನಗಳ ಕಾಲ ಮೊಗಲ್ ಆಡಳಿತ ವ್ಯವಸ್ಥೆ ನಡೆಯಿತು. ಅಧಿಕಾರಿಗಳು ವಿಶೇಷವಾಗಿ ರಾಜ್ಯದ ಆದಾಯದ ಕ್ಷೇತ್ರದಲ್ಲಿ ವಿಶೇಷವಾಗಿ ಪ್ರವೇಶಿಸುತ್ತಿದ್ದರು. ಬ್ರಿಟಿಷರು ಭಾರತದಲ್ಲಿ ಪ್ರಾಬಲ್ಯ ಪಡೆದ ನಂತರ , ಮೊಗಲ್ ಆಡಳಿತದಲ್ಲಿ ಪ್ರಬಲ ಹಿಡಿತ ಕುಸಿತ ಕಂಡಿತು.

ಸ್ವಾತಂತ್ರ್ಯದ ನಂತರದ ಬೆಳವಣಿಗೆ

  • ದೇಶವು 1947ರ ಆಗಸ್ಟ್’ ನಲ್ಲಿ ಸ್ವಾತಂತ್ರ ಪಡೆಯಿತು. ಹಿಂದಿನ ಬ್ರಿಟಿಷ್ ಸರ್ಕಾರಕ್ಕೆ ಗ್ರಾಮದ ಸ್ವಾಯತ್ತತೆಯಲ್ಲಿ ಆಸಕ್ತಿ, ಇರಲಿಲ್ಲ. ಅವರು ಭಾರತದಲ್ಲಿನ ಅವರ ಆಡಳಿತ ಮುಂದುವರಿಸಲು ಮತ್ತು ಕಂದಾಯ ವಸೂಲಿ ಮೊದಲಾದ ಆರ್ಥಿಕ ಅವಶ್ಯಕತೆಗಳನ್ನು ಪೂರೈಸಲು, ಆ ವ್ಯವಸ್ಥೆಯನ್ನು ಹೆಸರಿಗೆ ಮಾತ್ರಾ ಇಟ್ಟು ಕೊಂಡಿದ್ದರು.. ಬ್ರಿಟಿಷರು ಆಗಮಿಸುವ ತನಕ ರೂಪುತಳೆದ ಭಾರತದ ಗ್ರಾಮೀಣ ಗಣರಾಜ್ಯ, ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ ಹಿನ್ನೆಡೆ ಪಡೆಯಿತು. ಸ್ವಯಂ ಯಾ ಸ್ವಾಯತ್ತ ಹೊಂದಿದ್ದ ಪಂಚಾಯತ್’ಗಳು ಮತ್ತು ಅವರ ಸಮುದಾಯಗಳಿಗೆ ಆದಾಯ ಸಿಗುವುದು ನಿಂತಿತು. ಗ್ರಾಮದ ಆಡಳಿತದ ಔಪಚಾರಿಕವಾಗಿ ಇದ್ದಿತು. ಅದರ ಅಧಿಕಾರವನ್ನು ಕೇಂದ್ರೀಕೃತ ಸಂಸ್ಥೆಗಳು ಆಕ್ರಮಿಸಿಕೊಂಡವು. . ಬ್ರಿಟಿಷ್ ಆಡಳಿತದ ಕೇಂದ್ರೀಕೃತ ವ್ಯವಸ್ಥೆಯಲ್ಲಿ, ಗ್ರಾಮಗಳು ಸ್ವಾಯತ್ತತೆಯನ್ನು ಕಳೆದುಕೊಂಡಂತೆ ತೋರುತ್ತದೆ.
  • ಭಾರತದಲ್ಲಿ ಸ್ವತಂತ್ರ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸುವ ಕಾರ್ಯವು ಸ್ವಾತಂತ್ರ್ಯದ ನಂತರ ರೂಪುಗೊಂಡ ಭಾರತ ಸರ್ಕಾರದ ಮೇಲೆ ಬಿದ್ದಿತು. ಭಾರತ ಹಳ್ಳಿಗಳ ದೇಶ. ಪ್ರಜಾಪ್ರಭುತ್ವ ಬಲಪಡಿಸಲು ಗ್ರಾಮಗಳಿಗೆ ಪಂಚಾಯಿತಿ ಆಡಳಿತ ಬಲಪಡಿಸಬೇಕೆಂಬುದು ಎಂದು ಸ್ಪಷ್ಟವಾಗಿತ್ತು. ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್,ದಲ್ಲಿ ಬಲವಾದ ನಂಬಿಕೆ ಹೊಂದಿದ್ದರು. ( ಹಳ್ಳಿಯ ಜನಗಳಿಗೆ ಅಧಿಕಾರ ವರ್ಗಾವಣೆ.) ಅವರ ಪ್ರಕಾರ ಹಳ್ಳಿಗಳು ಸಾಕಷ್ಟು ಸ್ವಾಯತ್ತವಾಗಲು, ಪಂಚಾಯತ್’ ವ್ಯವಸ್ಥೆ ಮೂಲಕ ಗ್ರಾಮಗಳು ತಮ್ಮ ಆಡಳಿತ ಮಾಡಬೇಕು ಎಂಬುದು ಅವರ ಆಶಯವಾಗಿತ್ತು. ಕರಡು ಸಂವಿಧಾನ 1948 ರಲ್ಲಿ ತಯಾರಿಸಲಾಯಿತು. ಆದರೆ ಆಶ್ಚರ್ಯಕರವೆಂದರೆ, ಅದರಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ವಿಚಾರವೇ ಇರಲಿಲ್ಲ. ಗಾಂಧೀಜಿಯವರು ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿ ಟೀಕೆ ಮಾಡಿದರು. ತಕ್ಷಣ ಗಮನ ಸೆಳೆದ ಅವರ ಪ್ರತಿಕ್ರಿಯೆ ಇದು ಪಂಚಾಯತ್ ರಾಜ್ಯದ ನೀತಿ ನಿಯಮಗಳು ಸಂವಿಧಾನದಲ್ಲಿ ಸ್ಥಾನಪಡೆದಿದೆ,
  • ಹೀಗೆ ಅನುಚ್ಛೇದ 40 ರಲ್ಲಿ ರಾಜ್ಯದ ಮಾರ್ಗದರ್ಶಕ ನೀತಿ ನಿಯಮಗಳಲ್ಲಿ, "ರಾಜ್ಯಗಳಲ್ಲಿ ಗ್ರಾಮ ಪಂಚಾಯತ್ಗಳನ್ನು ಸಂಘಟಿಸತಕ್ಕದ್ದು ಮತ್ತು ಅವುಗಳು ಸ್ವಯಂ ಆಡಳಿತ ಹೊಂದಲು ಅಗತ್ಯವಾದ ನಿಯಮ ರೂಪಿಸುವುದು. ಇವುಗಳನ್ನು ಸಕ್ರಿಯಗೊಳಿಸಲು ಮತ್ತು ಅಧಿಕಾರ ಹಸ್ತಾಂತರಿಸಲು ಕ್ರಮಗಳನ್ನು ಕೈಗಳ್ಳ ಬೇಕು", ಎಂದು ಹೇಳುತ್ತದೆ..

ಬಲವಂತರಾವ್ ಮೆಹ್ತಾ ಮೆಹ್ತಾ ಸಮಿತಿ 1957

  • ತಳಮಟ್ಟದ ಪ್ರಜಾಪ್ರಭುತ್ವ ಬಲಪಡಿಸಲು ರಾಜ್ಯದ ನೀತಿ ನಿರ್ದೇಶಕ ಸೂತ್ರಗಳು ರಾಜ್ಯ ಸರ್ಕಾರಗಳು ಕಾನೂನುಬದ್ಧವಾಗಿ ಬಳಸಲು ಸಾಧ್ಯವಿಲ್ಲ, ಎಂದು ಸಂವಿಧಾನ ರಚನಕಾರರು ಅರಿತಿದ್ದೂ , ವಿಷಯ ನಿರ್ಲಕ್ಷ್ಯಕ್ಕೆ ಒಳಗಾಯಿತು. ಗ್ರಾಮೀಣ ಭಾರತದ ಸಮಸ್ಯೆಯನ್ನು ನಿಭಾಯಿಸಲು ಮೊದಲ ಸಂಘಟಿತ ಪ್ರಯತ್ನವು ಗ್ರಾಮೀಣ ಅಭಿವೃದ್ಧಿಯ ವಿವಿಧ ಅಂಶಗಳನ್ನು ಒಗ್ಗೂಡಿಸಿದ ವ್ಯವಸ್ಥೆಯನ್ನು ಆಧರಿಸಿತ್ತು. 1952-ಕಾರ್ಯಕ್ರಮದಲ್ಲಿ ಸಮುದಾಯ ಅಭಿವೃದ್ಧಿ ಕಾರ್ಯಕ್ರಮ ಮತ್ತು 1953ರ ರಾಷ್ಟ್ರೀಯ ವಿಸ್ತರಣೆ ಸೇವೆಯ ಮೂಲಕ ಮಾಡಲಾಯಿತು. ಇದರ ಉದ್ದೇಶಗಳು ಹಳ್ಳಿಗರು ಸಾಮಾಜಿಕ ಹಾಗೂ ರಾಜಕೀಯ ಜೀವನದಲ್ಲಿ ಪರಿವರ್ತಿಸುವ ಗುರಿಯೊಂದಿಗೆ ಸಾಮಾಜಿಕ,ಮತ್ತು ಸಮಗ್ರ ಆರ್ಥಿಕ ಹಾಗೂ ಸಾಂಸ್ಕøತಿಕ ಬದಲಾವಣೆಯ ಪ್ರಕ್ರಿಯೆ ಸೃಷ್ಟಿಸಲು, ಹಾಗೂ ಸ್ವ-ಸಹಾಯ ಮತ್ತು ಸ್ವಯಂ ಅವಲಂಬನೆಯನ್ನು ಗ್ರಾಮೀಣ ಜನರಲ್ಲಿ ಪ್ರಚಾರಪಡಿಸಲು, ಸಮುದಾಯ ಅಭಿವೃದ್ಧಿ ಕಾರ್ಯಕ್ರಮ ಕಾರ್ಯಗತ ಗೊಳಿಸಲು ಬ್ಲಾಕ್ ಅಭಿವೃದ್ಧಿ ಅಧಿಕಾರಿಗಳನ್ನು ನೇಮಿಸಲಾಯಿತು. ಇದು ಗ್ರಾಮೀಣ ಅಭಿವೃದ್ಧಿಯ ವಿವಿಧ ಅಂಶಗಳನ್ನು ಒಗ್ಗೂಡಿಸುವ ಯೋಜನೆ ಆಧರಿಸಿತ್ತು. ಕಾರ್ಯಕ್ರಮ ನೇಮಕ ಆಡಳೀತಗಾರರಲ್ಲಿತ್ತು ಮತ್ತು ಗ್ರಾಮೀಣ ಮಟ್ಟದಲ್ಲಿ ಗ್ರಾಮ ಸಹಾಯಕರನ್ನು (ವಿಲೇಜ್’ ಲೆವಲ್’ವರ್ಕರ್) ನೇಮಿಸಿದ್ದರು. ಈ ಕಾರ್ಯಕ್ರಮ ಪ್ರಜಾಪ್ರಭುತ್ವದ ಹಳ್ಳಿಯ ಜನಗಳಿಗೆ ಸಾಮಾಜಿಕ ಆರ್ಥಿಕ ಅಭಿವೃದ್ಧಿ ತರಲು ಉದ್ದೇಶ ಹೊಂದಿತ್ತು. , ಆದರೆ ಜನರ ಭಾಗವಹಿಸುವಿಕೆ ಇಲ್ಲದ ಪರಿಣಾಮೀ ಯೋಜನೆ ವಿಫಲವಾಯಿತು. (ಬಲವಂತರಾವ್ ಮೆಹ್ತಾ ಮೆಹ್ತಾ ಸಮಿತಿ 1957 ರಲ್ಲಿ )ಪ್ರಜಾಪ್ರಭುತ್ವ ವಿಕೇಂದ್ರೀಕರಣ ಮತ್ತು ಗ್ರಾಮೀಣ ಪುನರ್ನಿರ್ಮಾಣ ದಿಕ್ಕಿನಲ್ಲಿ ಮಾಡಿದ ಶಿಫಾರಸುಗಳು ಜನರಿಗೆ ತಲುಪುವಂತೆ ಮಾಡಿದ ಸಮುದಾಯ ಅಭಿವೃದ್ಧಿ ಯಶಸ್ವಿ ಕಾರ್ಯಕ್ರಮ ಅಲ್ಲ ಎಂದಿತು. ಅದು ಸ್ಥಳೀಯ ಆಸಕ್ತಿ ಹುಟ್ಟಿಸಲು ಸಾಧ್ಯವಾಗದ ಉಪಕ್ರಮವು ಮತ್ತು ಸ್ಥಳೀಯರ ಅನುಪಸ್ಥಿತಿಯಲ್ಲಿ ಅಭಿವೃದ್ಧಿಕಾರ್ಯಕ್ಕೆ ಪ್ರೇರೇಪಿಸುವುದು ವಿಫಲವಾದದ್ದೇ ಕಾರಣ ಎಂದು ತಿಳಿಸಿದರು.
  • ಸಮಿತಿಯವರು ಐದು ಮೂಲಭೂತ ತತ್ವಗಳನ್ನು ಮುಂದಿಟ್ಟರು:
  • 1. ಇಲ್ಲ ಜಿಲ್ಲಾ ಮಟ್ಟದ ಹಳ್ಳಿಯಿಂದ ಸ್ಥಳೀಯ ಸ್ವಯಮಾಡಳಿತ ಸಮಿತಿಗಳನ್ನು ಮೂರು ಹಂತಗಳಲ್ಲಿ ರಚನೆಮಾಡಬೇಕು ಮತ್ತು ಒಟ್ಟಿಗೆ ಈ ಸಮಿತಿ /ಸಭೆಗಳನ್ನು ಪರಸ್ಪರ ಜೋಡಿಸಬೇಕು. .
  • 2. ಜವಾಬ್ದಾರಿಯನ್ನು ನಿರ್ವಹಿಸಲು ಈ ದೇಹಗಳನ್ನು ಸಕ್ರಿಯಗೊಳಿಸಲು ಶಕ್ತಿ ಮತ್ತು ಜವಾಬ್ದಾರಿ ಸಾಚಾ ವರ್ಗಾವಣೆ ಇರಬೇಕು.
  • 3. ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಲು ಈ ಸಮಿತಿಗಳನ್ನು ಸಕ್ರಿಯಗೊಳಿಸಲು ಸಾಕಷ್ಟು ಸಂಪನ್ಮೂಲಗಳನ್ನು ವರ್ಗಾವಣೆ ಮಾಡಬೇಕು. ಇದು ಎಲ್ಲಾ ಮೂರು ಹಂತಗಳಲ್ಲಿ ಆಗಬೇಕು.
  • 4. ಎಲ್ಲಾ ಕಲ್ಯಾಣ ಮತ್ತು ಅಭಿವೃದ್ಧಿ ಯೋಜನೆಗಳು ಮತ್ತು ಕಾರ್ಯಕ್ರಮಗಳು ಈ ಸಂಸ್ಥೆಗಳ ಮೂಲಕ ನೆಡೆಯಬೇಕು., ಮತ್ತು
  • 5. ಈ ಮೂರು ಶ್ರೇಣಿ ವ್ಯವಸ್ಥೆಯನ್ನು ಶಕ್ತಿ ಯುತಗೋಲಿಸಬೇಕು ಮತ್ತು ಭವಿಷ್ಯದಲ್ಲಿ ಜವಾಬ್ದಾರಿಯನ್ನು ಮತ್ತಷ್ಟು ವಿಕೇಂದ್ರೀಕರಣದ ಅನುಕೂಲ ಮಾಡಬೇಕು.
  • ಮೂರು ಹಂತದ ಪಂಚಾಯತ್’ ಸಮಿತಿ ಮೂಲಕ ದುರ್ಬಲ ವರ್ಗಗಳ ಮತ್ತು ಮಹಿಳೆಯರ ಕಲ್ಯಾಣದ ಸಾಧನೆ ಮಾಡುವುದು. ಜಿಲ್ಲಾ ಪಂಚಾಯತ್, (ತಾಲ್ಲೂಕು) ಪಂಚಾಯತ್ ಸಮಿತಿ ಮತ್ತು ಗ್ರಾಮ ಪಂಚಾಯತ್ ಎಂದು ಕರೆಯುತ್ತಾರೆ. ಇವು (1)ಸಮುದಾಯ ಕೃಷಿ ಮತ್ತು ಪಶುಸಂಗೋಪನೆ, ಜನರ ಭಾಗವಹಿಸುವಿಕೆಗೆ ಪ್ರೋತ್ಸಾಹ ನೀಡುವುದು ಉದ್ದೇಶ. ಮೊದಲ ಬಾರಿಗೆ ಸಮಿತಿಯು, ಮಹಿಳೆಯರು ಮತ್ತು ಮಕ್ಕಳಿಗೆ ಕೆಲಸದ ಆಸಕ್ತಿ ಉಂಟುಮಾಡುವ ಉದ್ದೇಶ ಹೊಂದಿತ್ತು. ಎರಡು, ಮಹಿಳೆಯರನ್ನು ಸಹ ಸಮಿತಿಗೆಆಯ್ಕೆ ಮಾಡಲು ಸಹ-ನೇಮಕ (ಖೋ-ಆಪ್ಟ್) ಮಾಡುವುದು.
  • ಸರ್. ಃಬಲವಂತರಾವ್’ ಮೆಹ್ತಾ ಸಮಿತಿ ಶಿಫಾರಸುಗಳು 1 ನೇ ಏಪ್ರಿಲ್ 1958 ರಂದು ಜಾರಿಗೆ ಬಂದಿತು. ರಾಜಸ್ಥಾನವು 2 ನೇ ಅಕ್ಟೋಬರ್ 1959 ರಂದು ಅದನ್ನು ಕಾರ್ಯಗತಗೊಳಿಸಿತು. ಅದು ಅದನ್ನು(ಶಿಫಾರಸುಗಳನ್ನು) ಕಾರ್ಯಗತಗೊಳಿಸಿದ ಪ್ರಥಮ ರಾಜ್ಯವಾಗಿದೆ. 1960 ರ ದಶಕದ ಮಧ್ಯದಲ್ಲಿ, ಪಂಚಾಯತ್’ ರಾಜ್’ವ್ಯವಸ್ಥೆ ದೇಶದ ಎಲ್ಲಾ ಭಾಗಗಳಿಗೆ ಮುಟ್ಟಿತು. ಪಂಚಾಯತ್’ ರಾಜ್’ವ್ಯವಸ್ಥೆ, 5,79,000 ಹಳ್ಳಿಗಳಲ್ಲಿ ಇದ್ದವು. 2,17,300 ಹೆಚ್ಚು ಗ್ರಾಮ ಪಂಚಾಯತ್ ಸ್ಥಾಪಿಸಲಾಯಿತು. ಅದು 96% ಹಳ್ಳಿಗಳನ್ನು ಒಳಗೊಂಡಿತ್ತು. ಗ್ರಾಮೀಣ ಜನಸಂಖ್ಯೆಯ 92% ರಷ್ಟು ಒಳಗೊಂಡಿತ್ತು ಗ್ರಾಮೀಣ ಭಾರತದಲ್ಲಿ ಉತ್ಸಾಹ ಇತ್ತು. ಸಚಿವಾಲಯ ಸಮುದಾಯದ ಅಭಿವೃದ್ಧಿಯ 1964-1965 ರ ವರದಿಯು , ಕಿರಿಯರ ಉತ್ತಮ ನಾಯಕತ್ವ, ಮತ್ತು ಮಹಿಳಾ ವರ್ಗದ ಜನರಲ್ಲಿ ತಮ್ಮ ಜೀವನದ ಮೇಲೆ ಮತ್ತು ದೈನಂದಿನ ವ್ಯವಹಾರಗಳಲ್ಲಿ ಈ ವ್ವವಸ್ಥೆ ಪರಿಣಾಮಬೀರುತ್ತದೆ, ಎಂಬ ಅಭಿಪ್ರಾಯ ಹೇಳಿತ್ತು. ಈ ಬೆಳವಣಿಗೆ ಭಾರತದ ಪಂಚಾಯತ್ ರಾಜ್ ಸಂಸ್ಥೆಗಳ ಭರವಸೆಯ ದಿನಗಳು,ಎಂದು ಪರಿಗಣಿಸಲಾಗುತ್ತದೆ.

ಪಂಚಾಯತ್ ರಾಜ್ ಸಂಸ್ಥೆಗಳ ಹಿನ್ನೆಡೆ

  • ಬಲವಂತರಾವ್ ಮೆಹ್ತಾ ಸಮಿತಿಯ ಶಿಫಾರಸು ದೇಶ ಅನೇಕ ರಾಜ್ಯಗಳಲ್ಲಿ ಜಾರಿಗೆ ಬಂದಿತು. ಅರವತ್ತರ ದಶಕದ ಮಧ್ಯದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಭಾರತದಲ್ಲಿ ಪ್ರವರ್ಧಮಾನಕ್ಕೆ ಬಂದಿತು. ಆದರೆ ಮುಖ್ಯವಾಗಿ ದೇಶಾದ್ಯಂತ ಕಾರ್ಯನಿರ್ವಹಣೆಯ ಕೇಂದ್ರೀಕೃತ ಪ್ರವೃತ್ತಿಗಳ ಮಧ್ಯದಲ್ಲಿ ಅರವತ್ತರ ನಂತರ ಪಂಚಾಯತ್ ರಾಜ್ಯ ಸಂಸ್ಥೆಗಳು ಕಳೆಗುಂದಿದವು. (ಪುಟ109) ಚುನಾವಣೆಗಳು ಅನಿಯಮಿತವಾಗಿ ನೆಡೆದು ಈ ಸಂಸ್ಥೆಗಳು ದುರ್ಬಲಗೊಂಡವು. ಅದಕ್ಷತೆ, ಭ್ರಷ್ಟಾಚಾರ, ಪಕ್ಷಪಾತ, ಅನಿಶ್ಚಿತತೆ ಮತ್ತು ಅವ್ಯವಸ್ಥೆಯಿಂದ ಅದರ ದಕ್ಷತೆ ಕಡಿಮೆಯಾಯಿತು. ಅಭಿವೃದ್ಧಿ ಯೋಜನೆಗಳನ್ನು ಬಹುತೇಕ ಜನರ ಮುನ್ನೋಟದ ಹೊರಗೆ ಇಡಲಾಗಿತ್ತು. ಕೇಂದ್ರ ಪ್ರಾಯೋಜಿತ ಯೋಜನೆಗಳನ್ನು ಪ್ರಾರಂಭಿಸಲಾಯಿತು; ಸಮಾನಾಂತರ ಆಡಳಿತ ಮಂಡಳಿಗಳನ್ನು ರಚಿಸಲಾಯಿತು, ಮತ್ತು ಸರ್ಕಾರದ ಹಣ-ಕೊಡಿಗೆಯನ್ನು ಗಮನಾರ್ಹವಾಗಿ ಕಡಿತಗೋಳಿಸಲಾಯಿತು. ರಾಷ್ಟ್ರೀಯ ತುರ್ತು ವೇಳೆಯಲ್ಲಿ ಆಡಳಿತಶಾಹಿಗೆ ಮೇಲುಗೈ ಸಿಕ್ಕಿತು ಮತ್ತು ಸಂಸ್ಥೆಗಳು ಈ ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಂಡರು. ಗ್ರಾಮ ಪಂಚಾಯತ್’ಗೆ ಅದರ ಕಾರ್ಯಕ್ರಮಗಳನ್ನು ಅಳವಡಿಸಿ ಅವನ್ನು ಸರ್ಕಾರದ ಅಧೀನ ಘಟಕಗಳನ್ನಾಗಿ ಮಾಡಲಾಯಿತು. (ಅಶೋಕ್ ಮೆಹ್ತಾ ಸಮಿತಿ (1977) 1977 ರಲ್ಲಿ
  • ಈ ಹಿನ್ನೆಲೆಯಲ್ಲಿ, ಜನತಾ ಸರಕಾರ ಅಶೋಕ್ ಮೆಹ್ತಾ ಅಧ್ಯಕ್ಷರಾಗಿರುವ ಸಮಿತಿಯೊಂದನ್ನು ನೇಮಕ ಮಾಡಿತು. ಅದು ಪಂಚಾಯತ್ ರಾಜ್ಯ ಸಂಸ್ಥೆಗಳು ಅಸಮರ್ಪಕ ನಿರ್ವಹಣೆಗೆ ಕಾರಣಗಳನ್ನು ಹುಡುಕುವ ಕೆಲಸವನ್ನು ವಹಿಸಲಾಗಿತ್ತು. ಪಂಚಾಯತಿ ರಾಜ್ ಸಂಸ್ಥೆಗಳನ್ನು ಬಲಪಡಿಸಲು ಅವರು ಸಲಹೆಗಳನ್ನು ಪ್ರಸ್ತುತಪಡಿಸಲು ಕೇಳಲಾಯಿತು. ಬಲವಂತರಾವ್’ ಮೆಹ್ತಾ ಸಮಿತಿಯ ಮೂರು ಶ್ರೇಣಿ ವ್ಯವಸ್ಥೆಯ ಸಲಹೆ ವಿರುದ್ಧ ಈ ಸಮಿತಿಯು ಪಂಚಾಯತಿ ರಾಜ್‍ದಲ್ಲಿ ಕೇವಲ ಎರಡು ಸಮಿತಿಯ ವ್ಯವಸ್ಥೆಯನ್ನು ಸೂಚಿಸಿತು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಜಿಲ್ಲಾ ಪಮಚಾಯತ್ ಮತ್ತು ಬೇರು ಮಟ್ಟದಲ್ಲಿ ಮಂಡಲ್ ಪಂಚಾಯತ್ ಒಳಗೊಂಡಿರವ ವ್ಯವಸ್ಥೆಗೆ ಸಲಹೆ ಮಾಡಿತು. ಸಮಿತಿಯು ಎಲ್ಲಾ ಹಂತಗಳಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಾಂವಿಧಾನಿಕ ರಕ್ಷಣೆ ಮತ್ತು ಅಧಿಕಾರದ ಮತ್ತಷ್ಟು ವಿಕೇಂದ್ರೀಕರಣ ಶಿಫಾರಸುಮಾಡಿತು.
  • ಜನತಾ ಸರ್ಕಾರದ ಕುಸಿತದ ಕಾರಣ ಅಶೋಕ್ ಮೆಹ್ತಾ ಸಮಿತಿಯ ಶಿಫಾರಸುಗಳು ಅಳವಡಿಸಿಕೊಳ್ಳಲು ಆಗಲಿಲ್ಲ. ಕರ್ನಾನಾಟಕವೂ ಸೇರಿ ಕೆಲವು ರಾಜ್ಯಗಳಲ್ಲಿ ಈ ಸಮಿತಿಯ ಶಿಫಾರಸುಗಳನ್ನು ರಾಜ್ಯ ಶಾಸನದ ಆಧಾರದ ಮೇಲೆ ರೂಪಿಸಲಾಗಿತ್ತು..

1985 ರಲ್ಲಿ,ಜಿ.ವಿ.ಕೆ.ರಾವ್ ಸಮಿತಿ ಮತ್ತು 1986ರಲ್ಲಿ ಡಾ.ಎಲ್.ಎಂ.ಸಿಂಘ್ವಿ ಸಮಿತಿ

  • 1985 ರಲ್ಲಿ, .ಜಿ.ವಿ.ಕೆ ರಾವ್ ಸಮಿತಿ ಮತ್ತು 1986 ರಲ್ಲಿ ಡಾ ಎಲ್.ಎಂ. ಸಿಂಘ್ವಿ ಸಮಿತಿಗಳು: ದಿ ಜಿ.ವಿ.ಕೆ ಏ ರಾವ್ ಸಮಿತಿಗಳು ಪಂಚಾಯತ್ ರಾಜ್ಯ ಸಂಸ್ಥೆಗಳನ್ನು ಪುನರುಜ್ಜೀವನಗೊಳಿಸಲು ಶಿಫಾರಸು ಮಾಡಿದವು. ಅಂತಹ ಹೆಚ್ಚಿನ ಜವಾಬ್ದಾರಿ ವಹಿಸಲು. ಸಿಂಘ್ವಿ ಸಮಿತಿಯು ಪಂಚಾಯತಿ ರಾಜ್'ಗೆ ಸಾಂವಿಧಾನಿಕವಾಗಿ ರಕ್ಷಣೆ ಕೊಡಲು ಶಿಫಾರಸು ಮಾಡಿತು. ಸಂವಿಧಾನದಲ್ಲಿ ಹೊಸ ಅಧ್ಯಾಯವನ್ನು ನಿಯಮವನ್ನು ರೂಪಿಸಲು ತಿದ್ದುಪಡಿ ಮಾಡಬೇಕು. ಅಧಿಕಾರ ಮತ್ತು ಕ್ರಿಯೆಗಳನ್ನು ರೂಪಿಸಬೆಕು. ಚುನಾವಣಾ ಆಯೋಗದ ಮೂಲಕ ಸಮಿತಿ ರಚಿಸಲು ನ್ಯಾಯಯುತ ಚುನಾವಣೆ ನಡೆಸಬೇಕು.

ಭಾರತದಲ್ಲಿ ಪಂಚಾಯತಿ ವ್ಯವಸ್ಥೆ:73 ನೇ ತಿದ್ದುಪಡಿ ಕಾಯಿದೆ, 1992

  • ಈ ಸಂದರ್ಭಗಳಲ್ಲಿ ನಂತರ ರಾಜೀವ್ ಗಾಂಧಿ ಭಾರತದ ಪ್ರಧಾನ ಮಂತ್ರಿಯಾದಾಗ, 15 ಮೇ, 1989 ಸಂಸತ್ತಿನಲ್ಲಿ ಸರ್ಕಾರದ ವತಿಯಿಂದ 64 ನೇ ತಿದ್ದುಪಡಿ ಮಸೂದೆ ತರಲಾಯಿತು. ಆದರೆ ಅಗತ್ಯವಾದ ಬೆಂಬಲ ಪಡೆಯಲು ವಿಫಲವಾಯಿತು. ನಂತರ ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಪ್ರಧಾನಿ ಪಿ ವಿ ನರಸಿಂಹ ರಾವ್’ಅದರಲ್ಲಿ ಸಣ್ಣ ಪುಟ್ಟ ಮಾರ್ಪಾಡುಗಳನ್ನು ಹೊಂದಿರುವ 73 ನೇ ತಿದ್ದುಪಡಿ ಕಾಯ್ದೆಯನ್ನು ಸಂಸತ್ತಿನಲ್ಲಿ ಮಂಡಿಸಿ, 1992 ರಲ್ಲಿ ಸಂಸತ್ತು ಒಪ್ಪಿಗೆ ಪಡೆದರು. ಅದು 24 ಏಪ್ರಿಲ್ 1993 ರಲ್ಲಿ ಜಾರಿಗೆ ಬಂದಿತು.
1993 ಕಾಯಿದೆಯ ಪ್ರಮುಖ ಅಂಶಗಳು ಹೀಗೆ ಇವೆ:
  • ಈ ಕಾಯಿದೆಯಂತೆ ಪ್ರತಿ ಗ್ರಾಮದಲ್ಲಿ ಗ್ರಾಮ ಸಭಾ ಸ್ಥಾಪನೆಗೆ ಅವಕಾಶ ಒದಗಿಸಲಾಗಿದೆ. ಇದು ಪಂಚಾಯತ್ ಭಾಗದ ಎಲ್ಲಾ ನೋಂದಾಯಿತ ವಯಸ್ಕ ಸದಸ್ಯರನ್ನು ಒಳಗೊಂಡಿದೆ.
  • ಮೂರು ಹಂತದ ಆಡಳಿತ: 1ಗ್ರಾಮ, ೨.ಜಿಲ್ಲೆ ಮತ್ತು ೩.ಮಧ್ಯಂತರ ಮಟ್ಟದಲ್ಲಿ ಒಂದು ಪಂಚಾಯಿತಿ ವ್ಯವಸ್ಥೆ; ಹೀಗೆ ಮೂರು ಹಂತದಲ್ಲಿ ಇರತಕ್ಕದ್ದು. ಸಣ್ಣ ರಾಜ್ಯಗಳು 20 ಲಕ್ಷಕ್ಕೆ ಕಡಿಮೆ ಜನಸಂಖ್ಯೆ ಇದ್ದರೆ ಮಧ್ಯಂತರ ಪಂಚಾಯತ್ ಮಟ್ಟದ ಆಯ್ಕೆಯನ್ನು ಹೊಂದಿರಬೇಕೆಂದು ಕಡ್ಡಾಯ ಮಾಡುವುದಿಲ್ಲ.
  • ಎಲ್ಲಾ ಹಂತದ ಮೂರು ಪಂಚಾಯತ್ ಸ್ಥಾನಗಳನ್ನು ನೇರ ಚುನಾವಣೆಯ ಮೂಲಕ ತುಂಬಬೇಕು. ಇದಕ್ಕೆ ಹೆಚ್ಚುವರಿಯಾಗಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದವರನ್ನು ಮಧ್ಯಂತರ ಮಟ್ಟದಲ್ಲಿ ಮಾಡಿದ ಪಂಚಾಯತಿಯ ಸದಸ್ಯರನ್ನಾಗಿ ಮಾಡಬಹುದು.
  • ಸಂಸದ, ಶಾಸಕ, ಎಂಎಲ್ಸಿ, ಸಹ ಮಧ್ಯಮ ಹಂತದ ಮತ್ತು ಜಿಲ್ಲೆಯ ಪಂಚಾಯತ್ ಸದಸ್ಯ ಆಗಿರಬಹುದು.
  • ಎಲ್ಲಾ ಪಂಚಾಯತ್ ಗಳಲ್ಲಿ ಪರಿಶಿಷ್ಟ ಜಾತಿಗೆ ಸ್ಥಾನಗಳನ್ನು ಕಾಯ್ದಿರಿಸಲಾಗಿದೆ; ಮತ್ತು ಮಹಿಳೆಯರಿಗೆ 1/3 ಅನುಪಾತದಲ್ಲಿ ಸ್ಥಾನಗಳು ಮೀಸಲಾಗಿವೆ.ಅವರ ಸಂಖ್ಯೆ ಮತ್ತು ಒಟ್ಟು ಸೀಟುಗಳು 1/3 ಅನುಪಾತದಲ್ಲಿ ಇರಬೇಕು, ರಾಜ್ಯದಲ್ಲಿ ಎಲ್ಲಾ ಹಂತಗಳಲ್ಲಿ ಅವರಿಗೆ ಪಂಚಾಯತ್ ಅಧ್ಯಕ್ಷ ಸ್ಥಾನಗಳಲ್ಲಿ ಮೂರನೇ ಒಂದು ಭಾಗ (ಮಹಿಳೆಯರಿಗೆ) ಮೀಸಲಾತಿ ಕೊಟ್ಟಿದೆ.
  • ರಾಜ್ಯದ ಶಾಸನಸಭೆಯ ಹಿಂದುಳಿದ ನಾಗರಿಕರಲ್ಲಿ ಪಂಚಾಯತ್ ಸ್ಥಾನಗಳಲ್ಲಿ ಮೀಸಲಾತಿ ಮತ್ತು ಅಧ್ಯಕ್ಷರ ಮೀಸಲಾತಿ ಒದಗಿಸಿದೆ.
  • ಪಂಚಾಯತ್ ಏಕರೂಪದಲ್ಲಿ ಐದು ವರ್ಷಗಳ ಅವಧಿಗೆ ಇರುವುದು. ವಿಸರ್ಜನೆಯ ಸಂದರ್ಭದಲ್ಲಿ ಹೊಸ ಮಂಡಳಿಗಳನ್ನು ಚುನಾವಣೆಯ ಮೂಲಕ ಆರು ತಿಂಗಳ ಒಳಗೆ ಕಡ್ಡಾಯವಾಗಿ ಆಯ್ಕೆ ಮಾಡುವುದು. ಪುನಾರಚಿತ ಪಂಚಾಯತ್ ಐದು ವರ್ಷಗಳ ಅವಧಿಯ ಕಾಲ ಕಾರ್ಯ ನಿರ್ವಹಿಸುವರು. ಅವಧಿಯ ಮುಕ್ತಾಯದ ಮೊದಲು ಯಾವುದೇ ಕಾಯಿದೆಯ ತಿದ್ದುಪಡಿಯ ಮೂಲಕ, ಅಸ್ತಿತ್ವದಲ್ಲಿರುವ ಪಂಚಾಯತ್'ನ್ನು ವಿಸರ್ಜಿಸಲು ಸಾಧ್ಯವಾಗುವುದಿಲ್ಲ. .
  • ಯಾವುದೇ ಕಾನೂನಿನ ಅಡಿಯಲ್ಲಿ ಶಾಸಕಾಂಗಕ್ಕೆ ಸದಸ್ಯರಾಗಲು ಅನರ್ಹನಾಗಿರುವ ವ್ಯಕ್ತಿಯು, ನಿಯಮದ ಅಡಿಯಲ್ಲಿ ರಾಜ್ಯದ ಯಾವುದೇ ಚುನಾವಣೆಯಲ್ಲಿ ಆಯ್ಕೆಯಗಲು ಅನರ್ಹರಾಗಿರುತ್ತಾನೆ/ಳೆ
  • ಮೇಲ್ವಿಚಾರಣೆ, ನಿರ್ದೇಶನ, ಮತ್ತು ಚುನಾವಣಾ ಪ್ರಕ್ರಿಯೆಯ ಮತ್ತು ಮತದಾರರ ಅಧಿಕೃತ ಪಟ್ಟಿಗಳ ತಯಾರಿಕೆಗೆ ರಾಜ್ಯದ ಸ್ವತಂತ್ರ ಚುನಾವಣಾ ಆಯೋಗ ಸ್ಥಾಪಿಸಲಾಗುವುದು.
  • ನಿರ್ದಿಷ್ಟ ಜವಾಬ್ದಾರಿಗಳನ್ನು ಪಂಚಾಯತ್’ಗಳಿಗೆ ಒಪ್ಪಿಸಲಾಗಿದೆ.
11ನೇ ಪಟ್ಟಿ ವಿಷಯಗಳಿಗೆ ಸಂಬಂಧಿಸಿದಂತೆ ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯ ಯೋಜನೆಗಳ ವೇಳಾಪಟ್ಟಿ ತಯಾರಿಸುವುದು.
ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ, ಪಂಚಾಯತ್ ‘ಗಳಿಗೆ ಮುಖ್ಯ ಜವಾಬ್ದಾರಿ ಒಪ್ಪಿಸಲಾಯಿತು.
ಪಂಚಾಯತ್ ತಮ್ಮ ಯೋಜನೆಗಳನ್ನು ನಡೆಸಲು ಸಾಕಷ್ಟು ಹಣವನ್ನು ರಾಜ್ಯ ಸರ್ಕಾರದಿಂದ ಧನಸಹಾಯ ಪಡೆಯುವುವು.
ರಾಜ್ಯದ ಕೊಡಿಗೆ ಪ್ರಮುಖ ಹಣದ ಮೂಲವಾಗಿದೆ ರಾಜ್ಯ ಸರ್ಕಾರಗಳು ಪಂಚಾಯತ್ಗಳಿಗೆ ಕೆಲವು ತೆರಿಗೆ ಆದಾಯ ಹೊಂದಲು ಸಹ ಅವಕಾಶ ಕಲ್ಪಿಸಬೇಕು.
ಕೆಲವು ಸಂದರ್ಭಗಳಲ್ಲಿ, ಪಂಚಾಯತ್ ಸಂಗ್ರಹಿಸಿದ ತೆರಿಗೆಯನ್ನು ಆದಾಯ ಉಳಿಸಿಕೊಳ್ಳಲು ಅನುಮತಿ ನೀಡಲಾಗುವುದು.
ಪ್ರತಿ ರಾಜ್ಯದಲ್ಲಿ, ಹಣಕಾಸು ಆಯೋಗವನ್ನು ಒಂದು ವರ್ಷದೊಳಗೆ ಸ್ಥಾಪಿಸುವುದು.
ಪಂಚಾಯಿತಿಗಳು ಸಾಕಷ್ಟು ಆರ್ಥಿಕ ಸಂಪನ್ಮೂಲ ಹೊಂದಲು ತತ್ವಗಳ ಆಧಾರದ ಮೇಲೆ ನಿರ್ಧರಿಸಲು,ಪ್ರತಿ ಐದು ವರ್ಷಗಳಿಗೊಮ್ಮೆ ಅದರ ಪುನಸ್ಥಾಪನೆ.
24 ಏಪ್ರಿಲ್ 1993 ರಂದು ಅಸ್ತಿತ್ವದಲ್ಲಿರುವ ಪಂಚಾಯತ್ ಅವರು ಅವರ ಪೂರ್ಣ ಅವಧಿಗೆ ಪೂರ್ಣಗೊಳಿಸಲು ಅನುಮತಿಸಲಾಗುವುದು. ಸಭಯ ತೀರ್ಮಾನವಿದ್ದಲ್ಲಿ ವಿಸರ್ಜಿಸಬಹುದು.
  • ನಿಯಮ:243 ಜಿ ಕೆಳಗಿನ ಚಟುವಟಿಕೆಗಳನ್ನು ಒಳಗೊಂಡಿದೆ.
  • ಕೃಷಿ,; ಕೃಷಿ ವಿಸ್ತರಣೆ • ಭೂ ಸುಧಾರಣೆಯ ಅನುಷ್ಠಾನ ಸೇರಿದಂತೆ • ಭೂಮಿ ಬಲವರ್ಧನೆ ಮತ್ತು ಮಣ್ಣು ಸಂರಕ್ಷಣಾ ಸುಧಾರಣೆಗಳು • ಸಣ್ಣ ನೀರಾವರಿ, ನೀರು ನಿರ್ವಹಣೆ ಮತ್ತು ಜಲಾನಯನ ಅಭಿವೃದ್ಧಿ • ಪಶುಸಂಗೋಪನೆ ಮತ್ತು ಚಿಕ್ಕ ಪ್ರಮಾಣದ ಕೈಗಾರಿಕೆಗಳು, ಆಹಾರ ಸಂಸ್ಕರಣೆ ಸೇರಿದಂತೆ • ಖಾದಿ, ಗ್ರಾಮ ಮತ್ತು ಗುಡಿ ಕೈಗಾರಿಕೆಗಳು • ಗ್ರಾಮೀಣ • ಕೋಳಿ ಸಾಕಣೆ • ಮೀನುಗಾರಿಕೆ • ಸಾಮಾಜಿಕ ಅರಣ್ಯ ಮತ್ತು ಅರಣ್ಯ ರೂಪ • ಕುಡಿಯುವ ನೀರು ವಸತಿ • ಇಂಧನ ಮತ್ತು ಮೇವು • ರಸ್ತೆಗಳು, ಸುರಂಗ, ಸೇತುವೆಗಳು, ಜಲಮಾರ್ಗಗಳು ಮತ್ತು ಸಂವಹನ • ಗ್ರಾಮೀಣ ವಿದ್ಯುದೀಕರಣ ಬೇರೆ ವಿಧದ ವಿದ್ಯುತ್ ಹಂಚಿಕೆಯ ಸೇರಿದಂತೆ • ಸಾಂಪ್ರದಾಯಿಕ ಶಕ್ತಿ ಮೂಲಗಳು 113 ಸಂವಿಧಾನ (ಎಪ್ಪತ್ತು -ಮೂರನೇ ತಿದ್ದುಪಡಿ) ಕಾಯಿದೆ, 19 92, ಭಾರತ ಸರ್ಕಾರ . 96) • ಬಡತನ ಎತ್ತರದ ಕಾರ್ಯಕ್ರಮ • ಶಿಕ್ಷಣ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಸೇರಿದಂತೆ • ತಾಂತ್ರಿಕ ತರಬೇತಿ ಮತ್ತು ವೃತ್ತಿಪರ ಶಿಕ್ಷಣ • ವಯಸ್ಕ ಮತ್ತು ಅನೌಪಚಾರಿಕ ಶಿಕ್ಷಣ • ಗ್ರಂಥಾಲಯಗಳು • ಸಾಂಸ್ಕೃತಿಕ ಚಟುವಟಿಕೆಗಳು • ಮಾರುಕಟ್ಟೆ ಮತ್ತು ಮೇಳಗಳು • ಆರೋಗ್ಯ ಮತ್ತು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು • ಔಷಧಾಲಯಗಳು ಸೇರಿದಂತೆ ಕುಟುಂಬ ನೈರ್ಮಲ್ಯ • ಕುಟುಂಬ ಕಲ್ಯಾಣ • ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಮಾಜ ಕಲ್ಯಾಣ •ಮಾನಸಿಕ ದೌರ್ಬಲ್ಯ ಮತ್ತು ಅಂಗವಿಕಲ ಕಲ್ಯಾಣ ಸೇರಿದಂತೆ. ದುರ್ಬಲ ಪರಿಶಿಷ್ಟ ವರ್ಗಗಳ ಕಲ್ಯಾಣ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆ.

1993ರ ಸಂವಿಧಾನದ 73ನೇ ತಿದ್ದುಪಡಿ ಕಾಯ್ದೆಯ ಮುಖ್ಯ ಉದ್ದೇಶ

  • 73 ನೇ ತಿದ್ದುಪಡಿ ಕಾಯ್ದೆ ತಳಮಟ್ಟ ತಲುಪಲು ಪಂಚಾಯತ್ ರಾಜ್ಯ ಪುನರ್ರಚನೆಯು ಒಂದು ಪ್ರಯತ್ನವಾಗಿದೆ. ಮೊದಲ ಬಾರಿಗೆ ಬಿಲ್ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಾಂವಿಧಾನಿಕ ಸ್ಥಾನಮಾನವನ್ನು ನೀಡಿತು ಮತ್ತು ಇದು ಅಳವಡಿಸಿಕೊಳ್ಳುವುದು ಎಲ್ಲಾ ರಾಜ್ಯ ಸರ್ಕಾರಗಳಿಗೆ ಕಡ್ಡಾಯ ಆಯಿತು. ಈ ತಿದ್ದುಪಡಿ ರಚನೆ, ಸಂಯೋಜನೆ, ಅಧಿಕಾರ ಮತ್ತು ಪಂಚಾಯತ್ ಕಾರ್ಯಗಳಲ್ಲಿ ಏಕರೂಪತೆಯನ್ನು ತಂದಿತು. ಗ್ರಾಮೀಣ ಭಾರತದ ಸ್ಥಿತಿಯಲ್ಲಿ ಸುಧಾರಣೆ, ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ಪಂಚಾಯತಿ ರಾಜ್ ಉತ್ತೇಜನವನ್ನು ನೀಡಿತು.
  • ಈ ನಿಯಮ (ಆಕ್ಟ್) ವಿರುದ್ಧ ಎದ್ದಿರುವ ಮುಖ್ಯ ವಿಮರ್ಶೆ/ಟೀಕೆ ಎಂದರೆ, ಈ ಸಂಸ್ಥೆಗಳು ಅಭಿವೃದ್ಧಿ ಚಟುವಟಿಕೆಗಳ ಅನುಷ್ಠಾನಕ್ಕೆ ಸೀಮಿತವಾಗಿದೆ. ಮತ್ತು ಸಂಸ್ಥೆಗಳು ರಾಜಕೀಯ ವಿಕೇಂದ್ರೀಕರಣ ಸ್ಥಿತಿಯನ್ನು ಹೊಂದಿಲ್ಲವೆಂಬುದು. ಈ ಟೀಕೆ ಹೊರತುಪಡಿಸಿ ನೋಡಿದರೆ, ಪಂಚಾಯತಿ ರಾಜ್ ಸಂಸ್ಥೆಗಳು ಸಾಂವಿಧಾನಿಕ ಸ್ಥಾನಮಾನದ ಕನಸು ನನಸಾಗಿದೆ. ರಾಜ್ಯ ಸರ್ಕಾರಗಳು ಹೊಸ ಕಾಯಿದೆಯಡಿ ಅಳವಡಿಸಿ ಹೊಸ ಶಾಸನಗಳಿಂದ ಮೂಕ ಕ್ರಾಂತಿಯ ಆರಂಭ ಮಾಡಿದೆ- ಎಂದು ವಿವರಿಸಲಾಗಿದೆ . ಪಂಚಾಯತ್ ರಾಜ್ ಸಂಸ್ಥೆಗಳ ಇತಿಹಾಸದಲ್ಲಿ ಮೊದಲ ಬಾರಿಗೆ, ಈ ತಿದ್ದುಪಡಿಗಳು ಮಹಿಳೆಯರಿಗೆ ಸ್ಥಳೀಯ ಆಡಳಿತವನ್ನು ಪ್ರವೇಶಿಸಲು ದೊಡ್ಡ ಸಂಖ್ಯೆಯಲ್ಲಿ ಅವಕಾಶಗಳನ್ನು ನೀಡಿದೆ.

ಮಹಿಳೆಯರಿಗೆ 50% ಮೀಸಲಾತಿ

ಭಾರತ ಸರ್ಕಾರದ ಕೇಂದ್ರ ಸಚಿವ ಸಂಪುಟವು 27 ಆಗಸ್ಟ್ 2009 ರಲ್ಲಿ ಅನುಮೋದನೆ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ 50% ಮೀಸಲಾತಿನೀಡಲು ಒಪ್ಪಿಗೆ ಕೊಟ್ಟಿದೆ. ಭಾರತದ ರಾಜ್ಯಗಳಾದ ಮಧ್ಯಪ್ರದೇಶ, ಬಿಹಾರ, ಉತ್ತರಾಖಂಡ್, ಹಿಮಾಚಲ ಪ್ರದೇಶ, [11] ಆಂಧ್ರ ಪ್ರದೇಶ, ಛತ್ತೀಸ್ಗಡ, ಜಾರ್ಖಂಡ್, ಕೇರಳ, ಕರ್ನಾಟಕ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ ಮತ್ತು ತ್ರಿಪುರ ಇವು ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ 50% ಮೀಸಲಾತಿ ಅಳವಡಿಸಲಾಗಿರುತ್ತದೆ. ಕರ್ನಾಟಕ ಸರ್ಕಾರವೂ ಮಹಿಳೆಯರಿಗೆ 50% ಮೀಸಲಾತಿ ನೀಡುತ್ತಿದೆ.

ನೋಡಿ

ಜಿಲ್ಲಾ ದರ್ಶನ

ಬಾಗಲಕೋಟೆ

ಬಾಗಲಕೋಟೆ ಕರ್ನಾಟಕದ ಒಂದು ಪ್ರಮುಖ ಜಿಲ್ಲೆಯಾಗಿದೆ


ಬಾಗಲಕೋಟೆ ಕರ್ನಾಟಕದ ಒಂದು ಜಿಲ್ಲಾ ಕೇಂದ್ರ. ಈ ಜಿಲ್ಲೆ ಉತ್ತರ ಕರ್ನಾಟಕದಲ್ಲಿ ಸ್ಥಾಪಿತವಾಗಿದೆ. ಮತ್ತು ಬೆಳಗಾವಿಗದಗಕೊಪ್ಪಳರಾಯಚೂರು ಹಾಗೂ ಬಿಜಾಪುರಗಳೊಂದಿಗೆ ತನ್ನ ಗಡಿಯನ್ನು ಹೊಂದಿದೆ. ೧೯೯೭ರಲ್ಲಿ ಭಾರತದ ೫೦ನೆಯ ಸ್ವಾತಂತ್ರ್ಯೋತ್ಸವದ ಸ್ಮರಣೀಯ ಘಟ್ಟದಲ್ಲಿ ಕರ್ನಾಟಕ ಸರ್ಕಾರದ ಪ್ರಕಟಣೆ ಆರ್‌ಡಿ ೪೨ ಎಲ್ಆರ್‌ಡಿ ೮೭ ಭಾಗ ೩ ನಿರ್ದೇಶದ ದ್ವಾರಾ ಹೊಸ ಜಿಲ್ಲೆಯಾಗಿ ಅಂದಿನ ಮುಖ್ಯಮಂತ್ರಿ ಮಾನ್ಯ ಜೆ.ಎಚ್.ಪಟೇಲರಿಂದ ಉದ್ಘಾಟಿಸಲ್ಪಟ್ಟಿತು. ಐತಿಹಾಸಿಕವಾಗಿ ಬಾಗಲಕೋಟೆ ಜಿಲ್ಲೆಯು ಚಾಲುಕ್ಯರಾಳಿದ ನಾಡು. ಬಾದಾಮಿಐಹೊಳೆಪಟ್ಟದಕಲ್ಲುಕೂಡಲಸಂಗಮ ಮತ್ತು ಮಹಾಕೂಟ ಇಲ್ಲಿಯ ಅತ್ಯಂತ ಪ್ರಮುಖ ಪ್ರೇಕ್ಷಣೀಯ ಸ್ಥಳಗಳು.

Quick Facts

ಭೌಗೋಳಿಕ

ಬಾಗಲಕೋಟೆ ನಗರವು ಭಾರತದ ಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿ ಸ್ಥಿತವಾಗಿದೆ. ಭೌಗೋಳಿಕವಾಗಿ ಉತ್ತರದ ಕಡೆ 16-18* & 75-7* ಪೂರ್ವದಲ್ಲಿ ಘಟಪ್ರಭಾ ನದಿಯ ದಡದಲ್ಲಿ ಸ್ಥಿತವಾಗಿರುವ ಇದು ಸಮುದ್ರ ಮಟ್ಟದಿಂದ 533 ಮೀಟರ್ ಎತ್ತರದಲ್ಲಿದ್ದು ಜಿಲ್ಲೆಯ ಕೇಂದ್ರ ಸ್ಥಾನವಾಗಿದೆ. ಈ ಮೊದಲು ಬಿಜಾಪುರ ಜಿಲ್ಲೆಯಲ್ಲಿದ್ದ ಬಾಗಲಕೋಟೆ ಭಾರತದ 50ನೇಯ ಸ್ವಾತಂತ್ರ್ಯ ವರ್ಷಾಚರಣೆಯ ಸಂದರ್ಭದಲ್ಲಿ ಅಂದರೆ 1997 ರಲ್ಲಿ ಹೊಸ ಜಿಲ್ಲೆಯಾಗಿ ಅಸ್ಥಿತ್ವಕ್ಕೆ ಬಂದಿತು. ವಿಜಾಪುರ ಜಿಲ್ಲೆಯಿಂದ ಹೋಳಾದ ಬಾಗಲಕೋಟ ಜಿಲ್ಲೆಯು ಬದಾಮಿ, ಬಾಗಲಕೋಟ, ಬೀಳಗಿ, ಹುನಗುಂದ, ಜಮಖಂಡಿ & ಮೂಧೋಳ ಈ 6 ತಾಲ್ಲೂಕುಗಳನ್ನು ಹೊಂದಿದೆ. 2018 ರಲ್ಲಿ ಗುಳೇದಗುಡ್ಡ, ಇಳಕಲ್ಲ & ರಬಕವಿ-ಬನಹಟ್ಟಿ ಇವು 3 ಹೊಸ ತಾಲ್ಲೂಕು ಕೇಂದ್ರಗಳಾಗಿ ಸೃಷ್ಠಿಯಾಗಿದೆ.

ಒಂದು ಕಾಲದಲ್ಲಿ ಕನ್ನಡದ ವೈಭವಯುತ ರಾಜಮನೆತನವಾದ ಚಾಲುಕ್ಯರು ಬಾಗಲಕೋಟ ಜಿಲ್ಲೆಯನ್ನು ಆಳಿದರು. ಕರ್ನಾಟಕದ ಉತ್ತರ ಭಾಗದಲ್ಲಿರುವ ಈ ಜಿಲ್ಲೆಯ 6593 ಚದರ ಮೀಟರ ವ್ಯಾಪ್ತಿಯನ್ನು ಹೊಂದಿದೆ. ಬಾಗಲಕೋಟ ಜಿಲ್ಲೆಯ ಉತ್ತರಕ್ಕೆ ವಿಜಾಪುರ ಜಿಲ್ಲೆ, ದಕ್ಷಿಣಕ್ಕೆ ಗದಗ ಜಿಲ್ಲೆ, ಪೂರ್ವಕ್ಕೆ ರಾಯಚೂರು ಜಿಲ್ಲೆ & ಆಗ್ನೆಯ ಬಾಗದಲ್ಲಿ ಕೊಪ್ಪಳ ಜಿಲ್ಲೆ, ಪಶ್ಶಿಮ ಗಡಿಯಲ್ಲಿ ಬೆಳಗಾವಿ ಜಿಲ್ಲೆಗಳಿಂದ ಸುತ್ತುವರಿಯಲ್ಪಟ್ಟಿದೆ.

ಇತಿಹಾಸ

ಇಲ್ಲಿ ದೊರೆತ ಶಿಲಾಶಾಸನಗಳ ಪ್ರಕಾರ ಮೂಲ ಹೆಸರು ಬಾಗಡಿಗೆ ಎಂದು ಆಗಿತ್ತು. ಪುರಾಣಗಳ ಪ್ರಕಾರ ಲಂಕಾಧಿಪತಿಯಾದ ರಾವಣ ಈ ಪ್ರದೇಶವನ್ನು ಆಳುತ್ತಿದ್ದ, ಅವನು ಈ ನಗರವನ್ನು ಬಜಂತ್ರಿ (ಸಂಗೀತಗಾರರು) ಗೆ ಕೊಡುಗೆಯಾಗಿ ನೀಡಿದ್ದನು. ಬಿಜಾಪುರ ರಾಜರು ತನ್ನ ಮಗಳಿಗೆ ಕಂಕಣ ಕಾಣಿಕೆ (ಮಗಳ ಮದುವೆ ನಂತರ ಬಳೆ, ಸೀರೆ, ಆಭರಣಗಳ ಖರೀದಿಸಲು ತಂದೆ-ತಾಯಿ ಹಣ ಕೋಡುವ ಸಂಪ್ರದಾಯದಂತೆ) ಯಾಗಿ ಈ ಪಟ್ಟಣವನ್ನು ಕೊಡುಗೆಯಾಗಿ ನೀಡಿದನು ಎಂದು ಹೇಳಲಾಗುತ್ತದೆ. ಪರಿಣಾಮವಾಗಿ ಪಟ್ಟಣದ ಹೆಸರು "ಬಾಗಡಿಕೋಟೆ"ಯಾಗಿ ನಂತರ ಬಾಗಲಕೋಟೆಯಾಗಿ ಮಾರ್ಪಟ್ಟಿತು. ನಂತರದ ದಿನಗಳಲ್ಲಿ ಬಾಗಲಕೋಟೆ ವಿಜಯನಗರ ದೊರೆಗಳ, ಪೇಶ್ವೆಗಳ, ಮೈಸೂರಿನ ಹೈದರಾಲಿ, ಮರಾಠ ಆಡಳಿತಗಾರರು ಮತ್ತು ಅಂತಿಮವಾಗಿ 1818 ರಲ್ಲಿ ಬ್ರಿಟಿಷ್ ಆಳ್ವೆಕೆಗೆ ಒಳಗಾಯಿತು. 1865 ರಲ್ಲಿ ಪುರಸಭೆಯಾಗಿ ಅಸ್ಥಿತ್ವಕ್ಕೆ ಬಂದಿತು. ಬಾಗಲಕೋಟೆಯು "ಸ್ವಾತಂತ್ರ್ಯ ಚಳುವಳಿ" ಮತ್ತು "ಕರ್ನಾಟಕ ಏಕೀಕರಣ ಚಳುವಳಿ"ಗಳಿಗೆ ಕೇಂದ್ರವಾಗಿತ್ತು.

ಇಂದು, ಬಾಗಲಕೋಟೆ ಪಟ್ಟಣ ಎರಡು ಭಾಗಗಳಲ್ಲಿ ಹಂಚಿ ಹೋಗಿದೆ, ಹೊಸ ಬಾಗಲಕೋಟೆ ಅಥವಾ ನವನಗರ ಮತ್ತು ಹಳೆಯ ಬಾಗಲಕೋಟೆ ಪಟ್ಟಣ. ಆಲಮಟ್ಟಿ ಅಣೆಕಟ್ಟಿನ ನಿರ್ಮಾಣದಿಂದಾಗಿ ಹಳೆಯ ಪಟ್ಟಣದ ಬಹುತೇಕ ಭಾಗಗಳು ಮುಳುಗಡೆ ಹೋದಿದೆ. ಆ ಕಾರಣದಿಂದ ಹೊಸ ನವನಗರ ನಿರ್ಮಾಣ ಅನಿವಾರ್ಯವಾಯಿತು. ನವನಗರವು ವಿಶಾಲ ರಸ್ತೆಗಳು, ಉದ್ಯಾನಗಳು, ಮತ್ತು ಇತರ ಆಧಿನಿಕ ಸೌಲಭ್ಯಗಳನ್ನು ಹೊಂದಿ ಮಾದರಿ ವಿನ್ಯಾಸದಿಂದ ಯೋಜಿತ ರೀತಿಯಲ್ಲಿ ಕಟ್ಟಿದ ಪಟ್ಟಣವಾಗಿದೆ. ಬಾಗಲಕೋಟ್ ನವನಗರದ ಪ್ರಧಾನ ವಾಸ್ತುಶಿಲ್ಪಿ ಛಾರ್ಲ್ಸ್ ಕೋರಿಯಾ.

ನದಿಗಳು

ಇಲ್ಲಿ ಘಟಪ್ರಭಾಮಲಪ್ರಭಾ, ಮತ್ತು ಕೃಷ್ಣಾ ನದಿಗಳು ಹರಿಯುತ್ತವೆ.

ಶಿಕ್ಷಣ

ಪ್ರೊಟೆಸ್ಟಂಟರ ಕ್ರೈಸ್ತ ದೇವಾಲಯ

ಬಾಗಲಕೋಟೆ ನಗರ ಭಾಗದಲ್ಲಿ ಸಿ.ಎಸ್.ಐ. ಸಂತ ಪೌಲನ ದೇವಾಲಯವಿದೆ. ಈ ದೇವಾಲಯದ ಕಟ್ಟಡವು ನೂತನ ವಾದರೂ ಇಲ್ಲಿ ಶತಮಾನಕ್ಕಿಂತ ಮೊದಲೆ ಕ್ರೈಸ್ತ ಸಭೆ ಬಾಸೆಲ್ ಮಿಶನರಿಗಳಿಂದ ಪ್ರಾರಂಭವಾಗಿತ್ತು. ಇಲ್ಲಿ ಕುಷ್ಟ ರೋಗಿಗಳಿಗಾಗಿ ೧೯೦೧ರಲ್ಲಿ ಕೃಪಾಲಯವೆಂಬ ಆಸ್ಪತ್ರೆ ಕಾರ್ಯವೆಸಗುತಿದ್ದು ಪ್ರಸ್ತುತ ಮುಚ್ಚಲಾಗಿದೆ. ಈ ದೇವಾಲಯದಲ್ಲಿ ಪ್ರಸ್ತುತ ರೆವೆ. ಸುರೇಶ್ ನಾಯ್ಕರ್ ಧರ್ಮಗುರುಗಳಾಗಿದ್ದಾರೆ.ಅರಾದನೆ ಬೆಳಿಗಿನ್ ಸಮಯ ಇರುತ್ತದೆ.ಇಳಕಲ್ ತಾಲ್ಲೂಕಿನ ಕರಡಿಯಲ್ಲಿ ಬ್ರಿಟಿಷ್ ಕಾಲದ ಸಂತ ಜೋಸೆಫ್ ಚರ್ಚ್ ಇದೆ.

ತಾಲೂಕುಗಳು

ಇದನ್ನೂ ನೋಡಿ

Friday, 23 April 2021

ಸಾಮಾನ್ಯ ಜ್ಞಾನ 100 ಪ್ರಶ್ನೋತ್ತರಗಳು

100 ಸಾಮಾನ್ಯ ಜ್ಞಾನ ಪ್ರಶ್ನೆಗಳು

➖➖➖➖➖➖➖➖➖➖➖➖➖➖➖

1) ಕರ್ನಾಟಕದ ಏಕೈಕ ಪ್ರಧಾನ ಬಂದರು ಯಾವುದು? 
* ನವ ಮಂಗಳೂರು.

2) ಜಗತ್ತಿನ ಅತ್ಯಂತ ಚಿಕ್ಕ ಹಾಗೂ ದ್ವೀಪ ಖಂಡ ಯಾವುದು? 
* ಆಸ್ಟ್ರೇಲಿಯಾ.

3) 1952 ರಲ್ಲಿ ಪ್ರಾರಂಭಗೊಂಡು 1955 ರಲ್ಲಿ ಕಾರ್ಯಾರಂಭಗೊಂಡ ಬಂದರು ಯಾವುದು? 
* ಕಾಂಡ್ಲಾ ಬಂದರು. (ಗುಜರಾತ್).

4) ಆಸ್ಟ್ರೇಲಿಯಾ ಖಂಡದಲ್ಲಿರುವ ಒಟ್ಟು ರಾಷ್ಟ್ರಗಳ ಸಂಖ್ಯೆ ಎಷ್ಟು? 
* 14.

5) ಯಾವ ಬಂದರನ್ನು ಜವಾಹರ್ ಲಾಲ್ ನೆಹರು ಬಂದರು ಎನ್ನುವರು? 
* ನವಾಶೇವಾ ಬಂದರು.

6) ಕರ್ನಾಟಕದ ಹೆಬ್ಬಾಗಿಲು ಎಂದು ಯಾವ ಬಂದರನ್ನು ಕರೆಯುತ್ತಾರೆ? 
* ನವ ಮಂಗಳೂರು.

7) ವಿಸ್ತೀರ್ಣದಲ್ಲಿ ಅತಿ ಚಿಕ್ಕ ರಾಜ್ಯ ಯಾವುದು? 
* ಗೋವಾ.

8) ಗ್ರೇಟ್ ಬ್ಯಾರಿಯರ್ ರೀಫ್ ಯಾವ ಖಂಡದಲ್ಲಿದೆ? 
* ಆಸ್ಟ್ರೇಲಿಯಾ.

9) ಭಾರತ ಮತ್ತು ಅಫ್ಘಾನಿಸ್ಥಾನಕ್ಕೆ ಸಂಬಂಧಿಸಿದ ಗಡಿರೇಖೆ ಯಾವುದು? 
* ಡ್ಯೂರಾಂಡ್.

10) ಜನಸಂಖ್ಯೆಯಲ್ಲಿ ಅತಿ ಚಿಕ್ಕ ರಾಜ್ಯ ಯಾವುದು? 
* ಸಿಕ್ಕಿಂ.

11) ಮೌಂಟ್ ಎವರೆಸ್ಟ್ ಏರಿದ ಮೊಟ್ಟ ಮೊದಲ ಭಾರತೀಯ ಮಹಿಳೆ ಯಾರು? 
* ಬಚೇಂದ್ರಿಪಾಲ್.

12) ಯಾವ ಖಂಡ ಆರ್ಟಿಸಿಯನ್ ಬಾವಿಗಳಿಗೆ ಪ್ರಸಿದ್ಧಿಯಾಗಿದೆ? 
* ಆಸ್ಟ್ರೇಲಿಯಾ.

13) ಆಸ್ಟ್ರೇಲಿಯಾ ಖಂಡದ ಅತಿದೊಡ್ಡ ರಾಷ್ಟ್ರ ಯಾವುದು? 
* ಆಸ್ಟ್ರೇಲಿಯಾ.

14) ಮೌಂಟ್ ಎವರೆಸ್ಟ್ ನ್ನು ನೇಪಾಳದಲ್ಲಿ ----- ಎಂದು ಕರೆಯುತ್ತಾರೆ? 
* ಸಾಗರಮಾತಾ.

15) ಕೆ2 ಯಾವ ಶ್ರೇಣಿಯಲ್ಲಿದೆ? 
* ಕಾರಾಕೋರಂ.

16) ಕಾಂಚನಜುಂಗಾ ಯಾವ ರಾಜ್ಯದಲ್ಲಿದೆ? 
* ಸಿಕ್ಕಿಂ.

17) ಕೊಲ್ಕತ್ತಾ ಬಂದರು ಯಾವ ನದಿ ದಂಡೆಯಲ್ಲಿ ಸ್ಥಾಪನೆಯಾಗಿದೆ? 
* ಹೂಗ್ಲಿ.

18) ಊಲಾರ್ ಸರೋವರ ಯಾವ ರಾಜ್ಯದಲ್ಲಿದೆ? 
* ಜಮ್ಮು ಮತ್ತು ಕಾಶ್ಮೀರ.

19) ದಾಲ್ ಸರೋವರ ಯಾವ ರಾಜ್ಯದಲ್ಲಿದೆ? 
* ಜಮ್ಮು ಮತ್ತು ಕಾಶ್ಮೀರ.

20) ಕಾಮರಾಜ್ ಬಂದರಿನ ಇನ್ನೊಂದು ಹೆಸರೇನು? 
* ಎನ್ನೋರ್ ಬಂದರು.

21) ಪ್ರಪಂಚದ ಮೂರನೆಯ ಎತ್ತರವಾದ ಶಿಖರ ಯಾವುದು? 
* ಕಾಂಚನಜುಂಗಾ.

22) ಭಾರತದ ಅತ್ಯಂತ ಎತ್ತರದ ಶಿಖರ ಯಾವುದು? 
* ಕೆ2.

23) ಮೌಂಟ್ ಎವರೆಸ್ಟ್ ಏರಿದ ಜಗತ್ತಿನ ಅತ್ಯಂತ ಕಿರಿಯ ಬಾಲಕ ಯಾರು? 
* ಜೋರ್ಡಾನ್ ರೋಮಿರೋ.

24) ಪಾಕ್ ಜಲಸಂಧಿ ಯಾವ ಎರಡು ರಾಷ್ಟ್ರಗಳಿಗೆ ಸಂಬಂಧಿಸಿದೆ? 
* ಭಾರತ ಮತ್ತು ಶ್ರೀಲಂಕಾ.

25) ವಿಸ್ತಿರ್ಣದಲ್ಲಿ ಅತ್ಯಂತ ದೊಡ್ಡ ರಾಜ್ಯ ಯಾವುದು? 
* ರಾಜಸ್ಥಾನ.

26) ಜನಸಂಖ್ಯೆಯಲ್ಲಿ ಅತ್ಯಂತ ದೊಡ್ಡ ರಾಜ್ಯ ಯಾವುದು? 
* ಉತ್ತರಪ್ರದೇಶ.

27) ಮ್ಯಾಕ್ ಮೋಹನ್ ರೇಖೆ ಯಾವ ರಾಷ್ಟ್ರಗಳಿಗೆ ಸಂಬಂಧಿಸಿದೆ? 
* ಭಾರತ ಮತ್ತು ಚೀನಾ.

28) 12 ನಾಟಿಕಲ್ ಎಂದರೆ ----. 
* 22.2 ಕಿ.ಮೀ.

29) ತಮಿಳುನಾಡಿನ ಚಿದಂಬರ ಜಿಲ್ಲೆಯಲ್ಲಿರುವ ಬಂದರು ಯಾವುದು? 
* ಟುಟಿಕೋರಿನ್.

30) ದೇಶದ ಅತ್ಯಂತ ಪುರಾತನ ಬಂದರುಗಳಲ್ಲಿ ಎರಡನೆಯದು ಯಾವುದು? 
* ಚೆನ್ನೈ ಬಂದರು.

31) ಭಾರತದ 13 ನೆಯ ಬಂದರು ಯಾವುದು? 
* ಎನ್ನೋರ್ ಬಂದರು.

32) ಲೋಕ್ಟಕ್ ಸರೋವರ ಯಾವ ರಾಜ್ಯದಲ್ಲಿದೆ? 
* ಮಣಿಪುರ.

33) ಭಾರತದ ಅತ್ಯಂತ ದೊಡ್ಡ ಸಿಹಿ ಹಾಗೂ ಶುದ್ಧ ನೀರಿನ ಸರೋವರ ಯಾವುದು? 
* ಊಲಾರ್ ಸರೋವರ.

34) ಖಾಸಿ, ಗಾರೋ, ಜೈಂತಿಯಾ ಬೆಟ್ಟಗಳು ಯಾವ ರಾಜ್ಯದಲ್ಲಿ ಕಂಡು ಬರುತ್ತವೆ? 
* ಮೇಘಾಲಯ.

35) ಪಟಕಾಯಿಬಮ್ ಬೆಟ್ಟ ಕಂಡು ಬರುವುದು ಯಾವ ರಾಜ್ಯದಲ್ಲಿ? 
* ಅರುಣಾಚಲಪ್ರದೇಶ.

36) ಚಳಿಗಾಲದಲ್ಲಿ ಹೆಪ್ಪುಗಟ್ಟುವ ಸರೋವರ ಯಾವುದು? 
* ದಾಲ್ ಸರೋವರ.

37) ದೇಶದ ಮೊದಲ ಖಾಸಗಿ ಬಂದರು ಯಾವುದು? 
* ಎನ್ನೋರ್ ಬಂದರು.

38) ಪಾರಾದೀಪ್ ಬಂದರು ಯಾವ ರಾಜ್ಯದಲ್ಲಿದೆ? 
* ಒಡಿಶಾ.

39) ಕೋಲ್ಕತ್ತಾ ಬಂದರಿನ ಉಪಬಂದರು ಹಾಲ್ಡಿಯಾ ಸ್ಥಾಪನೆಯಾದದ್ದು ಯಾವಾಗ? 
* 1978 ರಲ್ಲಿ.

40) ರಾಡ್ ಕ್ಲಿಪ್ ರೇಖೆಯನ್ನು ಗುರುತಿಸಿದವರು ಯಾರು? 
* ಸರ್ ಸಿರಿಯಲ್ ರಾಡ್ ಕ್ಲಿಪ್.

41) ಮೌಂಟ್ ಎವರೆಸ್ಟ್ ನ ಎತ್ತರವೆಷ್ಟು? 
* 8848 ಮೀ.

42) ಭಾರತದ ದೊಡ್ಡ ಪ್ರವಾಸಿಗರ ಆಕರ್ಷಣೀಯ ಸರೋವರ ಯಾವುದು? 
* ದಾಲ್ ಸರೋವರ.

43) ಮಿಜೋ ಬೆಟ್ಟಗಳು ಯಾವ ರಾಜ್ಯದಲ್ಲಿ ಕಂಡು ಬರುತ್ತವೆ? 
* ಮಿಜೋರಾಂ.

44) ಡ್ಯೂರಾಂಡ್ ರೇಖೆಯನ್ನು ಗುರುತಿಸಿದವರು ಯಾರು? 
* ಮಾರ್ಟಿಮರ್ ಡ್ಯೂರಾಂಡ್.

45) ಮಿಕಿರ್ ಬೆಟ್ಟಗಳು ಕಂಡು ಬರುವ ರಾಜ್ಯ ಯಾವುದು? 
* ಅಸ್ಸಾಂ.

46) ಭಾರತದ ಉತ್ತರದ ಅಂಚನ್ನು ಜಮ್ಮು ಮತ್ತು ಕಾಶ್ಮೀರದ ----- ಎಂದು ಗುರುತಿಸವಾಗಿದೆ? 
* ಇಂದಿರಾ ಕೋಲ್.

47) ಆಸ್ಟ್ರೇಲಿಯಾ ಖಂಡದ ಅತಿ ಚಿಕ್ಕ ರಾಷ್ಟ್ರ ಯಾವುದು? 
* ನೌರು.

48) ಚಿಲ್ಕ್ ಸರೋವರ ಯಾವ ರಾಜ್ಯದಲ್ಲಿದೆ? 
* ಒರಿಸ್ಸಾ.

49) ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಎಲ್ಲಿದೆ? ,
* ಮೈಸೂರು/ಕೊಡಗು.

50) ರುದ್ರ ಸಾಗರ ಸರೋವರ ಎಲ್ಲಿದೆ? 
* ತ್ರೀಪುರ.

51) ವಿಶ್ವ ಹವಾಮಾನ ದಿನವನ್ನು ಯಾವಾಗ ಆಚರಿಸಲಾಗುತ್ತದೆ? 
* ಮಾರ್ಚ್ 23

53)ಹೈದರಾಲಿ ಯ ಬಿರುದು - - - ಫತೆ ಹೈದರ್ ಬಹದ್ದೂರ್.

54)ಒಂದನೇ ಆಂಗ್ಲೋ ಮೈಸೂರು ಯುದ್ಧh  ಯಾವ ಒಪ್ಪಂದದೊಂದಿಗೆ ಅಂತ್ಯಗೊಂಡಿತು? - - - ಮದ್ರಾಸ್ ಒಪ್ಪಂದ. 1769.

55)2 ನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿದ್ದ ಬ್ರಿಟಿಷ್ ಗವರ್ನರ್ ಜನರಲ್ - - - ವಾರನ್ ಹೇಸ್ಟಿಂಗ್ಸ್.

56)  3ನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ಇದ್ದ ಬ್ರಿಟಿಷ್ ಗವರ್ನರ್ ಜನರಲ್ - - - ಕಾರ್ನವಾಲೀಸ್.

57) 4ನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ಇದ್ದ ಬ್ರಿಟಿಷ್ ಗವರ್ನರ್ ಜನರಲ್ - - - - -ಲಾರ್ಡ್ ವೆಲ್ಲೆಸ್ಲಿ.

58) ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವರು - - - - ಲಾರ್ಡ್ ವೆಲ್ಲೆಸ್ಲಿ.

59) ಸಹಾಯಕ ಸೈನ್ಯ ಪದ್ಧತಿಗೆ ಸೇರಿದ ಮೊದಲ ದೇಶೀಯ ರಾಜ - - - ಹೈದರಾಬಾದ್ ನಿಜಾಮ.

60)ಅಭಿನವ ಕಾಳಿದಾಸ - - - ಬಸಪ್ಪ ಶಾಸ್ತ್ರಿ.

61) ಮೈಸೂರಿನ ಪ್ರಥಮ ಬ್ರಿಟಿಷ್ ರೆಸಿಡೆಂಟ್ - - - ಸರ್ ಬ್ಯಾರಿಕ್ಲೋಸ್.

62)ಮೈಸೂರು ಸಂಸ್ಥಾನದಲ್ಲಿ ಕಮಿಷನರ್ ಆಳ್ವಿಕೆ ಪ್ರಾರಂಭವಾಗಿದ್ದು- - - - 1831.

63)ರಾಜಧಾನಿಯನ್ನು ಮೈಸೂರಿನಿಂದ ಬೆಂಗಳೂರಿಗೆ ವರ್ಗಾಯಿಸಿದವರು - - - - ಮಾರ್ಕ ಕಬ್ಬನ್. 

64)ಅಠಾರ ಕಛೇರಿಯನ್ನು ರದ್ದು ಮಾಡಿದವರು - - - ಮಾರ್ಕ ಕಬ್ಬನ್. 

65)ಮೈಸೂರಿನಲ್ಲಿ ಕಮಿಷನರ್ ಆಳ್ವಿಕೆ ಆರಂಭಿಸಿದ ಗವರ್ನರ್ ಜನರಲ್ - - - - ಲಾರ್ಡ್ ವಿಲಿಯಂ ಬೆಂಟಿಂಕ್. 

66)ಮೈಸೂರು ಪ್ರಜಾಪ್ರತಿನಿಧಿ ಸಭೆಯನ್ನು ಸ್ಥಾಪಿಸಿದವರು - - - ದಿವಾನ್ ರಂಗಾಚಾರ್ಲು. 

67)ಮೈಸೂರು ಸಿವಿಲ್ ಸರ್ವಿಸಸ್ ಪರೀಕ್ಷೆ ಆರಂಭಿಸಿದ ದಿವಾನ್ - - - - ಕೆ.ಶೇಷಾದ್ರಿ ಅಯ್ಯರ್. 

68)ಜೀವವಿಮಾ ಯೋಜನೆ ಜಾರಿಗೆ ತಂದ ದಿವಾನ್ - - - ಕೆ.ಶೇಷಾದ್ರಿ ಅಯ್ಯರ್. 

69)ಭಾರತದಲ್ಲಿ ಮೊದಲು ವಿದ್ಯುತ್ ಸೌಲಭ್ಯ ಪಡೆದ ನಗರ - - - ಬೆಂಗಳೂರು. 

70) ಒಕ್ಕಲಿಗರ ಸಂಘಘ ಸ್ಥಾಪನೆಗೆ ಶ್ರಮಿಸಿದ ದಿವಾನರು- - - - ಮಾಧವರಾವ್. 

71)ಮಿರ್ಜಾ ಇಸ್ಮಾಯಿಲ್ ಅವರ ಬಿರುದು - - - - ಅಮೀನ್ - ಉಲ್ - ಮುಲ್ಕ್. 

72)ರಾಜರ್ಷಿ ಎಂಬ  ಬಿರುದು ಪಡೆದ ಮೈಸೂರಿನ ಒಡೆಯರ್ - - ನಾಲ್ವಡಿ ಕೃಷ್ಣರಾಜ ಒಡೆಯರ್. 

73)ಮೈಸೂರು ಸಂಸ್ಥಾನದ ಕೊನೆಯ ದಿವಾನ್ - - - ರಾಮಸ್ವಾಮಿ ಮೊದಲಿಯಾರ್. 

74)ಮೈಸೂರಿನಲ್ಲಿ ಹಿಂದುಳಿದವರಿಗೆ ಮೀಸಲಾತಿ ವರದಿಯನ್ನು ಮೊದಲ ಬಾರಿಗೆ ನೀಡಿದ ಸಮಿತಿ - - - ಜಸ್ಟೀಸ್ ಲೆಸ್ಲಿ ಮಿಲ್ಲರ್ ಕಮಿಟಿ. 

75)ಸ್ವದೇಶಿ ಚಳುವಳಿಯ ನಾಯಕರು - - ಬಿ.ಜಿ.ತಿಲಕ್. 

76)ಕರ್ನಾಟಕದಲ್ಲಿ ಮ್ಯಾಜಿನಿ ಕ್ಲಬ್ ಸ್ಥಾಪಿಸಿದವರು - - - ಹನುಮಂತ ರಾವ್ ದೇಶ್ ಪಾಂಡೆ. 

77)ಕರ್ನಾಟಕ ಸಭಾ ಸ್ಥಾಪನೆಯಾದದ್ದು - - - 1916. 

78)ಮೊದಲ ಬಾರಿಗೆ ಗಾಂಧೀಜಿಯವರು ಕರ್ನಾಟಕ ಕ್ಕೆ ಭೇಟಿ ನೀಡಿದ್ದು - - - 1915. 

79)ಕರ್ನಾಟಕ ಸಭಾದ ಸ್ಥಾಪಕರು - - - ಆಲೂರು ವೆಂಕಟರಾವ್. 

80)ಹಿಂದುಸ್ತಾನ್ ಸೇವಾದಳದ ಸ್ಥಾಪನೆ - - - - ಹುಬ್ಬಳ್ಳಿಯಲ್ಲಿ. ..ಎನ್.ಎಸ್. ಹರ್ಡೀಕರ್. 

81)ಕರ್ನಾಟಕದ ಗಾಂಧೀ - - - ಹರ್ಡೀಕರ್ ಮಂಜಪ್ಪ. 

82) ಕರ್ನಾಟಕ ಕೇಸರಿ - - - - ಗಂಗಾಧರ ರಾವ್ ದೇಶ್ ಪಾಂಡೆ. 

83)ಗಂಗಾಧರ ರಾವ್ ದೇಶ್ ಪಾಂಡೆ ಯವರ ಬಿರುದು - - - ಕರ್ನಾಟಕ ಸಿಂಹ. 

84)ಬೆಂಗಳೂರಿನ ಚರಕ ಸಂಘದ ಸ್ಥಾಪಕರು - - - ಜಿ.ದೇಶ್ ಪಾಂಡೆ. 

85)ಹೋಂ ರೂಲ್ ಚಳುವಳಿ ಪ್ರಾರಂಭ ವಾದದ್ದು-----1916. 

86)1924 ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನ ನಡೆದ ಸ್ಥಳ - - - - ಬೆಳಗಾವಿ. 

87)ಪ್ರಥಮ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು - - - ಗಂಗಾಧರ ರಾವ್ ದೇಶ್ ಪಾಂಡೆ. 

88)ಗಾಂಧೀ ಜೀ ಅಸಹಕಾರ ಚಚಳುವಳಿಯನ್ನು ಆರಂಭಿಸಿದ್ದು.- - - 1920 

89)ಕರ್ನಾಟಕ ಉಪ್ಪಿನ ಸತ್ಯಾಗ್ರಹದ ನಾಯಕರು.- - - ಎಂ.ಪಿ.ನಾಡಕರ್ಣಿ.- ಮೈಲಾರ ಮಹದೇವಪ್ಪ. 

90)ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ನಡೆದ ಸ್ಥಳ - - - ಅಂಕೋಲ. 

91)ಕರ್ನಾಟಕದ ಬಾರ್ಡೋಲಿ - - - ಅಂಕೋಲ. 

92)ಶಿವಪುರ ಕಾಂಗ್ರೆಸ್ಸಿನ ಅಧ್ಯಕ್ಷರು - - - ಟಿ.ಸಿದ್ದಲಿಂಗಯ್ಯ. 

93)ಕರ್ನಾಟಕ ಧ್ವಜ ಸತ್ಯಾಗ್ರಹ ಮೊದಲು ನಡೆದದ್ದು - - - ಶಿವಪುರ. 

94)ಮೈಸೂರಿನ ಪ್ರಥಮ ಕಾಂಗ್ರೆಸ್ ಸಭೆ ನಡೆದದ್ದು - - 1938 - ಶಿವಪುರ ಕಾಂಗ್ರೆಸ್. 

95)ಕರ್ನಾಟಕದ ಜಲಿಯನ್ ವಾಲಾಬಾಗ್ - ,- - ವಿಧುರಾಶ್ವತ್ಥ. 

96)ಕರ್ನಾಟಕದಲ್ಲಿ ಸ್ವಾತಂತ್ರ್ಯ ಘೋಷಿಸಿಕೊಂಡ  
ಪ್ರಥಮ ಹಳ್ಳಿ - - - - ಈಸೂರು. 

97)ಅರಮನೆ ಸತ್ಯಾಗ್ರಹ ನಡೆದ ವರ್ಷ ಮತ್ತು  
ಆಗಿನ ದಿವಾನ್ - - - - 1947. .ರಾಮಸ್ವಾಮಿ ಮೊದಲಿಯಾರ್. 

98)ಅರಮನೆ ಸತ್ಯಾಗ್ರಹದ ನೇತಾರ - - - ಕೆ.ಸಿ.ರೆಡ್ಡಿ. 

99)ಮೈಸೂರು ರಾಜ್ಯದ ಪ್ರಥಮ  
ಮುಖ್ಯಮಂತ್ರಿ - - - ಕೆ.ಸಿ.ರೆಡ್ಡಿ. 

100)ಕರ್ನಾಟಕ ವಿಧ್ಯಾವರ್ಧಕ ಸಂಘ  
ಹೊರಡಿಸುತ್ತಿದ್ದ ಮಾಸ ಪತ್ರಿಕೆ - - - ಸುವಾಸನೆ.

__________________________________________

ಸಂಗ್ರಹ ✍️T. A. ಚಂದ್ರಶೇಖರ

Thursday, 22 April 2021

ಸಾಮಾನ್ಯ ಜ್ಞಾನ ವಿಷಯಗಳು

ಸಾಮಾನ್ಯ ಜ್ಞಾನ ವಿಷಯಗಳು

ಜಿಲ್ಲಾ ದರ್ಶನ

ಹಾವೇರಿ

ಕರ್ನಾಟಕದ ಒಂದು ಜಿಲ್ಲೆ


ಹವೇರಿ ಭಾರತದ ಕರ್ನಾಟಕದ ಒಂದು ಪಟ್ಟಣ, ಇದು ಹವೇರಿ ಜಿಲ್ಲೆಯ ಆಡಳಿತ ಕೇಂದ್ರವಾಗಿದೆ.  ಹಾವೇರಿ ಎಂಬ ಹೆಸರು ಹಾವು ಮತ್ತು ಕೇರಿ ಎಂಬ ಕನ್ನಡ ಪದಗಳಿಂದ ಬಂದಿದೆ, ಇದರರ್ಥ ಹಾವುಗಳ ಸ್ಥಳ . ಏಲಕ್ಕಿ ಹೂಮಾಲೆಗಳಿಗೆ ಹವೇರಿ ಪ್ರಸಿದ್ಧವಾಗಿದೆ. ಪ್ರಾಚೀನ ದಿನಗಳಲ್ಲಿ ಹವೇರಿಯಲ್ಲಿ ಸುಮಾರು 1000 ಮಠಗಳು (ಪವಿತ್ರ ಧಾರ್ಮಿಕ ಸ್ಥಳಗಳು; ಕನ್ನಡ - ಥಾಥ್) ಇದ್ದವು ಎಂದು ಹೇಳಲಾಗುತ್ತದೆ. ಪ್ರಸಿದ್ಧ ಮಠಗಳಲ್ಲಿ ಒಂದು ಹುಕ್ಕೇರಿ ಮಠ . ಹಾವೇರಿ ಬೈಡಗಿ ಕೆಂಪು ಮೆಣಸಿನಕಾಯಿಗಳನ್ನು ಮಾರಾಟ ಮಾಡಲು ಸಹ ಪ್ರಸಿದ್ಧವಾಗಿದೆ, ಇದು ಭಾರತದಾದ್ಯಂತ ಪ್ರಸಿದ್ಧವಾಗಿದೆ. ಸುಮಾರು 25   ಕಿಮೀ ದೂರದಲ್ಲಿ, ಕವಿ ಕನಕಡಾಸನ ಜನ್ಮಸ್ಥಳವಾದ ಬಡಾ ಎಂಬ ಸ್ಥಳವಿದೆ.


Haveri
Location in Karnataka, India
Country India
Stateಟೆಂಪ್ಲೇಟು:Country data Karnataka
RegionBayaluseeme
DistrictHaveri district
ವಿಸ್ತೀರ್ಣ
 - ಒಟ್ಟು೨೬.೧೯ ಚದರ ಕಿಮಿ (೧೦.೧ ಚದರ ಮೈಲಿ)
ಎತ್ತರ೫೭೧ ಮೀ (೧,೮೭೩ ಅಡಿ)
ಜನಸಂಖ್ಯೆ
 - ಒಟ್ಟು೬೭,೧೦೨
 - ಸಾಂದ್ರತೆ೨,೧೩೪.೮೯/ಚದರ ಕಿಮಿ (೫,೫೨೯.೩/ಚದರ ಮೈಲಿ)
{{{language}}}{{{ಭಾಷೆ}}}
PIN581 110
ದೂರವಾಣಿ ಕೋಡ್08375

ಹವೇರಿ ಬೆಂಗಳೂರಿನಿಂದ ರೈಲಿನಲ್ಲಿ 7 ಗಂಟೆಗಳ ದೂರದಲ್ಲಿದೆ. ಇದು ಹುಬ್ಲಿ ಮತ್ತು ದಾವಣಗೆರೆ ನಡುವಿನ ಮಧ್ಯದ ನಿಲ್ದಾಣವಾಗಿದೆ. ಇದು ಸ್ಟಾಪ್ 76.5 ಆಗಿದೆ   ಮೊದಲು ಕಿಮೀ ಹುಬ್ಬಳ್ಳಿ ಮತ್ತು 72   ದಾವಣಗೆರೆ ನಂತರ ಕಿ.ಮೀ. ರಸ್ತೆ ಮೂಲಕ, ಇದು ಸುಮಾರು 340 ಆಗಿದೆ   ಎನ್ಎಚ್ -4 ರಲ್ಲಿ ಬೆಂಗಳೂರಿನಿಂದ ಮುಂಬೈ ಕಡೆಗೆ ಕಿ.ಮೀ. ಇದು 307 ರಲ್ಲಿದೆ   ಬಂದರು ನಗರ ಮಂಗಳೂರಿನ ಉತ್ತರಕ್ಕೆ ಕಿ.ಮೀ.

ಹವೇರಿ ಶಿಕ್ಷಣದಲ್ಲಿ ಮಧ್ಯಮ ಹಂತವನ್ನು ಹೊಂದಿದ್ದಾರೆ. ಹವೇರಿ ದೇವಗಿರಿಯಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜನ್ನು 2007 ರಲ್ಲಿ ಪ್ರಾರಂಭಿಸಿದರು.

ಹವೇರಿಯ ಇತಿಹಾಸ

ಚಿತ್ರ:Western Chalukya Monuments.svg
ಪಶ್ಚಿಮ ಚಾಲುಕ್ಯ ಸ್ಮಾರಕಗಳ ಪ್ರಮುಖ ಪ್ರದೇಶ
ಕರ್ನಾಟಕದ ಹವೇರಿಯಲ್ಲಿರುವ ಸಿದ್ಧೇಶ್ವರ ದೇವಸ್ಥಾನದಲ್ಲಿ ವಿಶಿಷ್ಟ ಪಾಶ್ಚಾತ್ಯ ಚಾಲುಕ್ಯ ದ್ರಾವಿಡ ವಿಮನಾ

ಪ್ರಮುಖ ಪ್ರದೇಶವಾಗಿದೆ ಪಶ್ಚಿಮ ಚಾಲುಕ್ಯ ಸ್ಮಾರಕಗಳ ಸ್ಥಳಗಳಲ್ಲಿ ಒಳಗೊಂಡಿದೆ ಬಾದಾಮಿಹಲಸಿAnnigeri, ಮಹದೇವ ದೇವಾಲಯ (ಇಟಗಿ), ಗದಗಲಕ್ಕುಂಡಿಲಕ್ಷ್ಮೇಶ್ವರ, ಡಂಬಳ, ಹಾವೇರಿ, ಬಂಕಾಪುರ, Rattahalli, Kuruvatti, Bagali, BalligaviChaudayyadanapuraGalaganathaಹಾನಗಲ್ . ಈ ಪ್ರದೇಶಗಳಲ್ಲಿ ಸೋಪ್ ಸ್ಟೋನ್ ಹೇರಳವಾಗಿ ಕಂಡುಬರುವುದರಿಂದ ಅದು ಸಾಧ್ಯವಾಯಿತು. ಪಾಶ್ಚಿಮಾತ್ಯ ಚಾಲುಕ್ಯ ವಾಸ್ತುಶಿಲ್ಪ ಚಟುವಟಿಕೆಯ ಕೋರ್ ಪ್ರದೇಶದ ಅಡಿಯಲ್ಲಿ ಹವೇರಿ ಬರುತ್ತದೆ.

ಹವೇರಿ ಜಿಲ್ಲೆಯ ಇತಿಹಾಸವು ಪೂರ್ವ-ಐತಿಹಾಸಿಕ ಅವಧಿಗೆ ಸೇರಿದೆ. ವಿವಿಧ ಆಡಳಿತಗಾರರ ಸುಮಾರು 1300 ಶಿಲಾ ಬರಹಗಳು ಚಾಲುಕ್ಯರುರಾಸ್ತಕುಟರು ಜಿಲ್ಲೆಯಲ್ಲಿ ಕಂಡುಬರುತ್ತವೆ. ಬಂಕಪುರ ಚಲ್ಲಕೇತುರು, ಗುಟ್ಟಾವುಲ ಗುಟ್ಟಾರು, ಹಂಗಲ್‌ನ ಕದಂಬಸ್ ಮತ್ತು ನೂರುಂಬಾಡ್ ಪ್ರಸಿದ್ಧ ಸಮಂತಾ ಆಡಳಿತಗಾರರು. ಕನ್ನಡ ಆದಿಕವಿ ಪಂಪಾ ಅವರ ಶಿಕ್ಷಕ ದೇವೇಂದ್ರಮುನಿಗಲು ಮತ್ತು ರನ್ನ ಶಿಕ್ಷಕ ಅಜಿತಾಸೇನಾಚಾರ್ಯ   ಚಾವುಂಡರಾಯನ ವಾಸಿಸುತ್ತಿದ್ದರು ಬಂಕಾಪುರ . ಇದು ಹೊಯ್ಸಳ ವಿಷ್ಣುವರ್ಧನ ಎರಡನೇ ರಾಜಧಾನಿಯೂ ಆಗಿತ್ತು. Guttaru 12 ನೇ ಶತಮಾನದ ನಂತರದ ಭಾಗದಲ್ಲಿ ಸಮಯದಲ್ಲಿ ಮತ್ತು ಆಫ್ Mandaliks ಮಾಹಿತಿ Guttavol (Guttal) ಹಳ್ಳಿಯಿಂದ 13 ನೇ ಶತಮಾನದ ಅಂತ್ಯದಲ್ಲಿ ರವರೆಗೆ ಆಳ್ವಿಕೆ ಚಾಲುಕ್ಯ ಸ್ವತಂತ್ರವಾಗಿ ಕೆಲವು ಬಾರಿ, ಮತ್ತು Mandaliks ಮಾಹಿತಿ Seunas ದೇವಗಿರಿಯ. Shasanas ಕಂಡುಬರುವ Chaudayyadanapura (Choudapur), Guttal ಹತ್ತಿರದ ಹಳ್ಳಿಯ, Mallideva ಚಾಲುಕ್ಯರ 6 ನೇ ವಿಕ್ರಮಾದಿತ್ಯನ Mandalika ಎಂದು ತಿಳಿದುಬರುತ್ತದೆ. Jatacholina, Mallideva ನಾಯಕತ್ವದಲ್ಲಿ ನಲ್ಲಿ Mukteshwara ಕಟ್ಟಿಸಿದರು Chaudayyadanapura (Choudapur).

ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ನೂರುಂಬಾದ್‌ನ ಕಡಂಬರು ಸುಮಾರು 100 ಗ್ರಾಮಗಳನ್ನು ಆಳಿದರು, ರಟ್ಟಿಹಳ್ಳಿಯನ್ನು ತಮ್ಮ ರಾಜಧಾನಿಯಾಗಿರಿಸಿಕೊಂಡರು.

ಜಿಲ್ಲೆಯ ಸಾಂಟಾ ಶಿಶುನಾಳ ಶರೀಫ್, ಮಹಾನ್ ಸಂತ Kanakadasaru, Sarvajnya, ಹಾನಗಲ್ಲ ಕುಮಾರ Shivayogigalu, Wagish Panditaru, ಬರಹಗಾರ Galaganatharu, Ganayogi ಪಂಚಾಕ್ಷರಿ Gavayigalu, Gnyana ಪೀಠಗಳಲ್ಲಿ ಪ್ರಶಸ್ತಿ Dr.VKGokak ಮತ್ತು ಅನೇಕ ಹೆಚ್ಚು ಜನ್ಮಸ್ಥಾನ ಎಂದು ಹೆಮ್ಮೆಯಿದೆ. ಸ್ವಾತಂತ್ರ್ಯ ಹೋರಾಟಗಾರರಾದ ಮೈಲಾರ ಮಹಾದೇವಪ್ಪ ಮತ್ತು ಗುಡ್ಲೆಪ್ಪ ಹಲ್ಲಿಕೆರೆ.

ಹವೇರಿಯ ಪ್ರವಾಸಿ ಆಕರ್ಷಣೆಗಳು

  • ಸಿದ್ಧೇಶ್ವರ ದೇವಸ್ಥಾನ 
ನಗರಾ ಶೈಲಿಯ ಗೋಪುರ
ದ್ರಾವಿಡ ಶೈಲಿಯ ಗೋಪುರ

ಪಾಶ್ಚಾತ್ಯ ಚಾಲುಕ್ಯ ವಾಸ್ತುಶಿಲ್ಪದ ಬೆಳವಣಿಗೆಗಳ ಕೇಂದ್ರವು ಇಂದಿನ ಬಾಗಲ್ಕೋಟ್ಗಡಾಗ್ಕೊಪ್ಪಲ್, ಹವೇರಿ ಮತ್ತು ಧಾರವಾಡ ಜಿಲ್ಲೆಗಳು ಸೇರಿದಂತೆ ಪ್ರದೇಶವಾಗಿತ್ತು;

ಹವೇರಿಯಲ್ಲಿರುವ ಸಿದ್ಧೇಶ್ವರ ದೇವಸ್ಥಾನವು 11 ನೇ ಶತಮಾನದ ದ್ರಾವಿಡ ಅಭಿವ್ಯಕ್ತಿ ಮತ್ತು ಸೂಪರ್‌ಸ್ಟ್ರಕ್ಚರ್‌ನೊಂದಿಗೆ ದಿಗ್ಭ್ರಮೆಗೊಂಡ ಚದರ ಯೋಜನೆ. ಹವೇರಿಯ ಸಿದ್ಧೇಶ್ವರ ದೇವಸ್ಥಾನದಲ್ಲಿ ಚಿಕಣಿ ಅಲಂಕಾರಿಕ ದ್ರಾವಿಡ ಮತ್ತು ನಗರಾ ಶೈಲಿಯ ಗೋಪುರಗಳು

  • ಬಸವಣ್ಣ ದೇವಸ್ಥಾನ
  • ಉತ್ಸವ ರಾಕ್ ಗಾರ್ಡನ್ ಎನ್ಎಚ್ -4 ಶಿಗ್ಗಾಂವ್ ತಾಲ್ಲೂಕಿನ ಗೋಟಗೋಡಿಯಲ್ಲಿ ಇದೆ. ಇದು ಆಧುನಿಕ ಮತ್ತು ಕಲೆ ಎರಡರಲ್ಲೂ ಸಂಯೋಜಿಸಲ್ಪಟ್ಟಿದೆ, ಅಲ್ಲಿ 1000 ಕ್ಕೂ ಹೆಚ್ಚು ನಿಜ ಜೀವನದ ಗಾತ್ರದ ಶಿಲ್ಪಗಳು ಇರುತ್ತವೆ. ಇದು 8 ವಿಶ್ವ ದಾಖಲೆಗಳನ್ನು ಪಡೆದಿದೆ. ಇದು ಇಡೀ ಜಗತ್ತಿನಲ್ಲಿ ಒಂದು ಅನನ್ಯ ಉದ್ಯಾನವಾಗಿದೆ.

ಹಾವೇರಿ ಜಿಲ್ಲೆಯಲ್ಲಿ ಆಸಕ್ತಿಯ ಸ್ಥಳಗಳು =

ದೇವಾಲಯಗಳು

  • ಹವೇರಿಯಲ್ಲಿರುವ ಸಿದ್ಧೇಶ್ವರ ದೇವಸ್ಥಾನ

ಮಸೀದಿಗಳು / ಸೂಫಿ ಸ್ಥಳಗಳು

  • ದರ್ಗಾ ಆಫ್ ಇರ್ಷಾದ್ ಅಲಿ ಬಾಬಾ, ಪಿಬಿ ರಸ್ತೆ, ಹವೇರಿ.
  • ಹವೇರಿಯ ಭಾರತಿ ನಗರ, ಹಂಗಲ್ ರಸ್ತೆಯಲ್ಲಿರುವ ಸೇಂಟ್ ಆನ್ಸ್ ಚರ್ಚ್

ಮಿನಿ ವಿಧಾನ ಸೌಧ

ಚಿತ್ರ:Mohanrao Sudi2.jpg
ಮಿನಿ ವಿಧಾನ ಸೌಧ,-ಬಹುತೇಕ ಪೂರ್ಣ ನೋಟ.

ಇತ್ತೀಚೆಗೆ ದೇವಗಿರಿ ಬೆಟ್ಟದಲ್ಲಿ ಮಿನಿ ವಿಧಾನ ಸೌಧವನ್ನು ನಿರ್ಮಿಸಲಾಯಿತು. ಮಿನಿ ವಿಧಾನ ಸೌಧ ಪ್ರಮುಖ ಸರ್ಕಾರಿ ಕಚೇರಿಗಳನ್ನು ಆಯೋಜಿಸುತ್ತದೆ. ಇವುಗಳಲ್ಲಿ ಮುಖ್ಯ ಕಚೇರಿ ಜಿಲ್ಲಾ ಆಯುಕ್ತರ ಕಚೇರಿ.

ಹಾವೇರಿ ನಲ್ಲಿ ಇದೆ 14.8°N 75.4°E .  ಇದು ಸರಾಸರಿ 572 ಎತ್ತರವನ್ನು ಹೊಂದಿದೆ   ಮೀಟರ್ (1876   ಅಡಿಗಳು).

ಶಿಕ್ಷಣ ಸಂಸ್ಥೆಗಳು

ಸ್ನಾತಕೋತ್ತರ ಶ್ರೀ ರಾಜೀವ್ ಗಾಂಧಿ ಕರ್ನಾಟಕ ವಿಶ್ವವಿದ್ಯಾಲಯ ಪಿಜಿ ಸೆಂಟರ್, ಕೆರಿಮಟ್ಟಿಹಳ್ಳಿ, ಹವೇರಿ ಅಭಿವೃದ್ಧಿ ಹೊಂದುತ್ತಿರುವ ಶಿಕ್ಷಣ ಸಂಸ್ಥೆ. ಹವೇರಿಯಲ್ಲಿ ಮೂರು ಪ್ರಮುಖ ಕಾಲೇಜುಗಳಿವೆ. ಒಂದು ಸರ್ಕಾರ. ಪ್ರಥಮ ದರ್ಜೆ ಕಾಲೇಜು, ಗುಡ್ಲೆಪ್ಪ ಹಲ್ಲಿಕೇರಿ ಕಾಲೇಜು, ಮತ್ತು ಸಿ.ಬಿ.ಕೊಲ್ಲಿ ಪಾಲಿಟೆಕ್ನಿಕ್. ಇತರ ಕಾಲೇಜುಗಳಲ್ಲಿ ಎಸ್‌ಎಸ್ ಮಹಿಳಾ ಪದವಿ ಕಾಲೇಜು, ಎಸ್‌ಜೆಎಂ ಪೂರ್ವ ವಿಶ್ವವಿದ್ಯಾಲಯ ಕಾಲೇಜು ಮತ್ತು ಎಸ್‌ಎಂಎಸ್ ಪೂರ್ವ ವಿಶ್ವವಿದ್ಯಾಲಯ ಕಾಲೇಜು ಸೇರಿವೆ. ಇತ್ತೀಚೆಗೆ ಸರ್ಕಾರ ಎಂಜಿನಿಯರಿಂಗ್ ಕಾಲೇಜು ಪ್ರಾರಂಭವಾಯಿತು. ಸಿಬಿಸಿಪೊಲಿಟೆಕ್ನಿಕ್

ಸಿಬಿಎಸ್‌ಇ ಶಾಲೆಗಳು

  1. ಕರ್ನಾಟಕ ಸಾರ್ವಜನಿಕ ಶಾಲೆ, ಹನಾಗಲ್ ರಸ್ತೆ, ಹವೇರಿ
  2. ಕೆಎಲ್ಇಯ ಇಂಗ್ಲಿಷ್ ಮಧ್ಯಮ ಸಿಬಿಎಸ್ಇ ಶಾಲೆ (www.klescbsehvr.org)

ಕಾನ್ವೆಂಟ್ ಶಾಲೆಗಳು

  1. ಮೃತ್ಯುಂಜಯ ವಿದ್ಯಾ ಪೀಠ ಅವರ ಹೌನ್ಸಭವಿ. 1918 ರಿಂದ (ಕಾನ್ವೆಂಟ್‌ನಿಂದ ಪದವಿವರೆಗೆ ಟಾಪ್ 1 ಕಾಲೇಜ್ ಡಿಪ್ಲೊಮಾ)
  2. ಶ್ರೀ ವಿವೇಕಾನಂದ ಕಾನ್ವೆಂಟ್ ಶಾಲೆ ತುಮ್ಮಿನಕ್ಕತಿ
  3. ನ್ಯೂ ಕೇಂಬ್ರಿಡ್ಜ್ ಕಾನ್ವೆಂಟ್ ಶಾಲೆ ತುಮ್ಮಿನಕಟ್ಟಿ

ಪ್ರೌ schools ಶಾಲೆಗಳು

  1. ದುರ್ಗಾಡ್ ಪ್ರೌ School ಶಾಲೆ ಹೌನ್‌ಸಭವಿ, ಮೃತ್ಯುಂಜಯ ವಿದ್ಯಾ ಪೀಠ ಅವರ ಹೌನ್‌ಸಭವಿ. 1918 ರಿಂದ (ಕಾನ್ವೆಂಟ್‌ನಿಂದ ಪದವಿವರೆಗೆ ಟಾಪ್ 1 ಕಾಲೇಜ್ ಡಿಪ್ಲೊಮಾ)
  2. ಕರ್ನಾಟಕ ಸಾರ್ವಜನಿಕ ಶಾಲೆ, ಹನಾಗಲ್ ರಸ್ತೆ, ಹವೇರಿ
  3. ಕೆಎಲ್ಇಯ ಇಂಗ್ಲಿಷ್ ಮಧ್ಯಮ ಸಿಬಿಎಸ್ಇ ಶಾಲೆ (www.klescbsehvr.org)
  4. ಗಾಂಧಿ ಗ್ರಾಮೀನಾ ಗುರುಕುಲ ಹೊಸರಿತಿ
  5. ಲಯನ್ಸ್ ಇಂಗ್ಲಿಷ್ ಮಧ್ಯಮ ಶಾಲೆ
  6. ಸೇಂಟ್ ಮೈಕೆಲ್ ಇಂಗ್ಲಿಷ್ ಮಧ್ಯಮ ಶಾಲೆ
  7. ಜೆಜಿಎಸ್ಎಸ್ ಪ್ರೌ School ಶಾಲೆ (ಗೆಲಿಯಾರಾ ಬಾಲಗಾ)
  8. ಜೆಪಿ ರೋಟರಿ ಶಾಲೆ
  9. ಹುಕ್ಕರಿಮಠ ಶಿವಬಸವೇಶ್ವರ ಪ್ರೌ School ಶಾಲೆ
  10. ಎಸ್‌ಎಂಎಸ್ ಬಾಲಕಿಯರ ಪ್ರೌ School ಶಾಲೆ
  11. ಎಚ್‌ಎಲ್‌ವಿ ಇಂಗ್ಲಿಷ್ ಮಧ್ಯಮ ಶಾಲೆ ಸವನೂರ್
  12. ಮೃತ್ಯುಂಜಯ ಪ್ರೌ School ಶಾಲೆ ಕುರುಬಗೊಂಡ
  13. ಶ್ರೀ ಕಾಳಿದಾಸ ಪ್ರೌ School ಶಾಲೆ, ಕಾಗಿನೆಲೆ ಬಸ್ ನಿಲ್ದಾಣ, ಹವೇರಿ
  14. ಎಸ್‌ಜೆಎಂ ಪ್ರಾಥಮಿಕ ಮತ್ತು ಪ್ರೌ School ಶಾಲೆ, ಹವೇರಿ
  15. ಸೇಂಟ್ ಆನ್ಸ್ ಇಂಗ್ಲಿಷ್ ಮಧ್ಯಮ ಶಾಲೆ. ಹವೇರಿ
  16. ಎಸ್‌ವಿಎಸ್ ಪ್ರೌ school ಶಾಲೆ ಅಬಲೂರು
  17. ಶ್ರೀ ಸಂಗನಾ ಬಸವೇಶ್ವರ ಪ್ರೌ School ಶಾಲೆ, ತುಮ್ಮಿನಕಟ್ಟಿ
  18. ಸರ್ಕಾರಿ ಪ್ರೌ School ಶಾಲೆ ತುಮ್ಮಿನಕಟ್ಟಿ
  19. ಸರ್ಕಾರಿ ಪ್ರೌ School ಶಾಲೆ, ತುಮ್ಮಿನಕಟ್ಟಿ
  20. ಸರ್ ಎಂ ವಿಶ್ವೇಶ್ವರಯ್ಯ ಶಾಲೆ, ಹವೇರಿ

ಕಾಲೇಜುಗಳು ಮತ್ತು ಸ್ಥಳಗಳು

  1. , ಎಂಎಎಸ್‌ಸಿ ಕಾಲೇಜು, ಗ್ರಾಮೀಣ ಪಾಲಿಟೆಕ್ನಿಕ್ ಡಿಪ್ಲೊಮಾ, ಮೃತ್ಯುಂಜಯ ವಿದ್ಯಾ ಪೀಠ ಅವರ ಹೌನ್‌ಸಭವಿ. 1918 ರಿಂದ (ಕಾನ್ವೆಂಟ್‌ನಿಂದ ಪದವಿವರೆಗೆ ಟಾಪ್ 1 ಕಾಲೇಜು ಡಿಪ್ಲೊಮಾ)
  2. ಗುಡ್ಲೆಪ್ಪ ಹಲ್ಲಿಕೇರಿ ಕಾಲೇಜು (ಜಿಎಚ್ ಕಾಲೇಜು ಎಂದು ಜನಪ್ರಿಯವಾಗಿ ಕರೆಯಲ್ಪಡುತ್ತದೆ) (ವಿಜ್ಞಾನ, ವಾಣಿಜ್ಯ ಮತ್ತು ಕಲೆ)
  3. ಪರಿವರ್ತನ ಪಿಯು ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು
  4. ಸಿಬಿ ಕೊಲ್ಲಿ ಪಾಲಿಟೆಕ್ನಿಕ್ (ಸಿಎಸ್, ಇ & ಸಿ, ಮೆಕ್, ಸಿವಿಲ್ ಮತ್ತು ಐಎಸ್)
  5. ಸರ್ಕಾರ ಎಂಜಿ. ಕಾಲೇಜು (ಸಿಎಸ್, ಇ & ಸಿ, ಮೆಕ್ ಮತ್ತು ಸಿವಿಲ್)
  6. ಸರ್ಕಾರ ಮಜೀದ್ ಕಾಲೇಜು ಸವನೂರ್
  7. ಎಸ್‌ಜೆಎಂ ಪಿಯು ಕಾಲೇಜು, ಹವೇರಿ (ವಿಜ್ಞಾನ, ವಾಣಿಜ್ಯ ಮತ್ತು ಕಲೆ)
  8. ತುಮ್ಮಿನಕತ್ತಿಯ ಶ್ರೀ ಸಂಗನಾ ಬಸವೇಶ್ವರ ಪಿ.ಯು ಕಾಲೇಜು
  9. ಶ್ರೀ ಹುಕ್ಕರಿಮಾತಾ ಶಿವಬಸವೇಶ್ವರ ಪ್ರೌ School ಶಾಲೆ ಹವೇರಿ
  10. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹವೇರಿ
  11. ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಹವೇರಿ
  12. ಲಯನ್ಸ್ ಇಂಗ್ಲಿಷ್ ಬಾಲಕಿಯರ ವಾಣಿಜ್ಯ ಕಾಲೇಜು, ಹವೇರಿ
  13. ಸ್ವಾಮಿ ವಿವೇಕಾನಂದ ಪಿಯು ಕಾಲೇಜು ಹವೇರಿ
  14. ಕಾಲೇಜ್ ಆಫ್ ಹಾರ್ಟಿಕಲ್ಚರಲ್ ಎಂಜಿನಿಯರಿಂಗ್ ಮತ್ತು ಫುಡ್ ಟೆಕ್ನಾಲಜಿ, ದೇವಿಹೋಸೂರ್, ಹವೇರಿ

ಜನಸಂಖ್ಯಾಶಾಸ್ತ್ರ

2011 ರ ಜನಗಣತಿಯ ಪ್ರಕಾರ, ಭಾರತ ಜನಗಣತಿಯ ಪ್ರಕಾರ, ಹವೇರಿಯಲ್ಲಿ 67102 ಜನಸಂಖ್ಯೆ ಇತ್ತು. ಪುರುಷರು ಜನಸಂಖ್ಯೆಯ 51% ಮತ್ತು ಮಹಿಳೆಯರು 49%. ಹವೇರಿಯ ಸರಾಸರಿ ಸಾಕ್ಷರತಾ ಪ್ರಮಾಣ 70%, ರಾಷ್ಟ್ರೀಯ ಸರಾಸರಿ 59.5% ಗಿಂತ ಹೆಚ್ಚಾಗಿದೆ: ಪುರುಷರ ಸಾಕ್ಷರತೆ 76%, ಮತ್ತು ಸ್ತ್ರೀ ಸಾಕ್ಷರತೆ 64%. ಹವೇರಿಯಲ್ಲಿ, 13% ಜನಸಂಖ್ಯೆಯು 6 ವರ್ಷಕ್ಕಿಂತ ಕಡಿಮೆ ವಯಸ್ಸಿನವರು.

ಆಹಾರ ಬೆಳೆಗಳು

ಹಾವೇರಿ ಜಿಲ್ಲೆ ಪರಿಚಯ ಏಲಕ್ಕಿ ನಾಡು, ಸರ್ವಜ್ಞನ ಬೀಡು, ಕನಕರ ನೆಚ್ಚಿನ ಊರು, ಬ್ಯಾಡಗಿ ಮೆಣಸಿನಕಾಯಿ ಸೀಮೆ, ವರದಾ ನದಿ ತಾಣ, ಅಪ್ಪಟ ರೈತಾಪಿ ಜನರ ಕರ್ಮಭೂಮಿ ಹಾವೇರಿ. ಧಾರವಾಡವನ್ನು 24.08.1997ರಲ್ಲಿ ವಿಭಜಿಸಿ ಹಾವೇರಿ ಜಿಲ್ಲೆಯನ್ನು ರಚಿಸಲಾಯಿತು. ಹಾವೇರಿ ಜಿಲ್ಲೆಯು ಏಳು ತಾಲೂಕುಗಳನ್ನು ಹೊಂದಿದೆ. ವರದಾ ನದಿ ಹಾಗೂ ತುಂಗಭದ್ರ ನದಿಯನ್ನು ಹೊಂದಿದೆ.ಹಾವೇರಿ, ರಾಣೇಬೆನ್ನೂರು, ಹಿರೇಕೆರೂರು, ಶಿಗ್ಗಾಂವ, ಬ್ಯಾಡಗಿ, ಹಾನಗಲ್ ಮತ್ತು ಸವಣೂರು ತಾಲೂಕುಗಳು ಒಂದೊಂದು ಕಾರಣಕ್ಕೆ ಜನರಿಗೆ ನೆನಪಾಗುತ್ತದೆ. ವಾರ್ಷಿಕವಾಗಿ ಸರಾಸರಿ 752.88 ಮಿ.ಮೀ. ಮಳೆ ಕಾಣುವ ಜಿಲ್ಲೆಯ ಪ್ರಮುಖ ಬೆಳೆಗಳೆಂದರೆ - ಜೋಳ, ಹತ್ತಿ, ಮೆಣಸಿನಕಾಯಿ, ಭತ್ತ, ಕಬ್ಬು, ಗೋವಿನಜೋಳ, ಎಣ್ಣೆ ಬೀಜಗಳು ಹಾಗೂ ದ್ವಿದಳ ಧಾನ್ಯಗಳು.ಯಡಿಯೂರಪ್ಪ ಅವರ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಹಾವೇರಿಯಲ್ಲಿ ನಡೆದ ಗೋಲಿಬಾರ್ ನಲ್ಲಿ ರೈತನೊಬ್ಬ ಸಾವನ್ನಪ್ಪಿದ್ದು, ನಂತರ ಯಡಿಯೂರಪ್ಪ ಅವರು ಬಿಜೆಪಿ ಬಿಟ್ಟ ಮೇಲೆ ಪ್ರಾಯಶ್ಚಿತಕ್ಕಾಗಿ ಹಾವೇರಿಯಲ್ಲೇ ನೂತನ ಪ್ರಾದೇಶಿಕ ಪಕ್ಷ ಕರ್ನಾಟಕ ಜನತಾ ಪಕ್ಷ ಸ್ಥಾಪಿಸಿದ್ದು ವಿಶೇಷ. 

ಪ್ರಮುಖ ವ್ಯಕ್ತಿಗಳ ಪರಿಚಯ

ಹಾವೇರಿ ಜಿಲ್ಲೆ ಪರಿಚಯ ಏಲಕ್ಕಿ ನಾಡು, ಸರ್ವಜ್ಞನ ಬೀಡು, ಕನಕರ ನೆಚ್ಚಿನ ಊರು, ಬ್ಯಾಡಗಿ ಮೆಣಸಿನಕಾಯಿ ಸೀಮೆ, ವರದಾ ನದಿ ತಾಣ, ಅಪ್ಪಟ ರೈತಾಪಿ ಜನರ ಕರ್ಮಭೂಮಿ ಹಾವೇರಿ. ಧಾರವಾಡವನ್ನು 24.08.1997ರಲ್ಲಿ ವಿಭಜಿಸಿ ಹಾವೇರಿ ಜಿಲ್ಲೆಯನ್ನು ರಚಿಸಲಾಯಿತು. ಹಾವೇರಿ ಜಿಲ್ಲೆಯು ಏಳು ತಾಲೂಕುಗಳನ್ನು ಹೊಂದಿದೆ. ವರದಾ ನದಿ ಹಾಗೂ ತುಂಗಭದ್ರ ನದಿಯನ್ನು ಹೊಂದಿದೆ.

ಹಾವೇರಿ, ರಾಣೇಬೆನ್ನೂರು, ಹಿರೇಕೆರೂರು, ಶಿಗ್ಗಾಂವ, ಬ್ಯಾಡಗಿ, ಹಾನಗಲ್ ಮತ್ತು ಸವಣೂರು ತಾಲೂಕುಗಳು ಒಂದೊಂದು ಕಾರಣಕ್ಕೆ ಜನರಿಗೆ ನೆನಪಾಗುತ್ತದೆ. ವಾರ್ಷಿಕವಾಗಿ ಸರಾಸರಿ 752.88 ಮಿ.ಮೀ. ಮಳೆ ಕಾಣುವ ಜಿಲ್ಲೆಯ ಪ್ರಮುಖ ಬೆಳೆಗಳೆಂದರೆ - ಜೋಳ, ಹತ್ತಿ, ಮೆಣಸಿನಕಾಯಿ, ಭತ್ತ, ಕಬ್ಬು, ಗೋವಿನಜೋಳ, ಎಣ್ಣೆ ಬೀಜಗಳು ಹಾಗೂ ದ್ವಿದಳ ಧಾನ್ಯಗಳು.

ಯಡಿಯೂರಪ್ಪ ಅವರ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಹಾವೇರಿಯಲ್ಲಿ ನಡೆದ ಗೋಲಿಬಾರ್ ನಲ್ಲಿ ರೈತನೊಬ್ಬ ಸಾವನ್ನಪ್ಪಿದ್ದು, ನಂತರ ಯಡಿಯೂರಪ್ಪ ಅವರು ಬಿಜೆಪಿ ಬಿಟ್ಟ ಮೇಲೆ ಪ್ರಾಯಶ್ಚಿತಕ್ಕಾಗಿ ಹಾವೇರಿಯಲ್ಲೇ ನೂತನ ಪ್ರಾದೇಶಿಕ ಪಕ್ಷ ಕರ್ನಾಟಕ ಜನತಾ ಪಕ್ಷ ಸ್ಥಾಪಿಸಿದ್ದು ವಿಶೇಷ.

Haveri District Assembly Constituency Profile

ಪ್ರವಾಸಿ ತಾಣಗಳು: ಕೆಂಪು ಮೆಣಸಿನ ಕಾಯಿಗೆ ಪ್ರಸಿದ್ಧವಾದ ಬ್ಯಾಡಗಿ, ಗಾನ ವಿಶಾರದೆ ಗಂಗೂಬಾಯಿ ಅವರ ಹಾನಗಲ್ಲು, ಶಿಶುನಾಳ ಷರೀಫರ ಜನ್ಮಭೂಮಿ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಶಿಶುನಾಳ ಗ್ರಾಮ (ಈ ಮುಂಚೆ ಧಾರವಾಡಜಿಲ್ಲೆಯಲ್ಲಿತ್ತು) 'ರಾಷ್ಟ್ರಕೂಟ', 'ಕಲ್ಯಾಣದ ಚಾಲುಕ್ಯ' ಹಾಗೂ 'ವಿಜಯನಗರದ ಅರಸರ ಶಾಸನಗಳನ್ನು ಹೊಂದಿರುವ ಬನವಾಸಿ ಭಾಗವಾಗಿದ್ದ ಹಿರೇಕೆರೂರು,ಉತ್ತರ ಕರ್ನಾಟಕದ ಹೆಬ್ಬಾಗಿಲು ಎನಿಸಿರುವ ಪ್ರಮುಖ ವ್ಯಾಪಾರ ಕೇಂದ್ರವಾದ ರಾಣೇಬೆನ್ನೂರು,ಅತ್ಯದ್ಭುತ ತ್ರಿವಳಿ ಮರಗಳನ್ನು ಹೊಂದಿರುವ, ಮಾಧ್ವರ ಶ್ರೀ ಕ್ಷೇತ್ರ ಸವಣೂರು ಖಾರಕ್ಕೂ, ತಾಂಬೂಲಕ್ಕೂ ಪ್ರಸಿದ್ಧ. ಹಿರೇಕೆರೂರ ತಾಲ್ಲೂಕಿನಲ್ಲಿರುವ ಐತಿಹಾಸಿಕ ಮಾಸೂರು ಮದಗದ ಮಾಸೂರು ಕೆರೆಯೇ 'ಕೆರೆಗೆ ಹಾರ' ಜಾನಪದ ಕತೆಗೆ ಸ್ಪೂರ್ತಿ. ಶ್ರೀಕ್ಷೇತ್ರ ಗುಡ್ಡದಮಲ್ಲಾಪೂರ,ಶ್ರೀ ಮುಕಪ್ಪ ಮಹಾಸ್ವಾಮಿಗಳ ಹಾಗೂ ಕತೃ,ಶ್ರೀ ಹುಚ್ಚೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯ, ಕನಕದಾಸರ ಕಾಗಿನೆಲೆ, ಸರ್ವಜ್ಞನ ಅಬಲೂರು, ಹಾವನೂರಿನ ದ್ಯಾಮವ್ವನ ದೇವಸ್ಥಾನ, ದೇವರಗುಡ್ಡ (ಮಾಲತೇಶ ಸ್ವಾಮಿ ದೇವಸ್ಥಾನ) ಇತ್ಯಾದಿ

ರಾಜ್ಯ ಪ್ರಶಸ್ತಿಯನ್ನು ಪಡೆದಿರುವ ಪಟವೆಗಾರ ಮನೆತನದವರು ಯಾಲಕ್ಕಿಯನ್ನು ಸರ ಮಾಡಿ ಮಾರಾಟ ಮಾಡುವ ಶ್ರಮಿಕ ವರ್ಗದವರು. ಒಂದರಿಂದ ಎಳೆಯಿಂದ ಇಪ್ಪತ್ತು ಎಳೆಯವರೆಗೂ ಯಾಲಕ್ಕಿ ಮಾಲೆಯನ್ನು ತಯಾರಿಸುತ್ತಾರೆ. ವಿದೇಶಗಳಲ್ಲೂ ಪ್ರಸಿದ್ಧಿ ಪಡೆದಿವೆ.

ಗಣ್ಯ ವ್ಯಕ್ತಿಗಳು: ಸರ್ವಜ್ಞ, ಕನಕದಾಸರು, ಕವಿ ಸುರಂ ಎಕ್ಕುಂಡಿ, ಪ್ರಪ್ರಥಮ ಕಾದಂಬರಿಕಾರರಾದ ಗಳಗನಾಥ, ಜ್ಞಾನಪೀಠ ಪ್ರಶಸ್ತಿ ವಿಜೇತ ವಿನಾಯಕ ಕೃಷ್ಣ ಗೋಕಾಕ, ಸಂಗೂರಿನ ಯರೆಶೀಮಿ ಕರಿಯಪ್ಪ, ಸ್ವಾತಂತ್ರ್ಯ ಹೋರಾಟಗಾರ ಮೋಟೆಬೆನ್ನೂರಿನ ಮೈಲಾರ ಮಹದೇವಪ್ಪ, ಸಿದ್ದಪ್ಪ ಹೊಸಮನಿ ಕರಜಗಿ, ಹೊಸರಿತ್ತಿಯ ಗುದ್ಲೆಪ್ಪಾ ಹಳ್ಳಿಕೇರಿ, ರಮಾನಂದ ಮನ್ನಗಿ,

ವಿಧಾನಸಭಾ ಕ್ಷೇತ್ರಗಳು/ ತಾಲೂಕುಗಳು:ಬ್ಯಾಡಗಿ, ಹಾನಗಲ್, ಹಾವೇರಿ, ಹಿರೇಕೆರೂರು, ರಾಣೇಬೆನ್ನೂರು, ಸವಣೂರು, ಶಿಗ್ಗಾಂವ

ಪ್ರಮುಖ ಭಾಷೆ: ಕನ್ನಡ,

ಪ್ರಮುಖ ಜನಾಂಗ: ಲಿಂಗಾಯತ,

ಜನಸಂಖ್ಯೆ: - 14, 39,116

ಸಾರಿಗೆ: ಬೆಂಗಳೂರು ಮುಂಬೈ ರಾಷ್ಟ್ರೀಯ ಹೆದ್ದಾರಿ 4, ರೈಲ್ವೆ ಸಂಪರ್ಕ, ದಾವಣಗೆರೆ, ಹುಬ್ಬಳ್ಳಿ ಹತ್ತಿರದ ವ್ಯಾಪಾರ ಕೇಂದ್ರಗಳು

ನೀರಿನ ಆಸರೆ: ತುಂಗ ಭದ್ರಾ ಹಾಗೂ ವರದಾ ನದಿ

ನೈಸರ್ಗಿಕ/ಖನಿಜ, ಪ್ರಾಣಿ ಸಂಪತ್ತು:ರಾಣೇಬೆನ್ನೂರಿನ ಕೃಷ್ಣಮೃಗ ಅಭಯಾರಣ್ಯ

ಬ್ಯಾಡಗಿ: ಪಾಟೀಲ್ ಸುರೇಶ್ ಗೌಡ ಬಸವಲಿಂಗಗೌಡ್ರ (ಬಿಜೆಪಿ) 1,20,443 ಮತಗಳು

ಹಾನಗಲ್: ಉದಾಸಿ ಚನ್ನಬಸಪ್ಪ ಮಹಾಲಿಂಗಪ್ಪ (ಬಿಜೆಪಿ) 1,23,242 ಮತಗಳು

ಹಾವೇರಿ: ನೆಹರೂ ಓಲೇಕಾರ(ಬಿಜೆಪಿ) 1,13,543 ಮತಗಳು

ಹಿರೇಕೆರೂರು: ಬಿ.ಸಿ ಪಾಟೀಲ್ (ಕಾಂಗ್ರೆಸ್, 1,14,060 ಮತಗಳು

ರಾಣೇಬೆನ್ನೂರು: ಜಿ. ಶಿವಣ್ಣ (ಬಿಜೆಪಿ) 1,25,603 ಮತಗಳು

ಶಿಗ್ಗಾಂವ್: ಬಸವರಾಜ ಬೊಮ್ಮಾಯಿ (ಬಿಜೆಪಿ) 1,23,229 ಮತಗಳು

ಕ್ಷೇತ್ರದ ಸಮಸ್ಯೆಗಳ ಕಿರು ಪರಿಚಯ:

* ಒಳನಾಡು ರಸ್ತೆ ವ್ಯವಸ್ಥೆ, ಪ್ರಮುಖ ಯಾತ್ರಾ ಸ್ಥಳಗಳಲ್ಲಿ ವಸತಿ ವ್ಯವಸ್ಥೆ ಇಲ್ಲ

* ರೈತರೇ ಜಿಲ್ಲೆಯ ಆಧಾರವಾಗಿದ್ದರೂ ಸರಿಯಾದ ಸೌಲಭ್ಯಗಳು ತಲುಪಿಲ್ಜ

* ವ್ಯಾಪರಕ್ಕೆ ದಾವಣಗೆರೆ, ಹುಬ್ಬಳ್ಳಿ ನೆಚ್ಚಿಕೊಳ್ಳಬೇಕಾಗಿರುವುದು ಕಷ್ಟಕರವಾಗಿದೆ.

ಸಹ ನೋಡಿ

Wednesday, 21 April 2021

ಶ್ರೀ ರಾಮ ನವಮಿ

ಶ್ರೀ ರಾಮ ನವಮಿ


ಶ್ರೀ ರಾಮನವಮಿ ಹಿಂದೂ ದೇವರಾದ ರಾಮನ ಹುಟ್ಟಿದ ದಿನ. ಶ್ರೀ ರಾಮ ರಾಮಾಯಣದ ಕಥಾ ನಾಯಕ ಹಾಗೂ ಆದಿಕಾಲದ ಭಾರತದ ಅಯೋಧ್ಯೆಯ ರಾಜ. ದಶರಥ ಮಹಾ ರಾಜ ಶ್ರೀ ರಾಮನ ತಂದೆ. ಹಿಂದೂ ಸಂಪ್ರದಾಯದಲ್ಲಿ ರಾಮನನ್ನು ವಿಷ್ಣುವಿನ ಅವತಾರವಾಗಿ ಪೂಜಿಸಲಾಗುತ್ತದೆ. ಶ್ರೀ ರಾಮನವಮಿ ಯುಗಾದಿಯ ಎಂಟು ದಿನಗಳ ನಂತರ ಚೈತ್ರ ಮಾಸದ ಶುಕ್ಲ ಪಕ್ಷದಲ್ಲಿ ಆಚರಿಸಲಾಗುತ್ತದೆ.
ಈ ದಿನವನ್ನು ರಾಮನ ಕಥಾ ವಾಚನಗೋಷ್ಠಿಗಳು , ಹಿಂದೂ ಪವಿತ್ರ ಮಹಾಕಾವ್ಯವಾದ ರಾಮಾಯಣ ಸೇರಿದಂತೆ ರಾಮನ ಕಥೆಗಳನ್ನು ಓದಿ ಅನುಸರಿಸಲಾಗಿದೆ. ಈ ದಿನದಂದು ಕೆಲವು ವೈಷ್ಣವ ಹಿಂದೂಗಳು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ, ಇತರರು ತಮ್ಮ ಮನೆಯಲ್ಲಿಯೇ ಪ್ರಾರ್ಥಿಸುತ್ತಾರೆ ಮತ್ತು ಕೆಲವರು ಪೂಜೆ ಮತ್ತು ಆರತಿಯ ಭಾಗವಾಗಿ ಸಂಗೀತದೊಂದಿಗೆ ಭಜನೆ ಅಥವಾ ಕೀರ್ತನೆಯಲ್ಲಿ ಭಾಗವಹಿಸುತ್ತಾರೆ. ಕೆಲವು ಭಕ್ತರು ಶಿಶು ರಾಮನ ಸಣ್ಣ ಪ್ರತಿಮೆಗಳನ್ನು ತೆಗೆದುಕೊಂಡು ಅದಕ್ಕೆ ಅಭಿಷೇಕವನ್ನು ಮಾಡಿ, ವಸ್ತ್ರವನ್ನು ತೊಡಿಸಿ ನಂತರ ಅದನ್ನು ತೊಟ್ಟಿಲಲ್ಲಿ ಇರಿಸುವ ಮೂಲಕ ಪೂಜಿಸುತ್ತಾರೆ. ದತ್ತಿ ಕಾರ್ಯಕ್ರಮಗಳು ಮತ್ತು ಹಲವು ಸಮುದಾಯಗಳಲ್ಲಿ ಭೋಜವನ್ನೂ ಆಯೋಜಿಸಲಾಗುತ್ತದೆ. ಈ ಹಬ್ಬವು ಅನೇಕ ಹಿಂದೂಗಳಿಗೆ ನೈತಿಕ ಪ್ರತಿಬಿಂಬದ ಒಂದು ಸಂದರ್ಭವಾಗಿದೆ. ಕೆಲವರು ಈ ದಿನದಂದು ವ್ರತ (ಉಪವಾಸ) ಮಾಡುತ್ತಾರೆ.
ಈ ದಿನದ ಪ್ರಮುಖ ಆಚರಣೆಗಳು ಅಯೋಧ್ಯೆ ಮತ್ತು ಸೀತಾ ಸಮಾಹಿತ್ ಸ್ಥಲ್ (ಉತ್ತರ ಪ್ರದೇಶ), ಸೀತಮಾರ್ಹಿ (ಬಿಹಾರ), ಜನಕ್ಪುರ್ಧಮ್ (ನೇಪಾಳ), ಭದ್ರಾಚಲಂ (ತೆಲಂಗಾಣ), ಕೋದಂಡರಾಮ ದೇವಸ್ಥಾನ, ವೊಂಟಿಮಿಟ್ಟಾ (ಆಂಧ್ರಪ್ರದೇಶ) ಮತ್ತು ರಾಮೇಶ್ವರಂ(ತಮಿಳುನಾಡು)ನಲ್ಲಿ ಕಾಣಬಹುದು. ರಥಯಾತ್ರೆಗಳು , ರಥದ ಶೋಭ ಯಾತ್ರೆ ಎಂದೂ ಕರೆಯಲ್ಪಡುವ ರಥದ ಮೆರವಣಿಗೆಗಳಲ್ಲಿ ಸೀತೆ , ಅವರ ಸಹೋದರ ಲಕ್ಷ್ಮಣ ಮತ್ತು ಹನುಮಾನ್ ಇವರನ್ನು ಹಲವಾರು ಸ್ಥಳಗಳಿಗೆ ಕರೆದೊಯ್ಯಲಾಗುತ್ತದೆ. ಅಯೋಧ್ಯೆಯಲ್ಲಿ, ಅನೇಕರು ಪವಿತ್ರವಾದ ಸರಯು ನದಿಯಲ್ಲಿ ಸ್ನಾನ ಮಾಡಿ ನಂತರ ರಾಮನ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.

Quick Facts: ಶ್ರೀರಾಮ ನವಮಿ, ಅಧಿಕೃತ ಹೆಸರು ...

ಆಚರಣೆ

ರಾಮನವಮಿಯಂದು ದಕ್ಷಿಣ ಭಾರತದ ಮನೆಗಳಲ್ಲಿ, ಮುಖ್ಯವಾಗಿ ಕರ್ನಾಟಕದಲ್ಲಿ, ಪಾನಕ ಹಾಗೂ ಕೋಸಂಬರಿಗಳನ್ನು ಬಂದವರಿಗೆ ನೀಡಿ ಆಚರಿಸಲಾಗುತ್ತದೆ. ರಾಮ ಮಂದಿರಗಳಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಲಾಗುತ್ತದೆ. ಈಗಿನ ಅಯೋಧ್ಯೆಯಲ್ಲಿ, ತಮಿಳುನಾಡಿನ ರಾಮೇಶ್ವರಂನಲ್ಲಿ ಈ ದಿನದಂದು ಶ್ರೀ ರಾಮನ ಪೂಜೆಗಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಕರ್ನಾಟಕಾದ್ಯಂತ ಕರ್ನಾಟಕ ಸಂಗೀತ ಮತ್ತು ಹಿಂದುಸ್ತಾನಿ ಸಂಗೀತ ಕಛೇರಿಗಳು ಆಯೋಜಿಸಲ್ಪಡುತ್ತವೆ. ಇದರಲ್ಲಿ ಕರ್ನಾಟಕದ ಹಾಗೂ ಇತರೆ ರಾಜ್ಯಗಳಿಂದ ಸಂಗೀತ ವಿದ್ವಾಂಸರು ಬಂದು ಪಾಲ್ಗೊಳುತ್ತಾರೆ. ಪೂರ್ವ ಭಾರತದ ರಾಜ್ಯಗಳಾದ ಒಡಿಶಾ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ, ಜಗನ್ನಾಥ ದೇವಾಲಯಗಳು ಮತ್ತು ಪ್ರಾದೇಶಿಕ ವೈಷ್ಣವ ಸಮುದಾಯದವರು ರಾಮ ನವಮಿಯನ್ನು ಆಚರಿಸುತ್ತಾರೆ ಮತ್ತು ಬೇಸಿಗೆಯಲ್ಲಿ ತಮ್ಮ ವಾರ್ಷಿಕ ಜಗನ್ನಾಥ ರಥಯಾತ್ರೆಗೆ ಸಿದ್ಧತೆಗಳು ಪ್ರಾರಂಭವಾಗುವ ದಿನವೆಂದು ಪರಿಗಣಿಸುತ್ತಾರೆ. ಇಸ್ಕಾನ್‌ಗೆ ಸಂಬಂಧಿಸಿದ ಭಕ್ತರು ಹಗಲಿನ ಹೊತ್ತಿನಲ್ಲಿ ಉಪವಾಸ ಮಾಡುತ್ತಾರೆ. ಬೆಳೆಯುತ್ತಿರುವ ಸ್ಥಳೀಯ ಹಿಂದೂ ಸಭೆಯ ಅಗತ್ಯತೆಗಳನ್ನು ತಿಳಿಸುವ ಉದ್ದೇಶದಿಂದ ಹಲವಾರು ಇಸ್ಕಾನ್ ದೇವಾಲಯಗಳು ರಜೆಯ ಸಂದರ್ಭದಲ್ಲಿ ಪ್ರಮುಖ ಆಚರಣೆಯನ್ನು ಪರಿಚಯಿಸಿದವು.

ರಾಮನವಮಿಯ ಮಹತ್ವ

ಉತ್ಸವದ ಮಹತ್ವವು ದುಷ್ಟರ ಮೇಲೆ ಒಳ್ಳೆಯತನದ ವಿಜಯ , ಅಧರ್ಮವನ್ನು ಸೋಲಿಸಿ ಧರ್ಮದ ಸ್ಥಾಪನೆಯನ್ನು ಮಾಡಿದ ಕಾರ್ಯವನ್ನು ಸೂಚಿಸುತ್ತದೆ. ಶ್ರಿರಾಮನನ್ನು ಸೂರ್ಯದೇವನ ಪೂರ್ವಜನೆಂದೂ ಜನ ನಂಬುತ್ತಾರೆ.
ಸಂತ ರಾಂಪಾಲ್ ಜಿ ಅವರ ಭಕ್ತರು ಆದಿ ರಾಮ (ಸುಪ್ರೀಂ ರಾಮ) ಬಗ್ಗೆ ಕಬೀರ್ ಸಾಹಿಬ್ ಅವರ ಬನಿಸ್ ಪಠಣ ಮಾಡುವ ಮೂಲಕ ಈ ದಿನವನ್ನು ಕಳೆಯುತ್ತಾರೆ. ಇವರನ್ನು ಅವರು ಸರ್ವೋಚ್ಚ ಸೃಷ್ಟಿಕರ್ತ ಎಂದು ಪರಿಗಣಿಸುತ್ತಾರೆ.

ಭಾರತದ ಹಲವೆಡೆ ರಾಮ ನವಮಿ ಆಚರಣೆ

ಉತ್ತರ ಪ್ರದೇಶ, ಬಿಹಾರ , ಜಾರ್ಖಂಡ್ತೆಲಂಗಾಣಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ನೆಲೆಸಿರುವ ಭಾರತೀಯ ಹಿಂದೂ ವಲಸಿಗರು ಆಚರಿಸುವ ಹಿಂದೂ ಹಬ್ಬಗಳಲ್ಲಿ ರಾಮ ನವಮಿಯೂ ಒಂದು.

ರಾಮನವಮಿಗೆ ಮಾಡುವ ವಿಶೇಷ ಆಹಾರ ಪದಾರ್ಥಗಳು

  • ಪಾನಕ.
  • ತಮಿಳುನಾಡಿನಲ್ಲಿ ನೀರ್ ಮೋರ್ (ಮಜ್ಜಿಗೆ).
  • ಕೋಸಂಬರಿ .
  • ಫಲಾಹಾರ .
  • ತೆಂಗಿನಕಾಯಿಯ ಲಡ್ಡೂ .
  • ಕಾಜು ಬರ್ಫಿ .
  • ತೊಗರಿಬೇಳೆಯ ಹಲ್ವಾ.
  • ಪಂಚಾಮೃತಂ.
  • ಸಬ್ಬಕ್ಕಿಯ ಪಾಯಸ.
  • ಎಳ್ಳುಂಡೆ.
  • ಅಪ್ಪ .
__________________________________________

ಪ್ರಮುಖ ಅಂಶಗಳು

SSLC CORNER

Class-10 Study-Materials Final Exam Papers   Notes & Solutions   Model & Blue-Print   Pre Board Papers    Half Yearly ...

ಪ್ರಮುಖ ಕಲಿಕಾಂಶಗಳು